ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯದಲ್ಲಿ ವ್ಯಕ್ತಿಯೋರ್ವ ಕಾರನ್ನು ನಿಲ್ಲಿಸಿ ಪರಾರಿಯಾಗಿದ್ದು ಕಾರಲ್ಲಿ ಒಂದು ಪಿಸ್ತೂಲ್, ಐಫೋನ್ ಪತ್ತೆಯಾದ ಘಟನೆ ನಡೆದಿದೆ.
ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ಅರಣ್ಯ ವಲಯದ ಸೊಳ್ಳೆಕಟ್ಟೆ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಕೆಎ-42 ಎನ್-4696 ನೋಂದಣಿಯ ಕಾರು ಇದಾಗಿದ್ದು ಕಾರೊಳಗೆ ಪಿಸ್ತೂಲ್ ಹಾಗೂ ಐಫೋನ್ ಪತ್ತೆಯಾಗಿದೆ.
ಇಂದು ಬೆಳಗಿನಜಾವ 3.30 ರ ಸುಮಾರಿಗೆ ಈತ ಚೆಕ್ ಪೋಸ್ಟ್ ಬಳಿ ಬಂದಾಗ ಅರಣ್ಯ ಇಲಾಖೆ ತಪಾಸಣೆ ಮಾಡಲು ಮುಂದಾಗುತ್ತಿದ್ದಂತೆ ಪರಾರಿಯಾಗಿದ್ದನು. ಅದಾದ ಬಳಿಕ, ಈತನ ಕಾರು ಈಗ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
ಈ ಕುರಿತು ಬಂಡೀಪುರ ಆರ್ ಎಫ್ಓ ಮಹಾದೇವಯ್ಯ ಪ್ರತಿಕ್ರಿಯಿಸಿ, ಕಾರಿನ ಚಾಲಕನ ಸುಳಿವು ಇನ್ನೂ ಗೊತ್ತಾಗಿಲ್ಲ, ಕಾರು ಪರಿಶೀಲಿಸಿದ ವೇಳೆ ಪಿಸ್ತೂಲ್ ಪತ್ತೆಯಾಗಿದ್ದು ಕಾರು, ಪಿಸ್ತೂಲ್, ಐಫೋನ್ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಈ ಬಗ್ಗೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ತೇರ್ಗಡೆ ಅಂಕಗಳನ್ನು ಕಡಿಮೆ ಮಾಡುವುದು ಬೇಡ-ಸರ್ಕಾರಕ್ಕೆ ಪುರುಷೋತ್ತಮ ಬಿಳಿಮಲೆ ಆಗ್ರಹ
ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸಿ- ಸುಪ್ರೀಂ ಆದೇಶ









