Bengaluru Heavy Rainfall Update: ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಐದು ಜಿಲ್ಲೆಗಳಲ್ಲಿ ಇಂದು ಸಹ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು: ನಿನ್ನೆ ಭಾರೀ ಮಳೆಯ ನಂತರ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ಇಬ್ಬರ ಕುಟುಂಬ ಸದಸ್ಯರನ್ನು ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಭೇಟಿ ಮಾಡಿದರು.
#WATCH | Bengaluru: Karnataka Deputy CM and Bengaluru Development Minister DK Shivakumar met the family members of the two who died due to electrocution yesterday, following heavy rains.
Source: Office of DK Shivakumar pic.twitter.com/jKtU7fSXaA
— ANI (@ANI) May 20, 2025
ಕೋರಮಂಗಲದ ಬಿಎಂಟಿಸಿ ಮತ್ತು ಟಿಟಿಎಂಸಿಯಲ್ಲಿ ಜಲಾವೃತವಾಗಿದ್ದು, ಟಿಟಿಎಂಸಿಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಯೂ ನೀರಿನಲ್ಲಿ ಮುಳುಗಿದೆ. ಇದರಿಂದ ಸವಾರರು ಮತ್ತು ಜನಸಾಮಾನ್ಯರಿಗೆ ಓಡಾಡಲು ತೀವ್ರ ಸಂಕಷ್ಟವಾಗಿದೆ.
ಬೆಂಗಳೂರಿನ ಸಾಯಿ ಲೇಔಟ್ ವಸತಿ ಪ್ರದೇಶವು ಭಾರೀ ಮಳೆಯಿಂದ ಜಲಾವೃತಗೊಂಡಿದೆ.
VIDEO | Karnataka: Sai Layout residential area of Bengaluru flooded after heavy rainfall.#BengaluruRainEffect
(Full video available on PTI Videos - https://t.co/n147TvrpG7) pic.twitter.com/WDdIFHqYVm
— Press Trust of India (@PTI_News) May 20, 2025
ತೀವ್ರ ಮಳೆ ಗಾಳಿಯಿದ್ದಲ್ಲಿ ನಾಗರಿಕರು ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು
ತೀವ್ರ ಮಳೆ ಗಾಳಿಯಿದ್ದಲ್ಲಿ ನಾಗರಿಕರು ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು
Precautionary measures to be followed by citizens in case of heavy rain and wind.#BBMP #BBMPCares #BengaluruRains #BengaluruRain #DKShivakumar #bbmpchiefcommissioner pic.twitter.com/phZU0PPjGK
— Bruhat Bengaluru Mahanagara Palike (@BBMPofficial) May 20, 2025
"2 ವರ್ಷಗಳಲ್ಲಿ ಬ್ಯಾಡ್ ಬೆಂಗಳೂರು ಮಾಡಿದ್ದೇ ಕಾಂಗ್ರೆಸ್ ಸರ್ಕಾರ ಸಾಧನೆ" ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನ ಅಭಿವೃದ್ಧಿಯಂತೂ ಸಂಪೂರ್ಣ ಕಡೆಗಣಿಸಿದ ಪರಿಣಾಮವಾಗಿ ಮಳೆಬಂದಾಗಲೆಲ್ಲಾ ನಿತ್ಯ ನರಕದ ಪರಿಸ್ಥಿತಿ ಬಂದೊದಗಿಸಿ ಜನಸಾಮಾನ್ಯರು ನಿತ್ಯವೂ ಯಾತನೆ ಅನುಭವಿಸುವಂತೆ ಮಾಡಿ ರಾಜಧಾನಿಯ ಗೌರವ ಕುಸಿಯುವಂತೆ ಮಾಡಿರುವುದು ದುರ್ದೈವದ ಸಂಗತಿಯಾಗಿದೆ. ಅಧಿಕಾರಕ್ಕೇರಿ ಎರಡು ವರುಷ ಕಳೆದರೂ ಒಂದೇ ಒಂದೂ ಅಭಿವೃದ್ಧಿ ಯೋಜನೆ ಜಾರಿ ಮಾಡದೇ, ಯಾವುದೇ ಆಶ್ವಾಸನೆಗಳನ್ನು ಈಡೇರಿಸದೇ, ನಿತ್ಯವೂ ಜನರ ಮೇಲೆ ಬೆಲೆ ಏರಿಕೆಯ ಬರೆ ಎಳೆದ ರಾಜ್ಯ ಸರ್ಕಾರ ಮಳೆಯಿಂದ ಸಂಕಷ್ಟಿತರಾಗಿರುವ ಜನರ ಕಷ್ಟ ಆಲಿಸುವ ಬದಲು ಆಡಂಬರದ ಜಾಹಿರಾತುಗಳು ಹಾಗೂ ಸಮಾವೇಶದ ಮೂಲಕ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವುದು ಜನ ವಿರೋಧಿ ನಡೆಯಲ್ಲದೇ ಬೇರೇನೂ ಅಲ್ಲ. ಬ್ರ್ಯಾಂಡ್ ಬೆಂಗಳೂರು ಮಾಡುವುದಾಗಿ ಹೇಳಿದ್ದ ಬೆಂಗಳೂರು ಉಸ್ತುವಾರಿ ಹೊತ್ತಿರುವ ಉಪಮುಖ್ಯಮಂತ್ರಿಗಳು ಮೂಲಭೂತ ಸೌಕರ್ಯಗಳನ್ನೂ ಒದಗಿಸಲಾಗದೆ ಬೆಂಗಳೂರು ಜನರಿಗೆ ನಿತ್ಯ ನರಕ ನಗರವಾಗಿಸಿದ್ದಾರೆ. ಇನ್ನಾದರೂ ಸಂಕಷ್ಠಿತ ಜನರ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ದಪ್ಪ ಚರ್ಮದ ಭ್ರಷ್ಟ ಸರ್ಕಾರ ಮುಂದಾಗಲಿ ಎಂದು ಎಚ್ಚರಿಸಲಾಯಿತು. ಈ ಸಂದರ್ಭದಲ್ಲಿ ವಿಧಾನಸಭಾ ವಿರೋಧ ಪಕ್ಷ ನಾಯಕರಾದ ಶ್ರೀ
, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಶ್ರೀ
, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಶ್ರೀ
, ಶಾಸಕರಾದ ಶ್ರೀ ಎಂ.ಸತೀಶ್ ರೆಡ್ಡಿ, ಸೇರಿದಂತೆ ಪಕ್ಷದ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
"2 ವರ್ಷಗಳಲ್ಲಿ ಬ್ಯಾಡ್ ಬೆಂಗಳೂರು ಮಾಡಿದ್ದೇ ಕಾಂಗ್ರೆಸ್ ಸರ್ಕಾರ ಸಾಧನೆ"
ಬೆಂಗಳೂರಿನ ಸಿಲ್ಕ್ ಬೋರ್ಡ್ ಬಳಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಂಗಳೂರಿನ ಅಭಿವೃದ್ಧಿಯಂತೂ ಸಂಪೂರ್ಣ ಕಡೆಗಣಿಸಿದ ಪರಿಣಾಮವಾಗಿ ಮಳೆಬಂದಾಗಲೆಲ್ಲಾ ನಿತ್ಯ ನರಕದ ಪರಿಸ್ಥಿತಿ… pic.twitter.com/R1iKBedrTb
— Vijayendra Yediyurappa (@BYVijayendra) May 20, 2025
ಕಾಂಗ್ರೆಸ್ನ ಎರಡು ವರ್ಷದ ಸಂಭ್ರಮಕ್ಕೆ ಬಿಜೆಪಿಯಿಂದ ಆಕ್ಷೇಪ
ಭಾನುವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಬೆಂಗಳೂರು ಸೇರಿದಂತೆ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ, ಈ ಸಂಕಷ್ಟದ ಸಂದರ್ಭದಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ತನ್ನ ಎರಡು ವರ್ಷದ ಆಡಳಿತದ ಸಂಭ್ರಮವನ್ನು ಆಚರಿಸಲು ಸಾಧನಾ ಸಮಾವೇಶ’ ಆಯೋಜಿಸಿರುವುದಕ್ಕೆ ಕರ್ನಾಟಕ ಬಿಜೆಪಿಯು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ವಿರೋಧ ಪಕ್ಷದ ನಾಯಕ ಆರ್. ಅಶೋಕ, “ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಬೆಂಗಳೂರು ಮಳೆಯಲ್ಲಿ ಮುಳುಗಿದೆ, ಜನರು ಕಷ್ಟದಲ್ಲಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಈ ಸಮಸ್ಯೆಯನ್ನು ಬಗೆಹರಿಸುವ ಬದಲು, ತಮ್ಮ ಎರಡು ವರ್ಷದ ಆಡಳಿತವನ್ನು ಆಚರಿಸಲು ಬಳ್ಳಾರಿಗೆ ತೆರಳಿದ್ದಾರೆ,” ಎಂದು ವಿಷಾದ ವ್ಯಕ್ತಪಡಿಸಿದರು.
ಬಿಜೆಪಿಯು ಕಾಂಗ್ರೆಸ್ ಸರ್ಕಾರದ ಈ ಕ್ರಮವನ್ನು ಜನರ ಕಷ್ಟಕ್ಕೆ ಮಾಡಿದ ಅಗೌರವ ಎಂದು ಟೀಕಿಸಿದ್ದು, ತಕ್ಷಣವೇ ಪರಿಹಾರ ಕಾರ್ಯಗಳಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿದೆ.
ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಇಂದು ವರ್ಚ್ಯುವಲ್ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ನಿರ್ದೇಶನಗಳನ್ನು ನೀಡಿದರು. ನಗರದ ಎಲ್ಲಾ ವಲಯಗಳಲ್ಲಿ ನಾಗರಿಕರಿಂದ ನಿಯಂತ್ರಣ ಕೊಠಡಿಗಳಿಗೆ ಬಂದಂತಹ ದೂರುಗಳಿಗೆ ಕೂಡಲೆ ಸ್ಪಂದಿಸಿ ಇರುವ ಸಮಸ್ಯೆಗಳನ್ನು ಬಗೆಹರಿಸಬೇಕು. ನಾಗರಿಕರಿಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸದಾ ಕಾರ್ಯಪ್ರವೃತ್ತವಾಗಿ ಕಾರ್ಯನಿರ್ವಹಿಸಲು ಸೂಚಿಸಿದರು. ಪಾಲಿಕೆಯ ಎಲ್ಲಾ 8 ವಲಯಗಳಲ್ಲಿ ಬರುವ ಅಗ್ನಿ ಶಾಮಕ ಠಾಣೆಗಳೊಂದಿಗೆ ವಲಯ ಆಯುಕ್ತರುಗಳು ಸದಾ ಸಂಪರ್ಕದಲ್ಲಿದ್ದು, ತುರ್ತು ಸಂದರ್ಭಗಳಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ವಾಹನಗಳನ್ನು ಬಳಸಿಕೊಳ್ಳಲು ಸೂಚಿಸಿದರು.
ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಇಂದು ವರ್ಚ್ಯುವಲ್ ಮೂಲಕ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ನಿರ್ದೇಶನಗಳನ್ನು ನೀಡಿದರು.
ನಗರದ ಎಲ್ಲಾ ವಲಯಗಳಲ್ಲಿ ನಾಗರಿಕರಿಂದ ನಿಯಂತ್ರಣ ಕೊಠಡಿಗಳಿಗೆ ಬಂದಂತಹ ದೂರುಗಳಿಗೆ ಕೂಡಲೆ ಸ್ಪಂದಿಸಿ ಇರುವ ಸಮಸ್ಯೆಗಳನ್ನು ಬಗೆಹರಿಸಬೇಕು.… pic.twitter.com/hTpfIFMxCM
— Bruhat Bengaluru Mahanagara Palike (@BBMPofficial) May 20, 2025
ಪ್ರಯಾಣಿಕರು ಹಲವಾರು ಪ್ರದೇಶಗಳಲ್ಲಿ, ವಿಶೇಷವಾಗಿ ಅನೇಕ ಬಹುರಾಷ್ಟ್ರೀಯ ಕಂಪನಿಗಳ ಕಚೇರಿಗಳಿರುವ ಮಾನ್ಯತಾ ಟೆಕ್ ಪಾರ್ಕ್ ಬಳಿ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ರಸ್ತೆಗಳು ಜಲಾವೃತವಾಗಿರುವುದರಿಂದ ಪರದಾಡುವಂತಾಯಿತು.ನಗರದ ರಸ್ತೆಗಳಲ್ಲಿ ಹಲವು ಹೊಸ ಗುಂಡಿಗಳು ಉಂಟಾಗಿ, ವಾಹನ ಸವಾರರಿಗೆ ಅಪಾಯವನ್ನುಂಟುಮಾಡಿವೆ. ನಗರದ ಹಲವೆಡೆ ದೀರ್ಘವಾದ ಟ್ರಾಫಿಕ್ ಜಾಮ್ಗೆ ಕಾರಣವಾಗಿದೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಬಿಡುಗಡೆ ಮಾಡಿದ ಬಹು-ಹವಾಮಾನ ಎಚ್ಚರಿಕೆಯಲ್ಲಿ, “ಕರಾವಳಿ ಕರ್ನಾಟಕ, ಕೇರಳ ಮತ್ತು ಮಾಹೆ ಹಾಗೂ ದಕ್ಷಿಣ ಒಳನಾಡು ಕರ್ನಾಟಕದ ಕೆಲವು ಕಡೆಗಳಲ್ಲಿ ಭಾರೀ ಮಳೆಯಿಂದ ಹಿಡಿದು ಅತಿಭಾರೀ ಮಳೆಯವರೆಗೆ ಸಂಭವಿಸುವ ಸಾಧ್ಯತೆಯಿದೆ” ಎಂದು ತಿಳಿಸಿದೆ.
ಕರಾವಳಿ ಕರ್ನಾಟಕ, ಕೇರಳ ಮತ್ತು ಮಾಹೆ, ಕೊಂಕಣ ಮತ್ತು ಗೋವಾ ಹಾಗೂ ಲಕ್ಷದ್ವೀಪದ ಕೆಲವು ಕಡೆಗಳಲ್ಲಿ ಬಲವಾದ ಗಾಳಿಯ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ
ಮುಂದಿನ 3 ದಿನಗಳವರೆಗೆ ಮೋಡ, ಸಾಪೇಕ್ಷ ಆರ್ದ್ರತೆ, ಮಳೆ, ತಾಪಮಾನ ಮತ್ತು ಗಾಳಿಯ ಧಿಕ್ಕು ಹಾಗೂ ವೇಗದಂತಹ ಗ್ರಾಮ ಪಂಚಾಯತ್ ಮಟ್ಟದ ಮುನ್ಸೂಚನೆ.
ಮುಂದಿನ 3 ದಿನಗಳವರೆಗೆ ಮೋಡ, ಸಾಪೇಕ್ಷ ಆರ್ದ್ರತೆ, ಮಳೆ, ತಾಪಮಾನ ಮತ್ತು ಗಾಳಿಯ ಧಿಕ್ಕು ಹಾಗೂ ವೇಗದಂತಹ ಗ್ರಾಮ ಪಂಚಾಯತ್ ಮಟ್ಟದ ಮುನ್ಸೂಚನೆ.
Gram Panchayat level Forecast -Cloudiness, Relative Humidity, Rainfall, Temperature & Wind speed & direction for the next 3 days. #ksndmc pic.twitter.com/yFVENjafx8— Karnataka State Natural Disaster Monitoring Centre (@KarnatakaSNDMC) May 20, 2025
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೇ 21 ರಂದು ಬೆಂಗಳೂರು ನಗರದಾದ್ಯಂತ ಪರಿಶೀಲನೆ ನಡೆಸಲಿದ್ದಾರೆ.
ಸಿದ್ದರಾಮಯ್ಯ ಅವರು, ಸೋಮವಾರ ಬೆಂಗಳೂರಿನಲ್ಲಿ 104 ಮಿ.ಮೀ. ಮಳೆಯಾಗಿದ್ದು, ಇದು ನಿರೀಕ್ಷೆಗಿಂತ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
Rain Update: ಬೆಂಗಳೂರಲ್ಲಿ ನಿಲ್ಲದ ವರುಣನ ಆರ್ಭಟ :
>>ಬೆಂಗಳೂರು ನಗರದಲ್ಲಿ ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರು ಮತ್ತು ದಿನನಿತ್ಯ ಕೆಲಸಕ್ಕೆ ಹೋಗುವ ಸಾರ್ವಜನಿಕರಿಗೆ ತೊಂದರೆಯುಂಟಾಗಿದೆ..
>>ಸಾಯಿ ಲೇಔಟ್ ನಿವಾಸಿಗಳಿಗೆ ಮೂರನೇ ದಿನವೂ ಜಲದಿಗ್ಬಂಧನ
Heavy Rain: ಬೆಂಗಳೂರಿನಲ್ಲಿ ಭಾರೀ ಮಳೆ; ನಗರ ಮೂಲಸೌಕರ್ಯ ಕುರಿತು ಸರ್ಕಾರದ ವಿರುದ್ಧ ವಿರೋಧ
ಸೋಮವಾರ ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದ ಅಸಾಮಾನ್ಯ ಭಾರೀ ಮಳೆಯು ದೇಶದ ಐಟಿ ರಾಜಧಾನಿಯನ್ನು ನೆಲಕಚ್ಚುವಂತೆ ಮಾಡಿತು, ಮಳೆಗಾಲದ ದೃಶ್ಯಗಳು ಪ್ರವಾಹಕ್ಕೆ ಸಿಲುಕಿದವು..
Bengaluru Rain Live: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ನಲ್ಲಿ ನೀರು
>>ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ನಲ್ಲಿ ನೀರು ನಿಂತಿರುವ ಬಗ್ಗೆ ವರದಿಯಾಗಿದೆ.
>>ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ನಿಂದ ಸಿಲ್ಕ್ ಬೋರ್ಡ್ ಕಡೆಗೆ ಹೋಗುವ ರಸ್ತೆಯಲ್ಲಿ ವಾಹನ ಸಂಚಾರ ನಿಧಾನವಾಗಿ ಚಲಿಸುತ್ತಿದೆ.
>> ಮಳೆಯಿಂದಾಗಿ ಅಂಡರ್ಪಾಸ್ ನೀರಿನಿಂದ ತುಂಬಿದೆ.
>>ಹೊಸೂರು ಮುಖ್ಯ ರಸ್ತೆಯಲ್ಲಿ ಎರಡೂ ದಿಕ್ಕುಗಳಲ್ಲಿ - ನಗರದ ಕಡೆಗೆ ಸಂಚಾರ ನಿಧಾನವಾಗಿದೆ.
>>ವಾಹನ ಚಾಲಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ.
Bengaluru Rain Live: ವಾಹನ ಸವಾರರು ಪರದಾಟ
>>ಮಡಿವಾಳ ಅಂಡರ್ ಪಾಸ್ ನಲ್ಲಿ ನೀರು
>>ವಾಹನ ಸವಾರರು ಪರದಾಟ
Karnataka Rain LIVE Updates: ಮಳೆ ಸಂಬಂಧಿತ ಸಾವಿನ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ
>> ಕಳೆದ 36 ಗಂಟೆಗಳಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆ
>> ಮಂಗಳವಾರವೂ ಜನಜೀವನ ಅಸ್ತವ್ಯಸ್ತಗೊಂಡಿದೆ
>> ನೀರಿನಲ್ಲಿ ಜನರು ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ
>> ಹಲವೆಡೆ ಸಂಚಾರ ದಟ್ಟಣೆ ಉಂಟಾಗಿದೆ ಎಂದು ವರದಿಯಾಗಿದೆ
>> ರಾಜ್ಯದಲ್ಲಿ ಮಳೆ ಸಂಬಂಧಿತ ಸಾವುನೋವುಗಳ ಸಂಖ್ಯೆ ಐದಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Karnataka Rain LIVE Updates: ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ
>> ರಾಜ್ಯ ರಾಜಧಾನಿಯಲ್ಲಿ ಧಾರಾಕಾರ ಮಳೆಯಾಗಿದ್ದರಿಂದ ನಿನ್ನೆ ನಗರದಲ್ಲಿ 104 ಮಿಮೀ ಮಳೆಯಾಗಿದೆ
>> ನಿರೀಕ್ಷೆಗಿಂತ ಹೆಚ್ಚಿನ ಮಳೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
>> ಬೆಂಗಳೂರಿನ ಹಲವಾರು ಭಾಗಗಳಲ್ಲಿ ಭಾನುವಾರ ಭಾರೀ ಮಳೆಯಾಗಿದೆ
>> ವಸತಿ ಪ್ರದೇಶಗಳಲ್ಲಿ ತೀವ್ರ ಜಲಾವೃತ ಮತ್ತು ಪ್ರವಾಹ ಉಂಟಾಗಿದೆ
Bengaluru Rain LIVE Updates: ಭಾನುವಾರ ರಾತ್ರಿ ಸರಾಸರಿ 10.5 ಸೆಂ.ಮೀ ಮಳೆ
>> ಮುಂಗಾರು ಇನ್ನೂ ಪ್ರಾರಂಭವಾಗಿಲ್ಲ, ಆದರೆ ಈಗಾಗಲೇ ಮಳೆ ಬೆಂಗಳೂರಿನ ಆಡಳಿತಾಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
>> ಭಾನುವಾರ ರಾತ್ರಿ ಸರಾಸರಿ 10.5 ಸೆಂ.ಮೀ ಮಳೆಯಾಗಿದ್ದು, ಅನೇಕ ಕಡೆಗಳಲ್ಲಿ ಜನರು ನೀರಿನಲ್ಲಿ ಸಿಲುಕಿದ್ದಾರೆ.
>> ರಕ್ಷಣೆಗೆ ನಗರ ಆಡಳಿತ ಅಗತ್ಯ ಸಾಮಗ್ರಿಗಳೊಂದಿಗೆ ತಂಡಗಳನ್ನು ನಿಯೋಜಿಸಿದೆ
Bengaluru Rain LIVE Updates: ರಣಮಳೆಗೆ ಮುಳುಗಿದ ರಾಜಧಾನಿ ಬೆಂಗಳೂರು
>> ಕಳೆದ ಮೂರು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ವರುಣ
>> ಇಂದು ಬೆಳ್ಳಂ ಬೆಳಗ್ಗೆಯೇ ವರುಣ ಮತ್ತೆ ಶುರುವಾದ ಮಳೆ
>> ನಗರದ ಹೊರ ವಲಯದಲ್ಲಿ ಸುರಿಯುತ್ತಿರುವ ಮಳೆ
>> ಚಂದಾಪುರ, ಹೊಸೂರ್ ರೋಡ್ ನಲ್ಲಿ ಭೀಕರ ಮಳೆ
>> ನಿನ್ನೆ ಸುರಿದ ಮಳೆಗೆ ವಾಹನ ಸವಾರರು ಪರದಾಟ
>> ನದಿಯಂತಾದ ರಸ್ತೆಗಳಲ್ಲಿ ನಿಂತಲ್ಲೇ ನಿಂತ ವಾಹನಗಳು
>> ಟಿಟಿ ವಾಹನದಲ್ಲಿದ್ದ ಪ್ರಯಾಣಿಕರು ನೀರಲ್ಲೇ ಸಂಚಾರ
>> ಡೇಂಜರ್ ಅಂತ ಗೊತ್ತಾಗಿ ನಿಂತ ನೀರಲ್ಲೇ ನಡೆದು ಹೋದ ಪ್ರಯಾಣಿಕರು
>> ಮೂರು ಅಡಿಗೂ ಎತ್ತರಕ್ಕೆ ನಿಂತ ನೀರಲ್ಲೇ ಬೇರೆಡೆಗೆ ಶಿಫ್ಟ್
Bengaluru Break 115 Year Record: ಬೆಂಗಳೂರು 115 ವರ್ಷಗಳ ದಾಖಲೆಯನ್ನು ಮುರಿಯುವುದೇ?
>> ಭಾರತ ಹವಾಮಾನ ಇಲಾಖೆಯ (ಐಎಂಡಿ) ಮಾಹಿತಿ
>> ಮೇ 19 ರಂದು ಬೆಳಿಗ್ಗೆ 8.30 ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಬೆಂಗಳೂರು ನಗರದಲ್ಲಿ 105.5 ಮಿ.ಮೀ ಮಳೆಯಾಗಿದೆ.
>> ಈ ತಿಂಗಳಲ್ಲಿ ಇಲ್ಲಿ ಕೊನೆಯ ಬಾರಿಗೆ ಇಷ್ಟು ಭಾರೀ ಮಳೆಯಾಗಿದ್ದು ಮೇ 18, 2022 ರಂದು.
>> ಪ್ರಾಸಂಗಿಕವಾಗಿ, ಮೇ ತಿಂಗಳ ಸಾರ್ವಕಾಲಿಕ ದಾಖಲೆ 153.9 ಮಿ.ಮೀ ಆಗಿದೆ.
>> ಮೇ 6, 1909 ರಂದು ಈ ಮಟ್ಟದ ಮಳೆ ದಾಖಲಾಗಿತ್ತು
Bengaluru Rain LIVE Updates: ಬೆಂಗಳೂರಿನಲ್ಲಿ ಹಲವು ರಸ್ತೆಗಳು ಬಂದ್
>> ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ ಮೊಣಕಾಲು ಆಳದ ನೀರು ನಿಂತಿದೆ
>> ವಾಹನಗಳ ಸವಾರರು ಪರದಾಡುವಂತಾಗಿದೆ
Karnataka Rain Updates Live: ಐದು ಜಿಲ್ಲೆಗಳಲ್ಲಿ ಯಲ್ಲೋ ಆಲರ್ಟ್
>> ಐದು ಜಿಲ್ಲೆಗಳಲ್ಲಿ ಯಲ್ಲೋ ಆಲರ್ಟ್
>> ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆಯ ಮುಸ್ಸೂಚನೆ
>> ಹವಾಮಾನ ಇಲಾಖೆಯಿಂದ ಭಾರೀ ಮಳೆಯ ಎಚ್ಚರಿಕೆ..
>> ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಧಾರವಾಡ ಜಿಲ್ಲೆಗಳಲ್ಲಿ ಮಳೆಯ ಎಚ್ಚರಿಕೆ
Bengaluru Rain Live Updates: ಬುಧವಾರ ಸಿಎಂ ಸಿದ್ದರಾಮಯ್ಯ ಬೆಂಗಳೂರು ರೌಂಡ್ಸ್- ಡಿ.ಕೆ.ಶಿವಕುಮಾರ್
ಬೆಂಗಳೂರು ನಗರದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ಕುರಿತು ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್, ʼಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಸಿಎಂ ಸಿದ್ದರಾಮಯ್ಯರ ಜೊತೆಗೆ ನಾನು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದು, ಅಗತ್ಯ ಕ್ರಮಗಳನ್ನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. 210ಕ್ಕೂ ಹೆಚ್ಚು ಪ್ರಮುಖ ಪ್ರದೇಶಗಳನ್ನ ತೆರವುಗೊಳಿಸಬೇಕಾಗಿದೆ. ನಾನು ಬೆಂಗಳೂರು ನಗರ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ, ಸುಮಾರು 162 ಸ್ಥಳಗಳನ್ನು ತೆರವುಗೊಳಿಸಿದ್ದೇವೆ. ಆದರೆ 42 ಸ್ಥಳಗಳು ಇನ್ನೂ ಉಳಿದಿವೆ... ಬೆಂಗಳೂರಿನ ಕಾಳಜಿ ಮತ್ತು ಪ್ರಾಮುಖ್ಯತೆ ನಮಗೆ ತಿಳಿದಿದೆ. ನಾವು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ಎಲ್ಲಾ ತಂಡಗಳನ್ನು ನಿಯೋಜಿಸಲಾಗಿದೆ... ಬುಧವಾರ ಕೂಡ ಸಿಎಂ ಸಿದ್ದರಾಮಯ್ಯನವರು ಕೆಲವು ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ... ಬೆಂಗಳೂರು ಯೋಜಿತ ನಗರವಲ್ಲದಿದ್ದರೂ, ನಾವು ನಮ್ಮ ಕೆಲಸವನ್ನು ಮಾಡಬೇಕು ಅದನ್ನ ನಾವು ಮಾಡುತ್ತೇವೆ. ನಾವು ಪರಿಶೀಲನಾ ಸಭೆ ನಡೆಸಿದ್ದು, ಕ್ರಿಯಾ ಯೋಜನೆಯನ್ನು ನೀಡಿದ್ದೇವೆ. ಅದನ್ನು ಕಾರ್ಯಗತಗೊಳಿಸಲಾಗುವುದು ಎಂದು ಡಿಕೆಶಿ ತಿಳಿಸಿದ್ದಾರೆ.
#WATCH | Bengaluru: On meeting with BBMP officials regarding rain-affected areas in the city, Karnataka DCM DK Shivakumar says, "We are getting good rains... We have more than 210 important points that have to be cleared. After I took over as the Bengaluru city minister, we… pic.twitter.com/gL4eY8dOTv
— ANI (@ANI) May 19, 2025
Bengaluru Rain Live Updates: ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ- ಸಿಎಂ ಸಿದ್ದರಾಮಯ್ಯ
ಬೆಂಗಳೂರಿನಲ್ಲಿ ಭಾನುವಾರ ಮತ್ತು ಸೋಮವಾರ ಭಾರೀ ಮಳೆಯಿಂದ ಕೆಲವು ಪ್ರದೇಶಗಳಲ್ಲಿ ಸಮಸ್ಯೆಯುಂಟಾಗಿದೆ. ನಿರೀಕ್ಷೆಗಿಂತ ಹೆಚ್ಚಿನ ಮಳೆಯಾಗಿದ್ದು, 104 ಮಿಮೀ ಮಳೆ ದಾಖಲಾಗಿದೆ. ಮೇ 21ರಂದು ಡಿ.ಕೆ.ಶಿವಕುಮಾರ್ ಮತ್ತು ನಾನು ಬೆಂಗಳೂರಿನ ಎಲ್ಲಾ ಶಾಸಕರೊಂದಿಗೆ ದಿನವಿಡೀ ನಗರವನ್ನು ಸುತ್ತುತ್ತೇವೆ.. ಭಾನುವಾರ ಮಳೆಯಿಂದ ಗೋಡೆ ಕುಸಿದು ಒಬ್ಬರು ಸಾವನ್ನಪ್ಪಿದ್ದಾರೆ. ಅವರ ಕುಟುಂಬಕ್ಕೆ ನಾವು 5 ಲಕ್ಷ ರೂ. ಪರಿಹಾರ ನೀಡುತ್ತೇವೆ" ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Bengaluru: Karnataka CM Siddaramaiah says, "It rained yesterday. The rainfall was more than expected. 104 mm of rain was recorded...On 21st May, D.K. Shivakumar and I will go around the city throughout the day, along with all the MLAs of Bengaluru...Today, one person died due to… pic.twitter.com/lZ0Ru2ZDTj
— ANI (@ANI) May 19, 2025
Bengaluru Rain Live Updates: ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ
ಧಾರಕಾರ ಮಳೆಯಿಂದ ಬೆಂಗಳೂರಿನಲ್ಲಿ ಆಗಿರುವ ಅನಾಹುತಗಳ ಬಗ್ಗೆ ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಅವರಿಂದ ಬಿಬಿಎಂಪಿ ವಾರ್ ರೂಮ್ನಲ್ಲಿ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯನವರು, ಪರಿಹಾರೋಪಾಯಗಳ ಬಗ್ಗೆ ಸಲಹೆ, ಸೂಚನೆ ನೀಡಿದ್ದಾರೆ. ಇದೇ ವೇಳೆ ಹಾನಿಗೆ ಒಳಗಾಗಿರುವ ಪ್ರದೇಶಗಳ ಅಧಿಕಾರಿಗಳಿಗೆ ಅಗತ್ಯ ಕ್ರಮಗಳನ್ನು ಸರೋಪಾದಿಯಲ್ಲಿ ಕೈಗೊಳ್ಳುವಂತೆ ಕರೆಮಾಡಿ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಿಎಂ ಸಿದ್ದರಾಮಯ್ಯರ ಜೊತೆಗೆ ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ. ಜಾರ್ಜ್, ಶಾಸಕರಾದ ಎನ್.ಎ.ಹ್ಯಾರಿಸ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜ್, ನಜೀರ್ ಅಹ್ಮದ್, ಪರಿಷತ್ ಸದಸ್ಯರಾದ ಸೀತಾರಾಮ್, ಸುಧಾಮ್ದಾಸ್, ಸರ್ಕಾರದ ಮುಖ್ಯಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಧಾರಕಾರ ಮಳೆಯಿಂದ ಬೆಂಗಳೂರಿನಲ್ಲಿ ಆಗಿರುವ ಅನಾಹುತಗಳ ಬಗ್ಗೆ ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ ಅವರಿಂದ ಬಿಬಿಎಂಪಿ ವಾರ್ ರೂಮ್ನಲ್ಲಿ ಮಾಹಿತಿ ಪಡೆದು, ಪರಿಹಾರೋಪಾಯಗಳ ಬಗ್ಗೆ ಸಲಹೆ, ಸೂಚನೆ ನೀಡಿದೆ.
ಇದೇ ವೇಳೆ ಹಾನಿಗೆ ಒಳಗಾಗಿರುವ ಪ್ರದೇಶಗಳ ಅಧಿಕಾರಿಗಳಿಗೆ ಅಗತ್ಯ ಕ್ರಮಗಳನ್ನು ಸರೋಪಾದಿಯಲ್ಲಿ ಕೈಗೊಳ್ಳುವಂತೆ ಕರೆಮಾಡಿ ಸೂಚನೆ… pic.twitter.com/aAdBWuOmxn— Siddaramaiah (@siddaramaiah) May 19, 2025
Bengaluru Rain Live Updates: ಗುಡುಗು, ಸಿಡಿಲು ಸಹಿತ ಭಾರೀ ಮಳೆ ಸಾಧ್ಯತೆ!!
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಗುಡುಗು, ಸಿಡಿಲು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಬಳ್ಳಾರಿ, ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ಗದಗ, ಕೊಪ್ಪಳ, ವಿಜಯಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
Bengaluru Rain Live Updates: ಯೆಲ್ಲೋ ಅಲರ್ಟ್ & ರೆಡ್ ಅಲರ್ಟ್ ಘೋಷಣೆ!!
ರಾಜ್ಯದಲ್ಲಿ ಮುಂದಿನ ಒಂದು ವಾರ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಹಾಗೂ ಕರಾವಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಿನಲ್ಲಿ ಇನ್ನೂ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ ಮತ್ತು ಮಂಗಳವಾರ (ಮೇ 20) ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಿಗೆ ಇಂದಿನಿಂದ ಮೂರು ದಿನಗಳ ಕಾಲ ರೆಡ್ ಅಲರ್ಟ್, ನಂತರದ ನಾಲ್ಕು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದಲ್ಲದೇ ಉತ್ತರ ಮತ್ತು ದಕ್ಷಿಣ ಒಳನಾಡಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
Bengaluru Rain Live Updates: ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ: ಸಿ.ಟಿ.ರವಿ
ಭಾರೀ ಮಳೆಯಿಂದ ಬೆಂಗಳೂರಿನ ಹಲವೆಡೆ ನಾನಾ ಅವಾಂತರಗಳಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಬೇಸರ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ʼರಾಜ್ಯ-ದೇಶದ ಬೊಕ್ಕಸಕ್ಕೆ ಬೆಂಗಳೂರಿಗರಿಂದ ದೊಡ್ಡ ಪ್ರಮಾಣದ ಹಣ ಬರುತ್ತದೆ. ಆದರೆ ಬೆಂಗಳೂರಿಗರ ಬದುಕನ್ನ ನಾವು ಮುಳುಗಿಸುತ್ತಿದ್ದೇವೆ. ಕೆಂಪೇಗೌಡರ ಕಾಲ ಹಾಗೂ ಮದ್ಯದಲ್ಲಿ ಪ್ಲ್ಯಾನ್ಡ್ ಬೆಂಗಳೂರು ಇತ್ತು. ಈಗ ಅನ್ಪ್ಲ್ಯಾನ್ಡ್ ಬೆಂಗಳೂರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Bengaluru Rain Live Updates: ಹೆಚ್ಚು ಮಳೆ ಬಂದಷ್ಟು ಒಳ್ಳೆಯದು- ಡಿ.ಕೆ.ಶಿವಕುಮಾರ್
ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದು, ʼಹೆಚ್ಚು ಮಳೆ ಬಂದಷ್ಟು ಒಳ್ಳೆಯದು. ಆಣೆಕಟ್ಟು ತುಂಬುತ್ತವೆ, ರೈತರಿಗೆ ಅನುಕೂಲವಾಗಲಿಗೆ, ವಿದ್ಯುತ್ ಉತ್ಪಾದನೆಯೂ ಹೆಚ್ಚಾಗಲಿದೆ, ಸರ್ಕಾರಕ್ಕೂ ಲಾಭವಾಗಲಿದೆ. ಭಾನುವಾರ ರಾತ್ರಿ ಸುರಿದ ಮಳೆಯಿಂದ ಗೋಡೆ ಕುಸಿದು ಒಂದು ಸಾವಾಗಿದೆ ಎಂದು ಮಾಹಿತಿ ಬಂದಿದೆ. ಉಳಿದಂತೆ ಯಾವುದೇ ಅವಘಡ ಸಂಭವಿಸಿಲ್ಲ. ನಮ್ಮ ಅಧಿಕಾರಿಗಳು ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಕೆಲವು ತಗ್ಗು ಪ್ರದೇಶಗಳಲ್ಲಿ ಮನೆ ಕಟ್ಟಿಕೊಂಡಿರುವ ಜಾಗದಲ್ಲಿ ನೀರು ನುಗ್ಗಿದೆ. ಮಳೆ ಹಾನಿ ಪ್ರದೇಶಕ್ಕೆ ನಾನು ಮುಖ್ಯಮಂತ್ರಿಗಳು ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಹೆಚ್ಚು ಮಳೆ ಬಂದಷ್ಟು ಒಳ್ಳೆಯದು. ಆಣೆಕಟ್ಟು ತುಂಬುತ್ತವೆ, ರೈತರಿಗೆ ಅನುಕೂಲವಾಗಲಿಗೆ, ವಿದ್ಯುತ್ ಉತ್ಪಾದನೆಯೂ ಹೆಚ್ಚಾಗಲಿದೆ, ಸರ್ಕಾರಕ್ಕೂ ಲಾಭವಾಗಲಿದೆ.
ಭಾನುವಾರ ರಾತ್ರಿ ಸುರಿದ ಮಳೆಯಿಂದ ಗೋಡೆ ಕುಸಿದು ಒಂದು ಸಾವಾಗಿದೆ ಎಂದು ಮಾಹಿತಿ ಬಂದಿದೆ. ಉಳಿದಂತೆ ಯಾವುದೇ ಅವಘಡ ಸಂಭವಿಸಿಲ್ಲ. ನಮ್ಮ ಅಧಿಕಾರಿಗಳು ಪರಿಸ್ಥಿತಿಯನ್ನು… pic.twitter.com/qRs42vcwAx
— Karnataka Congress (@INCKarnataka) May 19, 2025
Bengaluru Rain Live Updates: ಕೆರೆಯಂತಾದ ಕೆ.ಆರ್.ಮಾರ್ಕೆಟ್ ರಸ್ತೆ!
ಭಾರೀ ಮಳೆಯಿಂದ ಬೆಂಗಳೂರಿನ ಪ್ರಸಿದ್ಧ ಕೆ.ಆರ್.ಮಾರ್ಕೆಟ್ ರಸ್ತೆ ಕೆರೆಯಂತಾಗಿದೆ. ಮಾರುಕಟ್ಟೆಯಿಂದ ಕಾರ್ಪೋರೇಷನ್ ಕಡೆ ಬರುವ ರಸ್ತೆಯಲ್ಲಿ ಅರ್ಧ ಅಡಿಯಷ್ಟು ನೀರು ನಿಂತಿದೆ. ಹೀಗಾಗಿ ಬೈಕ್ ಸವಾರರು, ಆಟೋ ಚಾಲಕರು ಸೇರಿದಂತೆ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
Bengaluru Rain Live Updates: KSRTC ಬಸ್ ಮೇಲೆ ಉರುಳಿ ಬಿದ್ದ ಮರ!
ಸೋಮವಾರ ಸುರಿದ ಭಾರೀ ಮಳೆಯಿಂದ ಬೆಂಗಳೂರಿನ ಹಲವು ಪ್ರದೇಶದಗಳಲ್ಲಿ ಅವಾಂತರ ಸೃಷ್ಟಿಯಾಗಿದ್ದು, ಕೆಲವೆಡೆ ರಸ್ತೆಗಳು ಜಲಾವೃತಗೊಂಡಿವೆ. ಅರಮನೆ ಮೈದಾನದ ಮುಂಭಾಗದ ರಸ್ತೆಯ ಪ್ಯಾಲೆಸ್ ಗುಟ್ಟಹಳ್ಳಿ ಬಳಿ ದೊಡ್ಡಬಳ್ಳಾಪುರ-ಬೆಂಗಳೂರು ಮಾರ್ಗವಾಗಿ ಸಂಚರಿಸುತ್ತಿದ್ದ KSRTC ಬಸ್ ಮೇಲೆ ಮರವೊಂದು ಉರುಳಿ ಬಿದ್ದಿದೆ. ಆದರೆ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪಾರಾಗಿದ್ದಾರೆ.
Bengaluru Rain Live Updates: ವರುಣನ ಆರ್ಭಟಕ್ಕೆ ವಾಹನ ಸವಾರರ ಪರದಾಟ!!
ಸೋಮವಾರ ಮಧ್ಯಾಹ್ನದಿಂದಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರುಣನ ಆರ್ಭಟ ಜೋರಾಗಿದ್ದು, ಕೇಂದ್ರ ಭಾಗ ಸೇರಿದಂತೆ ನಗರದ ಹಲವೆಡೆ ಮಳೆರಾಯ ಅಬ್ಬರಿಸುತ್ತಿದ್ದಾನೆ. ನಗರದ ಮೇಖ್ರಿ ಸರ್ಕಲ್, ಸದಾಶಿವನಗರ, ಶಿವಾಜಿನಗರ, ವಸಂತನಗರ, ಹೈಗ್ರೌಂಡ್ಸ್, ವಿಧಾನಸೌಧ, ಸೆಂಟ್ರಲ್ ಸಿಲ್ಕ್ ಬೋರ್ಡ್, ಚಾಮರಾಜಪೇಟೆ, ಕೆ.ಆರ್.ಮಾರ್ಕೆಟ್, ಮೆಜೆಸ್ಟಿಕ್, ಮೈಸೂರು ರೋಡ್, ವಿಜಯನಗರ, ರಾಜಾಜಿನಗರ, ಮಲ್ಲೇಶ್ವರಂ, ಮಹಾಲಕ್ಷ್ಮಿ ಲೇಔಟ್, ಶೇಷಾದ್ರಿಪುರಂ, ಚಿಕ್ಕಪೇಟೆ, ಅರಮನೆ ಮೈದಾನ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
Bengaluru Rain Live Updates: ಸಿಎಂ, ಡಿಸಿಎಂಗೆ ತುಷಾರ್ ಗಿರಿನಾಥ್ರಿಂದ ಮಾಹಿತಿ
* ಬೆಂಗಳೂರಿನಪ್ರತಿಯೊಂದು ವಾರ್ಡ್ನಲ್ಲಿ ಆಗ್ತಿರುವ ಮಳೆ ಬಗ್ಗೆ ಮಾಹಿತಿ
* ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್ ಗಿರಿನಾಥ್ರಿಂದ ಮಾಹಿತಿ
* ಎಲ್ಲೆಲ್ಲಿ ಮಳೆ ಆಗಿದೆ, ಎಷ್ಟು ಮಿ.ಮೀ ಮಳೆ ಆಗಿದೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತಿರುವ ತುಷಾರ್ ಗಿರಿನಾಥ್
* ಸಿಎಂ ಮತ್ತು ಡಿಸಿಎಂಗೆ ಅನಾಹುತ ಆಗಿರುವ ಪ್ರದೇಶಗಳ ಬಗ್ಗೆ ಮಾಹಿತಿ
* ಇಂಟಿಗ್ರೇಟೆಡ್ ಕಮಾಂಡ್ & ಕಂಟ್ರೋಲ್ ಸೆಂಟರ್ನಿಂದ ವೀಕ್ಷಣೆ
* ವಾರ್ ರೂಂಗೆ ಆಗಿಮಿಸಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಮತ್ತು ಶಾಸಕ ಮುನಿರತ್ನ
Bengaluru Rain Live Updates: ಬಿಬಿಎಂಪಿ ವಾರ್ ರೂಂಗೆ ಸಿಎಂ, ಡಿಸಿಎಂ ಆಗಮನ
* ಬಿಬಿಎಂಪಿ ವಾರ್ ರೂಂಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್
* ಬಿಎಂಟಿಸಿ ಬಸ್ನಲ್ಲೇ ಪ್ರಯಾಣ ಬೆಳೆಸಿ ಆಗಮಿಸಿದ ಸಿಎಂ ಮತ್ತು ಡಿಸಿಎಂ
* ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರಿಗೆ ಕೈ ಬೀಸಿದ ಸಿಎಂ ಸಿದ್ದರಾಮಯ್ಯ
* ಬಿಬಿಎಂಪಿಯ ಅನೆಕ್ಸ್ 3 ಕಟ್ಟಡಲ್ಲಿರುವ ವಾರ್ ರೂಂ
* ಕಟ್ಟಡದ ಆರನೇ ಮಹಡಿಯಲ್ಲಿರುವ ವಾರ್ ರೂಂನಲ್ಲಿ ವೀಕ್ಷಣೆ
* ನಗರದ ಮಳೆ ಹಾನಿ ಪ್ರದೇಶಗಳ ಪರಿಶೀಲನೆ ನಡೆಸಿದ ಸಿಎಂ, ಡಿಸಿಎಂ
* ಪ್ರತಿಯೊಂದು ವಾರ್ಡ್ ಮಟ್ಟದಲ್ಲಿರುವ ಅಧಿಕಾರಿಗಳಿಂದಲೇ ಮಾಹಿತಿ ಪಡೆಯುತ್ತಿರುವ ಸಿಎಂ ಮತ್ತು ಡಿಸಿಎಂ
Bengaluru Rains: 24 ಗಂಟೆಗಳಲ್ಲಿ 103 ಮೀ.ಮೀ ದಾಖಲೆಯ ಮಳೆ
ಸೋಮವಾರ ಸುರಿದ ಧಾರಕಾರ ಮಳೆಯಿಂದಾಗಿ ಬೆಂಗಳೂರು ನಗರದ ಹಲವು ಭಾಗಗಳು ಜಲಾವೃತ್ತಗೊಂಡಿದ್ದು, ರಸ್ತೆಗಳಲ್ಲಿ ನೀರು ನಿಂತು ಸವಾರರು ಪರದಾಡುವಂತಾಗಿದೆ.. ಜನ ವಸತಿ ಪ್ರದೇಶಗಳು ಸಹ ಜಲಾವೃತಗೊಂಡಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.
Karnataka Rains: ಬೆಂಗಳೂರಿಗೆ ಇನ್ನೂ 2 ದಿನ ಭಾರೀ ಮಳೆ
>>ಕರಾವಳಿ ಸೇರಿ 6 ಜಿಲ್ಲೆಗೆ ರೆಡ್ ಅಲರ್ಟ್
>>17 ಜಿಲ್ಲೆಗಳಲ್ಲೂ ವಾಯುಭಾರ ಕುಸಿತದ ಭಾರಿ ಮಳೆ
Rain Update Live: ಬೆಂಗಳೂರಿನಲ್ಲಿ ಮತ್ತೆ ಶುರುವಾಯ್ತು ವರುಣಾರ್ಭಟ
ಬೆಂಗಳೂರಿನಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗಿದ್ದು, ಮೆಜೆಸ್ಟಿಕ್, ಕಾರ್ಪೊರೇಷನ್ ಸರ್ಕಲ್, ಕೆ.ಆರ್ಮಾರ್ಕೆಟ್ ಕಡೆ ಧಾರಾಕಾರವಾಗಿ ಸುರಿಯುತ್ತಿದೆ.. ನಿನ್ನೆ ರಾತ್ರಿ ಭೀಕರ ಮಳೆ ಬೆನ್ನಲ್ಲೆ ಮತ್ತೆ ಮಳೆಕಾಟ ಪ್ರಾರಂಭವಾಗಿದ್ದು, ಸಂಜೆ ಬಳಿಕ ಇನ್ನಷ್ಟು ಮಳೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ..
Bengaluru Rain Live Updates: ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಭೇಟಿ
>>ಬೆಂಗಳೂರಿನ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಭೇಟಿ
>> ಇಂದು ಸಂಜೆ 4 ಗಂಟೆಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ.
Bengaluru Rain HD Kumaraswamy statement Live : ಕಾಂಗ್ರೆಸ್ ಸರ್ಕಾರದ ಮೇಲೆ ಕುಮಾರಸ್ವಾಮಿ ವಾಗ್ದಾಳಿ
>>ಭಾರೀ ಮಳೆಯಾದಾಗ ಗ್ರೇಟರ್ ಬೆಂಗಳೂರು ಮುಳುಗುತ್ತದೆ ಮತ್ತು ಲಘು ಮಳೆಯಾದಾಗ ತೇಲುತ್ತದೆ
>>ಮೂಲಸೌಕರ್ಯಗಳನ್ನು ಸರಿಪಡಿಸುವಲ್ಲಿ ಆಡಳಿತಾರೂಢ ಕಾಂಗ್ರೆಸ್ ವಿಫಲವಾಗಿದೆ
>>ಗುಂಡಿಗಳು, ತೆರೆದ ಚರಂಡಿಗಳು ಮತ್ತು ಪದೇ ಪದೇ ಪ್ರವಾಹ ಇದೆಲ್ಲ ದುರಾಡಳಿತದ ಪುರಾವೆ
>>ಮಳೆ ಪರಿಸ್ಥಿತಿ ಎದುರಿಸಲು ಸರ್ಕಾರ ಸಿದ್ಧವಾಗದೇ ಇರುವುದರ ಸೂಚಕವಾಗಿದೆ
>>ಕಾಂಗ್ರೆಸ್ ಸರ್ಕಾರದ ಮೇಲೆ ಕುಮಾರಸ್ವಾಮಿ ವಾಗ್ದಾಳಿ
Bengaluru Rain Live :ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಜಲಾವೃತ
>>ಬೆಂಗಳೂರಿನಲ್ಲಿ ಸತತ ಸುರಿದ ಮಳೆ
>>ನೆಲಮಂಗಲ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಜಲಾವೃತ
>>ಹೆದ್ದಾರಿ ಅಂಡರ್ಪಾಸ್ಗೆ ಮಳೆ ನೀರು ನುಗ್ಗಿ ರಸ್ತೆ ಜಲಾವೃತಗೊಂಡಿದೆ
>>ನೆಲಮಂಗಲ ಬಳಿಯ ಅಡಕಮಾರನಹಳ್ಳಿಯ ಜೈನ್ ಟೆಂಪಲ್ ಬಳಿ ರಸ್ತೆ ಜಲಾವೃತ
>>ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ
Chikkodi Rain Live News: ಚಿಕ್ಕೋಡಿಯಲ್ಲಿ ಬೆಳ್ಳಂಬೆಳಿಗ್ಗೆ ಮಳೆಯ ಅಬ್ಬರ
>>ಮಳೆಯ ಅಬ್ಬರಕ್ಕೆ ನದಿಯಂತಾದ ರಸ್ತೆಗಳು
>>ನಿಪ್ಪಾಣಿಯ ಹಲವೆಡೆ ಮಳೆರಾಯನ ಅಬ್ಬರ
>>ರಾಷ್ಟ್ರೀಯ ಹೆದ್ದಾರಿಯಲ್ಲಿ ಜಲಪಾತದಂತೆ ಹರಿದು ಬಂದ ಮಳೆ ನೀರು
>>ತವದಿ ಘಾಟ್ ನ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಜಲಪಾತದಂತೆ ಹರಿದು ಬಂದ ನೀರು
>>ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ತವದಿ ಘಾಟ್
>>ಪ್ಲೈಓವರ್ ಮೇಲಿಂದ ಜಲಪಾತದಂತೆ ದುಮ್ಮುಕ್ಕಿದ ನೀರು
>>ಮಳೆಯಿಂದ ವಾಹನ ಸವಾರರ ಪರದಾಟ
Mysuru Rain Updates Live : ಗಾಳಿ ಮಳೆಗೆ ಮುರಿದು ಬಿದ್ದ ಮರದ ಕೊಂಬೆ
>>ಮೈಸೂರಿನಲ್ಲಿ ಇಡೀ ರಾತ್ರಿ ಸುರಿದ ಜಿಟಿ ಜಿಟಿ ಮಳೆ
>>ಗಾಳಿ ಮಳೆಗೆ ಮುರಿದು ಬಿದ್ದ ಮರದ ಕೊಂಬೆ ವಿದ್ಯುತ್ ಕಂಬ
>>ಒಂದು ಕಾರು ಒಂದು ಬೈಕ್ ಜಖಂ
>>ಮೈಸೂರಿನ ಚಾಮರಾಜಪುರಂ ಏರ್ ಲೈನ್ಸ್ ಹೋಟೆಲ್ ಬಳಿ ಘಟನೆ
>>ಕಾರು ನಿಲ್ಲಿಸಿ ಹೋಗಿದ್ದ ಕಾರಣ ತಪ್ಪಿದ ಅನಾಹುತ
>>ಸ್ಥಳಕ್ಕೆ ಆಗಮಿಸಿದ ಪಾಲಿಕೆ ಸಿಬ್ಬಂದಿಯಿಂದ ಮರ ತೆರವು ಕಾರ್ಯಾಚರಣೆ
Tumkuru Rain Updates Live: ತುಮಕೂರಿನಲ್ಲಿ ಮುಂದುವರಿದ ಮಳೆ
>>ಜಿಲ್ಲೆಯಾದ್ಯಂತ ಇಂದು ಮುಂದುವರಿದ ಮಳೆ
>>ಬೆಳ್ಳಂ ಬೆಳಗ್ಗೆ ಆರಂಭವಾದ ಜಿಟಿ ಜಿಟಿ ಮಳೆ.
>>ತುಮಕೂರು ಜಿಲ್ಲೆಯಾದ್ಯಂತ ಜಿಡಿ ಮಳೆ.
>>ಜಿಟಿ ಜಿಟಿ ಮಳೆಯಿಂದ ನಗರ ನಿವಾಸಿಗಳು ಹೈರಾಣು.
>>ರೈತರ ಮೊಗದಲ್ಲಿ ಮಂದಹಾಸ ತರಿಸಿದ ಕೃತಿಕಾ ಮಳೆ.
>>ಜಿಲ್ಲೆಯಲ್ಲಿ ಗರಿಗೆದರಿದ ಮುಂಗಾರು ಕೃಷಿ ಚಟುವಟಿಕೆ.
>>ಭೂಮಿ ಹದವಾದ ತೇವಾಂಶದಿಂದ ಮುಂಗಾರು ಬಿತ್ತನೆ ಸಿದ್ದತೆ.
>>ಹೆಸರು ಕಾಳು ಬಿತ್ತನೆಗೆ ರೈತರ ಸಿದ್ದತೆ.
>>ಮಳೆಯಿಂದ ಕೆರೆ ಕುಂಟೆಯಲ್ಲಿ ನಿಂತಿರುವ ನೀರು.
Bengaluru Rain Live : ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ತುಂಬಿದ ಮಳೆನೀರು
>> ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಮಳೆ ನೀರು ತುಂಬಿಕೊಂಡಿದೆ. ಮಳೆಗೆ ಇಡೀ ರಸ್ತೆ ಜಲಾವೃತವಾಗಿದೆ.
>> ಸದ್ಯ ಜೆಸಿಬಿ ಮೂಲಕ ನೀರು ಹರಿಯಲು ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. ಬಿಬಿಎಂಪಿಯ ಸಿಬ್ಬಂದಿ ಮೂಲಕ ಕಾರ್ಯಾಚರಣೆ
ರಾಜಧಾನಿ ಬೆಂಗಳೂರಿನಲ್ಲಿ ಜಲ ಪ್ರಳಯ (Flooding in the capital city of Bengaluru):
ಸದಾಶಿವನಗರದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ:
ಮಳೆಯಿಂದ ಬೆಂಗಳೂರಿನಲ್ಲಿ ಬಹಳ ತೊಂದರೆ ಆಗಿದೆ. ಸಿಲ್ಕ್ ಬೋರ್ಡ್ ಬೇರೆ ಬೇರೆ ಕಡೆ ತುಂಬಾ ನೀರು ನುಗ್ಗಿದೆ. ಇದರಿಂದ ಟ್ರಾಫಿಕ್ಗೂ ತೊಂದರೆ ಆಗಿದೆ ಅಂತ ಹೇಳ್ತಿದ್ದಾರೆ. ಬಿಬಿಎಂಪಿಯವ್ರು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು. ವೈಟ್ ಟಾಪಿಂಗ್, ಕೇಬಲ್ ವೈರ್ ಕಾಮಗಾರಿ ನಡೆಯುತ್ತಿದೆ. ಮಳೆಗಾಲ ಹತ್ತಿರ ಬರ್ತಿದೆ ಅಂತ ಜಾಗೃತೆವಹಿಸಬೇಕಿತ್ತು. ಡಿಸಿಎಂ ಡಿಕೆಶಿಯವ್ರು ಹೊಸಪೇಟೆಯಲ್ಲಿದ್ದಾರೆ. ಅವರು ಸೂಚನೆ ಕೊಟ್ಟಿದ್ದಾರೆ ಅಂತ ಕೇಳಿದ್ದೇನೆ, ವಲಯವಾರು ಜಂಟಿ ಆಯುಕ್ತರು ಇರ್ತಾರೆ. ಮಳೆಗಾಲ ಬಂದಾಗ ಈ ರೀತಿ ಆಗುತ್ತೆ ಅಂತ ಮುನ್ನೆಚ್ಚರಿಕೆ ವಹಿಸಬೇಕಿತ್ತು. ಮೇ ಜೂನ್ಗೆ ಮಳೆಗಾಲ, ಲೋ ಲೈನಿಂಗ್ ಕಾಮಗಾರಿ ಹಮ್ಮಿಕೊಂಡ್ರೆ ಏನಾಗುತ್ತೆ ಅಂತ ಅನುಭವ ಇರಬೇಕು ಎಂದು ಪರೋಕ್ಷವಾಗಿ ಬಿಬಿಎಂಪಿ ಅಧಿಕಾರಿಗಳ ವಿರುದ್ದ ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಮಳೆ ಎಫೆಕ್ಟ್: ಅನಾಥಾಶ್ರಮಕ್ಕೆ ನುಗ್ಗಿದ ಮಳೆ ನೀರು (Bangalore rain effect: Waterlogging in orphanage)
ನಿನ್ನ ರಾತ್ರಿ ಸುರಿದ ಮಳೆಯಿಂದ ಅನಾಥಾಶ್ರಮಕ್ಕೆ ಮಳೆ ನೀರು ನುಗ್ಗಿ ಜಲಾವೃತವಾಗಿದೆ. ಹೆಣ್ಣೂರಿನಲ್ಲಿರುವ ಕೇರ್ ಶೆಲ್ಟರ್ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನಡೆಸುತ್ತಿರುವ ಅನಾಥಾಶ್ರಮದಲ್ಲಿ 70 ಮಂದಿ ನಿರ್ಗತಿಕರು ಆಶ್ರಯ ಪಡೆದಿದ್ದಾರೆ.
ಮೊನ್ನೆ (ಶನಿವಾರ) ಮಳೆಗೆ ಕೂಡ ಜಲಾವೃತವಾಗಿದ್ದ ಅನಾಥಾಶ್ರಮದಲ್ಲಿ ನಿನ್ನೆ ರಾತ್ರಿ ಕೂಡ ಮಳೆಯಿಂದಾಗಿ ಸಂಪೂರ್ಣವಾಗಿ ಜಲಾವೃತವಾಗಿದೆ. ಇದರಿಂದಾಗಿ ಅಲ್ಲಿದ್ದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಂಗಳೂರು ಮಳೆ ಅಪ್ಡೇಟ್ (Bangalore rain Update):
ಮೇ18ರ ರಾತ್ರಿಯಿಂದ ಸುರಿದಿರುವ ಧಾರಾಕಾರ ಮಳೆಗೆ ಸಾಯಿ ಲೇಔಟ್ ಜನರಿಗೆ ಸಂಕಷ್ಟ ಹಿನ್ನೆಲೆ ಸ್ಥಳೀಯ ಜನರ ನೆರವಿಗೆ ಬೋಟ್ ವ್ಯವಸ್ಥೆ ಮಾಡಲಾಗಿದೆ. ರಾತ್ರಿಯಿಡೀ ಸುರಿದ ಮಳೆಗೆ ಲೇಔಟ್ ಪೂರ್ತಿ ಜಲಾವೃತಗೊಂಡಿದ್ದು, ಮೊಣಕಾಲವರೆಗೂ ನೀರು ತುಂಬಿದ್ದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆಯ ಒಳಗಡೆಯೂ ನೀರು ತುಂಬಿದ್ದು ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವ ದೃಶ್ಯಗಳು ಅಲ್ಲಲ್ಲಿ ಕಂಡು ಬಂದಿದೆ.
ಬೆಂಗಳೂರು ಸೇರಿ ಕರ್ನಾಟಕದ 18 ಜಿಲ್ಲೆಗಳಲ್ಲಿ ಹೆಚ್ಚು ಮಳೆ *ಆರೆಂಜ್ ಅಲರ್ಟ್ (Heavy rain in 18 districts of Karnataka including Bengaluru- Orange alert)
ಕರ್ನಾಟಕದಾದ್ಯಂತ ಮೇ 24ರವರೆಗೂ ಭಾರಿ ಮಳೆ ಮುಂದುವರೆಯಲಿದೆ. ಬೆಂಗಳೂರು ಸೇರಿ ಕರ್ನಾಟಕದ 18 ಜಿಲ್ಲೆಗಳಲ್ಲಿ ಹೆಚ್ಚು ಮಳೆ ಮುನ್ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ ಕೆಲವೆಡೆ ಆರೆಂಜ್ ಅಲರ್ಟ್ ಸಹ ಘೋಷಿಸಿದೆ.
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಮೇ 24ರವರೆಗೂ ರಾಜ್ಯದಲ್ಲಿ ಮಳೆ ಮುಂದುವರೆಯಲಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಶಿವಮೊಗ್ಗ, ತುಮಕೂರಿನಲ್ಲಿ ಹೆಚ್ಚು ಮಳೆಯಾಗಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು, ಮೈಸೂರು, ಮಂಡ್ಯ, ಕೋಲಾರ, ದಾವಣಗೆರೆ, ಚಿಕ್ಕಬಳ್ಳಾಪುರ, ಚಾಮರಾಜನಗರ ಬೆಂಗಳೂರು ಗ್ರಾಮಾಂತರ, ವಿಜಯಪುರ, ಕೊಪ್ಪಳ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು ಮಳೆ ಅಪ್ಡೇಟ್ (Bangalore rain Update):
ಬೆಂಗಳೂರಿನ ಕಂಠೀರವ ಹೊರಾಂಗಣ ಕ್ರೀಡಾಂಗಣದ ದೃಶ್ಯ
#WATCH | Bengaluru, Karnataka: Several parts of the city witness waterlogging after heavy rains.
(Visuals from Sri Kanteerava Outdoor Stadium) pic.twitter.com/yWAQ2EIM39
— ANI (@ANI) May 19, 2025
ಬೆಂಗಳೂರು ಮಳೆ ಅಪ್ಡೇಟ್ ವೈರಲ್ ವಿಡಿಯೋ (Bangalore rain Update Viral Video):
ಬೆಂಗಳೂರಿನ ಹಲವೆಡೆ ವರುಣನ ರೌದ್ರಾವತಾರಕ್ಕೆ ರಸ್ತೆಗಳೆಲ್ಲಾ ಜಲಾವೃತವಾಗಿದೆ. ನೀರು ತುಂಬಿದ ರಸ್ತೆಗಳಲ್ಲಿ ಜನರು ಪರದಾಡುತ್ತಿರುವ ದೃಶ್ಯದ ವಿಡಿಯೋ ಇಲ್ಲಿದೆ...
#WATCH | Bengaluru, Karnataka: Several parts of the city witness waterlogging after heavy rains.
(Visuals from Silk Board Metro Station) pic.twitter.com/ji5gjGygCr
— ANI (@ANI) May 19, 2025
ಬೆಂಗಳೂರು ಮಳೆ ಅಪ್ಡೇಟ್ (Bangalore rain Update):
ಈಜೀಪುರದಲ್ಲಿ ಈಜಾಡೋ ಸ್ಥಿತಿ ನಿರ್ಮಿಸಿದ ವರುಣ.
ಈಜೀಪುರದ ಆರ್.ಎ.ರೋಡ್ ನಲ್ಲಿ ಮನೆಗಳಿಗೆ ನುಗ್ಗಿದ ನೀರು
ಹಲವು ಮನೆಗಳಿಗೆ ನುಗ್ಗಿದ ಮಳೆ ನೀರು
ಮಳೆ ನೀರಿನಿಂದ ನಿವಾಸಿಗಳು ಕಂಗಾಲು
ಕರೆಂಟ್ ಶಾಕ್ ನಿಂದ ಜಸ್ಟ್ ಮಿಸ್ ಆದ ನಿವಾಸಿಗಳು:
ಬಿಬಿಎಂಪಿಯ ಕಂಟ್ರೋಲ್ ರೂಮ್ ಗೆ ಕಾಲ್ ಮಾಡಿದ್ರೂ ನೋ ಯ್ಯೂಸ್
ಸುಮಾರು ಐದಾರು ಮನೆಗಳಿಗೆ ನುಗ್ಗಿರೋ ಮಳೆ ನೀರು
ಮನೆಗಳಲ್ಲಿರೋ ವಸ್ತುಗಳೆಲ್ಲ ಚೆಲ್ಲಾಪಿಲ್ಲಿ
ಮೋಟಾರ್ ಮೂಲಕ ನೀರು ಹೊರಹಾಕ್ತಿರೋ ಸ್ಥಳೀಯರು
ಬೆಂಗಳೂರು ಮಳೆ ಅಪ್ಡೇಟ್ (Bangalore rain Update):
ಬೆಂಗಳೂರಿನಲ್ಲಿ ರಾತ್ರಿ ಸುರಿದ ಬಾರಿ ಮಳೆಯಿಂದಾಗಿ ದಾಸರಹಳ್ಳಿ ಸುತ್ತಮುತ್ತಲ ಪ್ರದೇಶ, ಶೆಟ್ಟಿಹಳ್ಳಿ ನಿವಾಸಿಗಳಿಗೆ ಸಂಕಷ್ಟ.
>> ಧಾರಾಕಾರ ಮಳೆಯಿಂದಾಗಿ ಮನೆಗಳಿಗೆ ನುಗ್ಗಿದ ನೀರು
>> ಸಂಪ್ ಗಳಲ್ಲಿ ಮೋರಿ ನೀರು ತುಂಬಿ ಜನರ ಜೀವನ ಅಸ್ಥವ್ಯಸ್ಥ
>> ಶೆಟ್ಟಿಹಳ್ಳಿಯ ಮೇದರಹಳ್ಳಿ ವಿನಾಯಕ ಬಡಾವಣೆಯ ಸಂಪೂರ್ಣ ಜಲಾವೃತ್ತ
>> ರಾಜಕಾಲುವೆಗೆ ನೀರು ಹೋಗದೇ ಮನೆಗಳಿಗೆ ನುಗ್ಗಿದ ನೀರು
>> ಲೇಔಟ್ ಸಂಪೂರ್ಣ ಜಲಾವೃತ್ತ ಲೇಔಟ್ ನಿವಾಸಿಗಳ ಅಳಲು
>> ರಾಜಕಾಲುವೆಗೆ ನೀರು ಸಂಪರ್ಕ ಕಲ್ಪಿಸದ ಹಿನ್ನೆಲೆ ಜಲಾವೃತ
>> ಸಂಬಂಧ ಪಟ್ಟ ಬಿಬಿಎಂಪಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರೂ ಡೋಂಟ್ ಕೇರ್
>> ಬಿಬಿಎಂಪಿ ಅಧಿಕಾರಿಗಳ ವಿರುದ್ದ ಸ್ಥಳೀಯ ನಿವಾಸಿಗಳ ಆಕ್ರೋಶ
ಬೆಂಗಳೂರು ಮಳೆ ನೇರ ಪ್ರಸಾರ: ( Bangalore rain live Update)
ಮಹದೇವಪುರ ಕ್ಷೇತ್ರದ ವರ್ತೂರು ಹಾಗೂ ಬಳಗೆರೆ ಮುಖ್ಯರಸ್ತೆ ಜಲಾವೃತ. ಕಳೆದ ರಾತ್ರಿ ಸುರಿದ ಮಳೆಯ ಅವಾಂತರ, ರಾಜಕಾಲುವೆ ಒತ್ತುವರಿ ಸಮಸ್ಯೆಗೆ ಪ್ರಮುಖ ಕಾರಣ. ನಿವಾಸಿಗಳ ಹಾಗೂ ವಾಹನ ಸವಾರರ ಪರದಾಟ. ಪ್ರತಿ ಬಾರಿ ಮಳೆಯಾದಾಗಲು ರಸ್ತೆ ಜಲಾವೃತ ಒಂದು ಸಾಮಾನ್ಯ ಸಮಸ್ಯೆಯಾಗಿದ್ದು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಮಳೆ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಓಪನ್ (Bangalore Rain Update: Electronic City flyover opens):
ಮಳೆಯಿಂದ ಕ್ಲೋಸ್ ಆಗಿದ್ದ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ಫ್ಲೈಓವರ್ ಅನ್ನು ಓಪೆನ್ ಮಾಡಲಾಗಿದೆ. ಸಿಲ್ಕ್ ಬೋರ್ಡ್ ಜಂಕ್ಷನ್ ಜಲಾವೃತಗೊಂಡಿತದ್ದರ ಹಿನ್ನಲೆಯಲ್ಲಿ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಕ್ಲೋಸ್ ಮಾಡಲಾಗಿತ್ತು. ಇದೀಗ ಮಳೆ ನೀರು ಸಂಪೂರ್ಣ ತೆರವು ಮಾಡಿ ಫ್ಲೈಓವರ್ ಓಪನ್ ಮಾಡಲಾಗಿದೆ. ಫ್ಲೈ ಓವರ್ ಓಪೆನ್ ಆದ ಹಿನ್ನಲೆಯಲ್ಲಿ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದ ವಾಹನ ಸಂಚಾರರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಇದೀಗ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ನಲ್ಲಿ ವಾಹನಗಳು ಎಂದಿನಂತೆ ಸಂಚರಿಸುತ್ತಿವೆ.
ಬೆಂಗಳೂರು ಮಳೆ ಎಫೆಕ್ಟ್ (Bangalore Rain Effect):
ವಿಲ್ಸನ್ ಗಾರ್ಡನ್ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿ ಜನರ ಪರದಾಟ. ಮಳೆಯ ನೀರನ್ನು ಹೊರಹಾಕಲು ಮೋಟರ್ ಬಳಸುತ್ತಿರುವ ಜನ. ರಸ್ತೆಯ ಮೇಲೆ ಮಳೆಯ ನೀರು ನಿಂತ್ತಿರುವ ಕಾರಣ ವಾಹನ ಸವಾರರ ಪರದಾಟ..
ವಿಲ್ಸನ್ ಗಾರ್ಡನ್ ಮಾತ್ರವಲ್ಲದೆ ಬೊಮ್ಮನಹಳ್ಳಿ ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ಮಳೆಯ ನೀರಿನ ಅವಾಂತರ. ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿ ನಿಂತ ನೀರು. ಸುಮಾರು ಎರಡು ಅಡಿಗಳಷ್ಟು ನಿಂತಿರುವ ಮಳೆಯ ನೀರು..
ಎಚ್ ಎಸ್ ಆರ್ ಲೇಔಟ್ ಗೆ , ಸರ್ಜಾಪುರ ಕಡೆ ಸಂಚರಿಸುವವರ ಭಾರೀ ಪರದಾಟ...
ಇನ್ನೊಂದೆಡೆ ಸಿಸಿಬಿ ಕಚೇರಿಯ ಮುಂದೆ ನೀರು ನಿಂತು ಅವಾಂತರ.
ಶಾಂತಿ ನಗರ ಬಸ್ ಸ್ಟಾಪ್, ಸೇರಿ ಸುತ್ತಮುತ್ತ ರಸ್ತೆಯ ಮೇಲೆ ನಿಂತಿರುವ ಮಳೆ ನೀರು.. ವಾಹನ ಸಂಚಾರಕ್ಕೆ ಅಡಚಣೆ
ಬೆಂಗಳೂರು ಮಳೆ ಎಫೆಕ್ಟ್ (Bangalore Rain Effect):
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾತ್ರಿಯಿಂದ ಸುರಿದ ಭಾರೀ ಮಳೆಯಿಂದಾಗಿ ನಗರದ ವಿಲ್ಸನ್ ಗಾರ್ಡನ್ ನ ಪೊಲೀಸ್ ಕ್ವಾಟ್ರಸ್ ಸಂಪೂರ್ಣ ಜಲಾವೃತವಾಗಿದೆ. ಮನೆಯೊಳಗೆ ನೀರು ತುಂಬಿದ್ದರಿಂದ ನಿವಾಸಿಗಳು ಮುಂಜಾನೆ ಮಳೆ ನೀರನ್ನು ಹೊರ ಹಾಕುತ್ತಿರುವ ದೃಶ್ಯ ಅಲ್ಲಲ್ಲಿ ಕಂಡು ಬಂದಿದೆ.

ಮಳೆ ಎಫೆಕ್ಟ್: ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ (Bangalore Rain Effect Traffic Jam):
ಇದಲ್ಲದೆ, ಒಂದೆಡೆ ಎಚ್ಬಿಆರ್ ಲೇಔಟ್ ಜಲಾವೃತವಾಗಿದ್ದರೆ, ಶಾಂತಿನಗರ ಬಳಿ ಲಾರಿಯೊಂದು ಕೆಟ್ಟು ನಿಂತಿದ್ದು ಡಬಲ್ ರೋಡ್ ಸಂಪೂರ್ಣ ಟ್ರಾಫಿಕ್ ಜಾಂ ಆಗಿದೆ. ಮತ್ತೊಂದೆಡೆ ರಸ್ತೆಯಲ್ಲಿ ನಿಂತ ನೀರು ಕೆಲಸಕ್ಕೆ ಹೋಗುವ ವಾಹನ ಸವಾರರ ಪರದಾಟಕ್ಕೆ ಕಾರಣವಾಗಿದೆ.
ಬೆಂಗಳೂರು ಮಳೆ ಅಪ್ಡೇಟ್ (Bangalore Rain Update):
ನೆಲಮಂಗಲ: ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ನದಿಯಂತಾಗಿದ್ದು, ನೀರಿನ ಹರಿವಿನ ಪ್ರಮಾಣ ಕಡಿಮೆಯಾಗದ ಹಿನ್ನಲೆಯಲ್ಲಿ ನೆಲಮಂಗಲ ಅಡಕಮಾರನಹಳ್ಳಿ ಬಳಿ ನೀರಿನಲ್ಲಿ ಜನರು ಪರದಾಡುಟ್ಟಿದ್ದಾರೆ. ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಕೆಟ್ಟು ನಿಂತಿದ್ದು, ನೀರಿನಲ್ಲಿ ಕೆಟ್ಟ ದ್ವಿಚಕ್ರಗಳನ್ನ ತಳ್ಳುತ್ತಾ ಜನರು ಮುಂದೆ ಸಾಗಿದ್ದಾರೆ.
Bengaluru Rains Update Live:
ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಗರದ ಹಲವೆಡೆ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ.
ಎಲ್ಲೆಲ್ಲಿ ಸಂಚಾರಕ್ಕೆ ಅಡಚಣೆ, ನಿಧಾನಗತಿಯ ಸಂಚಾರ?
ಹೆಚ್ಎಸ್ಆರ್ ಲೇಔಟ್ ಡಿಪೋ ದಿಂದ14 ನೇ ಮುಖ್ಯ ರಸ್ತೆಯ ಕಡೆಗೆ.
ಕನಕಪುರ ಮುಖ್ಯ ರಸ್ತೆ (ನೈಸ್ ರಸ್ತೆ) ಯಿಂದ ಕೋಣನಕುಂಟೆ ಕಡೆಗೆ.
ಶಿರಸಿ ವೃತ್ತದ ಬಳಿ ಮರ ಬಿದ್ದಿರುವುದರಿಂದ ಉಮಾ ಥಿಯೇಟರ್ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ.
ಪ್ರಸನ್ನ ಚಿತ್ರ ಮಂದಿರದಿಂದ ಬಸವ ಮಂಟಪ ಸಿಗ್ನಲ್ ಕಡೆಗೆ.
ಸೋನಿ ವರ್ಲ್ಡ್ ಸಿಗ್ನಲ್ನಿಂದ ಮಹಾರಾಜ ಸಿಗ್ನಲ್ ಕಡೆಗೆ.
ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಬೆಳ್ಳಂದೂರು ಕಡೆಗೆ.
ಲೌರಿ ರೈಲ್ವೆ ಅಂಡರ್ಪಾಸ್ ನಿಂದ ಮಹದೇವಪುರ ಕಡೆಗೆ.
ಬೇಲಿಮಠ ಜಂಕ್ಷನ್ ನಿಂದ ಬಿನ್ನಿಮಿಲ್ ಕಡೆಗೆ.
ಆದರ್ಶ ಜಂಕ್ಷನ್ ನಿಂದ ರಾಮಯ್ಯ ಜಂಕ್ಷನ್ ಕಡೆಗೆ.
ಸಿಲ್ಕ್ ಬೋರ್ಡ್ ನಿಂದ ಅಗರ ಸಿಗ್ನಲ್ ಕಡೆಗೆ.
ಕೆನ್ಸಿಂಗ್ಟನ್ ನಿಂದ ಗುರುದ್ವಾರ ಕಡೆಗೆ.
ಆಟೋ ಮಾರ್ಟ್ ನಿಂದ ಅಗರ ಕಡೆಗೆ.
ಶಾಹಿ ಗಾರ್ಮೆಂಟ್ಸ್, ಬನ್ನೇರುಘಟ್ಟ ರಸ್ತೆ ಯಿಂದ ಹುಳಿಮಾವು ಗೇಟ್ ಕಡೆಗೆ.
ರಾಷ್ಟ್ರೋತ್ಥಾನ ಸ್ಕೂಲ್ ಜಂಕ್ಷನ್ ನಿಂದ ಕ್ಲೌಡ್-9 ಆಸ್ಪತ್ರೆ,ಥಣಿಸಂದ್ರ ರಸ್ತೆ ಕಡೆಗೆ.
Bengaluru Rains Live Update:
ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ದಾಖಲಾದ ಮಳೆ ಪ್ರಮಾಣ ಮಿಲಿ ಮೀಟರ್ ಲೆಕ್ಕದಲ್ಲಿ ನೋಡೋದಾದ್ರೆ:
ಕೆಂಗೇರಿ - 132ಮಿಮೀ
ಕೋರಮಂಗಲ -96.50ಮಿಮೀ
HAL ಏರ್ ಪೋರ್ಟ್ - 93ಮಿಮೀ
ಕೊಟ್ಟಿಗೆಪಾಳ್ಯ - 92.50ಮಿಮೀ
ವಿದ್ಯಾಪೀಠ - 92.50ಮಿಮೀ
ಮಾರತ್ತಹಳ್ಳಿ - 91.50ಮಿಮೀ
ಹಂಪಿನಗರ - 91ಮಿಮೀ
ಬಾಗಲಕುಂಟೆ - 89ಮಿಮೀ
ಕಾಟನ್ ಪೇಟೆ - 88.50ಮಿಮೀ
VV ಪುರಂ - 88ಮಿಮೀ
ಬಾಣಸವಾಡಿ - 85ಮಿಮೀ
ಶೆಟ್ಟಿಹಳ್ಳಿ - 83.50ಮಿಮೀ
ನಾಗಪುರ - 82ಮಿಮೀ
RR ನಗರ - 79.50ಮಿಮೀ
ಸಂಪಂಗಿ ರಾಮನಗರ - 79.50ಮಿಮೀ
ಹೊರಮಾವು -77ಮಿಮೀ
ಜಕ್ಕೂರು - 76ಮಿಮೀ
ವನ್ನರ್ ಪೇಟೆ - 75.50 ಮಿಮೀ
HSR layout - 73 ಮಿಮೀ
ಪುಲಿಕೇಶಿನಗರ- 72 ಮಿಮೀ
ಮಿಮೀ ಮಳೆ ದಾಖಲಾಗಿದೆ
Karnataka Rains Update: ಇಂದು ಈ 5 ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಆಗಲಿದ್ದು, ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಣೆ ಮಾಡಿದ್ದಾರೆ. ಕರ್ನಾಟಕದ 18ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ವರುಣಾರ್ಭ ಮುಂದೆವರೆಯಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಮೇ 24, 2025ರವರೆಗೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.