)
ಬೆಂಗಳೂರು : ಮೈಸೂರು ದಸರಾಗೆ ಉದ್ಘಾಟನೆ ಇದೀಗ ಬಹುದೊಡ್ಡ ವಿವಾದವಾಗಿ ಮಾರ್ಪಟ್ಟಿದೆ. ಯಾವಾಗ ಬೂಕರ್ ಪ್ರಶಸ್ತಿ ವಿಜೇತೆ ಭಾನು ಮುಷ್ತಾಕ್ ಗೆ ಸರ್ಕಾರ ಆಹ್ವಾನ ಕೊಟ್ತೋ ಅಂದಿನಿಂದಲೇ ದೊಡ್ಡ ವಿವಾದಕ್ಕೆ ರಾಜ್ಯ ರಾಜಕಾರಣಲ್ಲಿ ನಡೆಯುತ್ತಿದೆ. ಇತ್ತ ಹಿಂದೂ ವಿರೋಧಿ ಧಾರ್ಮಿಕ ವಿಚಾರದ ಬಗ್ಗೆ ಹಗುರವಾಗಿ ಮಾತನಾಡುವ ಮುಷ್ತಾಕ್ ಯಾವುದೇ ಕಾರಣಕ್ಕೂ ದಸಾರ ಉದ್ಘಾಟನೆ ಮಾಡಬಾರದು ಎಂದು ಹಿಂದೂ ಸಂಘನೆಗಳು ಹಾಗೂ ಬಿಜೆಪಿ ನಾಯಕರು ಪಟ್ಟು ಹಿಡಿದು ಕೂತ್ತಿದ್ದಾರೆ.. ಅದರ ಮುಂದುವರೆದು ಇದೀಗ ಮಾಜಿ ಸಂಸದ ಪ್ರತಾಪ್ ಸಿಂಹ ಅಹ್ವಾನ ವಾಪಾಸು ಪಡೆಯುವಂತೆ ಹೈಕೋರ್ಟ್ ಮೆಟ್ಟಿಲು ಹತ್ತಿದ್ದಾರೆ..
ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಕೋರ್ಟ್ ಕೂಡಲೇ ಮದ್ಯಪ್ರವೇಶಿಸಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.
ವಕೀಲರ ಮೂಲಕ ಅರ್ಜಿ ಸಲ್ಲಿಸಿರುವ ಪ್ರತಾಪ್ ಸಿಂಹ, ಮೈಸೂರು ದಸರಾ ವಿಶ್ವವಿಖ್ಯಾತ ಹಬ್ಬಕ್ಕೆ ಮುಖ್ಯ ಅತಿಥಿಯಾಗಿ ಬಾನು ಮಾಷ್ತಾಕ್ ಗೆ ಆಹ್ವಾನ ನೀಡಲಾಗಿದೆ.
ಸರ್ಕಾರದ ಆಹ್ವಾನಕ್ಕೆ ಕೂಡಲೇ ತಡೆ ನೀಡಬೇಕು. ದಸರಾ ಉದ್ಘಾಟನೆ ವೇಳೆ ಚಾಮುಂಡೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಬೇಕು. ವೇದ ಮಂತ್ರ, ಘೋಷ ಧಾರ್ಮಿಕ ಆಚರಣೆಗಳೊಂದಿಗೆ ದಸರಾ ಉದ್ಘಾಟನೆ ಮಾಡುವ ಸಂಪ್ರದಾಯವಿದೆ. ಆದ್ರೆ ಬಾನು ಮುಷ್ತಾಕ್ ಹಿಂದೂ ವಿರೋಧಿ, ಕನ್ನಡ ವಿರೋಧಿ ಭಾವನೆ ಹೊಂದಿದ್ದಾರೆ. ರಾಜ್ಯ ಸರ್ಕಾರ ಏಕಪಕ್ಷೀಯ ವಾಗಿ ಬಾನು ಮುಷ್ತಾಕ್ ಅವರ ಆಯ್ಕೆ ಮಾಡಿದೆ. ಮೈಸೂರಿನ ರಾಜಮನೆತ ನದವರು ಕೂಡ ಸರ್ಕಾರದ ನಡೆ ವಿರೋಧಿಸಿದ್ದಾರೆ. ಸರ್ಕಾರದ ನಿರ್ಧಾರದಿಂದ ಹಿಂದೂಗಳ ಭಾವನೆಗೆ ಘಾಸಿ ಉಂಟಾಗಿದೆ. ಹೀಗಾಗಿ ಬಾನು ಮುಷ್ತಾಕ್ ರಿಗೆ ನೀಡಿದ ಆಹ್ವಾನಕ್ಕೆ ಹಿಂಪಡೆಯುವಂತೆ ನಿರ್ದೇಶಿಸಲು ಕೋರಿ ಮನವಿ ಮಾಡಲಾಗಿದೆ.
ದಸರಾ ಉದ್ಘಾಟನೆ ಹೈಕೋರ್ಟ್ ಮೆಟ್ಟಿಲೇರಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಬಹಳ ಸಂತೋಷ ಎಲ್ಲಾ ಕೋರ್ಟ್ ನಲ್ಲಿ ತೀರ್ಮಾನವಾಗಲಿ. ಈ ನಿಸಾರ್ ಅಹಮದ್ ಅವರು ಉದ್ಘಾಟಿಸಿದಾಗ ಪ್ರತಾಪ ಸಿಂಹ ಎಲ್ಲಿ ಹೋಗಿದ್ರು. ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ದಸರಾ ಆನೆ ಮೇಲೆ ಕುಳಿತಿದ್ಸರು, ಹೈದರಾಲಿ, ಟಿಪ್ಪು ಸುಲ್ತಾನ್ ಆಳ್ವಿಕೆ ವೇಳೆ ದಸರಾ ಆಚರಿಸಿಲ್ಲವೇ ಆಗ ಏಕೆ ಯಾರೂ ಪ್ರಶ್ನೆ ಮಾಡಲಿ ಎಂದು ಸಿಎಂ ಕಿಡಿಕಾರಿದ್ರು. ಈಗ ಕೋರ್ಟ್ ನಲ್ಲಿಯೇ ತೀರ್ಮಾನವಾಗಲಿ ಎಂದು ಸಿಎಂ ಹೇಳಿದ್ರು.
ಒಟ್ಟಾರೆ ಯಾವತ್ತೂ ಇಷ್ಟು ವಿವಾದಕ್ಕೆ ಒಳಗಾಗದ ದಸಾರ ನಾಡಹಬ್ಭ ಈ ಬಾರೀ ಸಾಕಷ್ಟು ವಿವಾದಕ್ಕೆ ಒಳಗಾಗಿದೆ. ಸದ್ಯ ಕೋರ್ಟ್ ಯಾವ ರೀತಿ ನಿರ್ದೇಶನ ನೀಡಲಿದೆ ಎಂಬುದನ್ನುವ ಕಾದು ನೋಡಬೇಕು.