ಮಂಡ್ಯದ ಹುತಾತ್ಮ ಯೋಧನ ಕುಟುಂಬಕ್ಕೆ ನುಡಿದಂತೆ ಜಮೀನು ನೀಡಿದ ಸುಮಲತಾ

ಹುತಾತ್ಮ ಯೋಧನ ನಿವಾಸಕ್ಕೆ ಪುತ್ರ ಅಭಿಷೇಕ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಜೊತೆ ಸುಮಲತಾ ಭೇಟಿ ನೀಡಿ ಸಾಂತ್ವನ ಹೇಳಿದರು.

Last Updated : Feb 21, 2019, 04:27 PM IST
ಮಂಡ್ಯದ ಹುತಾತ್ಮ ಯೋಧನ ಕುಟುಂಬಕ್ಕೆ ನುಡಿದಂತೆ ಜಮೀನು ನೀಡಿದ ಸುಮಲತಾ title=

ಮಂಡ್ಯ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಹುತಾತ್ಮನಾದ ಮಂಡ್ಯದ ಯೋಧನ ನಿವಾಸಕ್ಕೆ ಭೇಟಿ ನೀಡಿದ ಸುಮಲತಾ ಅಂಬರೀಶ್, ಯೋಧನ್ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈ ಹಿಂದೆ ಹುತಾತ್ಮ ಯೋಧನ ಸ್ಮಾರಕ ನಿರ್ಮಾಣಕ್ಕೆ ಅಂಬರೀಶ್ ಹುಟ್ಟೂರು ದೊಡ್ದರಸಿನಕೆರೆಯಲ್ಲಿ ಅರ್ಧ ಎಕರೆ ಜಮೀನು ಬಿಟ್ಟುಕೊಡುವುದಾಗಿ ಹೇಳಿದ್ದ ಸುಮಲತಾ, ವಿದೇಶದಿಂದ ಬಂದ ಬಳಿಕ ಯೋಧನ ಕುಟುಂಬ ಭೇಟಿ ಮಾಡುವುದಾಗಿಯೂ ಹೇಳಿದ್ದರು. ಅದರಂತೆ ಇಂದು ಗುಡಿಗೆರೆಯಲ್ಲಿರುವ ಹುತಾತ್ಮ ಯೋಧನ ನಿವಾಸಕ್ಕೆ ಪುತ್ರ ಅಭಿಷೇಕ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಜೊತೆ ಸುಮಲತಾ ಭೇಟಿ ಜಮೀನಿನ ದಾಖಲಾತಿಯನ್ನು ಹಸ್ತಾಂತರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಗುರು ಕುಟುಂಬಕ್ಕೆ ಜಮೀನು ನೀಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ಜಮೀನು ಪಡೆಯಲು ಅವರೂ ಕೂಡ ಒಪ್ಪಿದ್ದಾರೆ ಎಂದು ಸುಮಲತಾ ಹೇಳಿದರು.

Trending News