)
Dharmasthala case: ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ಹೊರಬಂದಿರುವ ಗಂಭೀರ ಆರೋಪದ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ದೂರುದಾರ ನೀಡಿದ ಹೊಸ ಮಾಹಿತಿಯ ಆಧಾರದ ಮೇಲೆ, ವಿಶೇಷ ತನಿಖಾ ತಂಡ (SIT) ಧರ್ಮಸ್ಥಳದ ಕನ್ಯಾಡಿಯ ದ್ವಾರಕಾಶ್ರಮದ ಗೇಟ್ ಒಳಭಾಗದಲ್ಲಿ ಶೋಧ ಕಾರ್ಯ ನಡೆಸಿದೆ.
ಮಾಹಿತಿಯ ಪ್ರಕಾರ, ನೇತ್ರಾವತಿ ನದಿ ತೀರದಲ್ಲೇ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪದ ಹಿನ್ನೆಲೆ, ಎಸ್ಐಟಿ ಅಧಿಕಾರಿಗಳು ದೂರುದಾರ ಹಾಗೂ ಸಾಕ್ಷಿಯನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಈ ಪ್ರದೇಶ ಖಾಸಗಿ ಜಾಗವಾಗಿರುವುದರಿಂದ, ಗೇಟ್ ದಾಟಲು ಸಂಬಂಧಿಸಿದ ವ್ಯಕ್ತಿಗಳಿಂದ ಅನುಮತಿ ಪಡೆಯಬೇಕಾಯಿತು.
ಸ್ಥಳದ ಗೇಟ್ಗೆ ಬೀಗ ಹಾಕಲಾಗಿದ್ದರಿಂದ, ತೋಟವನ್ನು ನೋಡಿಕೊಳ್ಳುತ್ತಿರುವ ಮ್ಯಾನೇಜರ್ ಆಗಮಿಸಬೇಕಾಗಿ ಬಂತು. ಆದರೆ ಎಸ್ಐಟಿ ತಂಡವು ಮುಂಚಿತವಾಗಿ ಮಾಹಿತಿ ನೀಡಿರಲಿಲ್ಲದ ಕಾರಣ, ಮ್ಯಾನೇಜರ್ ಸ್ಥಳದಲ್ಲಿರಲಿಲ್ಲ. ಇದರಿಂದ ಅಧಿಕಾರಿಗಳು ಒಂದು ಗಂಟೆಗೂ ಹೆಚ್ಚು ಕಾಲ ಕಾಯಬೇಕಾಯಿತು. ನಂತರ ಬೀಗದ ಕೀ ತರಿಸಿ ಗೇಟ್ ತೆರೆದು, ಸ್ಥಳದೊಳಗೆ ಪ್ರವೇಶಿಸಿ ಶೋಧ ಕಾರ್ಯ ಕೈಗೊಂಡರು.
ಈ ಶೋಧ ಕಾರ್ಯದಿಂದ ಪ್ರಕರಣಕ್ಕೆ ಸಂಬಂಧಿಸಿದ ಹೊಸ ಸುಳಿವುಗಳು ಸಿಗಬಹುದೆಂಬ ನಿರೀಕ್ಷೆಯಿದ್ದು, ತನಿಖೆ ಮುಂದುವರಿದಿದೆ.