ಬೆಂಗಳೂರು: ವಿಧಾನ ಸೌಧದಲ್ಲಿ ಮಾಧ್ಯಮಗಳಿಗೆ ನಿಷೇಧ ಹೇರಿರುವ ಸುದ್ದಿಯ ಕುರಿತಾಗಿ ಪ್ರತಿಕ್ರಿಯಿಸಿರುವ ಸಚಿವ ಡಿಕೆ ಶಿವಕುಮಾರ್ ಬೇಕಾದರೆ ಮಾಧ್ಯಮದವರಿಗಾಗಿ ನನ್ನ ಕಛೇರಿಯನ್ನೇ ಬಿಟ್ಟು ಕೊಡುವೆ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅದೆಲ್ಲಾ ಏನು ಇಲ್ಲ ಬೇಕಾದರೆ ಅಲ್ಲಿರುವ ನನ್ನ ಕಚೇರಿಯನ್ನೇ ಮಾಧ್ಯಮದವರಿಗೆ ಬಿಟ್ಟುಕೊಡಲು ಸಿದ್ದನಿದ್ದೇನೆ .ಇದನ್ನುಮುಖ್ಯಮಂತ್ರಿ ಕುಮಾರಸ್ವಾಮಿಯವರ ಗಮನಕ್ಕೂ ತರುತ್ತೇನೆ ಎಂದು ತಿಳಿಸಿದರು.
ಇದೆ ವೇಳೆ ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ ತಾವು ದೇವೇಗೌಡರು ಮತ್ತು ಕುಮಾರಸ್ವಾಮಿ ವಿರುದ್ದ ಹೋರಾಡುತ್ತಲೇ ಬಂದಿದ್ದೀವೆ. ಆದರೆ ಕೆಲವು ವೇಳೆ ಪಕ್ಷಕ್ಕಾಗಿ, ನಮಗೆ ನೋವಾದರೂ ಕೆಲವು ನಿರ್ಧಾರಗಳನ್ನು ಗೌರವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.