Powerful Hindu King of India: ಭಾರತದ ಇತಿಹಾಸದಲ್ಲಿ ಅನೇಕ ಧೀರ, ಮಹಿಮಾನ್ವಿತ ಮತ್ತು ಶಕ್ತಿಶಾಲಿ ಹಿಂದೂ ರಾಜರು ಇದ್ದಾರೆ. ಅವರು ತಮ್ಮ ಶೌರ್ಯ, ಧೈರ್ಯ ಮತ್ತು ಕೌಶಲ್ಯಪೂರ್ಣ ತಂತ್ರದಿಂದ ಯುದ್ಧಭೂಮಿಯಲ್ಲಿ ತಮ್ಮ ಶತ್ರುಗಳನ್ನು ಸೋಲಿಸಿ ತಮ್ಮ ರಾಜ್ಯಗಳನ್ನು ರಕ್ಷಿಸಿಕೊಳ್ಳುತ್ತಿದ್ದರು. ಹಾಗಾದರೆ ಇತಿಹಾಸದ ಪುಟಗಳಲ್ಲಿ ತಮ್ಮ ಶೌರ್ಯದಿಂದ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿಟ್ಟ 5 ಹಿಂದೂ ರಾಜರ ಬಗ್ಗೆಇಲ್ಲಿ ತಿಳಿಯೋಣ. ಅವರ ಸಾಹಸಗಾಥೆ ಇತಿಹಾಸದಲ್ಲಿ ದಾಖಲಾಗಿದೆ ಮತ್ತು ಇಂದಿಗೂ ಅವರ ಕಥೆಗಳು ನಮಗೆ ಸ್ಫೂರ್ತಿ ನೀಡುತ್ತವೆ. ಮೊಘಲರು ಮತ್ತು ಬ್ರಿಟಿಷರಂತಹ ಶಕ್ತಿಗಳು ಸಹ ಈ ರಾಜರ ನೀತಿಗಳು ಮತ್ತು ಅಧಿಕಾರಕ್ಕೆ ಹೆದರುತ್ತಿದ್ದವು ಎಂಬುದು ಇಲ್ಲಿ ಉಲ್ಲೇಖನೀಯ.
ಮಹಾರಾಣಾ ಪ್ರತಾಪ್:
ಮೇವಾರದ ಸಿಸೋಡಿಯಾ ರಜಪೂತ ರಾಜವಂಶದ ಮಹಾನ್ ರಾಜ ಮಹಾರಾಣಾ ಪ್ರತಾಪ್, 1540 ರ ಮೇ 9 ರಂದು ಕುಂಭಾಲ್ಗಢದ ಕಚ್ಛ್ವಾಹಾ ಗ್ರಾಮದಲ್ಲಿ ಜನಿಸಿದರು. ಒಬ್ಬ ಮಹಾನ್ ಯೋಧ ಮತ್ತು ಪ್ರತಿಯೊಂದು ಕಷ್ಟದಲ್ಲೂ ಹೋರಾಡಲು ಸಿದ್ಧನಾಗಿದ್ದ ದೊರೆ. ಅವರು ಹಲ್ದಿಘಾಟಿ ಯುದ್ಧದಲ್ಲಿ ವಿರೋಧಿ ತಮ್ಮ ಮೇಲೆ ಹಿಡಿತ ಸಾಧಿಸಿದರೂ ಶೌರ್ಯವನ್ನು ಪ್ರದರ್ಶಿಸಿದವರು. ಮಹಾರಾಣಾ ಪ್ರತಾಪ್ ಯಾವಾಗಲೂ ಉನ್ನತ ಸಾಂಸ್ಕೃತಿಕ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದರು. ಮಹಾರಾಣಾ ಪ್ರತಾಪ್ ಆಳ್ವಿಕೆಯಲ್ಲಿ, ಮೊಘಲ್ ಚಕ್ರವರ್ತಿ ಅಕ್ಬರ್, ಅವರ ರಾಜ್ಯದ ಮೇಲೆ ದಾಳಿ ಮಾಡಿದ್ದು, ಇದು ಮುಂದಿನ 25 ವರ್ಷಗಳ ಕಾಲ ಮುಂದುವರೆದಿತ್ತು.
ಪೃಥ್ವಿರಾಜ್ ಚೌಹಾಣ್:
ಚೌಹಾಣ್ ರಾಜವಂಶದ ಮಹಾನ್ ರಾಜ ಪೃಥ್ವಿರಾಜ್ ಚೌಹಾಣ್ ತನ್ನ ಆಳ್ವಿಕೆಯಲ್ಲಿ ಅನೇಕ ಯುದ್ಧಗಳನ್ನು ಗೆದ್ದರು. 12 ನೇ ಶತಮಾನದಲ್ಲಿ, ಪೃಥ್ವಿರಾಜ್ ಚೌಹಾಣ್ ತನ್ನ ಆಳ್ವಿಕೆಯಲ್ಲಿ ಸಂಸ್ಕೃತಿ, ಕಲೆ ಮತ್ತು ಸಾಹಿತ್ಯವನ್ನು ಬಹಳವಾಗಿ ಅಭಿವೃದ್ಧಿಪಡಿಸಿದ್ದರು. ಅಂದಹಾಗೆ ಅವರ ಆಳ್ವಿಕೆಯಲ್ಲಿ,ಸ್ವತಃ ಅವರೇ ಬರೆದ 'ಪೃಥ್ವಿರಾಜ್ ರಾಸೋ' ಪುಸ್ತಕ ಪ್ರಸಿದ್ಧವಾಯಿತು. ಈ ಪುಸ್ತಕದಲ್ಲಿ ರಾಜಕೀಯ, ಸಂಸ್ಕೃತಿ ಮತ್ತು ಧರ್ಮದ ವಿಷಯಗಳನ್ನು ವ್ಯಾಪಕವಾಗಿ ಚರ್ಚಿಸಲಾಗಿದೆ. ಪೃಥ್ವಿರಾಜ್ ಚೌಹಾಣ್ ಮೊಹಮ್ಮದ್ ಘೋರಿಯೊಂದಿಗೆ ಅನೇಕ ಯುದ್ಧಗಳನ್ನು ಮಾಡಿ, ವಿಜಯಶಾಲಿಯಾಗಿದ್ದರು.
ಸಮುದ್ರಗುಪ್ತ:
ಎರಡನೇ ಚಂದ್ರಗುಪ್ತನ ಮಗ ಸಮುದ್ರಗುಪ್ತನು ಗುಪ್ತ ರಾಜವಂಶದ ಒಬ್ಬ ಮಹಾನ್ ಆಡಳಿತಗಾರ. ಸಮುದ್ರಗುಪ್ತನು ಕ್ರಿ.ಶ. 335 ರಿಂದ ಕ್ರಿ.ಶ. 380 ರವರೆಗೆ ಆಳ್ವಿಕೆ ನಡೆಸಿದನು. ವಾಯುವ್ಯ ಭಾರತದ ಶ್ರೇಷ್ಠ ಆಡಳಿತಗಾರನೆಂದು ಪರಿಗಣಿಸಲ್ಪಟ್ಟಿರುವ ಸಮುದ್ರಗುಪ್ತನು ತನ್ನ ಆಳ್ವಿಕೆಯಲ್ಲಿ ಅನೇಕ ಯಶಸ್ವಿ ಯುದ್ಧಗಳನ್ನು ಮಾಡಿ ತನ್ನ ಅಧಿಕಾರದ ಕ್ಷೇತ್ರವನ್ನು ವಿಸ್ತರಿಸಿದರು. ಆದ್ದರಿಂದ ಅವರನ್ನು 'ಭಾರತದ ನೆಪೋಲಿಯನ್' ಎಂದೂ ಕರೆಯುತ್ತಾರೆ.
ಕೃಷ್ಣ ದೇವರಾಯ:
ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ದೊರೆ ಕೃಷ್ಣದೇವರಾಯನ ಆಳ್ವಿಕೆಯನ್ನು ಸುವರ್ಣಯುಗ ಎಂದು ಕರೆಯಲಾಗುತ್ತದೆ. ಅವರ ಆಳ್ವಿಕೆಯು ೧೫೦೯ ರಿಂದ ೧೫೩೦ ರವರೆಗೆ ಇತ್ತು. ವಿಜಯನಗರವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಲು ಅನೇಕ ಕಲಾಕೃತಿಗಳನ್ನು ಬೆಂಬಲಿಸಿದರು. ಕೃಷ್ಣದೇವರಾಯ ಕೂಡ ಒಬ್ಬ ಅತ್ಯುತ್ತಮ ಕವಿಯಾಗಿದ್ದು, ಅವರು ಬರೆದ ಅನೇಕ ಕಾವ್ಯಗಳು ಮತ್ತು ನಾಟಕಗಳು ಭಾರತೀಯ ಸಾಹಿತ್ಯದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿವೆ. ತನ್ನ ಆಳ್ವಿಕೆಯಲ್ಲಿ, ವಿಜಯನಗರ ಸಾಮ್ರಾಜ್ಯವನ್ನು ಸಮೃದ್ಧ ಮತ್ತು ಶಾಂತಿಯುತ ಸಾಮ್ರಾಜ್ಯವನ್ನಾಗಿ ಮಾಡಲು ಅನೇಕ ಕ್ರಮಗಳನ್ನು ಕೈಗೊಂಡರು
ಇದನ್ನೂ ಓದಿ: ನಟಿ ವೈಷ್ಣವಿ ಗೌಡ ಎಂಗೇಜ್ಮೆಂಟ್.. ಸೀತಾರಾಮ ಸುಂದರಿ ಕೈ ಹಿಡಿಯುತ್ತಿರುವ ಹುಡುಗ ಯಾರು ಗೊತ್ತಾಯ್ತಾ?
ಅಶೋಕ್ ಮೌರ್ಯ:
ಮೌರ್ಯ ರಾಜವಂಶದ ಮೂರನೇ ದೊರೆ ಅಶೋಕ ಮೌರ್ಯ, ಪ್ರಸಿದ್ಧ ಆಡಳಿತಗಾರ ಮತ್ತು ಚಕ್ರವರ್ತಿ ಚಂದ್ರಗುಪ್ತ ಮೌರ್ಯನ ಮೊಮ್ಮಗ. ಅಶೋಕ ಮೌರ್ಯನು ಕ್ರಿ.ಪೂ 268 ರಿಂದ ಕ್ರಿ.ಪೂ 232 ರವರೆಗೆ ಆಳಿದನು. ಅಶೋಕ ಮೌರ್ಯನು ತನ್ನ ಜೀವಿತಾವಧಿಯಲ್ಲಿ ಅನೇಕ ಯುದ್ಧಗಳನ್ನು ಮಾಡಿದನು ಮತ್ತು ತನ್ನ ಅಧಿಕಾರದ ಕ್ಷೇತ್ರವನ್ನು ವಿಸ್ತರಿಸಿದನು. ಆದರೆ ತನ್ನ ಜೀವನದ ನಂತರದ ದಿನಗಳಲ್ಲಿ ಬೌದ್ಧಧರ್ಮವನ್ನು ಅಳವಡಿಸಿಕೊಂಡರು. ತಮ್ಮ ಆಳ್ವಿಕೆಯಲ್ಲಿ ಅಶೋಕ ಸ್ತಂಭದ ನಿರ್ಮಾಣ ಮತ್ತು ಸರ್ಕಾರಿ ಆಸ್ಪತ್ರೆಗಳು, ಜಾನುವಾರು ಆಶ್ರಯಗಳನ್ನು ಒದಗಿಸುವಂತಹ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









