)
Karnataka Rain Update: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು ಇಂದೂ ಕೂಡ ರಾಜ್ಯಾದ್ಯಂತ ಧಾರಾಕಾರ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ, ಸಿಲಿಕಾನ್ ಸಿಟಿ ಬೆಂಗಳೂರು ಸೇರಿ ರಾಜ್ಯದ 8 ಜಿಲ್ಲೆಗಳಿಗೆ ಸೆಪ್ಟೆಂಬರ್ 23ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ರಾಜ್ಯದ 8 ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಯೆಲ್ಲೋ ಅಲರ್ಟ್:
ಬೆಂಗಳೂರು, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಗೆ ಅಧಿಕ ಮಳೆ ಸಂಭವವಿರುವ ಬಗ್ಗೆ ಭವಿಷ್ಯ ನುಡಿದಿರುವ ರಾಜ್ಯ ಹವಾಮಾನ ಇಲಾಖೆ ಈ ಎಂಟೂ ಜಿಲ್ಲೆಗಳಿಗೆ ಸೆ.23ರವರೆಗೆ ಎಂದರೆ ಮಂಗಳವಾರದವರೆಗೆ ಯೆಲ್ಲೋ ಅಲರ್ಟ್ ನೀಡಿದೆ.
ಬೆಂಗಳೂರಿನಲ್ಲಿ ಮಳೆ ಪ್ರಮಾಣ..!
ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ಬೆಂಗಳೂರು ಜನ ತತ್ತರಿಸಿದ್ದು, ಬೆಂಗಳೂರಿನ ಯಾವ ಭಾಗದಲ್ಲಿ ಎಷ್ಟು ಮಳೆಯಾಗಿದೆ ಎಂಬ ಮಾಹಿತಿ ಕೆಳಕಂಡಂತಿದೆ:
- ಅರಕೆರೆ 33 ಮಿ.ಮೀ.
- ಬೊಮ್ಮನಹಳ್ಳಿ 30 ಮಿ.ಮೀ.
- ಬಿಳೇಕಹಳ್ಳಿ 27 ಮಿ.ಮೀ.
- ನಾಗಪುರ 25 ಮಿ.ಮೀ.
- ಆರ್.ಆರ್.ನಗರ 23 ಮಿ.ಮೀ.
- ಎಚ್ಎಸ್ಆರ್ ಲೇಔಟ್ 22 ಮಿ.ಮೀ.
- ಕೋರಮಂಗಲ 22 ಮಿ.ಮೀ.
- ವನ್ನಾರ್ಪೇಟೆ 21 ಮಿ.ಮೀ
- ನಾಯಂಡಹಳ್ಳಿಯಲ್ಲಿ 21 ಮಿ.ಮೀ.
- ಬಿಟಿಎಂ ಲೇಔಟ್ನಲ್ಲಿ 20 ಮಿ.ಮೀ.
- ಬೆಳ್ಳಂದೂರಿನಲ್ಲಿ 16 ಮಿ.ಮೀ
- ಹಂಪಿನಗರದಲ್ಲಿ 16 ಮಿ.ಮೀ
- ವಿದ್ಯಾಪೀಠದಲ್ಲಿ 15 ಮಿ.ಮೀ
- ಚಾಮರಾಜಪೇಟೆಯಲ್ಲಿ 12 ಮಿ.ಮೀ.
ರಾಜ್ಯದ ಯಾವ ಜಿಲ್ಲೆಯಲ್ಲಿ ಎಷ್ಟು ಮಳೆಯಾಗಿದೆ?
- ಕಲಬುರಗಿ ಜಿಲ್ಲೆ 9 ಸೆಂ.ಮೀ
- ತುಮಕೂರು ಜಿಲ್ಲೆಯ ಗುಬ್ಬಿ 8 ಸೆಂ.ಮೀ
- ಬೆಂಗಳೂರು ನಗರದ ಯಲಹಂಕ 7 ಸೆಂ.ಮೀ.
- ಉಡುಪಿ ಜಿಲ್ಲೆಯ ಸಿದ್ದಾಪುರ 7 ಸೆಂ.ಮೀ.
- ರಾಯಚೂರು ಜಿಲ್ಲೆಯ ಮುದಗಲ್ 7 ಸೆಂ.ಮೀ.
- ಬಾಗಲಕೋಟೆ ಜಿಲ್ಲೆಯ ಕರೂರು 7 ಸೆಂ.ಮೀ.
- ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ 7 ಸೆಂ.ಮೀ.,
- ಕಲಬುರಗಿ ಜಿಲ್ಲೆ ರದ್ದೇವಾಡಗಿ 6 ಸೆಂ.ಮೀ.
- ಉಡುಪಿ ಜಿಲ್ಲೆಯ ಕಾರ್ಕಳ 6 ಸೆಂ.ಮೀ.
- ಯಾದಗಿರಿ ಜಿಲ್ಲೆಯ ಹುಣಸಗಿ 6 ಸೆಂ.ಮೀ.
- ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ 6 ಸೆಂ.ಮೀ.ನಷ್ಟು ಮಳೆಯಾಗಿದೆ.