ಬಿಳಿಗಿರಿರಂಗನ ಹುಂಡಿ ದುಡ್ಡಿಗೆ ಕಣ್ಣು- ಮೂವರು ಜೈಲುಪಾಲು

Biligiriranga Betta: ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಬಿಳಿಗಿರಿರಂಗನ ಬೆಟ್ಟದ ಹುಂಡಿ ಹಣಕ್ಕೆ ಆಸೆಪಟ್ಟ ಮೂವರು ಸದ್ಯ ಜೈಲು ಪಾಲಾಗಿರುವ ಘಟನೆ ಬೆಳಕಿಗೆ ಬಂದಿದೆ. 

Written by - Yashaswini V | Last Updated : Oct 16, 2025, 02:58 PM IST
  • ಮೊದಲು ಚಿಲ್ಲರೆಗಾಗಿ ಬಂದಿದ್ದ ಐನಾತಿಗಳು
  • ಬಳಿಕ ಹುಂಡಿ ಹಣ ಎಣಿಕೆಗೆ ಸಹಾಯ ಮಾಡುವುದಾಗಿ ಅಲ್ಲಿಯೇ ಕುಳಿತಿದ್ದರು
  • ಕೊನೆಗೆ ಆಗಿದ್ದೇನು ಗೊತ್ತಾ?
ಬಿಳಿಗಿರಿರಂಗನ ಹುಂಡಿ ದುಡ್ಡಿಗೆ ಕಣ್ಣು- ಮೂವರು ಜೈಲುಪಾಲು

Biligiriranga Betta News: ಹುಂಡಿ ಹಣ ಎಣಿಕೆ ವೇಳೆ ದೇವರ ದುಡ್ಡಿಗೆ ಕಣ್ಣು ಹಾಕಿ ಮೂವರು ತಗ್ಲಾಕಿಕೊಂಡ ಘಟನೆ ಪ್ರಸಿದ್ಧ ಯಾತ್ರಸ್ಥಳವಾದ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಬುಧವಾರ (ಅ.15) ನಡೆದಿದೆ. ಮಂಡ್ಯ ನಗರದ ಗಿರೀಶ್, ಶ್ರೀನಿವಾಸ್, ಶರವಣ ಬಂಧಿತ ಆರೋಪಿಗಳು. 

Add Zee News as a Preferred Source

ಬುಧವಾರ (ಅಕ್ಟೋಬರ್ 15) ದಿನದಂದು ಬಿಳಿಗಿರಿರಂಗನ ಬೆಟ್ಟದಲ್ಲಿ ಹುಂಡಿ ಹಣ ಎಣಿಕೆ ನಡೆಯುವಾಗ ಚಿಲ್ಲರೆ ಬೇಕೆಂದು ಬಂದಿದ್ದ ಈ ಮೂವರು ಬಳಿಕ ಎಣಿಕೆಗೆ ಸಹಾಯ ಮಾಡಲು ಕುಳಿತು ಅಧಿಕಾರಿಗಳು, ಸಿಬ್ಬಂದಿಗಳ ಕಣ್ತಪ್ಪಿಸಿ 63 ಸಾವಿರ ಹಣವನ್ನು ಲಪಟಾಯಿಸಿದ್ದರು. 

ಹುಂಡಿ ಎಣಿಕೆ ಮಧ್ಯೆ ಮೂವರೂ ಕೂಡ ಒಮ್ಮೆಗೆ ಮೂತ್ರ ವಿಸರ್ಜನೆಗೆ ತೆರಳಿದ್ದರು. ಈ ಬಗ್ಗೆ ಅಲ್ಲಿದ್ದವರಿಗೆ ಅನುಮಾನವೂ ಮೂಡಿತ್ತು. 
ಈ ವೇಳೆ ಸಂಶಯಗೊಂಡು ಪರಿಶೀಲಿಸಿದಾಗ ಅವರ ಬಳಿ ಕದ್ದ 63,095 ರೂ. ನಗದು ಪತ್ತೆಯಾಗಿದೆ. ಕೂಡಲೇ ಕಾರ್ಯ ನಿರ್ವಾಹಕ ಅಧಿಕಾರಿ ಮೋಹನ್ ಯಳಂದೂರು ಠಾಣೆಗೆ ದೂರು ನೀಡಿದ್ದರು‌. 

ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ- ಕಬ್ಬು ಕಟಾವು ಮಾಡುವಾಗ ಎರಡು ಚಿರತೆ ಮರಿಗಳು ಪ್ರತ್ಯಕ್ಷ- ಹೌಹಾರಿದ ರೈತರು

ಇದನ್ನೂ ಓದಿ- ಮಾದಪ್ಪನ ಬೆಟ್ಟದಲ್ಲಿ ಶೌಚಾಲಯ ಅವ್ಯವಸ್ಥೆ ಆರೋಪ: ಮಹಿಳಾ ಭಕ್ತರ ಆಕ್ರೋಶ

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News