)
Banakal incident: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ವಿವಾಹಿತೆಯೊಬ್ಬಳು ಮುಸ್ಲಿಂ ಯುವಕನೊಂದಿಗೆ ಪರಾರಿಯಾಗಿರುವ ಘಟನೆ ಉದ್ರಿಕ್ತ ಪರಿಸ್ಥಿತಿಗೆ ಕಾರಣವಾಗಿದೆ. 22 ವರ್ಷದ ಪೂಜಾ ಎಂಬ ಯುವತಿ, 2 ವರ್ಷಗಳ ಹಿಂದೆ ಮದುವೆಯಾದರೂ, ಇತ್ತೀಚೆಗೆ ಆಶಿಕ್ ಎಂಬ ಯುವಕನೊಂದಿಗೆ ಮನೆ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಮಹಿಳೆಯ ಪತಿ ತಕ್ಷಣವೇ ಬಣಕಲ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ದೂರಿನನ್ವಯ ಕಾರ್ಯಾಚರಣೆ ಕೈಗೊಂಡ ಪೊಲೀಸರು ಮಹಿಳೆಯನ್ನು ಪತ್ತೆ ಮಾಡಿದ್ದಾರೆ. ಈ ವೇಳೆ ಪೊಲೀಸ್ ಠಾಣೆಯ ಮುಂದೆ ಹಿಂದೂ ಸಂಘಟನೆ ಮುಖಂಡರು ಮತ್ತು ಗ್ರಾಮಸ್ಥರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಠಾಣೆಯ ಗೇಟ್ ಮುಚ್ಚಿರುವುದರಿಂದ ಹಿಂದೂ ಸಂಘಟನೆಗಳ ಆಕ್ರೋಶ ಇನ್ನಷ್ಟು ಹೆಚ್ಚಾಗಿ, ಪ್ರತಿಭಟನಾಕಾರರು ಏಕಾಏಕಿ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆ ನಡೆಸಿದರು. ಪೊಲೀಸರು ಗ್ರಾಮಸ್ಥರು ಹಾಗೂ ಸಂಘಟನೆ ಮುಖಂಡರ ಮನವೋಲಿಸಲು ಹರಸಾಹಸ ಪಡಿದರು.
ಆಖಿರಿಗೆ, ಠಾಣೆ ಮುಂಭಾಗಕ್ಕೆ ಬಿಡುವ ಭರವಸೆ ನೀಡಿದ ನಂತರ, ಪ್ರತಿಭಟನೆ ಹಿಂಪಡೆಯಲಾಯಿತು. ಆದರೆ ಮುಸ್ಲಿಂ ಯುವಕನ ವಿರುದ್ಧ ಕುಟುಂಬಸ್ಥರು ಹಾಗೂ ಸಂಘಟಕರ ಆಕ್ರೋಶ ಮುಂದುವರಿದಿದೆ. ಈ ಘಟನೆಯಿಂದ ಬಣಕಲ್ ಪೊಲೀಸ್ ಠಾಣೆ ಮುಂದೆ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.