)
ಚಿಕ್ಕಬಳ್ಳಾಪುರ ಬೀಚಗಾನಹಳ್ಳಿ ಗ್ರಾಮದ ರವಿ (33) ಮೃತಪಟ್ಟ ವಿದ್ಯುತ್ ಕಾರ್ಮಿಕ. ಇವರನ್ನು ಅದೇ ಗ್ರಾಮದ ಲೈನ್ಮೆನ್ ಚಂದ್ರಕುಮಾರ್ ಎನ್. ಎಂಬಾತ ಭಾನುವಾರ ಮತ್ತು ಸೋಮವಾರ ಮೇಡಿಮಾಕಲಹಳ್ಳಿ ಕ್ರಾಸ್ ಬಳಿಯ ಕೋಳಿ ಫಾರಂವೊಂದರಲ್ಲಿ ವಿದ್ಯುತ್ ಕಾಮಗಾರಿಗೆಂದು ಕರೆದುಕೊಂಡು ಹೋಗಿದ್ದ. ಈ ವೇಳೆ ವಿದ್ಯುತ್ ಪ್ರವಹಿಸಿ ರವಿ ಸ್ಥಳದಲ್ಲೇ ಕಂಬದ ಮೇಲೆ ಸುಟ್ಟು ಕರಕಲಾಗಿದ್ದಾನೆ.
ಆದರೆ, ಈ ವಿಷಯವನ್ನು ಯಾರಿಗೂ ತಿಳಿಸದ ಲೈನ್ಮೆನ್ ಚಂದ್ರಕುಮಾರ್, ಏನೂ ಅರಿಯದವನಂತೆ ಮನೆಗೆ ವಾಪಸಾಗಿದ್ದಾನೆ. ಎರಡು ದಿನವಾದರೂ ರವಿ ಮನೆಗೆ ಬಾರದಿದ್ದಾಗ, ಆತಂಕಗೊಂಡ ಕುಟುಂಬಸ್ಥರು ಬುಧವಾರ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ತನ್ನ ವಿರುದ್ಧ ದೂರು ದಾಖಲಾದ ವಿಷಯ ತಿಳಿಯುತ್ತಿದ್ದಂತೆ, ಲೈನ್ಮೆನ್ ಚಂದ್ರಕುಮಾರ್ ತನ್ನ ಮೊಬೈಲ್ ಫೋನ್ನ್ನು ಮನೆಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ತನಿಖೆ ಚುರುಕುಗೊಳಿಸಿದ ಗುಡಿಬಂಡೆ ಪೊಲೀಸರು, ಆರೋಪಿ ಚಂದ್ರಕುಮಾರ್ನನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ, ಆತ ಸತ್ಯ ಬಾಯ್ಬಿಟ್ಟಿದ್ದಾನೆ.
ಮೃತ ರವಿಯ ದೇಹವನ್ನು ಗುಡಿಬಂಡೆ ತಾಲೂಕಿನ ಬಂದಾರ್ಲಹಳ್ಳಿ ಕೆರೆಯಲ್ಲಿ ಹಾಕಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಘಟನಾ ಸ್ಥಳ ಹಾಗೂ ಬಂದಾರ್ಲಹಳ್ಳಿ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಆರೋಪಿ ಚಂದ್ರಕುಮಾರ್ನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.