Chamarajanagar: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಒಂದು ವಿಚಿತ್ರ ಪ್ರೇಮಕಹಾನಿ ಬೆಳಕಿಗೆ ಬಂದಿದೆ. ಕಾಲೇಜು ವಿದ್ಯಾರ್ಥಿನಿಯ ಹಿಂದೆ ಬಿದ್ದ ಪಾಗಲ್ ಪ್ರೇಮಿಯು ತಾನು ಹೇಳಿಕೊಂಡ ಎಲ್ಲವೂ ಸುಳ್ಳೆಂದು ಬಯಲಾಗುತ್ತಿದ್ದಂತೆಯೇ, ಇದೀಗ ಪೊಲೀಸರು ಅವನನ್ನು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ, ಗುಂಡ್ಲುಪೇಟೆಯಿಂದ ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಂದಿಗೆ ಸ್ನೇಹ ಬೆಸೆಯಲು ಆರೋಪಿ ಆಯೂಬ್ ಖಾನ್ ಹಲವು ಸುಳ್ಳು ಕಥೆಗಳನ್ನು ಹೇಳಿಕೊಂಡಿದ್ದಾನೆ. “ನಿನ್ನ ಸ್ನೇಹಿತೆಯ ಸಹೋದರ” ಹಾಗೂ “ನೀನು ನನ್ನ ಮುದ್ದು ತಂಗಿ” ಎಂಬ ನೆಪದಲ್ಲಿ ಹತ್ತಿರವಾಗಲು ಪ್ರಯತ್ನಿಸಿದ್ದಾನೆ. ಇದಲ್ಲದೆ, ತನ್ನ ಧಾರ್ಮಿಕ ಗುರುತನ್ನೂ ಬದಲಿಸಿ “ನಾನು ಹಿಂದೂ ಧರ್ಮದವನು” ಎಂದು ಹೇಳಿಕೊಂಡಿದ್ದಾನೆ.
ಆದರೆ ಕೆಲವೇ ದಿನಗಳಲ್ಲಿ ಅವನ ಮಾತುಗಳು ಸುಳ್ಳೆಂದು ವಿದ್ಯಾರ್ಥಿನಿಗೆ ತಿಳಿದಿದೆ. ಇದರಿಂದ ದೂರವಾದ ವಿದ್ಯಾರ್ಥಿನಿಯ ಮೇಲೆ ಅವನು ಒತ್ತಡ ಹೇರುವುದನ್ನು ಪ್ರಾರಂಭಿಸಿದ್ದಾನೆ. "ನೀನಂದ್ರೆ ನನಗೆ ಇಷ್ಟ, ನನ್ನ ಜೊತೆ ಮಾತನಾಡಲೇಬೇಕು" ಎಂದು ದುಂಬಾಲು ಹಾಕಿ, ಅವಾಚ್ಯ ಶಬ್ಧಗಳಿಂದ ನಿಂದನೆ ನಡೆಸಿದ್ದಾನೆ. ಕೊನೆಗೆ "ಕೊಲೆ ಮಾಡುತ್ತೇನೆ" ಎಂಬ ಮಟ್ಟಿಗೆ ಬೆದರಿಕೆ ಹಾಕಿದ್ದಾನೆ.
ಭಯಭೀತಳಾದ ವಿದ್ಯಾರ್ಥಿನಿ, ತಕ್ಷಣವೇ ಗುಂಡ್ಲುಪೇಟೆ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ವಿದ್ಯಾರ್ಥಿನಿ ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿ ಆಯೂಬ್ ಖಾನ್ನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಪೋಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಂದಿನ ದಿನಗಳಲ್ಲಿ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.









