)
ಆಕೆ ನೂರಾರು ಕನಸುಗಳನ್ನು ಕಂಡು ಸಂಪ್ರದಾಯದಂತೆ ವರನಿಗೆ ಕೈತುಂಬಾ ವರದಕ್ಷಿಣೆ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿದ್ದರು. ಆದರೆ ಮದುವೆ ಆದ ದಿನದಿಂದಲೇ ಗಂಡನ ವರಸೆ ಬದಲಾಗಿದೆ. ವರದಕ್ಷಿಣೆ ತಂದರೆ ಮಾತ್ರ ಜೊತೆಯಲ್ಲಿ ಸಂಸಾರ, ಇಲ್ಲದೆ ಇದ್ದರೆ ಬೇರೆ ಕಡೆ ಮಲಗು ಎಂದು ಕಿರುಕುಳ.ಮಗು ಬೇಕು ಅಂದರೆ ಮೈದುನನ ಜೊತೆಯಲ್ಲಿ ಮಲಗು ಎಂದ ಅತ್ತೆ ಮಾವ. ವರದಕ್ಷಿಣೆ ಕಿರುಕುಳ ತಾಳಲಾರದೆ ಮಹಿಳೆ ಡ್ಯಾಂಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.
ಹೌದು, ಹೀಗೆ ಮದುವೆ ಸಮಯದಲ್ಲಿ ಕುಟಂಬ ಸಮೇತ ಪೋಸ್ ನೀಡುತ್ತಿರುವ ಕುಟುಂಬ, ಸಪ್ತ ಪದಿ ತುಳಿದ ಮೇಲೆ ನಗು ನಗುತ್ತಾ ಬಾಳುತ್ತೇನೆ ಎಂದು ಪೋಟೋಗೆ ನಗುಮುಖದಲ್ಲಿ ಪೋಸ್ ಕೊಡುತ್ತಿರವ ಮಹಿಳೆ, ಮದುವೆ ಆದ ಕೆಲವೇ ತಿಂಗಳಲ್ಲಿ ಗಂಡ ನೀಡಿದ ಕಿರುಕುಳ ಎಳೆ ಎಳೆಯಾಗಿ ಬಿಚ್ಚಿಡುತ್ತಿರುವ ಮಹಿಳೆ, ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಘಾಟಿ ವಿಶ್ವೇಶ್ವರ ಪಿಕ್ ಡ್ಯಾಂ ಬಳಿ..ಪುಷ್ಪಾವತಿ (೨೮) ಮೃತ ದುರ್ದೈವಿ. ೧೧ ನವೆಂಬರ್ ೨೦೨೪ ರಂದು ದೊಡ್ಡಬಳ್ಳಾಪುರದ ತಪಸೀಹಳ್ಳಿಯ ಗೋವಿಂದಪ್ಪ ಮತ್ತು ಭಾರತಿಯ ಮಗ ವೇಣು ಜಿ ಎಂಬಾತನ ಜೊತೆಯಲ್ಲಿ ಅದ್ದೂರಿಯಾಗಿ ಮದುವೆ ಮಾಡಲಾಗಿತ್ತು. ನೂರಾರು ಕನಸುಗಳನ್ನು ಹೊತ್ತ ಉಪನ್ಯಾಸಕಿಗೆ ಗಂಡನ ಮನೆಗೆ ಎಂಟ್ರಿ ಆಗುತ್ತಲೇ ಕಿರುಕುಳ ಪ್ರಾರಂಭ ಆಗಿದೆ. ಮದುವೆ ವೇಳೆ ಹೆಣ್ಣಿಗೆ ನಕ್ಲೇಸ್, ಮಾಂಗಲ್ಯ ಸರ, ಓಲೆ ಜುಮುಕಿ ಮತ್ತು ಗಂಡಿಗೆ ಕೈ ಚೇನ್, ಕೊರಳನ ಸರ ಉಂಗುರ ಸೇರಿ ಲಕ್ಷಾಂತರ ರುಪಾಯಿ ಬೆಲೆ ಬಾಳುವ ಒಡವೆಗಳನ್ನು ನೀಡಿ ಮದುವೆ ಮಾಡಿಕೊಡಲಾಗಿತ್ತು. ಜೊತೆಗೆ ಐದು ಲಕ್ಷ ವರದಕ್ಷಿಣೆಯನ್ನು ಸಹ ನೀಡಲಾಗಿತ್ತು ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಇಷ್ಟೆಲ್ಲಾ ನೀಡಿದರೂ ಈತನಿಗೆ ದೊಡ್ಡಬಳ್ಳಾಪುರದಲ್ಲಿ ಒಂದು ಸೈಟ್ ಬೇಕಿತ್ತಂತೆ. ಹಾಗಾಗಿ ಪ್ರತಿನಿತ್ಯ ಅತ್ತೆ ಮಾವ ಗಂಡ ಸೇರಿ ಕಿರುಕುಳ ನೀಡುತ್ತಿದ್ದರಂತೆ.ಹಾಗಾಗಿ ಕಿರುಕುಳ ತಾಳಲಾರದೆ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ.
ಇನ್ನೂ ಗಂಡ ಮತ್ತು ಕುಟುಂಬಸ್ಥರ ಕಿರುಕುಳದ ಕುರಿತು ಸೆಲ್ಫಿ ವಿಡಿಯೋ ಮಾಡಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.ಮದುವೆ ಆದಗಿನಿಂದಲೂ ಗಂಡ ಆಕೆಯ ಜೊತೆಯಲ್ಲಿ ಮಲಗುತ್ತಿರಲಿಲ್ಲವಂತೆ. ಹಾಗಾಗಿ ಆಕೆ ಏನಾದರೂ ಸಮಸ್ಯೆ ಇದ್ದರೆ ವೈದ್ಯ ಬಳಿ ತೋರಿಸುತ್ತೇವೆ ಎಂದಾಗ,ನನಗೆ ಏನೂ ಸಮಸ್ಯೆ ಇಲ್ಲ, ನೀನು ನಿಮ್ಮ ಅಪ್ಪನ ಮನೆಗೆ ಹೋಗಿ ಒಂದು ಸೈಟ್ ಕೊಡಿಸಿಕೊಂಡು ಬಾ ಆಗ ನಿನ್ನ ಜೊತೆಯಲ್ಲಿ ಸಂಸಾರ ಮಾಡುತ್ತೇನೆ ಎಂದು ಕಿರುಕುಳ ನೀಡುತ್ತಿದ್ದರಂತೆ.ಇನ್ನೂ ಮಗು ಬೇಕು ಎಂದಾಗ ಅತ್ತೆ ಮಾವ ಮೈದುನನ ಜೊತೆಯಲ್ಲಿ ಮಲಗು, ಮಗು ಯಾರಿಂದ ಆದರೆ ಏನು ಎಂದು ಹಿಂಸೆ ನೀಡುತ್ತಿದ್ದರಂತೆ.ಇಷ್ಟೆಲ್ಲಾ ಕಿರುಕುಳದ ಜೊತೆಗೆ ದೈಹಿಕವಾಗಿ ಹಿಂಸೆ ನೀಡುತ್ತಿದ್ದರಂತೆ.ಈ ವಿಚಾರವಾಗಿ ದೊಡ್ಡಬಳ್ಳಾಪುರ ಮಹಿಳೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಜಾಮೀನ ಮೇಲೆ ಗಂಡ ವಿಷ್ಟು ಹೊರಬಂದಿದ್ದ. ಇನ್ನೂ ರಾಜಿ ಪಂಚಾಯತಿ ವೇಳೆ ಪುಪ್ಷಾವತಿ ತವರು ಮನೆ ಸೇರಿದ್ದಳು.ಗಂಡನ ಬಗ್ಗೆ ಚಿಂತೆ ಮಾಡಿ ಖಿನ್ನತೆಗೆ ಒಳಗಾಗುತ್ತಾಳೆ ಎಂದು ನಾಲ್ಕು ದಿನದ ಹಿಂದೆ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸಕ್ಕೆ ಸೇರಿದ್ದಾಳೆ.ಶನಿವಾರ ಕೆಲಸಕ್ಕೆ ಹೋಗುವ ವೇಳೆ ಮಾರ್ಗ ಮಧ್ಯೆ ಗಂಡ ಸಿಕ್ಕಿ, ನಿನ್ನ ಜೀವನ ನಾಶ ಮಾಡುತ್ತೇನೆ, ನಾನು ಎರಡನೇ ಮದುವೆ ಆಗುತ್ತೇನೆ. ನಿನ್ನ ವಿಚಾರ ನಿನ್ನ ಸ್ನೇಹಿತರು, ಸಂಬಂಧಿಕರು, ನಿನ್ನ ವಿಧ್ಯಾರ್ಥಿಗಳಿಗೆ ತಿಳಿಸುತ್ತೇನೆ ಎಂದು ಬೆದರಿಕೆ ಹಾಕಿ, ಸಾರ್ವಜನಿಕವಾಗಿ ಅವಮಾನ ಮಾಡಿದ್ದಾರೆ.ಈ ವಿಚಾರವಾಗಿ ಮನೆಗೆ ಮಾಹಿತಿ ನೀಡಿ, ಸೀದಾ ಡ್ಯಾಂ ಬಳಿ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಇನ್ನೂ ದೊಡ್ಡಬಳ್ಳಾಪುರ ಮಹಿಳಾ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಗಂಡ ವಿಷ್ಣು, ಮಾವ ಗೋವಿಂದಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ಒಟ್ಟಾರೆ ನೂರಾರು ಕನಸುಗಳನ್ನ ಹೊತ್ತು ಸಪ್ತಪದಿ ತುಳಿದಿದ್ದ ಉಪನ್ಯಾಸಕಿ ಹೀಗೆ ದುರಂತ ಅಂತ್ಯ ಕಂಡಿದ್ದು ವಿಪರ್ಯಾಸ. ವರದಕ್ಷಿಣೆ ಎಂಬ ಪೆಡಂಭೂತಕ್ಕೆ ಒಂದು ಜೀವ ಬಲಿಯಾದರೆ, ಲಕ್ಷಾಂತ ರುಪಾಯಿ ಖರ್ಷು ಮಾಡಿ ಮದುವೆ ಮಾಡಿಕೊಟ್ಟಿದ್ದ ಕುಟುಂಬಸ್ಥರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.
-ವೆಂಕಟೇಶ್ ಬೂದಿಗೆರೆ
ಜೀ ಕನ್ನಡ ನ್ಯೂಸ್ ದೇವನಹಳ್ಳಿ