)
ಬೆಂಗಳೂರು: ರಾಜ್ಯ ಸರ್ಕಾರದ ಒಳಮೀಸಲಾತಿ ನೀತಿಗೆ ವಿರುದ್ಧವಾಗಿ ಅಲೆಮಾರಿ ಜನಾಂಗದವರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ಅಲೆಮಾರಿ ಜನಾಂಗದವರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿ ತಮ್ಮ ಅಸಮಾಧಾನವನ್ನು ಹೊರ ಹಾಕಿದರು. ಈ ಪ್ರತಿಭಟನೆಯಲ್ಲಿ ಹಲವು ಪ್ರತಿಭಟನಾಕಾರರು ಈಶ್ವರ, ಪಾರ್ವತಿ, ಹನುಮಂತ ಸೇರಿದಂತೆ ವಿವಿಧ ದೇವರ ವೇಷಭೂಷಣಗಳನ್ನು ಧರಿಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರವನ್ನು ತೀವ್ರವಾಗಿ ಟೀಕಿಸಿದ್ದಾರೆ..
ಪ್ರತಿಭಟಕರ ಆಗ್ರಹ:
ಅಲೆಮಾರಿ ಬುಡಕಟ್ಟು ಜನಾಂಗವನ್ನು ಸ್ಪಶ್ಯ ಜನಾಂಗಕ್ಕೆ ಸೇರ್ಪಡೆ ಮಾಡಿರುವ ನಿರ್ಧಾರವನ್ನು ಹಿಂಪಡೆಯಬೇಕು.
ಬಲಗೈ ಸಮುದಾಯಕ್ಕೆ 6% ಮೀಸಲಾತಿ, ಎಡಗೈ ಸಮುದಾಯಕ್ಕೆ 6% ಮೀಸಲಾತಿ ನೀಡಿರುವ ಸರ್ಕಾರ, ಸ್ಪಶ್ಯ ಸಮುದಾಯಕ್ಕೆ ಕೇವಲ 5% ಮೀಸಲಾತಿ ನೀಡಿದೆ.
ಈ ಹಿನ್ನೆಲೆಯಲ್ಲಿ ಅಲೆಮಾರಿ ಜನಾಂಗವನ್ನು ಸ್ಪಶ್ಯ ಜನಾಂಗದಲ್ಲಿ ಸೇರಿಸುವುದು ನ್ಯಾಯಸಮ್ಮತವಲ್ಲ.
ಅಲೆಮಾರಿ ಬುಡಕಟ್ಟು ಜನಾಂಗಕ್ಕೆ ಸ್ವತಂತ್ರ ಮೀಸಲಾತಿ ನೀಡಬೇಕು.
ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ, "ದಯಾಮರಣಕ್ಕೆ ಅವಕಾಶ ಕೊಡಿ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಗ್ರಹಿಸಿದರು. ಫ್ರೀಡಂ ಪಾರ್ಕ್ನಲ್ಲಿ ನಡೆದ ಈ ಪ್ರತಿಭಟನೆಗೆ ಹಲವು ಅಲೆಮಾರಿ ಜನಾಂಗದವರು ಸೇರಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.