ಜಮೀನಿನ ವಿಚಾರಕ್ಕೆ ಜಗಳ.. ದ್ವೇಷಕ್ಕೆ ಧ್ವಂಸವಾಯ್ತು ಲಕ್ಷ ಲಕ್ಷ ಬೆಲೆ ಬಾಳುವ ಅಡಿಕೆ ತೋಟ!

land dispute: ಆ ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ನಡೆಯುತ್ತಿತ್ತು ಜಗಳ. ಹಲವು ವರ್ಷಗಳಿಂದಲೂ ನಡೆಯುತ್ತಿದ್ದ ಜಮೀನು ಜಗಳ ಕೊನೆಗೆ ಪೊಲೀಸ್‌ ಠಾಣೆವರೆಗೂ ಹೋಗಿತ್ತು. ಆದರೆ ಈ ಜಮೀನು ವ್ಯಾಜ್ಯಕ್ಕೆ ಯಾವುದೇ ಪರಿಹಾರ ಸಿಗಲಿಲ್ಲ. ಇದೀಗ ಇದೇ ವಿಷಯಕ್ಕೆ ಅಡಿಕೆ ತೋಟವನ್ನೇ ನಾಶ ಮಾಡಲಾಗಿದೆ. ಹೌದು, ಎರಡು ಎಕರೆ ಅಡಿಕೆ ಗಿಡಗಳನ್ನೇ ಸರ್ವ ನಾಶ ಮಾಡಲಾಗಿದೆ. ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು ಕಣ್ಣೀರಿಡುವಂತಾಗಿದೆ. ಎಲ್ಲಿ ಅಂತೀರಾ ನೋಡಿ ಈ ವರದಿ.

Written by - Savita M B | Last Updated : Apr 29, 2025, 02:04 PM IST
  • ಬಾಡಾ ಗ್ರಾಮದ ನಿವಾಸಿ ಪುಷ್ಪಾ ಎಂಬುವರು ತಮ್ಮ ಜಮೀನಿನಲ್ಲಿ ಅಡಿಕೆ ತೋಟ ಮಾಡಿದ್ದru
  • ಹೌದು ಇಂಥ ಘಟನೆ ನಡೆದಿರುವುದು ದಾವಣಗೆರೆ ತಾಲೂಕು ಶಂಕರನಹಳ್ಳಿ ಗ್ರಾಮದಲ್ಲಿ
ಜಮೀನಿನ ವಿಚಾರಕ್ಕೆ ಜಗಳ.. ದ್ವೇಷಕ್ಕೆ ಧ್ವಂಸವಾಯ್ತು ಲಕ್ಷ ಲಕ್ಷ ಬೆಲೆ ಬಾಳುವ ಅಡಿಕೆ ತೋಟ!

Viral News: ಹೀಗೆ ಸಾಲು ಸಾಲು ಅಡಿಕೆ ಗಿಡಗಳನ್ನು ನಾಶ ಮಾಡಿರುವ ದೃಶ್ಯ, ಕಷ್ಟಪಟ್ಟು ಪೋಷಣೆ ಮಾಡಿ ಸಾಕಿದ್ದ ಅಡಿಕೆ ಗಿಡಗಳನ್ನು ಸರ್ವನಾಶ ಮಾಡಿರುವುದು. ಹೌದು ಇಂಥ ಘಟನೆ ನಡೆದಿರುವುದು ದಾವಣಗೆರೆ ತಾಲೂಕು ಶಂಕರನಹಳ್ಳಿ ಗ್ರಾಮದಲ್ಲಿ..

 ಬಾಡಾ ಗ್ರಾಮದ ನಿವಾಸಿ ಪುಷ್ಪಾ ಎಂಬುವರು ತಮ್ಮ ಜಮೀನಿನಲ್ಲಿ ಅಡಿಕೆ ತೋಟ ಮಾಡಿದ್ದರು, ಎರಡು ವರ್ಷಗಳ ಹಿಂದೆ ಸುಮಾರು 5 ಲಕ್ಷ ಖರ್ಚು ಮಾಡಿ ತೋಟ ಮಾಡಲಾಗಿತ್ತು. ಹೀಗೆ ಕಷ್ಟಪಟ್ಟು ಮಾಡಲಾಗಿದ್ದ ಅಡಿಕೆ ತೋಟವನ್ನೇ ನಾಶ ಮಾಡಿದ್ದಾರೆ. ಸುಮಾರು 1,200 ಅಡಿಕೆ ಗಿಡಗಳನ್ನು ಕತ್ತರಿಸಿ ಹಾಕಿದ್ದಾರೆ. ಕಿಡಿಗೇಡಿಗಳು ಮಾಡಿರುವ ಕೃತ್ಯಕ್ಕೆ ಅಡಿಕೆ ಸಸಿಗಳು ಬಲಿಯಾಗಿದ್ದು, ಕಣ್ಣೀರಿಡುವಂತಾಗಿದೆ. ಪುಷ್ಪಾ ಎಂಬ ರೈತ ಮಹಿಳೆ ಮಕ್ಕಳಂತೆ ಸಾಕಿದ್ದ ಗಿಡಗಳನ್ನು ಕತ್ತರಿಸಿ ಹಾಕಿರುವ ಕಾರಣ ಈ ಕೃತ್ಯ ಎಸಗಿರುವಂತವರಿಗೆ ತಕ್ಕ ಶಿಕ್ಷೆಯಾಗಬೇಕು ಎನ್ನಲಾಗಿದೆ. ಅಷ್ಟಕ್ಕೂ ಅಡಿಕೆ ಗಿಡಗಳನ್ನು ಯಾರು ಕತ್ತರಿಸಿದ್ದಾರೆ ಎಂಬ  ಅನುಮಾನ ಕೂಡ ಕಾಡುತ್ತಿದೆ. 

ಇದನ್ನೂ ಓದಿ : ಒಂದು ಕಪ್ ಮೊಸರನ್ನು ಈ ರೀತಿ ಸೇವಿಸಿದರೆ ದೇಹದಲ್ಲಿ ಸೇರಿಕೊಂಡಿರುವ ಬೇಡದ ಕೊಬ್ಬು ಸಾರಾಗವಾಗಿ ಕರಗುವುದು!ವೈಟ್ ಲಾಸ್ ಆಗಬೇಕಿದ್ದರೆ ಇದನ್ನೊಮ್ಮೆ ಟ್ರೈ ಮಾಡಿ

 ಅಡಿಕೆ ತೋಟ ಮಾಡಿದ್ದ ಪುಷ್ಪಾ  ಮತ್ತು ದೂರದ ಸಂಬಂಧಿಕರಾದ ಯಲ್ಲಮ್ಮ ಎಂಬುವರ ನಡುವೆ ಜಮೀನು ಸಂಬಂಧ ವ್ಯಾಜ್ಯ ನಡೆಯುತ್ತಿತ್ತು. ಹಲವು ವರ್ಷಗಳಿಂದಲೂ ಈ ಜಮೀನು ವಿಚಾರಕ್ಕೆ ಇಬ್ಬರ ನಡುವೆ ಜಗಳ ಕೂಡ ನಡೆಯುತ್ತಿತ್ತು. ಈ ಜಮೀನು ನಮಗೆ ಸೇರಿದ್ದು ಎಂದು ಯಲ್ಲಮ್ಮ ಇವರ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. ಈ ಹಿಂದೆ ಕೂಡ ಜಮೀನಿನಲ್ಲಿದ್ದ ಬೋರ್‌ ವೆಲ್‌ ಸೇರಿದಂತೆ ಕೃಷಿ ಉಪಕರಣಗಳನ್ನು ಕಳ್ಳತನ ಮಾಡಿದ್ದರು, ಬಳಿಕ ರಾಜೀ ಪಂಚಾಯಿತಿ ಮಾಡಿ ಇಬ್ಬರ ನಡುವೆ ಇದ್ದ ಕಲಹಕ್ಕೆ ಬ್ರೇಕ್‌ ಹಾಕಲಾಗಿತ್ತು. 

ಇದನ್ನೂ ಓದಿ : ಒಂದು ಕಪ್ ಮೊಸರನ್ನು ಈ ರೀತಿ ಸೇವಿಸಿದರೆ ದೇಹದಲ್ಲಿ ಸೇರಿಕೊಂಡಿರುವ ಬೇಡದ ಕೊಬ್ಬು ಸಾರಾಗವಾಗಿ ಕರಗುವುದು!ವೈಟ್ ಲಾಸ್ ಆಗಬೇಕಿದ್ದರೆ ಇದನ್ನೊಮ್ಮೆ ಟ್ರೈ ಮಾಡಿ

 ಇದೇ ಜಮೀನು ವಿಚಾರವಾಗಿ ಮತ್ತೆ ಗಲಾಟೆ ಕೂಡ ನಡೆದಿತ್ತು ಎನ್ನಲಾಗಿದೆ. ಈ ಜಮೀನು ನಮಗೆ ಸೇರಿದ್ದು ಎಂದು ಯಲ್ಲಮ್ಮ ತಕರಾರು ಮಾಡಿದ್ದರು ಎನ್ನಲಾಗಿದೆ. ಇದೇ ವಿಷಯಕ್ಕೆ ದ್ವೇಷದಿಂದ ಅಡಿಕೆ ಗಿಡಗಳನ್ನು ಕತ್ತರಿಸಿ ಹಾಕಿರಬಹುದು ಎಂಬುದು ಅನುಮಾನವನ್ನು ಉಂಟು ಮಾಡಿದೆ. ಕಷ್ಟಪಟ್ಟು ಮಾಡಲಾಗಿದ್ದ ತೋಟವನ್ನು ಇದೀಗ ನಾಶ ಮಾಡಿರುವುದು ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಎಂಬಂತಾಗಿದೆ. 
 
ಜಗಳ ಏನೇ ಇರಬಹುದು ಆದರೆ ನ್ಯಾಯಯುತವಾಗಿ ಬಗೆಹರಿಸಿಕೊಳ್ಳಬಹುದುದಿತ್ತು, ಆದರೆ ಅಡಿಕೆ ಗಿಡಗಳನ್ನು ನಾಶ ಮಾಡವ ಮೂಲಕ ಈ ರೀತಿ ದ್ವೇಷ ಸಾಧಿಸಿದ್ದು ಸರಿಯಲ್ಲ ಎಂಬುದು ಎಲ್ಲರ ಅಭಿಪ್ರಾಯ. ಈ ನಡುವೆ ಈ ಸಂಬಂಧ ಮಾಯಕೊಂಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ. ತೋಟ ನಾಶ ಮಾಡಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

Trending News