ಶವ ಸಾಗಿಸುವ ವಾಹನಗಳು ರಿಪೇರಿ: ಗೂಡ್ಸ್ ಆಟೋದಲ್ಲಿ ಅಂತಿಮ ಯಾತ್ರೆ ಮಾಡಬೇಕಾದ ದುಸ್ಥಿತಿ, ಸಾರ್ವಜನಿಕರ ಆಕ್ರೋಶ

ಶವ ಸಾಗಿಸುವ ವಾಹನಗಳ ದುರಸ್ತಿ ಹಿನ್ನಲೆಯಲ್ಲಿ ಸ್ಮಶಾನಕ್ಕೆ ಮೃತ ದೇಹ ಸಾಗಿಸಲು ಜನರು ಪರದಾಡುವಂತಾಗಿದೆ. ಈ ಸಂಬಂಧ ಪುರಸಭೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. 

Written by - Yashaswini V | Last Updated : Jul 28, 2025, 01:06 PM IST
  • ಶವ ಸಾಗಿಸುವ ವಾಹನ ದುರಸ್ತಿ ಹಿನ್ನೆಲೆ ಗೂಡ್ಸ್ ವಾಹನದಲ್ಲಿ ಶವ ಸಾಗಾಟ!!
  • ಗುಂಡ್ಲುಪೇಟೆ ಪಟ್ಟಣದಲ್ಲಿ ಶವ ಸಾಗಿಸಲು ಇಲ್ಲಾ ವಾಹನ
  • ಸ್ಮಶಾನಕ್ಕೆ ಮೃತ ದೇಹ ಸಾಗಿಸಲು ಪುರಸಭೆ ವಾಹನದ ವ್ಯವಸ್ಥೆ ಇಲ್ಲದೇ ಜನರ ಪರದಾಟ
ಶವ ಸಾಗಿಸುವ ವಾಹನಗಳು ರಿಪೇರಿ: ಗೂಡ್ಸ್ ಆಟೋದಲ್ಲಿ ಅಂತಿಮ ಯಾತ್ರೆ ಮಾಡಬೇಕಾದ ದುಸ್ಥಿತಿ, ಸಾರ್ವಜನಿಕರ ಆಕ್ರೋಶ

Gundlupet News: ಗುಂಡ್ಲುಪೇಟೆ ಪಟ್ಟಣ ಪುರಸಭೆಯಲ್ಲಿ ನಿರ್ವಹಣೆ ಕೊರತೆಯಿಂದ ಶವ ಸಾಗಿಸುವ ಎರಡು ವಾಹನಗಳು ದುರಸ್ತಿಯಾದ ಪರಿಣಾಮ ಕುಟುಂಬಸ್ಥರು ಮೃತ ದೇಹವನ್ನು ಖಾಸಗಿ ಆಟೋದಲ್ಲಿ ಸಾಗಿಸುವ ದುಸ್ಥಿತಿ ಬಂದೊದಗಿದೆ.

Add Zee News as a Preferred Source

ಗುಂಡ್ಲುಪೇಟೆ ಪಟ್ಟಣದ 11ನೇ ವಾರ್ಡ್ ನಿವಾಸಿ ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಗರಾಜು ಮತ್ತು 10ನೇ ವಾರ್ಡ್ ನ ಮಹದೇವ ಎಂಬುವವರು ಶನಿವಾರ ತಡ ರಾತ್ರಿ ಮೃತ ಪಟ್ಟಿದ್ದು, ಸ್ಮಶಾನಕ್ಕೆ ಮೃತ ದೇಹ ಸಾಗಿಸಲು ಪುರಸಭೆ ವಾಹನದ ವ್ಯವಸ್ಥೆ ಇಲ್ಲದ ಕಾರಣ ಪರದಾಡುವಂತಾಗಿದೆ. ಇದರಿಂದ ಖಾಸಗಿಯಾಗಿ ಹಣ ನೀಡಿ ಆಟೋ ಬಾಡಿಗೆಗೆ ಪಡೆದು ಮೃತ ದೇಹ ಸಾಗಿಸಿದ್ದಾರೆ. ಇದು ಸ್ಥಳೀಯರು ಹಾಗೂ ಸಂಬಂಧಿಕರ  ಅಸಮಾಧಾನಕ್ಕೆ ಕಾರಣವಾಗಿದ್ದು, ಪುರಸಭೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ- ಮರಳಾಪುರದಲ್ಲಿ ಕರು ಎಳೆದೊಯ್ದ ಚಿರತೆ; ಚಿರತೆ ಮರಿಗಳ ಹೆಜ್ಜೆ ಗುರುತು ಕೂಡ ಪತ್ತೆ

ಸಾರ್ವಜನಿಕ ಸ್ಮಶಾನವು ಪಟ್ಟಣದಿಂದ ಎರಡು ಕಿ.ಮೀಗೂ ಅಧಿಕ ದೂರದಲ್ಲಿರುವ ಕಾರಣ ಮೃತ ದೇಹವನ್ನು ಹೊತ್ತು ಕೊಂಡು ಹೋಗಲು ಸಾಧ್ಯವಿಲ್ಲ. ಇದಕ್ಕಾಗಿ ಪುರಸಭೆಯಲ್ಲಿ ಶವ ಸಾಗಿಸುವ ಎರಡು ವಾಹನ ಮೀಸಲಿರಿಸಲಾಗಿದೆ. ಆದರೆ ವಾಹನ ದುರಸ್ತಿಗೊಂಡಿರುವ ಪರಿಣಾಮ ಸ್ಥಳೀಯರು ಹಾಗೂ ಸಂಬಂಧಿಕರು ಮೃತ ದೇಹವನ್ನು ಖಾಸಗೀ ವಾಹನಗಳಲ್ಲಿ ಸಾಗಿಸುವಂತಾಗಿದೆ.

ಇದನ್ನೂ ಓದಿ- ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ.. ಚಿಕಿತ್ಸೆ ಫಲಿಸದೆ ಗಂಗಮ್ಮ ಬಳ್ಳಾರಿ ಸಾವು

ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಶರವಣ ಪ್ರತಿಕ್ರಿಯೆ ನೀಡಿದ್ದು, ಪುರಸಭೆಯಲ್ಲಿ ಎರಡು ಶವ ಸಾಗಣೆ ವಾಹನಗಳು ದುರಸ್ತಿಗೊಂಡಿದ್ದು, ರಿಪೇರಿಗೆ ಕಳುಹಿಸಲಾಗಿದೆ. ವಾರದೊಳಗೆ ಸರಿಪಡಿಸಲು ಕ್ರಮ ವಹಿಸಲಾಗುವುದು. ಜೊತೆಗೆ ಕಾರಿನ ಬದಲು ಶವ ಸಾಗಣೆಗೆ ದೊಡ್ಡ ವಾಹನ ಖರೀದಿಸಲು ಚಿಂತನೆ ನಡೆಸಲಾಗಿದೆ ಎಂದರು.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News