ಅಧಿಕಾರ ಹಂಚಿಕೆ ಭರವಸೆ ಈಡೇರಿಸಿ ಇಲ್ಲಾ ಅಂದ್ರೆ.. : ಹೈ ಕಮಾಂಡ್ ಗೆ ಡಿಕೆ ಡೆಡ್ ಲೈನ್

DK Shivakumar: ಇತ್ತೀಚಿಗೆ ಡೆಲ್ಲಿಗೆ ಭೇಟಿ ನೀಡಿದ್ದ ಡಿಸಿಎಂ ಡಿಕೆ ಶಿವಕುಮಾರ್, ಹೈ ಕಮಾಂಡ್ ಗೆ ಖಡಕ್ ಆಗ್ರಹ ಮಾಡಿ ಸಂಸದ ಕೆಸಿ ವೇಣುಗೋಪಾಲ್ ಗೆ ಮಾತಿನ ಬಿಸಿ ಮುಟ್ಟಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.  

Written by - Prashobh Devanahalli | Edited by - Savita M B | Last Updated : Mar 3, 2025, 09:49 AM IST
  • ಮುಖ್ಯಮಂತ್ರಿ ಪದವಿಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಬಾರಿ ಪೈಪೋಟಿ
  • ಕೊಟ್ಟ ಮಾತು ನೆರವೇರಿಸಿ ಎಂದು ಹೈಕಮಾಂಡ್ ಬಳಿ ಆಗ್ರಹ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ
ಅಧಿಕಾರ ಹಂಚಿಕೆ ಭರವಸೆ ಈಡೇರಿಸಿ ಇಲ್ಲಾ ಅಂದ್ರೆ.. : ಹೈ ಕಮಾಂಡ್ ಗೆ ಡಿಕೆ ಡೆಡ್ ಲೈನ್

ಬೆಂಗಳೂರು : ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುಂಚೆಯಿಂದಲೂ ಮುಖ್ಯಮಂತ್ರಿ ಪದವಿಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಬಾರಿ ಪೈಪೋಟಿ ಇತ್ತು, ಆದರೆ ಕಾಂಗ್ರೆಸ್ 136 ಸ್ಥಾನ ಗಳಿಸಿ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಎಂದು ಘೋಷಣೆ ಆಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ನಡುವೆ ಪ್ರಾರಂಭದಿಂದಲೂ ಅಧಿಕಾರ ಹಂಚಿಕೆ ಸೂತ್ರದಡಿ ಎರಡೂವರೆ ವರ್ಷ ಸಿದ್ದರಾಮಯ್ಯ ನಂತರ ಎರಡೂವರೆ ವರ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದಕ್ಕೆ AICC ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದಕ್ಕೆ ಸಮ್ಮತಿ ನೀಡಿದ್ದಾರೆ ಎಂದು ಗುಸಗುಸು ಕೇಳಿಬರುತ್ತಿತ್ತು. ಈಗ ಅಕ್ಟೊಬರ್ 31ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಎರಡುವರೆ ವರ್ಷಗಳು ಸಮಾಪ್ತಿಗೊಳ್ಳತ್ತೆ, ಈ ಕಾರಣಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕೊಟ್ಟ ಮಾತು ನೆರವೇರಿಸಿ ಎಂದು ಹೈಕಮಾಂಡ್ ಬಳಿ ಆಗ್ರಹ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Add Zee News as a Preferred Source

ಆಗಿದ್ದೇನು?
ಜೀ ಕನ್ನಡ ನ್ಯೂಸ್ ಗೆ ಸಿಕ್ಕ ಮಾಹಿತಿ ಪ್ರಕಾರ ಡೆಲ್ಲಿ ಭೇಟಿ ಸಂದರ್ಭದಲ್ಲಿ ಡಿಕೆ ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಅವರನ್ನ ಭೇಟಿ ನಡೆಸಿ, ಅಕ್ಟೊಬರ್ 31 ಒಳಗೆ ನನಗೆ ಮುಖ್ಯಮಂತ್ರಿ ಮಾಡಿ ಜೊತೆಗೆ ಸಿದ್ದರಾಮಯ್ಯ ಅವರ ಬೆಂಬಲಿಗ ಕಾಂಗ್ರೆಸ್ ಶಾಸಕರು ನನ್ನ ವಿರುದ್ಧ ಮಾತಾನ್ನಾಡುತ್ತಿದ್ದಾರೆ ಇದಕ್ಕೆ ಬ್ರೇಕ್ ಹಾಕಿ ಎಂದು ಕಡ್ಡಿ ಮುರಿದಂತೆ ಅಗ್ರಹ ಮಾಡಿದ್ದಾರೆ. 

ಇದನ್ನೂ ಓದಿ-ಇದೊಂದು ಕೆಲಸ ಮಾಡಿದ್ರೆ ಸಾಕು ವೃದ್ಧಾಪ್ಯದಲ್ಲೂ ಆಗಲ್ಲ ಹೃದಯಾಘಾತ! ಸೈಲೆಂಟ್‌ ಕಿಲ್ಲರ್‌ ಹಾರ್ಟ್‌ಅಟ್ಯಾಕ್‌ನಿಂದ ತಪ್ಪಿಸಿಕೊಳ್ಳುವ ಪರಮಮಾರ್ಗ..

ಮುಂದುವರೆದು ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಢದಲ್ಲಿ ಇದೇ ರೀತಿ ಅಧಿಕಾರ ಹಂಚಿಕೆ ಸೂತ್ರ ಜಾರಿಗೆ ತರುದಕ್ಕೆ ಕಾಂಗ್ರೆಸ್ ಗೆ ಸಾಧ್ಯವಾಗಿಲ್ಲ, ಹೀಗಾಗಿ ನಡೆದ ಚುನಾವನೆಗಳಲ್ಲಿ ಕಾಂಗ್ರೆಸ್ ಮುಗ್ಗರಿಸಿದೆ. ಬೇರೆ ರಾಜ್ಯಗಳ ಹೋಲಿಕೆಯಲ್ಲಿ ಕರ್ನಾಟಕದ ಕಾಂಗ್ರೆಸ್ ಗಟ್ಟಿಯಾಗಿದೆ, ತಳಮಟ್ಟದಲ್ಲಿ ಸಂಘಟನೆ ಹೊಂದಿದೆ. ಬೇರೆ ರಾಜ್ಯಗಳಲ್ಲಿ ಮಾಡಿದ ತಪ್ಪು ಇಲ್ಲಿ ಆಗೋದು ಬೇಡ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. 

ಇದಕ್ಕೆ ಪುಷ್ಟಿ ನೀಡುವಂತೆ ಡಿಕೆ ಶಿವಕುಮಾರ್ ಅವರು ಕುಂಭಮೇಳಕ್ಕೆ ಹೋಗಿದ್ದು, ಈಶ ಫೌಂಡೇಶನ್ ನಲ್ಲಿ ಕೇಂದ್ರ ಸಚಿವ ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡಿದ್ದು ನೋಡಿದರೆ ನನಗು ಬೇರೆ ಆಯ್ಕೆಗಳು ಇದೇ ಎಂದು ಮಾರ್ಮಿಕ ಸಂದೇಶವನ್ನು ಹೈ ಕಮಾಂಡ್ ಗೆ ಡಿಕೆ ನೀಡಿದ್ದಾರೆ ಎಂದು ಅನಿಸುತ್ತದೆ. ಒಟ್ಟಾರೆ ಡಿಕೆ ಆಗ್ರಹಕ್ಕೆ ಹೈ ಕಮಾಂಡ್ ಮಣಿಯುತ್ತ? ಸಿದ್ದರಾಮಯ್ಯ ಅವರು ಇದಕ್ಕೆ ರಾಜಕೀಯವಾಗಿ ಏನು ಮಾಡುತ್ತಾರೆ? ಕಾದುನೋಡಬೇಕು.

ಇದನ್ನೂ ಓದಿ-ಇದೊಂದು ಕೆಲಸ ಮಾಡಿದ್ರೆ ಸಾಕು ವೃದ್ಧಾಪ್ಯದಲ್ಲೂ ಆಗಲ್ಲ ಹೃದಯಾಘಾತ! ಸೈಲೆಂಟ್‌ ಕಿಲ್ಲರ್‌ ಹಾರ್ಟ್‌ಅಟ್ಯಾಕ್‌ನಿಂದ ತಪ್ಪಿಸಿಕೊಳ್ಳುವ ಪರಮಮಾರ್ಗ..

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News