)
ಕೆಎಂಎಫ್ ಅಧ್ಯಕ್ಷ ಗಾದಿಯ ಚುನಾವಣೆಯತ್ತ ಎಲ್ಲರ ಚಿತ್ತನೆಟ್ಟಿದೆ. ಕೆಎಂಎಫ್ ಅಧ್ಯಕ್ಷರಾಗಲು ಪ್ರಭಾವಿ ರಾಜಕಾರಣಿಗಳೇ ತುದಿಗಾಲಿನಲ್ಲಿ ನಿಂತಿದ್ದಾರೆ. ಅತ್ತ ಬಮೂಲ್ ಮೂಲಕ ಮಾಜಿ ಸಂಸದ ಡಿ.ಕೆ ಸುರೇಶ್ ಕೆಎಮ್ ಎಫ್ ಚುನಾವಣೆಗೆ ಎಂಟ್ರಿಯಾಗಿದ್ದಾರೆ.ಅತ್ತ ಮಾಲೂರು ಶಾಸಕ ವೈ.ನಂಜೇಗೌಡ ಹಾಗೂ ಮಾಜಿ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ನಡುವೆ ಈಗ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.ಮೂವರು ಘಟಾನುಘಟಿ ನಾಯಕರ ಪೈಪೋಟಿಯಲ್ಲಿ ಸಿಎಂ ಆಶೀರ್ವಾದ ಇದ್ದವರಿಗೆ ನಂದಿನಿ ಕಾಯುವ ಕೆಲಸ ಖಾಯಂ ಆಗಲಿದೆ.
ಕಳೆದ ಬಾರಿ ಮಾಲೂರು ಶಾಸಕ ನಂಜೇಗೌಡ ಅವರಿಗೆ ಸಿಗಬೇಕಿದ್ದ ಕೆಎಮ್ ಎಫ್ ಅಧ್ಯಕ್ಷ ಸ್ಥಾನ ಕೈತಪ್ಪಿತ್ತು. ಸಿಎಂ ಸಿದ್ದರಾಮಯ್ಯ ಹೇಳಿದ್ದಕ್ಕೆ ಅವರು ಕಣದಿಂದ ಹಿಂದೆ ಸರಿದು ಭೀಮಾನಾಯಕ್ ಗೆ ಅವಕಾಶ ಕಲ್ಪಿಸಿದ್ರು.. ಈ ಭಾರಿ ವೈ.ನಂಜೇಗೌಡರಿಗೆ ಸಿದ್ದರಾಮಯ್ಯ ಅವರ ಅಭಯ ಕೊಟ್ಟಿದ್ದಾರೆ ಎನ್ನಲಾಗಿದೆ.ಹೀಗಾಗಿ ಈ ಬಾರಿ ಅವರಿಗೆ ಅವಕಾಶ ಸಿಗಲಿದೆ ಎಂಬ ವಿಶ್ವಾದಲ್ಲಿದ್ದಾರೆ ನಂಜೇಗೌಡರು ಇದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಆಪ್ತರೂ ಆಗಿರುವ ನಂಜೇಗೌಡ ಸದ್ಯ ಕೆಎಂಎಫ್ಗೆ ಬಾರೀ ಪ್ರಯತ್ನ ನಡೆಸುತ್ತಿದ್ದಾರೆ. ಕೋಲಾರ ಹಾಲು ಒಕ್ಕೂಟ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ನನಗೆ ಅಧ್ಯಕ್ಷ ಸ್ಥಾನ ಸಿಕ್ಕೇ ಸಿಗುತ್ತೆ ಅಂತ ಪುನರ್ ಉಚ್ಚಾರ ಮಾಡುವ ಮೂಲಕ ಪ್ರಬಲ ಪೈಪೋಟಿ ನೀಡುವ ಸಂದೇಶ ರವಾನಿಸಿದ್ದಾರೆ.
ಮತ್ತೊಂದು ಕಡೆಯಲ್ಲಿ ಡಿ.ಕೆ ಸುರೇಶ್ ಅವರು ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ದಕ್ಕಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಅವರ ಪರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಲಾಬಿ ನಡೆಸುತ್ತಿದ್ದಾರೆ.ಅಷ್ಟೆ ಯಾಕೆ ಬಮೂಲ್ ಮೂಲಕ ಅಖಾಡಕ್ಕೆ ಎಂಟ್ರಿಯಾಗಿದ್ದೇ ಕೆಎಮ್ಎಫ್ ಗಾಧಿ ಹಿಡಿಯೋಕೆ ಅನ್ನೋದು ಚರ್ಚೆಯಲ್ಲಿದೆ. ಇತ್ತ ರಾಘವೇಂದ್ರ ಹಿಟ್ನಾಳ್ ಕೂಡ ಭಾರೀ ಪ್ರಯತ್ನ ಮಾಡುತ್ತಿದ್ದಾರೆ.ಇಂದು ಕೂಡ ಸತೀಶ್ ಜಾರಕಿಹೊಳಿ ಸೇರಿದಂತೆ ಅನೇಕರನ್ನ ಭೇಟಿ ಮಾಡಿದ್ದಾರೆ ಹಿಟ್ನಾಳ್.ಇನ್ನು ಈ ಸ್ಪರ್ಧೆ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ,ಯಾರ ಬಳಿ ಮತಗಳು ಹೆಚ್ಚಿವೆ ಅವರು ಅಧ್ಯಕ್ಷರಾಗುತ್ತಾರೆ. ಇದು ಪಕ್ಷದ ಚುನಾವಣೆ ಅಲ್ಲ.ಡಿ ಕೆ ಸುರೇಶ್ ಆದ್ರೂ ಕೂಡ ಇಲ್ಲಿ ಪಕ್ಷ ಬರಲ್ಲ.ಸಹಕಾರಿ ರಂಗದ ಚುನಾವಣೆ. ಸಹಕಾರಿ ರಂಗದಲ್ಲಿ ಯಾರು ಎಕ್ಸಪರ್ಟ್ ಇದ್ದಾರೆ ಅವರು ಅಧ್ಯಕ್ಷಾರಗುತ್ತಾರೆ ಎನ್ನುವ ಮೂಲಕ ಡಿ.ಕೆ.ಸುರೇಶ್ ಗೆ ಸಾಧ್ಯವಿಲ್ಲ ಎಂಬ ಸಂದೇಶ ನೀಡಿದ್ದಾರೆ.
ಒಟ್ಟಾರೆ ಒಂದೆಡೆ ಡಿ.ಕೆ ಸುರೇಶ್, ಹಾಗೂ ಕೆ ವೈ ನಂಜೇಗೌಡ ನಡುವೆ ಪೈಪೋಟಿ ನಡೆಯುತ್ತಿದ್ದರೆ, ಈ ಮಧ್ಯೆ ಮತ್ತೊಮ್ಮೆ ಅವಕಾಶಕ್ಕಾಗಿ ಭೀಮಾನಾಯ್ಕ್ ಕಾಯುತ್ತಿದ್ದಾರೆ.ಈ ಸಂಬಂಧ ಬಾರೀ ಲಾಭಿಗಳು ಶುರುವಾಗಿದೆ.ಅಧಿಕಾರದ ಗದ್ದುಗೆ ಯಾರಿಗೆ ಸಿಗಲಿದೆ ಕಾಮಧೇನು ಕೆಎಂಎಫ್ ಆಶೀರ್ವಾದ ಎನ್ನುವುದೇ ಕುತೂಹಲ ಮೂಡಿಸಿದೆ.