kalburgi nagoor rehabilatation issue: ಕಲಬುರಗಿ ಜಿಲ್ಲೆಯ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ೧೯೭೨ರಲ್ಲಿ ರಾಜ್ಯ ಸರ್ಕಾರ ಬೆಣ್ಣೆತೋರಾ ಡ್ಯಾಮ್ ನಿರ್ಮಾಣಕ್ಕೆ ಮುಂದಾಗಿತ್ತು.

ಕಲಬುರಗಿ ಜಿಲ್ಲೆಯ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ೧೯೭೨ರಲ್ಲಿ ರಾಜ್ಯ ಸರ್ಕಾರ ಬೆಣ್ಣೆತೋರಾ ಡ್ಯಾಮ್ ನಿರ್ಮಾಣಕ್ಕೆ ಮುಂದಾಗಿತ್ತು. ಈ ಯೋಜನೆಯಿಂದ ಕಮಲಾಪೂರ ತಾಲೂಕಿನ ನಾಗೂರ್ ಗ್ರಾಮ ಸಂಪೂರ್ಣ ಮುಳುಗಡೆ ಆಗಿದೆ. ಆದರೆ ಗ್ರಾಮದ ಜನರಿಗೆ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಪುನರ್ವಸತಿ ಕೇಂದ್ರ ನಿರ್ಮಿಸಿ, ಮನೆ ಹಂಚಿಕೆ ಮಾಡದೆ ಇರುವ ಕಾರಣ ಗ್ರಾಮಸ್ಥರಲ್ಲಿ ಆಕ್ರೋಶ ಬುಗಿಲೆದ್ದಿದೆ.
ನಾಗೂರ ಗ್ರಾಮಸ್ಥರನ್ನು ಸ್ಥಳಾಂತರ ಮಾಡಿ, ಅವರಿಗೆ ನಿವೇಶನ ಹಂಚಿಕೆ ಮಾಡುವ ಉದ್ದೇಶದಿಂದ ಗ್ರಾಮಕ್ಕೆ ಹೊಂದಿಕೊಂಡಂತೆ ಸರ್ವೆ ನಂಬರ್ ೨೯೫ರಲ್ಲಿ ನೀರಾವರಿ ನಿಮಗದ ಅಧಿಕಾರಿಗಳು ೨೦೧೩ರಲ್ಲಿ ಹತ್ತು ಎಕರೆ ಒಂದು ಗುಂಟೆ ಜಮೀನು ಖರೀದಿ ಮಾಡಿದ್ದಾರೆ. ಜೊತೆಗೆ ಲೇಔಟ್ ನಿರ್ಮಿಸಿ, ೧೮೯ ನಿವೇಶನಗಳನ್ನು ನಿರ್ಮಿಸಿದ್ದಾರೆ. ಜೊತೆಗೆ ಈ ಲೇಔಟ್ ನಲ್ಲಿ ೫ ಗಾರ್ಡನ್ ಗಳಿಗಾಗಿ ಸ್ಥಳವನ್ನು ಗುರುತಿಸಿ, ನಗರ ಯೋಜನಾ ಪ್ರಾಧಿಕಾರ ಕಲಬುರಗಿ ಇವರಿಂದ ಅನುಮೋಧನೆ ಪಡೆದಿದ್ದಾರೆ..
ಆದರೆ ಇಲ್ಲಿಯವರೆಗೆ ಗ್ರಾಮಸ್ಥರಿಗೆ ಸರಿಯಾಗಿ ನಿವೇಶನ ಹಂಚಿಕೆ ಮಾಡದೆ ಇರುವ ಕಾರಣ ಈಗಲೂ ಗ್ರಾಮದ ಬಡ ಜನರು ಟೀನ್ ಸೆಡ್ ಗಳಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಯಾವುದೇ ರೀತಿಯ ಮೂಲಭೂತ ಸೌಲಭ್ಯಗಳು ಇಲ್ಲದ ಕಾರಣ ಜನರು ನಕರ ಯಾತನೆ ಅನುಭವಿಸುವಂತಾಗಿದೆ. ನಿರಾವರಿ ನಿಗಮದ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದಂತೆ ಹಣ ಕೊಟ್ಟವರಿಗೆ ನಿವೇಶನ ನೀಡಿ ಹಕ್ಕು ಪತ್ರ ನೀಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಜೊತೆಗೆ ಗಾರ್ಡನ್ ಗಾಗಿ ಬಿಟ್ಟಿರುವ ಸ್ಥಳ ಮಾಯವಾಗಿದೆ. ಗಾರ್ಡನ್ ಸ್ಥಳದಲ್ಲಿಯೂ ಈಗ ನಿವೇಶನ ಹಾಕಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ನಿವೇಶನದಲ್ಲಿ ಇದ್ದ ಗಾರ್ಡನ್ ಜಾಗ ಎಲ್ಲಿಗೇ ಹೋಯಿತು. ಗ್ರಾಮಸ್ಥರಿಗೆ ಹಣ ನೀಡಿ ಯಾವ ಅಧಿಕಾರಿಗಳು ಹಕ್ಕು ಪತ್ರ ನೀಡಿದ್ದಾರೆ ಎನ್ನುವ ಕುರಿತು ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ನ್ಯಾಯ ವದಗಿಸಿಕೊಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ..