)
ಬೆಂಗಳೂರು : ರಾಜ್ಯದಲ್ಲಿ ದೋಸ್ತಿ ನಾಯಕರ ಜಾಯಿಂಟ್ ಅಪರೇಷನ್ ಶುರುವಾಗಿದೆ.. ಮೈತ್ರಿಕೂಟದ ಮಿತ್ರ ಜೆಡಿಎಸ್, ರಾಜ್ಯದಲ್ಲೂ ಬಿಜೆಪಿ ಜೊತೆಗಿನ ಸಂಬಂಧ ಗಟ್ಟಿ ಮಾಡಿಕೊಳ್ಳಲು ಇದೀಗ ಮುಂದಾಗಿದೆ.. ಈ ನಿಟ್ಟಿನಲ್ಲಿ ನಿನ್ನೆ ಕುಮಾರಸ್ವಾಮಿ ಬೇಟಿ ಮಾಡಿದ್ದ ಬಿಜೆಪಿ ನಾಯಕರು ಮುಂದಿನ ಹೋರಾಟದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸಿದ್ದಾರೆ... ಈ ಹೊರಾಟಕ್ಕೆ ಇದೀಗ ಸಮನ್ವಯ ಸಮಿತಿ ರಚಿಸಲು ಮುಂದಾಗಿದ್ದಾರೆ.
ದೋಸ್ತಿ ನಾಯಕರು ರಾಜ್ಯ ಪಾಲಿಟಿಕ್ಸ್ ಗೆ ಪ್ಲಾನ್ ಆಫ್ ಆಕ್ಷನ್ ರೆಡಿ ಮಾಡ್ತಿದ್ದಾರೆ.. ಮೈತ್ರಿಯಲ್ಲಿ ಎರಡು ಎರಡು ಸಮನ್ವಯ ಸಮಿತಿ ರಚಿಸಲು ತೀರ್ಮಾನ ಮಾಡಿದ್ದಾರೆ.. ಸಮನ್ವಯ ಸಮಿತಿ ರಚನೆ ಮಾಡುವಂತೆ ಬಹುಸಮಯದಿಂದ ಸಾಕಷ್ಟು ಬೇಡಿಕೆ ಇಟ್ಟಿದ್ರು ಎರಡೂ ಪಕ್ಷದ ನಾಯಕರು. ಇದೀಗ ರಾಜ್ಯಕ್ಕೊಂದು, ಬೆಂಗಳೂರಿಗೊಂದು ಎಂಬಂತೆ ಎರಡೆರಡು ಸಮಿತಿ ರಚಿಸಲು ತೀರ್ಮಾನ ಮಾಡಿದ್ದಾರೆ... ಚುನಾವಣೆ ಆಗುತ್ತೋ ಬಿಡುತ್ತೋ ನಮ್ಮ ಸಿದ್ಧತೆ ನಾವು ಮಾಡಿಕೊಳ್ಳೋಣ ಎಂದು ಚರ್ಚಿಸಿರವ ಉಭಯ ಪಕ್ಷದ ನಾಯಕರು ಎಲ್ಲಾ ಒಟ್ಟಾಗಿ ಹೋರಾಡೋಣ ಎಂದು ಮಾತುಕತೆ ನಡೆಸಿದ್ದಾರೆ.
ಎರಡು ಪಕ್ಷದ ನಾಯಕರ ನಡುವೆ ಸಂಬಂಧಗಟ್ಟಿ ಮಾಡಲು ಇದೀಗ ಎರಡೆರಡು ಸಮಿತಿ ರಚನೆಗೆ ದೋಸ್ತಿಗಳು ಮುಂದಾಗಿದ್ದಾರೆ.. ಇನ್ನೇನು ಜಿಬಿಎ ಚುನಾವಣೆ ಸಮಿಪಿಸುತ್ತಿದ್ದು ಅದಕೋಸ್ಕರ ಒಂದು ಸಮಿತಿ ರಚನೆಗೆ ಇದೀಗ ಮೈತ್ರಿ ನಾಯಕರು ಮುಂದಾಗಿದ್ದಾರೆ.. ಇಲ್ಲಿ ಬಿಬಿಎಯ ಗೆಲ್ಲುವಿನ ಬಗ್ಗೆ ಪ್ಲಾನ್ ಅಪ್ ಅಕ್ಷನ್ ನಡೆಯಲಿದೆ... ಇನ್ನೊಂದು ಎರಡು ಪಕ್ಷಗಳ ಸಮನ್ವಯಕ್ಕೆ ಓವರ್ ಅಲಾಗಿ ಮತ್ತೊಂದು ಸಮಿತಿ ರಚಿಸಲು ಪ್ಲಾನ್ ಮಾಡಿದ್ದಾರೆ.. ಇದು ಇಡೀ ರಾಜ್ಯದ ಬಗ್ಗೆ ತಂತ್ರಗಾರಿಕೆ ಈ ಸಮಿತಿಯಲ್ಲಿ ನಡೆಯಲಿದೆ.
ಈ ವಿಚಾರವಾಗಿ ಸುದೀರ್ಘವಾಗಿ ಚರ್ಚೆ ನಡೆಸಿರುವ ಮೈತ್ರಿ ನಾಯಕರು, ಸಮಿತಿಯಲ್ಲಿ ಇರಲು ಸೂಕ್ತವಾದ ನಾಯಕರ ಪಟ್ಟಿ ಕೊಡಿ ಎಂದು ಎಚ್ಡಿಕೆ ಬಳಿ ವಿಜಯೇಂದ್ರ ಕೇಳಿದ್ದಾರೆ..ನಂತರ ಬಿಜೆಪಿ ಜೆಡಿಎಸ್ ಪಟ್ಟಿ ಸೇರಿಸಿ ಹಿರಿಯರೊಂದಿಗೆ ಚರ್ಚೆ ನಡೆಸಿ ಸಮಿತಿ ರಚಿಸೋಣ ಎಂದು ಎಚ್ಡಿಕೆ, ಬಿವೈವಿ ಪ್ಲಾನ್ ಮಾಡಿಕೊಂಡಿದ್ದಾರೆ.
ಒಟ್ಟಾರೆ ಬಹುದಿನಗಳ ಮೈತ್ರಿ ನಾಯಕರ ಬೇಡಿಕೆಗೆ ಇದೀಗ ಉಭಯ ನಾಯಕರು ಅಸ್ತು ಅಂದಿದ್ದಾರೆ.. ಶೀಘ್ರದಲ್ಲಿಯೇ ಎರಡು ಪಕ್ಷಗಳಿಂದ ಸಮಿತಿ ರಚನೆಗೆ ಪಟ್ಟಿ ತಯಾರಾಗಲಿದ್ದು ಮುಂದೆ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಕೆಲಸ ನಿರ್ವಹಿಸಲು ಇದು ಸುಲಭವಾಗಲಿದೆ..