ಕೊಪ್ಪಳದಲ್ಲಿ ಇಂದು ನೆಡೆದ ಬಿಜೆಪಿ ಸಂಘಟನಾ ಸಭೆ ಅಕ್ಷರಶಃ ರಾಜಕೀಯ ಸಂಧಾನದ ವೇದಿಕೆ ಆಗಿತ್ತು. ಗಾಲಿ ಜನಾರ್ಧನ ರೆಡ್ಡಿ-ರಾಮುಲು ಜೋಡೆತ್ತಿನ ಬಂಡಿನ ಒಂದು ಮಾಡೋದಕ್ಕೆ ಬಿಜೆಪಿ ರಾಜ್ಯಧಕ್ಷರೇ ಪ್ಲ್ಯಾನ್ ಮಾಡಿದ್ದರು. ಈ ಕುರಿತ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ..

ಕೊಪ್ಪಳ : ವರ್ಷಗಳ ಹಿಂದಿನ ರಾಜಕೀಯ ದ್ವೇಷ-ವಿರೋಧ ಮರೆಯಲು ಬಿಜೆಪಿ ವೇದಿಕೆ ನಿರ್ಮಾಣ ಮಾಡಿದಂತ್ತಿತ್ತು. ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಮತ್ತೆ ಒಂದಾಗಿ ಮುಂದುವರಿಯಲಿದ್ದಾರಾ ಎಂಬ ಕುತೂಹಲಕ್ಕೆ ಇನ್ನೂ ತೀವ್ರತೆ ಸಿಕ್ಕಿದಂತಾಗಿದೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ..
ಹೌದು... ಇಂದು ಕೊಪ್ಪಳದ ಗಂಗಾವತಿ ತಾಲೂಕಿನ ಮರಳಿ ಬಳಿ ಇರೋ ಖಾಸಗಿ ಹೊಟೆಲ್ ಒಂದರಲ್ಲಿ ಬಿಜೆಪಿ ಸಂಘಟನಾ ಸಭೆ ನೆಡಸಿತ್ತು. ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಜಿಲ್ಲೆಯಿಂದ ಬಿಜೆಪಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಬಿಜೆಪಿಯ ಹಾಲಿ ಮಾಜಿ ಶಾಸಕ ಸಚಿವರುಗಳು ಈ ಸಭೆಗೆ ಬಂದಿದ್ರು. ಇದು ಪಕ್ಷದಲ್ಲಿನ ಸಂಘಟನೆ ಕುರಿತು ಸಭೆ ಕರೆದಿದ್ದರು ಆದರೆ ವಾಸ್ತವದಲ್ಲಿ ಇದು ರೆಡ್ಡಿ-ರಾಮೂಲು ಒಂದು ಮಾಡೊದಕ್ಕೆ ವೇದಿಕೆ ಆಗಿದ್ದು ಸುಳ್ಳಲ್ಲ.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ವೇದಿಕೆ ಮೇಲೆ ಆಗಮಿಸಿ ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು ಜೊತೆ ಮಾತಾಡ್ತ ನಿಂತ್ಕೊಂಡಿದ್ರು. ಇದೇ ವೇಳೆ ವೇದಿಕೆಗೆ ಆಗಮಿಸಿದ ಶ್ರೀರಾಮುಲು ರೆಡ್ಡಿಯನ್ನು ಕಂಡು ಮಾತನಾಡಿಸಿ ಮುಂದೆ ಹೋಗ್ತಾರೆ. ಇದಾದ ಬಳಿಕ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ವೇದಿಕೆಗೆ ಆಗಮಿಸಿ ರೆಡ್ಡಿ-ರಾಮುಲು ಅವರಿಬ್ಬರ ಕೈಯನ್ನು ಇಡಿದು ಮೇಲೆತ್ತಿ ನಾವೇಲ್ಲರೂ ಒಂದು ಎನ್ನುವ ಸಂದೇಶ ಸಾರುವ ಮೂಲಕ ಇಬ್ಬರ ಮುನಿಸಿಗೆ ನಾಂದಿ ಹಾಡಿದ್ರು.
ಇನ್ನು ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ರನ್ನು ಇಂದು ಕೂಡಿಸಲೇಬೇಕು ಎಂಬ ವಿಚಾರ ವಿಜಯೇಂದ್ರ ಮೊದಲೇ ಪ್ಲ್ಯಾನ್ ಮಾಡಿದ್ರು ಅನ್ಸುತ್ತೆ ಅದ್ಕೆ ವೇದಿಕೆ ಮೇಲಿನ ಮೀಸಲು ಸಿಟಿನಲ್ಲಿ ಇಬ್ಬರನ್ನು ಒಬ್ಬರ ಪಕ್ಕ ಒಬ್ಬರ ಹೆಸರು ಬರೆದು ಇಟ್ಟಿದ್ದಾರೆ. ಮೊದಲು ಬಂದ ಜನಾರ್ದನ ರೆಡ್ಡಿ ತಮ್ಮ ಪಕ್ಕದಲ್ಲಿನ ಸಿಟಿನ ಮೇಲೆ ಶ್ರೀರಾಮುಲು ಹೆಸರು ನೋಡಿ ಮುಗ್ಳನಕ್ಕರು. ಸ್ವಲ್ಪ ಸಮಯ ಶ್ರೀರಾಮೂಲು ಕೆಳಗಡೆ ಹೋಗಿದ್ದ ಕಾರಣ ಜನಾರ್ದನ ರೆಡ್ಡಿ ಪಕ್ಕದಲ್ಲಿದ್ದ ಸಿಟು ಖಾಲಿ ಇತ್ತು ಶ್ರೀರಾಮುಲು ನಾಮಪಲಕದ ಜೊತೆ ರೆಡ್ಡಿ ಒಬ್ಬರೇ ಕುಳಿತಿದ್ದರು ಶ್ರೀರಾಮುಲು ಬಂದು ಕುಳಿತುಕೊಳ್ಳುವ ಅನುಮಾನ ಅಲ್ಲಿ ನೆರದಿದ್ದವರ ಮನಸಲ್ಲಿತ್ತು. ಆದರೆ ಇದಕ್ಕೆ ಅವಕಾಶ ಮಾಡಿಕೊಡದ ವಿಜೇಯಂದ್ರೆ ಇಬ್ಬರನ್ನು ಪಕ್ಕದಲ್ಲಿ ಕೂರಿಸಿಕೊಂಡು ಮಾತಿನಲ್ಲಿ ಮುಳಿಗಿದರು.
ಇನ್ನೂ ಸಭೆಗೆ ಬಂದಿದ್ದವರು ರೆಡ್ಡಿ-ರಾಮುಲು ಇಬ್ಬರು ಪಕ್ಕದಲ್ಲಿದ್ದದ್ದನ್ನು ಕಂಡು ಫೊಟೋ ತಗೆಯಲು ಮುಗಿಬಿದ್ದದ್ದು ಸಾಮನ್ಯವಾಗಿತ್ತು. ಇನ್ನು ವೇದಿಕೆ ಭಾಷಣ ಆರಂಭಿಸಿದ ರೆಡ್ಡಿಗಾರು ರಾಮುಲುರನ್ನು ನನ್ನ ಜೀವದ ಗೆಳೆಯ ಶ್ರೀರಾಮುಲು ಎಂದು ಹೇಳಿ, ಕೆಟ್ಟ ಗಳಿಗೆಯಲ್ಲಿ ಎನೋ ನೆಡದು ಹೊಯ್ತು. ನಮ್ಮಿಬ್ಬರ ಜಗಳವನ್ನು ಲಾಭ ಪಡೆದುಕೊಳ್ಳುವವರು ಯಾರದ್ರೂ ಇದ್ರೆ ಅವ್ರೂ ಶತಮೂರ್ಖರು ಎಂದು ಹೇಳುವ ಮೂಲಕ ಬ್ರೇಕಪ್ ಗೆ ಫುಲ್ ಸ್ಟಾಪ್ ಇಟ್ಟರು.
ರಾಜಕೀಯ ತಂತ್ರಗಳು ಎಷ್ಟೇ ಬದಲಾದರೂ, ಮುಖಗಳು ಮರಳಿ ಮುಖಾಮುಖಿಯಾಗೋ ಕ್ಷಣ ಎಲ್ಲರಿಗೂ ಕುತೂಹಲ ಹುಟ್ಟಿಸುತ್ತೆ. ರೆಡ್ಡಿ-ರಾಮುಲು ವಿಚಾರದಲ್ಲೂ ಹೀಗೆ ಆಗಿದೆ.ಇಬ್ಬರ ಒಂದು ಮುನಿಸು ಅಕ್ಕಪಕ್ಕದಲ್ಲಿದ ಮನೆಯ ಅಂಗಳದ ಮದ್ಯ ಗೊಡೆ ಕಟ್ಟುವಂತ್ತೆ ಮಾಡಿತ್ತು. ಇದೀಗ ಮೇಲ್ನೊಟಕ್ಕೆ ಇಬ್ಬರು ಒಂದಾಂದತ್ತೆ ಕಾಣ್ತಿದೆ. ಆದರೆ ಮನೆಯಂಗಳದ ಗೊಡೆಗಿಂತ ಮನಸ್ಸಿನ ನಡುವೆ ಇರೋ ಗೊಡೆ ಹೊಡೆದು ಒಂದಾಗಲಿ ಎನ್ನುವುದು ಅಲ್ಲಿ ಬಂದಿದ್ದ ಬಿಜೆಪಿ ಕಾರ್ಯಕರ್ತರ ಆಶಯವಾಗಿತ್ತು.