ವಕೀಲರಿಗೆ ಕೊಡಲು ದುಡ್ಡಿಲ್ಲ ಅಂತ ದೇವಸ್ಥಾನಕ್ಕೇ ಕನ್ನ ಹಾಕಿದ ಕಿರಾತಕ ಅಂದರ್

Written by - VISHWANATH HARIHARA | Edited by - Bhavishya Shetty | Last Updated : Mar 14, 2025, 10:04 PM IST
    • ವಕೀಲರಿಗೆ ಕೊಡಲು ಹಣವಿಲ್ಲವೆಂದು ದೇವಸ್ಥಾನಕ್ಕೆ ಕನ್ನ
    • ಬೀಗ ಹಾಕಿದ್ದ ಮನೆಗಳನ್ನೇ ಟಾರ್ಗೆಟ್ ಮಾಡ್ತಿದ್ದ ಆರೋಪಿ ಮೂರ್ತಿ
    • ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳು ಬಂಧನ
ವಕೀಲರಿಗೆ ಕೊಡಲು ದುಡ್ಡಿಲ್ಲ ಅಂತ ದೇವಸ್ಥಾನಕ್ಕೇ ಕನ್ನ ಹಾಕಿದ ಕಿರಾತಕ ಅಂದರ್
File Photo

ಆತನ ಮೇಲೆ ಐದು ಕೇಸುಗಳಿವೆ. ಎರಡು ಕೇಸ್‌ನಲ್ಲಿ ವಾರಂಟ್ ಕೂಡ ಜಾರಿಯಾಗಿತ್ತು. ಆದ್ರೆ ವಕೀಲರಿಗೆ ಕೊಡಲು ಆತನ ಬಳಿ ಹಣವೇ ಇರ್ಲಿಲ್ಲ. ಅದಕ್ಕಾಗಿ ಆತ ದೇವಸ್ಥಾನಕ್ಕೆ ನುಗ್ಗಿ ಚಿನ್ನ,ಬೆಳ್ಳಿ ವಸ್ತು ಕಳ್ಳತನ ಮಾಡಿದ್ದ. ಸದ್ಯ ಪವಿತ್ರ ಸ್ಥಳದಲ್ಲಿ ಪಾಪಕೃತ್ಯ ಎಸಗಿದವನು ಅಂದರ್ ಆಗಿದ್ದರೆ, ಬೇರೆಯವರ ಮನೆ ಕೀ ಯನ್ನ ಸಲೀಸಾಗಿ ಓಪನ್ ಮಾಡಿ ಚಿನ್ನ ಎಗರಿಸಿದ್ದ ಖದೀಮ ಕೂಡ ಖಾಕಿ ಬಲೆಗೆ ಬಿದ್ದಿದ್ದಾನೆ.

Add Zee News as a Preferred Source

ಇದನ್ನೂ ಓದಿ:  ಮೀನ ರಾಶಿಯಲ್ಲಿ ಸೂರ್ಯನ ಸಂಚಾರ: ರಾಜಯೋಗದಿಂದ ಎರಡು ರಾಶಿಗಳಿಗೆ ಬಂಪರ್ ಪ್ರಯೋಜನಗಳು

ಬೆಳ್ಳಿಯ ತಟ್ಟೆ. ತಟ್ಟೆಯೊಳಗೆ ಇಟ್ಟಿರುವ ಬಟ್ಟಲು. ಬೆಳ್ಳಿಯಲ್ಲೇ ಮಾಡಲಾದ ಬಸವನ ಮೂರ್ತಿ. ಭಕ್ತರಿಗೆ ಆಶೀರ್ವಾದ ಮಾಡಲು ಇಟ್ಟಿರುವ ಶಟಗೋಪ. ಚಿನ್ನದ ತಾಳಿ ಮತ್ತು ಕಾಸಿನ ಸರ. ದೇವಸ್ಥಾನದಲ್ಲಿ ಇರಬೇಲಾದ ಎಲ್ಲಾ ವಸ್ತುಗಳು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮುಂದೆ ಇಡಲಾಗಿತ್ತು.

ಆರೋಪಿ ಸಂಜಯ್ ಮೇಲೆ ಈ ಹಿಂದೆ ಮೂರು ಕಳ್ಳತನ ಪ್ರಕರಣಗಳು ದಾಖಲಾಗಿತ್ತು. ಅದ್ರಲ್ಲಿ ಎರಡು ಪ್ರಕರಣದಲ್ಲಿ ಇತ್ತೀಚೆಗೆ ಕೋರ್ಟ್ ನಿಂದ ವಾರಂಟ್ ಕೂಡ ಜಾರಿಯಾಗಿತ್ತು. ಒಂದೆಡೆ ಬಂಧನದ ಭೀತಿ ಮತ್ತೊಂದೆಡೆ ವಕೀಲರಿಗೆ ನೀಡಲು ಹಣವಿಲ್ಲ. ಇದರಿಂದ ಯೋಚನೆಗೆ ಒಳಗಾಗಿದ್ದವನಿಗೆ ಮತ್ತೆ ಕಳ್ಳತನದ ಉಪಾಯ ಬಂದಿದೆ. ಅದ್ರಂತೆ ಮಾರ್ಚ್ 5 ರಂದು ರಾತ್ರಿ ಯಲಹಂಕ ನ್ಯೂ ಟೌನ್ ನ ಶ್ಯಾಮಲಾಪುರದಲ್ಲಿರುವ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಕಾಂಪೌಂಡ್ ಜಂಪ್ ಮಾಡಿದ್ದ ಆಸಾಮಿ ಶಟರ್ ಮುರಿದು ದೇವಸ್ಥಾನದ ಹುಂಡಿಯಲ್ಲಿದ್ದ ಹಣ ಹಾಗೂ ಚಿನ್ನ ಮತ್ತು ಬೆಳ್ಳಿ ಪೂಜಾ ಸಾಮಾಗ್ರಿ ಹೊತ್ತೊಯ್ದಿದ್ದ. ಫಿಂಗರ್ ಪ್ರಿಂಟ್ ನಿಂದ ಆರೋಪಿ ಗುರುತು ಪತ್ತೆ ಮಾಡಿದ ಯಲಹಂಕ ನ್ಯೂ ಟೌನ್ ಠಾಣೆ ಪೊಲೀಸರು ಸಂಜಯ್ ನನ್ನ ಬಂಧಿಸಿ 15 ಬೆಳ್ಳಿ ಬಟ್ಟಲು, ಬೆಳ್ಳಿ ಹಸುವಿನ ವಿಗ್ರಹ, ಒಂದು ಬೆಳ್ಳಿ ಶಟಗೋಪ, ಬೆಳ್ಳಿ ಬಟ್ಟಲು, 4 ತಾಳಿ,ಕಾಸಿನ ಸರ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:  ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆ.ಎಲ್.ರಾಹುಲ್-ಅಥಿಯಾ ಶೆಟ್ಟಿ ದಂಪತಿ! ಬೇಬಿ ಬಂಪ್ ಫೋಟೋಶೂಟ್!

ಮತ್ತೊಂದು ಪ್ರಕರಣದಲ್ಲಿ, ಬೀಗ ಹಾಕಿದ್ದ ಮನೆಗಳನ್ನೇ ಟಾರ್ಗೆಟ್ ಮಾಡ್ತಿದ್ದ ಆರೋಪಿ ಮೂರ್ತಿ ಕಳ್ಳತನಕ್ಕಾಗಿ ಹೆಚ್ಚೇನು ರಿಸ್ಕ್ ತೆಗೆದುಕೊಳ್ತಿರ್ಲಿಲ್ಲ. ಮನೆ ಬಳಿ ಬಂದು ಶೂ, ಹೂಕುಂಡ, ಶೂ ರ್ಯಾಕ್ ಹುಡುಕ್ತಿದ್ದ. ಅಲ್ಲೇನಾದ್ರು ಮನೆ ಕೀ ಇಟ್ಟು ಹೋಗಿದ್ರೆ ಬಾಗಿಲು ಓಪನ್ ಮಾಡಿ ಸೀದ ಮನೆಯೊಳಗೆ ಹೋಗಿ ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡ್ಕೊಂಡು ಹೋಗ್ತಿದ್ದ. ಅದೇ ರೀತಿ ಫೆಬ್ರವರಿ 28 ರಂದು ಬಂಡೇಪಾಳ್ಯದ ಅಣ್ಣಮ್ಮನ ಪಾಳ್ಯದಲ್ಲಿರುವ ಮನೆಯೊಂದರಲ್ಲಿ ಚಿನ್ನಾಭರಣ ಕದ್ದು ಪರಾರಿ ಆಗಿದ್ದ. ಸದ್ಯ ಆರೋಪಿಯನ್ನು ಬಂಧಿಸಿರುವ ಬಂಡೇಪಾಳ್ಯ ಪೊಲೀಸರು 84 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

 

 

Trending News