ಹಾವೇರಿ : ಯುವಕನ ಮನೆಯ ಮುಂದೆ ಶವವಿಟ್ಟು ಪ್ರತಿಭಟನೆ ಮಾಡುತ್ತಿರೋ ಕುಟುಂಬ ಸದಸ್ಯರು. ನ್ಯಾಯ ಬೇಕು ನ್ಯಾಯ ಅಂತಿರೋ ಜನರು. ಚಂದುಳ್ಳ ಚಲುವೆಯಂತಿರೋ ಯುವತಿ. ಹೌದು ಇದು ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮದಲ್ಲಿ ಕಂಡು ಬಂದ ದೃಶ್ಯ.
ಮದುವೆ, ಪ್ರೀತಿ ನಿರಾಕರಿಸಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಯುವತಿ ಸಿಂದೂ ಪರಮಣ್ಣನವರ್ 25 ವರ್ಷ ವಯಸ್ಸು. ಮೂಲತಃ ಬ್ಯಾಡಗಿ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದ ನಿವಾಸಿ, ಅದರೆ ಅಜ್ಜ ಅಜ್ಜಿ ಮನೆಯಾದ ಹಲಗೇರಿ ಗ್ರಾಮದಲ್ಲಿ ಇದ್ದು ವಿದ್ಯಾಭ್ಯಾಸ ಮಾಡುತ್ತಿದ್ದಳು. ಅದರೆ ಸಿಂದೂ ಗೆಳೆತಿಯ ಮೂಲಕ ಶರತ್ ಪರಿಚಯಾಗಿತ್ತು. ಪರಿಚಯ ಪ್ರೀತಿಯಾಗಿ ಪರಸ್ಪರ ಇಬ್ಬರೂ 4 ವರ್ಷ ಪ್ರೀತಿಸಿದ್ದಾರೆ. ಅಲ್ಲದೆ ದೈಹಿಕ ಸಂಪರ್ಕ ಮಾಡಿದ್ದು ಗರ್ಭಿಣಿಯಾಗಿದ್ದಾಳೆ. ಮದುವೆಯಾಗು ಅಂದರೆ ಶರತ್ ನಿರಾಕರಿಸಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ...
ಇದನ್ನೂ ಓದಿ: ವಾಯುಪಡೆ ಬಲಪಡಿಸಲು ಮುಂದಾದ ಭಾರತ! "ಚಿಕನ್ ನೆಕ್ ಕಾರಿಡಾರ್" ಬಳಿ ಹೊಸ ಮಿಲಿಟರಿ ನೆಲೆಗೆ ಅಡಿಪಾಯ
ಇದರಿಂದ ಮನನೊಂದ ಯುವತಿ ಸಿಂದೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕುಟುಂಬ ಸದಸ್ಯರು ಆಕ್ರೋಶದಿಂದ ಮೃತದೇಹವನ್ನ ಕುದುರಿಹಾಳ ಗ್ರಾಮದ ಯುವಕ ಶರತ್ ಮನೆಯ ಮುಂದೆ ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಯುವಕ ಯುವತಿಯ ಜೀವನ ಮಾಡುತ್ತಿದ್ದರು. ಅದರೆ ಹಣದ ಆಮಿಷೆ ತೋರಿಸಿ, ರಾಜೀಪಂಚಾಯತಿ ಮಾಡುಲು ಪೊಲೀಸರು ಮುಂದಾಗಿದ್ದಾರೆ. ಈಗ ಹೋದ ಜೀವ ವಾಪಸು ತರಲು ಆಗುತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ. ಈಗ ಯುವಕನ ಮನೆಯ ಸದಸ್ಯರು ಮನೆಯ ಬಿಟ್ಟು ಪರಾರಿಯಾಗಿದ್ದಾರೆ. ನಮಗೆ ನ್ಯಾಯ ಕೊಡಿಸಿ ಅಂತ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಒಟ್ನಲ್ಲಿ ಪ್ರೀತಿಸಿದ ಯುವಕ ಶರತ್ ಯುವತಿಗೆ ಬಾಳು ಕೊಡಲು ನಿರಾಕರಿಸುತ್ತಿದ್ದಂತೆ ಯುವತಿ ಮನನೊಂದ ನೇಣಿಗೆ ಶರಣಾಗಿದ್ದಾಳೆ. ಕುಟುಂಬ ಸದಸ್ಯರು ಯುವಕನ ಮನೆಯ ಮುಂದೆ ಶವವಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಮನವೊಲಿಸಲು ಕಾರ್ಯ ಮಾಡುತ್ತಿದ್ದಾರೆ. ಕುಟುಂಬ ಸದಸ್ಯರು ಸಾವಿಗೆ ನ್ಯಾಯ ಕೊಡಿಸಿ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ..








