)
ಬೆಂಗಳೂರು : ಕಳೆದ ವಾರದಿಂದ ನಡೆದಿರುವ ಸಿಎಂ ಬದಲಾವಣೆ, ಸಂಪುಟ ಪುನಾರಚನೆಯ ಕೂಗು ಜೋರಾಗ್ತಿದೆ. ಬಿಹಾರ ಚುನಾವಣೆಯ ನಂತ್ರ ಏನೂ ಬೇಕಾದ್ರೂ ಘಟಿಸಬಹುದು ಕುತೂಹಲವನ್ನ ಹುಟ್ಟುಹಾಕಿದೆ. ಸಿಎಂ ಸಿದ್ದರಾಮಯ್ಯನವರ ಒಪ್ಪಂದದ ಅವಧಿ ಮುಗಿದು, ಡಿಸಿಎಂ ಡಿಕೆಶಿ ಪಟ್ಟ ಕಟ್ಟೋಕೆ ಹೈಕಮಾಂಡ್ ರೆಡಿಯಾಗಿದೆ ಅನ್ನೋ ಗುಸುಗುಸು ನಡೆದಿದೆ. ಇದ್ರ ಬೆನ್ನಲ್ಲೇ ಸಂಪುಟ ಪುನಾರಚನೆಯನ್ನ ಮಾಡಿ ಸಿಎಂ ಉಳಿದ ಅವಧಿಗೂ ಅವರೇ ಮುಂದುವರಿಯುತ್ತಾರೆಂಬ ಚರ್ಚೆಗಳೂ ಜೋರಾಗ್ತಿವೆ.
ಮಾಜಿ ಕೇಂದ್ರ ಸಚಿವೆ ಹಾಗೂ ಸೋನಿಯಾ ಗಾಂಧಿಯವರ ಆಪ್ತೆ ಅಂಬಿಕಾ ಸೋನಿಯ ಭೇಟಿಯ ನಂತರ ಡಿಸಿಎಂ ಡಿಕೆಶಿ ಆತ್ಮ ವಿಶ್ವಾಸದಲ್ಲಿದ್ದಾರೆ. ಇತ್ತ ನಾನೇ ಐದು ವರ್ಷ ಇರ್ತೇನೆ, ರಾಹುಲ್ ಗಾಂಧಿ ನನ್ಮ ಬೆನ್ನಿಗಿದ್ದಾರೆಂದು ಸಿಎಂ ಕೂಡ ದೃಡ ವಿಶ್ವಾಸದಲ್ಲಿದ್ದಾರೆ. ಆದ್ರೂ ಸಭೆಗಳ ಮೇಲೆ ಸಭೆಗಳು ನಡೆದಿವೆ. ಕ್ಷಿಪ್ರ ಕ್ರಾಂತಿಯಾದ್ರೆ ಏನು ಮಾಡಬೇಕು. ಸಿದ್ದರಾಮಯ್ಯ ಪರ ಬ್ಯಾಡ್ ಬೀಸೋಕೆ ಅಹಿಂದ ಸಮುದಾಯಗಳ ಸಚಿವರು ಟೊಂಕ ಕಟ್ಟಿ ನಿಂತಂತಿದೆ. ಹೀಗಾಗಿ ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್ ಮೀಟಿಂಗ್ ಗಳ ಜೊತೆ ಮಿಡ್ ನೈಟ್ ಮೀಟಿಂಗಿಗೂ ಮುಂದಾಗಿದ್ದಾರೆ.
ಡಿಸಿಎಂ ಡಿಕೆಶಿ ಸಿಎಂ ಕುರ್ಚಿಗಾಗಿ ಹೈಕಮಾಂಡ್ಮೇಲೆ ಒತ್ತಡ ಕ್ರಿಯೇಟ್ ಮಾಡ್ತಿರೋದ್ರಿಂದ ಅವರ ವಿರೋಧಿ ಬಣ ಅದನ್ನ ತಡೆಯೋಕೆ ನೋಡ್ತಿದೆ. ಒಂದು ಕಡೆ ದಲಿತ ಸಮಾವೇಶವನ್ನ ಆಯೋಜನೆ ಮಾಡಿ, ಹೈಕಮಾಂಡ್ ಮುಂದೆ ಬಲಪ್ರದರ್ಶನಕ್ಕೆ ಕೈಹಾಕಲಾಗಿದೆ. ಇದರ ಮುಂದುವರಿದ ಭಾಗವಾಗಿ ದಲಿತ ಸಚಿವರು ಪದೇ ಪದೇ ಮೀಟಿಂಗ್ ನಡೆಸ್ತಿದ್ದಾರೆ. ನಿನ್ನೆ ಮಧ್ಯಾಹ್ನ ಪರಂ, ಮಹದೇವಪ್ಪ ಜೊತೆ ಸಿಎಂ ಕ್ಲೋಸ್ ಡೋರ್ ಮೀಟಿಂಗ್ ನಡೆಸಿದ್ರು. ಅದಾದ ನಂತ್ರ ಸಂಜೆ ಮಹದೇವು, ಪರಮೇಶ್ವರ್ ಲಂಚ್ ಮೀಟಿಂಗ್ ನಡೆಸಿದ್ರು. ನಂತರ ಕಾರ್ಯಕ್ರಮದ ಫೋಟೋ ಶೂಟ್ ನೆಪದಲ್ಲಿ ರಾತ್ರಿ ಪರಂ, ಮಹದೇವು, ದಿನೇಶ್ ಹಾಗೂ ಎಂಬಿ ಪಾಟೀಲ್ ಮಿಡ್ ನೈಟ್ ಮೀಟಿಂಗ್ ನಡೆಸಿದ್ರು ಅನ್ನೋ ಮಾಹಿತಿ ಹೊರಬಿದ್ದಿದೆ.ಇವರೆಲ್ಲರು ಸಿಎಂ ಆಪ್ತ ಬಳಗದಲ್ಲೇ ಗುರ್ತಿಸಿಕೊಂಡಿದ್ದು, ಹೇಗಾದ್ರೂ ಮಾಡಿ ಸಿದ್ದರಾಮಯ್ಯ ನವರನ್ನೇ ಮುಂದುವರಿ ಸೋಕೆ ಪ್ರಯತ್ನ ಮುಂದುವರಿಸಿದ್ದಾರೆ.
ಇನ್ನು ಡಿಕೆಶಿಗೆ ಸಿಎಂ ಕುರ್ಚಿ ತಪ್ಪಿಸೋಕೆ ಅಹಿಂದ ಸಚಿವರು ಮುಂದಾಗಿದ್ದಾರೆ. ನವೆಂಬರ್ 7 ರಂದು ತುಮಕೂರಿನ ರಾಜಣ್ಣ ನಿವಾಸದಲ್ಲಿ ಡಿನ್ನರ್ ಸಭೆಯನ್ನ ಆಯೋಜಿಸಲಾಗಿದೆ. ಸರ್ಕಾರಿ ಕಾರ್ಯ ಕ್ರಮದ ನಿಮಿತ್ತ ಸಿಎಂ ಕೂಡ ಅಂದು ತುಮಕೂರಿಗೆ ಹೋಗ್ತಿದ್ದಾರೆ. ಕಾರ್ಯ ಕ್ರಮದ ನೆಪದಲ್ಲೇ ರಾಜಣ್ಣ ನಿವಾಸಕ್ಕೆ ಭೇಟಿಯನ್ನ ಕೊಡಲಿದ್ದಾರೆ. ಈವೇಳೆ ಪರಮೇಶ್ವರ್, ಮಹದೇವಪ್ಪ,ಸ ತೀಶ್ ಜಾರಕಿಹೊಳಿ ಇನ್ನಿತರ ಸಮಾನ ಮನಸ್ಕರ ಸಚಿವರು ಸಭೆ ನಡೆಸಲಿದ್ದಾರೆನ್ನಲಾಗ್ತಿದೆ. ದಲಿತ ಸಮಾವೇಶ,ದಲಿತ ಸಿಎಂ ಕೂಗಿಗೆ ಬಲತುಂಬುವ ಪ್ಲಾನ್ ರೂಪಿಸಲಿದ್ದಾರೆ. ಬಿಹಾರ ಚುನಾವಣೆಯಲ್ಲಿ ಬ್ಯುಸಿಯಾಗಿರುವ ವರಿಷ್ಟರು ನವೆಂಬರ್ 15 ರ ನಂತರ ಫ್ರೀ ಆಗಲಿದ್ದು, ಅಷ್ಟರೊಳಗೆ ಅವರ ಮೇಲೆ ಒತ್ತಡ ತರುವ ಪ್ರಯತ್ನ ಮಾಡಲಿದ್ದಾರೆ.
ಇನ್ನು ತಮ್ಮ ಕುರ್ಚಿಯನ್ನ ಉಳಿಸಿ ಕೊಳ್ಳೋಕೆ ಸಿಎಂ ದೇವೇಗೌಡರ ಗರಡಿಯಲ್ಲಿ ಕಲಿತ ಒಂದೊಂದೇ ಪಟ್ಟುಗಳ ಪ್ರಯೋಗಕ್ಕೆ ಮುಂದಾದಂತೆ ಕಾಣ್ತಿದೆ. ದಲಿತ ಸಚಿವರು ಜೊತೆ ಸಭೆ, ಅಹಿಂದ ಸಮಾವೇಶ, ದಲಿತ ಸಮಾವೇಶಗಳ ಆಯೋಜನೆಗೆ ಪ್ಲಾನ್. ತಮ್ಮ ಶಕ್ತಿ ಪ್ರದರ್ಶನಕ್ಕೆ ವೇದಿಕೆ. ಒಂದು ವೇಳೆ ತೀರ ಕಂಟಕ ಎದುರಾದರೆ ದಲಿತ ಸಿಎಂ ಅಸ್ತ್ರ ಪ್ರಯೋಗ. ಪರಮೇಶ್ವರ್ ಅವರನ್ನ ಸಿಎಂ ಸ್ಥಾನಕ್ಕೆ ತೇಲಿಬಿಡುವ ಆಲೋಚನೆಯನ್ನ ಮಾಡ್ತಿದ್ದಾರೆ. ಇದ್ರ ನಡುವೆ ಇದೀಗ ಲಿಂಗಾಯತ ಅಸ್ತ್ರ ಬಳಕೆಗೂ ಸಿಎಂ ಮುಂದಾದಂತೆ ಕಾಣ್ತಿದೆ. ನವೆಂಬರ್ 15 ರ ನಂತರ ಏನೆಲ್ಲಾ ಆಗಬಹುದು ಎಂಬ ನಿರೀಕ್ಷೆಯಲ್ಲಿ ಲಿಂಗಾಯತ ಸಿಎಂ ಕೂಗನ್ನ ಮುಂದೆ ಬಿಡೋಕೆ ನೋಡ್ತಿದ್ದಾರೆ. ದಲಿತ ಸಮುದಾಯಕ್ಕೆ ಕೊಡೋದಾದ್ರೆ ಪರಮೇಶ್ವರ್ ಗೆ ಕೊಡಿ, ಲಿಂಗಾಯತ ಸಮುದಾಯಕ್ಕೆ ನೀಡೋದಾದ್ರೆ ಎಂಬಿ ಪಾಟೀಲರಿಗೆ ಕೊಡಿ ಎಂಬ ಬಾಣವನ್ನ ಹೈಕಮಾಂಡ್ ಮುಂದೆ ಪ್ರಯೋಗಿಸಲು ಪ್ಲಾನ್ ರೂಪಿಸಿದಂತಿದೆ. ಹಾಗಾಗಿಯೇ ದಲಿತ ಸಚಿವರ ಜೊತೆ ಬಲಿತ ಸಮುದಾಯಗಳ ಸಚಿವರು ಸಭೆಗಳನ್ನ ಸೇರ್ತಿದ್ದಾರೆ.
ಒಟ್ನಲ್ಲಿ ನವೆಂಬರ್ 15 ರ ನಂತರ ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರ ಕ್ರಾಂತಿ ನಡೆಯೋದು ಖಚಿತ ಎನ್ನಲಾಗ್ತಿದೆ. ಒಂದು ವೇಳೆ ಸಿಎಂ ಕುರ್ಚಿ ಬದಲಾವಣೆಗೆ ಕೈಹಾಕಿದ್ರೆ ಏನೆಲ್ಲಾ ಆಗಬಹುದು ಅನ್ನೋದು ಈಗಲೇ ಬೆಳಕಿಗೆ ಬರ್ತಿದೆ. ವರಿಷ್ಠರ ಕಡೆ ಡಿಕೆಶಿ ಗಮನ ಕೊಟ್ಟಿದ್ರೆ, ಮತ್ತೊಂದು ಕಡೆ ಡಿಕೆಶಿಗೆ ತಪ್ಪಿಸೋಕೆನಾನಾ ಚಟುವಟಿಕೆಗಳು ನಡೆದಿವೆ.