ಕಳೆದ ಒಂದು ತಿಂಗಳಿನಿಂದ ಜಾರಕಿಹೊಳಿ ಬ್ರದರ್ಸ್ ಮತ್ತು ಜೊಲ್ಲೆ ಕುಟುಂಬಗಳು ಒಂದಾಗಿದೆ. ಹೇಗಾದರೂ ಮಾಡಿ ಹುಕ್ಕೇರಿಯಲ್ಲಿ ಹಿಡಿತ ಸಾಧಿಸಲು ಎರಡು ಕುಟುಂಬಗಳು ಸೇರಿ ಕಸರತ್ತು ನಡೆಸಿವೆ. ಇದಕ್ಕೆ ಕೌಂಟರ ಆಗಿ ರಮೇಶ್ ಕತ್ತಿ, ಎಬಿ ಪಾಟೀಲ ಜೊತೆ ಕೈ ಜೋಡಿಸಿ ಜೊಲ್ಲೆ ಹಾಗೂ ಜಾರಕಿಹೊಳಿಗಳನ್ನ ಸೋಲಿಸಲು ನಾನಾ ಕಸರತ್ತು ಮಾಡಿದ್ದಾರೆ.
ಇವತ್ತು ಬೆಳ್ಳಗೆಯಿಂದಲೇ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಮತದಾನ ಪ್ರಕ್ರಿಯೆ ಭರದಿಂದ ಸಾಗಿದೆ. ಹುಕ್ಕೆರಿಯಲ್ಲಿ ಮತದಾನದ ಮೂಲಕ ಅಭ್ಯರ್ಥಿಗಳ ಭವಿಷ್ಯವನ್ನ ಮತದಾರರ ಬರೆಯುತ್ತಿದ್ದಾರೆ.ಇದರ ಮಧ್ಯ ಮತಗಟ್ಟೆ ಬಳಿ ನಾನಾ ಹೈ ಡ್ರಾಮಾ ಸೃಷ್ಠಿಯಾಗಿದೆ.
ಚುನಾವಣೆ ಮತಗಟ್ಟೆಯ ಬಳಿ ರಮೇಶ್ ಕತ್ತಿ ವಿರುದ್ಧ ಜಾರಕಿಹೊಳಿ ಬೆಂಬಲಿಗರು ಕ್ಯಾತೆ ತೆಗೆದಿದ್ದಾರೆ. ಚುನಾವಣೆಯ ಮತಯಾಚನೆ ಭಾಷಣದಲ್ಲಿ ಹುಕ್ಕೇರಿ ತಾಲೂಕಿಗೆ ಹೊರಗಿನ್ನವರನ್ನ ತಾಲೂಕಿಗೆ ಬಂದ್ರೆ ಕಾಲು ಮುರಿದು ಕೈಯಾಗ ಕೂಡ್ತೀವಿ ಎಂದು ರಮೇಶ್ ಕತ್ತಿ ಹೇಳಿದ್ರು ಇದನ್ನ ವಿರೋಧಿಸಿ ಜಾರಕಿಹೊಳಿ ಬೆಂಬಲಿಗರು ನಾವು ಸಹ ಹುಕ್ಕೇರಿಯವರೇ ನಿಮಗೆ ಏನಾದ್ರೂ ಹುಕ್ಕೇರಿಯನ್ನ ನಾವು ಬರದುಕೊಟ್ಟೆವಾ ಅಂತ ಕತ್ತಿಯನ್ನ ಪ್ರಶ್ನಿಸಿದ್ದಾರೆ. ಪರಿಸ್ಥಿತಿ ವೀಕೋಪಕ್ಕೆ ಹೋಗದಂತೆ ಪೊಲೀಸರ ಪರಿಸ್ಥಿತಿಯನ್ನ ತಿಳಿಗೊಳಿಸಿದ ಪ್ರಸಂಗ ಸಹ ನಡೆದಿದೆ.
ಇನ್ನೊಂದು ಕಡೆ ರಾಯಬಾಗದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮಹಾವೀರ. ಮೋಹಿತೆಗೆ ಪೃಥ್ವಿ ಕತ್ತಿ ತರಾಟೆಗೆ ತೆಗೆದುಕೊಂಡಿದ್ದಾರೆ ನೀನು ಏಕೆ ಇಲ್ಲಿ ಬಂದಿದೀಯಾ ಹುಕ್ಕೇರಿಯಲ್ಲಿ ನಿಂದೇನು ಕೆಲಸ ಅಂತ ತರಾಟೆ ತೆಗೆದುಕೊಂಡು ಮತಗಟ್ಟೆಯಿಂದ ಹೊರಗೆ ಹೋಗುವಂತೆ ಕೈ ಸನ್ನೆ ಮಾಡಿ ಸೂಚನೆ ನೀಡಿದ್ದಾರೆ.
ಚುಣಾವಣೆಯ ಬಗ್ಗೆ ರಮೇಶ್ ಕತ್ತಿ ಮತ್ತು ಜಾರಕಿಹೊಳಿ ಬ್ರದರ್ಸ್ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಸ್ವಾಭಿಮಾನ ಬಣ 15 ಜನ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ , ಬಾಲಚಂದ್ರ ಜಾರಕಿಹೊಳಿ ಸುಳ್ಳು ಹೇಳೋದರಲ್ಲಿ ಬಹಳ ಪ್ರವೀಣ್ ಎಂದು ವಾಗ್ದಾಳಿ ನಡೆಸಿದರು. ಇನ್ನು ಬಾಲಚಂದ್ರ ಜಾರಕಿಹೊಳಿ ಮಾತನಾಡಿ ರಮೇಶ್ ಕತ್ತಿ ಒಪ್ಪಿಕೊಳ್ಳಲಿ ಅಥವಾ ಬಿಡಲಿ ನಾವು ಸಂಧಾನಕ್ಕೆ ಪ್ರಯತ್ನಿಸಿದ್ದು ನಿಜ ಎಂದಿದ್ದಾರೆ. ಹೊರಗನಿವರು ಹುಕ್ಕೇರಿ ಚುನಾವಣೆಯಲ್ಲಿ ಭಾಗಿ ವಿಚಾರ ರಮೇಶ್ ಕತ್ತಿ ಅವರಿಗೆ ಅ ಸಿಟ್ಟು ಬಂದಿರಬೇಕು, ನಮಗೆ ಸಿಕ್ಕ ಬೆಂಬಲ ನೋಡಿ ಅನಿಸಿರಬೇಕು ನಾವೂ ಬೈಸಿಕೊಂಡು ಚುನಾವಣಾ ಮಾಡುತ್ತೇವೆ ಅವರು ಸಿಟ್ಟಿನಾಗ ಅಂತಿರತಾರೆ ಅದನೆಲ್ಲ ತಲೆ ಕೆಡೆಸಿಕೊಳ್ಳುವುದು ಬೇಡ ಎಂದಿದ್ದಾರೆ.
ಹುಕ್ಕೇರಿಯ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಚುನಾವಣೆಗೆ ಆಯೋಗದ ನಿಯಮಗಳು ಗಾಳಿಗೆ ತೋರಿದ್ದಾರೆ. ಚುನಾವಣೆಯ ಮತಗಟ್ಟೆಯ ಬಳಿಯೇ ಚಿಕ್ಕ ಚಿಕ್ಕ ಮಕ್ಕಳು ಬ್ಯಾಲೇಟ ಪೇಪರ ಹಿಡಿದು ಪ್ರಚಾರ ಮಾಡಿದ್ದಾರೆ.ಇನ್ನೂ ರಾತ್ರಿ ಸಮಯದಲ್ಲಿ ಝಣ ಝಣ ಕಾಂಚಾಣ ಸದ್ದು ಮಾಡಿದೆ ಹುಕ್ಕೇರಿ ತಾಲೂಕಿನ ಶಿರಡಾಣ ಗ್ರಾಮದಲ್ಲಿ ಜಾರಕಿಹೊಳಿ ಬೆಂಬಲಿಗರು ನಮಗೆ ಪೇನಲ ಅಭ್ಯರ್ಥಿಗಳಿಗೆ ಮತ ಹಾಕುವಂತೆ ತಲಾ 2 ಸಾವಿರ ರೂಪಾಯಿ ಹಣ ಹಂಚಿ ಆಣೆ ಪ್ರಮಾಣ ಮಾಡಿಸಿದ್ದಾರೆ ಎಂದು ಎನ್ನಲಾಗುತ್ತಿದೆ.
2004ರಲ್ಲಿ ಚುನಾವಣೆ ಮೂಲಕ ಅಧಿಕಾರದ ಗದ್ದುಗೆ ಏರಿದ. ಕತ್ತಿ ಕುಟುಂಬವನ್ನ ಇಳಿಸಲು ಜಾರಕಿಹೊಳಿ ಬ್ರದರ್ಸ್ 20 ವರ್ಷಗಳ ಬಳಿಕ ಮತ್ತೆ ಚುನಾವಣೆಯನ್ನ ನಡೆಸಿದ್ದಾರೆ. ಒಟ್ಟು 60 ಸಾವಿರದ 761 ಮತದಾರರು ಅಭ್ಯರ್ಥಿ ಭವಿಷ್ಯ ಬರೆದಿದ್ದಾರೆ. ಬೆಳಿಗ್ಗೆಯಿಂದಲೂ ಹುಕ್ಕೇರಿ ತಾಲೂಕಿನ ಜನತೆ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾದ್ರು. ಮತದಾನದ ಬಳಿಕ ಮತ ಏಣಿಕೆಯ ಕಾರ್ಯವು ಇಂದೇ ಆಗುವುದರಿಂದ ಮತದಾರ ಯಾರಿಗೆ ಗೆಲುವಿನ ಹಾರ ಹಾಕಲಿದ್ದಾರೆ ಎನ್ನುವ ಕುತೂಹಲಕ್ಕೂ ತೆರೆ ಬಿಳಲಿದೆ.