ಬೆಂಗಳೂರು : ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ ಆರ್ಜೆಡಿಗೆ ಶಾಕ್ ನೀಡಿದೆ, ಇನ್ನೂ ಅದರ ಮೈತ್ರಿ ಪಕ್ಷ ಕಾಂಗ್ರೆಸ್ಗೆ ಜೀರ್ಣಮಾಡಿಕೊಳ್ಳಲು ಕೂಡಾ ಆಗದ ಪರಿಸ್ಥಿತಯಲ್ಲಿದೆ. ಎಸ್ಐಆರ್ ವಿರೋಧಿ ಜೊತೆಗೆ ವೋಟ್ಚೋರಿ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ಗಾಂಧಿ, ಬಿಜೆಪಿ ಜೊತೆಗೆ ನೇರಾ ನೇರಾ ಚುನಾವಣಾ ಆಯೋಗವನ್ನೇ ಟಾರ್ಗೆಟ್ ಮಾಡಿದ್ದರು.
ಆದರೆ ಚುನಾವಣೆಯ ತೀರ್ಪು ಮಾತ್ರ ನಿರೀಕ್ಷೆಯನ್ನು ಹುಸಿಯಾಗಿಸಿದೆ. ಇನ್ನೂ ರಾಜ್ಯ ಕಾಂಗ್ರೆಸ್ ಪಾಲಿಗೆ ಎಲ್ಲರೂ ಗಪ್ಚುಪ್ ಎನ್ನುವಂತಾಗಿದೆ. ಮುಖ್ಯಮಂತ್ರಿ ಬದಲಾವಣೆ ಹೆಚ್ಚಿನ ಡಿಸಿಎಮ್ ಹುದ್ದೆ ಸೃಷ್ಟಿ ಸೇರಿದಂತೆ ಡೆಲ್ಲಿ ನಾಯಕ ಭೇಟಿಗೆ ಪ್ರಯತ್ನಿಸುತ್ತಿದ್ದ ರಾಜ್ಯ ನಾಯಕರು ಈಗ ಸೈಲೆಂಟ್ ಆಗಿದ್ದಾರೆ.
ಇದನ್ನೂ ಓದಿ:ಎಲ್ಲಾ ಖಾಸಗಿ ಉದ್ಯೋಗಿಗೂ ಸರ್ಕಾರ ನೀಡುವುದು 15,000 ರೂ. : ಕೇಂದ್ರ ಸರ್ಕಾರದ ಹೊಸ ಯೋಜನೆ
ಇನ್ನೊಂದೆಡೆ ಬಿಹಾರ ಚುನಾವಣೆಯ ನಂತರ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಯಾಗಿ ಮುಖ್ಯಮಂತ್ರಿ ಹುದ್ದೆ ಬದಲಾಗುತ್ತದೆ. ನವಂಬರ್ ಕ್ರಾಂತಿಯಾಗುತ್ತದೆ ಎಂದೆಲ್ಲಾ ಮಾತನಾಡುತ್ತಿದ್ದ ನಾಯಕರು ಈಗ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಚುನಾವಣೆ ಫಲಿತಾಂಶ ಅಧಿಕಾರ ಹಂಚಿಕೆಯಿಂದ ತಾತ್ಕಾಲಿಕ ರಿಲೀಪ್ ನೀಡಿದೆ. ಫಲಿತಾಂಶದ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ,
ಜನರ ತೀರ್ಮಾನ ಒಪ್ಪಲೇ ಬೇಕು, ಯಾಕೆ ಹಿನ್ನಡೆ ಆಗಿದೆ ಅಂತ ತಿಳಿದುಕೊಳ್ತೇನೆ, ಎನ್ ಡಿ ಎ ಇಷ್ಟು ದೊಡ್ಡ ಮಟ್ಡದ ಮುನ್ನಡೆ ಹೇಗೆ ಬಂತು ಅಂತಲೂ ತಿಳಿದುಕೊಳ್ತೇವೆ ಎಂದಿದ್ದಾರೆ. ಜೊತೆಗೆ ಹಿಂದುಳಿದ ವರ್ಗಗಳು ಕಾಂಗ್ರೆಸ್ ಕೈ ಹಿಡಿದಿಲ್ಲವೇ ಎಂಬ ಪ್ರಶ್ನೆಗೆ ನಿತೀಶ್ಕುಮಾರ್ ಯಾರು ? ಎಂದು ಮರು ಪ್ರಶ್ನಿಸುವ ಮೂಲಕ ಮಾರ್ಮಿಕವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ:ಜಗತ್ತಿನ ಅತ್ಯಂತ ಕ್ರೂರ ಬುಡಕಟ್ಟು.. ಇಲ್ಲಿನ ಹುಡುಗಿಯರು ದೇಹದ ಈ ಭಾಗ ಕತ್ತರಿಸಿಕೊಳ್ಳಲೇಬೇಕು!
ಇನ್ನು ಮುಖ್ಯಮಂತ್ರಿಯಾಗಿಯೇ ತೀರಬೇಕೆಂದು ಹಠಕ್ಕೆ ಬಿದ್ದವರಂತೆ ದೆಹಲಿ ನಾಯಕರ ಸಂಪರ್ಕಕ್ಕೆ ಸೈಕಲ್ ಹೊಡೆಯುತ್ತಿದ್ದ ಡಿ ಕೆ ಶಿವಕುಮಾರ್ ಈಗ ವರಸೆ ಬದಲಾಯಿಸಿದಂತೆ ಕಾಣುತ್ತದೆ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಪುನರುಚ್ಚರಿಸಿದ್ದಾರೆ. ಇನ್ನೂ ದೆಹಲಿ ನಾಯಕರು ಕೂಡಾ ಫಲಿತಾಂಶದ ವಿಮರ್ಶೆಯಲ್ಲಿದ್ದು ಸದ್ಯಕ್ಕೆ ಯಾರೂ ಕೂಡಾ ದೆಹಲಿಗೆ ಬಾರದಂತೆ ತಾಕೀತು ಮಾಡಿದ್ದಾರೆ ಎನ್ನಾಗುತ್ತಿದೆ. ಒಟ್ಟಾರೆ ಬಿಹಾರ ಚುನಾವಣೆ ರಾಜ್ಯ ಕಾಂಗ್ರೆಸ್ನ ಕುರ್ಚಿ ಆಟಕ್ಕೆ ತಾತ್ಕಾಲಿಕ ಬ್ರೇಕ್ ನೀಡಿದಂತಾಗಿದೆ.









