)
ಬೆಂಗಳೂರು : ಕೇಂದ್ರ ಹಾಗೂ ರಾಜ್ಯದ ತೆರಿಗೆ ಅನುದಾನದ ಕುರಿತು ನಿಯಮ 69 ರಡಿ ಚರ್ಚೆ ವೇಳೆ ಶಿವಲಿಂಗೇಗೌಡ ಹಾಗೂ ಶರತ್ ಬಚ್ಚೇಗೌಡ ಮಾತನಾಡಿದ್ರು.. ಈವೇಳೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಗಳನ್ನ ಹೊರಹಾಕಿದ್ರು.. ರಾಜ್ಯದಿಂದ ಅತಿ ಹೆಚ್ಚಿನ ತೆರಿಗೆ ಹಣವನ್ನ ಕೇಂದ್ರ ಪಡೆಯುತ್ತೆ, ಆದ್ರೆ ರಾಜ್ಯಕ್ಕೆ ಬರಬೇಕಾದ ಅನುದಾನವನ್ನ ಕೊಡ್ತಿಲ್ಲ ಅಂತ ಶಿವಲಿಂಗೇಗೌಡ ಆಕ್ರೋಶ ಹೊರಹಾಕಿದ್ರು..
ಕೇಂದ್ರದಿಂದ ಎಷ್ಟು ಅನುದಾನ ಬಂದಿದೆ,ರಾಜ್ಯದಿಂದ ಎಷ್ಟು ಅನದಾನ ಹೋಗಿದೆ ಎಂಬುದರ ಶ್ವೇತ ಪತ್ರ ಹೊರಡಿಸಬೇಕು ಅಂತ ಆಗ್ರಹಿಸಿದ್ರು.. ಪದೇ ಪದೇ ಶಿವಲಿಂಗೇಗೌಡರ ಭಾಷಣಕ್ಕೆ ಬಿಜೆಪಿ ಸದಸ್ಯರು ಅಡೆತಡೆ ಮಾಡಿದ್ರು.. ನಮ್ಮ ತೆರಿಗೆಯನ್ನನಮಗೇ ಬಿಡಿ ನಾವು ಅನುದಾನವನ್ನೇ ಕೇಳಲ್ಲ ಅಂತ ಟಾಂಗದ ಕೊಟ್ರು.. ಮೆಟ್ರೋ ಯೋಜನೆ ಕೇಂದ್ರದ್ದು ಅಂದುಕೊಂಡಿದ್ವಿ.. ಆದ್ರೆ ರಾಜ್ಯದಲ್ಲೂ ಹೆಚ್ಚಿನ ಪಾಲಿದೆ ಅನ್ನೊದು ಗೊತ್ತಾಯ್ತು.. ನರೇಗಾದಡಿ ಹಣ ಕೊಡ್ತಿಲ್ಲ.. ಹೈವೇಗಳಿಗೆ ಹಣ ನೀಡ್ತಿಲ್ಲ ಅಂತ ಆಕ್ರೋಶ ಹೊರಹಾಕಿದ್ರು..
ಇದೇ ವೇಳೆ ಶಾಸಕ ಕೋನರೆಡ್ಡಿ ಮೊದಲು ಶ್ವೇತ ಪತ್ರ ಹೊರಡಿಸಿ, ರಾಜ್ಯಕ್ಕೆ ಆಗ್ತಿರುವ ಅನ್ಯಾಯದ ಬಗ್ಗೆ ನೀವಂತೂ ಮಾತನಾಡಲ್ಲ, ನಿಮಗೆ ಆಧೈರ್ಯವೂ ಇಲ್ಲ.. ನಮ್ಮನ್ನ ಅಶೋಕ್ ನೇತೃತ್ವದಲ್ಲೇ ಕರೆದೊಯ್ಯಿರಿ ಆಗ ನಾವೇ ಧೈರ್ಯವಾಗಿ ಮಾತನಾಡ್ತೇವೆ ಅಂತ ಬಿಜೆಪಿ ಸದಸ್ಯರನ್ನ ಲೇವಡಿ ಮಾಡಿದ್ರು.
ಇನ್ನು ಕೇಂದ್ರ ರಾಜ್ಯ ತೆರಿಗೆ ಅನುದಾನ ಕುರಿತ ಚರ್ಚೆ ವೇಳೆ ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ಗಂಭೀರ ಆರೋಪ ಮಾಡಿದ್ರು.. ಕರ್ನಾಕಟದಿಂದ ಹೆಚ್ಚಿನ ಅನುದಾನ ಕೇಂದ್ರಕ್ಕೆಹೋಗ್ತಿದೆ.. ಆದ್ರೆ ಕೇಂದ್ರದಿಂದ ಬರ್ತಿರುವ ಅನುದಾನ ತೀರ ಕಡಿಮೆ.. ಕರ್ನಾಟಕ ದೇಶದಲ್ಲೇ ಆದಾಯ ಕೊಡ್ತಿರೋದ್ರಲ್ಲಿ ನಂಬರ್ ವನ್ ಇದೆ.. ಒಕ್ಕೂಟ ವ್ಯವಸ್ಥೆಯಲ್ಲಿ ನಮಗೆ ಈ ರೀತಿ ಅನ್ಯಾಯ ಮಾಡಿದ್ರೆ ಹೇಗೆ.. ಮೊದಲು ಬೆಂಗಳೂರಿನ ಬಗ್ಗೆ ವಾಜಪೇಯಿ ಹೊಗಳ್ತಿದ್ರು.. ಯಾರೇ ಹೊರಗಿನಿಂದ ಬಂದ್ರೂ ಬೆಂಗಳೂರಿಗೆ ಹೋಗಿ ಆನಂತರ ಬೇರೆ ರಾಜ್ಯಗಳಿಗೆ ಬರ್ತಾರೆ ಅಂತ ಹೇಳ್ತಿದ್ರು.. ಅವರು ಹೇಳಿದಂತೆಯೇ ಯಾರೇ ಬಂದ್ರೂ ಮೊದಲು ಬೆಂಗಳೂರಿಗೆ ಬರೋದು.. ನಾವು ಬೇರೆಡೆಯಿಂದ ಉದ್ಯಮಿಗಳನ್ನ ಇಲ್ಲಿಗೆ ಕರೆದು ತರ್ತಿದ್ದೇವೆ, ಆದ್ರೆ ಹೂಡಿಕೆದಾರರು ಇಲ್ಲಿಗೆ ಬಂದ್ರೆ ಅವರಿಗೆ ದೆಹಲಿಯ ದೊಡ್ಡವರ ಕಚೇರಿಯಿಂದ ಕರೆಬರುತ್ತದೆ.. ಅಲ್ಲಿ ಬಂಡವಾಳ ಹೂಡಿದ್ರೆ ನಾವು ಅವಕಾಶ ಕೊಡಲ್ಲ.. ಗುಜರಾತ್, ಅಸ್ಸಾಂ, ಬಿಹಾರಕ್ಕೆ ಬನ್ನಿ ಅಂತ ಅವರನ್ನ ಬೆದರಿಸ್ತಾರೆ.. ಉದ್ಯಮಿಗಳು ಹೆದರುವಂತೆ ಮಾಡ್ತಾರೆ.. ಕನಿಷ್ಠ ಅನುದಾನವೂ ಕೊಡಲ್ಲ. ಬಂಡವಾಳ ಹೂಡೋಕು ಬಿಡಲ್ಕ ಅಂತ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದ್ರು.
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದ ನಂತರ ಸರ್ಕಾರ ಎಚ್ಚೆತ್ತುಕೊಂಡಂತೆ ಕಾಣ್ತಿದೆ..ಮುಂದೆ ದೊಡ್ಡ ದೊಡ್ಡ ಕಾರ್ಯಕ್ರಮ ಆಯೋಜನೆ ವೇಳೆ ಇಂತಹ ದುರ್ಘಟನೆಗಳು ಆಗಬಾರ್ದು ಅನ್ನೋ ಕಾರಣಕ್ಕೆ ಜನಸಂದಣಿ ನಿಯಂತ್ರಣ ಬಿಲ್ ಅನ್ನ ತಂದಿದೆ..ಇಂದಿನ ಕಲಾಪದಲ್ಲಿ ಗೃಹ ಸಚಿವ ಪರಮೇಶ್ವರ್ ಬಿಲ್ ಮಂಡನೆ ಮಾಡಿದ್ರು..ಈವೇಳೆ ಆಡಳಿತ ಹಾಗೂ ಪ್ರತಿಪಕ್ಷಗಳಿಂದಲೂ ಕೆಲವು ಅಂಶಗಳ ಬಗ್ಗೆ ಆಕ್ಷೇಪಗಳು ವ್ಯಕ್ತವಾದ್ವು..ಬಿಲ್ ತಂದಿರುವುದು ಸರಿಯಿದೆ..ಕೆಲವರು ಸರಿಯಾದ ನಿಯಮಗಳನ್ನ ಹಾಕಿದ್ದೀರ..ಜಾತ್ರೆ,ಹಬ್ಬ ಹರಿದಿನಗಳಗೂ ಕಠಿಣ ನಿಯಮಗಳನ್ನ ಹಾಕಿದ್ದು ಸರಿಯಲ್ಲವೆಂದು ಅಕ್ರೋಶ ಹೊರಹಾಕಿದ್ರು..ಪರಮೇಶ್ವರ್ ಬಿಲ್ ತಂದ ಸಾಧಕಗಳ ಬಗ್ಗೆ ವಿವರಣೆ ನೀಡಿದ್ರು..ಆದ್ರೆ ಜಾತ್ರೆ,ಧಾರ್ಮಿಕ ಕಾರ್ಯಕ್ರಮಗಳು,ರೈತ ಹೋರಾಟಗಳಿಗೆ ಕಡಿವಾಣ ಹಾಕಿದಂತೆ ಕಾಣ್ತಿದೆ...ಯಾಕಂದ್ರೆ ಸಾವಿರಾರು ಜನ ಈ ಕಾರ್ಯಕ್ರಮಗಳಿಗೆ ಸೇರ್ತಾರೆ..ಆಯೋಜನಕರಿಗೆ ೧ ಕೋಟಿ ಬಾಂಡ್ ಸಲ್ಲಿಸಬೇಕೆಂಬುದು ಸರಿಯಲ್ಲ..೧೦ ದಿನ ಮೊದಲೇ ಅನುಮತಿ ಪಡೆಯಬೇಕೆಂದು ಸರಿಯಲ್ಲ..ಇದನ್ನ ತೆಗೆದು ಹಾಕಿ ಎಂದು ಆಗ್ರಹಿಸಿದ್ರು..ವಿದ್ಯಾರ್ಥಿ ಹೋರಾಟಗಳು,ಅಂಬೇಡ್ಕರ್ ಆಶಯಕ್ಕೆ ಇದು ವಿರುದ್ಧವಾಗಿದ್ದು ಬದಲಾವಣೆ ಮಾಡುವಂತೆ ಒತ್ತಾಯಿಸಿದ್ರು..ಅಂತಿಮವಾಗಿ ಸರ್ಕಾರ ಸದನ ಸಮಿತಿ ರಚನೆ ಮಾಡೋಕೆ ಒಪ್ಪಿಕೊಳ್ತು..ಜೊತೆಗೆ ಗಣೇಶನ ಡಿಜೆ ಹಾಕುವುದಕ್ಕೂ ಇದು ಕಡಿವಾಣ ಹಾಕುತ್ತೆ ಅಂತ ಯತ್ನಾಳ್ ವಿರೋಧಿಸಿದ್ರು..
ಇನ್ನು ಅನುದಾನ, ಅಭಿವೃದ್ಧಿ ಸಮಸ್ಯೆಗಳ ಬಗ್ಗೆ ನಿಯಮ 69 ರಡಿ ಬಿಜೆಪಿ ಶಾಸಕ ಸುನೀಲ್ ಕುಮಾರ್ ಚರ್ಚೆ ನಡೆಸ್ತಿದ್ರು.. ಎರಡು ವರ್ಷಗಳಿಂದ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲವೆಂದು ಆರೋಪಿಸಿದ್ರು.. ಈವೇಳೆ ಸರ್ಕಾರವನ್ನ ಲೇವಡಿ ಮಾಡೋಕೆ ಇತ್ತೀಚಿನ ರಾಜ್ ಬಿ ಶೆಟ್ಟಿ ನಿರ್ದೇಶನದ ಸು ಫ್ರಂ ಸೋ ಸಿನಿಮಾದ ವಿಚಾರವನ್ನ ಪ್ರಸ್ತಾಪಿಸಿದ್ರು.. ಸುಫ್ರಂ ಸೋ ಸಿನಿಮಾ ಬಹಳ ಪ್ರಸಿದ್ಧಿಯಾಗಿದೆ.. ಅದರಂತೆ ಸರ್ಕಾರ ಬಿ ಫ್ರಂ ಸಿ ಯಂತೆ ಪ್ರಸಿದ್ಧಿಯಾಗ್ತಿದೆ ಅಂತ ಲೇವಡಿ ಮಾಡಿದ್ರು.. ಬಿ ಅಂದ್ರೆ ಬೋಗಸ್ ಸಿ ಅಂದ್ರೆ ಕಾಂಗ್ರೆಸ್ ಅಂತ ವ್ಯಂಗ್ಯವಾಡಿದ್ರು.. ಇದೇ ವೇಳೆ ಅನುದಾನ ಕೊಡ್ತೇನೆ ಕೊಡ್ತೇನೆ ಅಂತಾರೆ, ಈ ಮುಖ್ಯಮಂತ್ರಿಯಿಂದ ಕೊಡಿಸ್ತಿರೋ ಇಲ್ಲ ನವೆಂಬರ್ ನಲ್ಲು ಬರೋ ಹೊಸ ಮುಖ್ಯಮಂತ್ರಿಯಿಂದ ಕೊಡಿಸ್ತಿರೋ ಅಂತ ಸಿಎಂ ಬದಲಾವಣೆ ವಿಚಾರವನ್ನ ಮುನ್ನೆಲೆಗೆ ತಂದ್ರು..
ಇನ್ನು ಜನಸಂದಣಿ ನಿಯಂತ್ರಣ ವಿಧೇಯಕ ಮಂಡನೆಯಚರ್ಚೆ ವೇಳೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಮಾತನಾಡ್ತಿದ್ರು. ಈ ವೇಳೆ ಬೇಗ ಬೇಗಮುಗಿಸುವಂತೆ ಸ್ಪೀಕರ್ ಖಾದರ್ ಸೂಚನೆ ನೀಡ್ತಿದ್ರು. ಇದಕ್ಕೆ ಕೆರಳಿದ ಶರಣಗೌಡ ಕಂದಕೂರು ಸ್ಪೀಕರ್ ವಿರುದ್ಧವೇ ಜೋರು ಧ್ವನಿಯಲ್ಲಿ ಆಕ್ರೋಶ ಹೊರಹಾಕಿದ್ರು. ಬಿಲ್ ಮೇಲೆ ಮಾತನಾಡೋಕೂ ನೀವುಬಿಡಲ್ಲ, ನಾನು ಬಿಲ್ ಬಗ್ಗೆಯೇ ಮಾತನಾಡ್ತೇನೆ ಅದಕ್ಕೂ ಅವಕಾಶ ಕೊಡಲಾಗಲ್ಲ ಅಂದ್ರೆ ನಾವೇನು ಮಾಡ್ಬೇಕು.. ನಾನು ಮಾತನಾಡುವಾಗೆಲ್ಲ ಇದೇ ರೀತಿ ಮಾಡ್ತೀರ, ನಾನೇನು ಬೇರೆಯದನ್ನ ಮಾತನಾಡ್ತಿದ್ದೇನಾ ಏರುಧ್ವನಿಯಲ್ಲೇ ಆಕ್ರೋಶ ಹೊರಹಾಕಿದ ಕಂದಕೂರ. ಈವೇಳೆ ಶರಣಗೌಡ ಕಂದಕೂರರನ್ನ ಸಮಾಧಾನಿಸಿದ ಇನ್ನಿತರ ಶಾಸಕರು.
ಇನ್ನು ಪೂರಕ ಅಂದಾಜುಗಳ ಪಟ್ಟಿಯನ್ಮ ಸಿಎಂ ಮಂಡಿಸಿದ್ರು. ಯಾವ್ಯಾವುದಕ್ಕೆ ಹೆಚ್ಚುವರಿ ಹಣ ಮೀಸಲಿಡಲಾಗಿದೆ ಎಂದು ವಿವರಿಸಿದ್ರು. ಒಟ್ಟಿನಲ್ಲಿ ಇಂದಿನ ಕಲಾಪದಲ್ಲಿ ಹಲವು ವಿಷಯಗಳ ಚರ್ಚೆಯಾ ಯ್ತು.ಪೂರಕ ಅಂದಾಜುಗಳ ಬಗ್ಗೆ ಸಿಎಂ ವಿವರಣೆ ನೀಡಿದ್ರು. ಧಾರ್ಮಿಕ ಕಾರ್ಯ ಕ್ರಮಗಳಿಗೆ ಅವಕಾಶ, ಡಿಜೆ ಹಾಕೋದ್ರ ಬಗ್ಗೆ ತಂದಿರುವ ವಿಧೇಯಕಕ್ಕೆ ಆಕ್ಷೇಪ ವ್ಯಕ್ತಪಡಿಸಲಾಯ್ತು. ಇನ್ನು ಕೇಂದ್ರ ತೆರಿಗೆ ತಾರತಮ್ಯದ ಬಗ್ಗೆ ಕಾಂಗ್ರೆಸ್ ಶಾಸಕರು ಧ್ವನಿ ಎತ್ತಿದ್ರು. ಈ ವೇಳೆ ಶರತ್ ಬಚ್ಚೌಗೌಡ ಮಾತನಾಡುವ ಮೇಳೆ ಬಿಜೆಪಿ ಶಾಸಕರು - ಆಡಳಿತ ಪಕ್ಷದ ಶಾಸಕರ ನಡುವೆ ಮಾತಿನ ಚಕಮಕಿ ನಡೆಯಿತು.