Video: ಸುಮಲತಾಗೆ ಚುನಾವಣೆ ವೆಚ್ಚಕ್ಕೆ 10,000 ರೂ. ದೇಣಿಗೆ ನೀಡಿದ ಅಭಿಮಾನಿಗಳು!

ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರಿಗೆ ಅಭಿಮಾನಿಗಳು ಬುಧವಾರ 10 ಸಾವಿರ ರೂ. ದೇಣಿಗೆ ನೀಡಿದರು.

Last Updated : Apr 3, 2019, 04:23 PM IST
Video: ಸುಮಲತಾಗೆ ಚುನಾವಣೆ ವೆಚ್ಚಕ್ಕೆ 10,000 ರೂ. ದೇಣಿಗೆ ನೀಡಿದ ಅಭಿಮಾನಿಗಳು! title=

ಮದ್ದೂರು: ಲೋಕಸಭಾ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರಿಗೆ ಅಭಿಮಾನಿಗಳು ಬುಧವಾರ 10 ಸಾವಿರ ರೂ. ದೇಣಿಗೆ ನೀಡಿದರು.

ಮದ್ದೂರು ಪಟ್ಟಣದಲ್ಲಿ ರೋಡ್ ಶೋ ನಡೆಸಿ ಚುನಾವನಾ ಪ್ರಚಾರದಲ್ಲಿ ಭಾಗಿಯಾಗಿದ್ದ ಸುಮಲತಾ ಅವರಿಗೆ ಶಿವಪುರದ ಬಳಿ ಅಭಿಮಾನಿಗಳು ಬಂದು ಸುಮಲತಾ ಅವರಿಗೆ ತಾವು ಕಷ್ಟಪಟ್ಟು ದುಡಿದ ಹಣ ನೀಡಿ, ಆ ಹಣವನ್ನು ಚುನಾವಣಾ ವೆಚ್ಚಕ್ಕೆ ಬಳಸಿಕೊಳ್ಳುವಂತೆ ಹೇಳಿ ಶುಭ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿ ಸೆರಗೊಡ್ಡಿ ಹಣ ಸ್ವೀಕರಿಸಿದ ಸುಮಲತಾ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು.

ಚುನಾವಣೆ ಸಂದರ್ಭದಲ್ಲಿ ಹಣವನ್ನು ಹೊಳೆಯಂತೆ ಹರಿಸುವವರ ನಡುವೆ ಪಕ್ಷೇತರ ಅಭ್ಯರ್ಥಿಗೆ ಅಭಿಮಾನಿಗಳೇ ಹಣ ಸಂಗ್ರಹಿಸಿ ಚುನಾವಣೆ ವೆಚ್ಚಕ್ಕೆ ಬಳಸಿಕೊಳ್ಳುವಂತೆ ನೀಡಿದ್ದು ವಿಶೇಷವಾಗಿತ್ತು.

Trending News