)
RCB Stampede : ಯಾರದ್ದೋ ನಿರ್ಲಕ್ಷ್ಯ... ಮತ್ತ್ಯಾರದ್ದೊ ತಪ್ಪಿಗೆ ಅಮಾಯಕ ಹನ್ನೊಂದು ಅಭಿಮಾನಿಗಳ ಉಸಿರು ನಿಂತಿದೆ. ಸಾಲು ಸಾಲು ಯಡವಟ್ಟುಗಳಿಂದಲೇ ಘನಘೋರ ದುರಂತ ನಡೆದು ಹೋಗಿದೆ. ಪೊಲೀಸರ ತಲೆದಂಡ ಮಾಡಿದ್ದ ರಾಜ್ಯ ಸರ್ಕಾರ, ಪೊಲೀಸರು ನೀಡಿದ್ದ ಅಪಾಯದ ಎಚ್ಚರಿಕೆಯನ್ನೇ ನಿರ್ಲಕ್ಷ್ಯ ಮಾಡಿದ್ದ ಪತ್ರವೊಂದರ ಮೂಲಕ ಬಟಬಯಲಾಗಿದೆ.
ವಿಧಾನಸೌಧದಲ್ಲಿ RCB ಆಟಗಾರರನ್ನು ಸನ್ಮಾನಿಸಲು ಅನುಮತಿ ಕೇಳಿ ಜೂನ್ 3ರಂದು DPARಗೆ ಅನುಮತಿ ಕೇಳಿ KSCA ಪತ್ರ ಬರೆದಿತ್ತು. ಆಗ ಭದ್ರತಾ ವಿಚಾರವಾಗಿ ಅಭಿಪ್ರಾಯ ನೀಡುವಂತೆ ಭದ್ರತಾ ವಿಭಾಗದ ಡಿಸಿಪಿ ಕರಿಬಸವನಗೌಡಗೆ ಅಧೀನ ಕಾರ್ಯದರ್ಶಿ ಪತ್ರ ಬರೆದಿದ್ರು. ಆ ಪತ್ರಕ್ಕೆ ಉತ್ತರಿಸಿದ ಡಿಸಿಪಿ DPAR ಕಾರ್ಯದರ್ಶಿ ಸತ್ಯವತಿಗೆ ವಸ್ತವಾಂಶದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ರು. ಹಾಗಾದ್ರೆ ಪತ್ರದಲ್ಲಿ ಏನಿದೆ ಅಂತ ನೋಡೋದಾದ್ರೆ.
ಪತ್ರದಲ್ಲಿ ಏನಿದೆ..?
1. ಆರ್.ಸಿ.ಬಿ ಲಕ್ಷಾಂತರ ಅಭಿಮಾನಿಗಳು ಆಗಮಿಸುವ ಸಾಧ್ಯತೆ
2. ಆತುರದಲ್ಲಿ ಕಾರ್ಯಕ್ರಮ ಆಯೋಜನೆಯಿಂದ ಬಂದೋಬಸ್ತ್ ತೊಂದರೆ
3. ವಿಧಾನಸೌಧ ಭದ್ರತಾ ವಿಭಾಗದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಕೊರತೆ
4. ಹೊರಗಿನಿಂದ ಬಂದೋಬಸ್ತ್ ಗೆ ಸಿಬ್ಬಂದಿಗಳ ತೆಗೆದುಕೊಳ್ಳಬೇಕು ಇದಕ್ಕೆ ಸಮಯ ಬೇಕು
5. ಕಾನೂನು & ಸುವ್ಯವಸ್ಥೆ ಹಾಗೂ ಟ್ರಾಫಿಕ್ ಪೊಲೀಸರ ಜೊತೆ ಕೊರ್ಡಿನೇಟ್ ಗೆ ಸಮಯ ಬೇಕು
ಆರ್.ಸಿ.ಬಿ ಲಕ್ಷಾಂತರ ಅಭಿಮಾನಿಗಳು ಆಗಮಿಸುವ ಸಾಧ್ಯತೆಯಿದೆ. ಆದರೆ ಆತುರದಲ್ಲಿ ಕಾರ್ಯಕ್ರಮ ಆಯೋಜಿಸುವುದರಿಂದ ಬಂದೋಬಸ್ತ್ ತೊಂದರೆಯಾಗುತ್ತೆ ಅಂತ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ ವಿಧಾನಸೌಧ ಭದ್ರತಾ ವಿಭಾಗದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಕೊರತೆ ಇದೆ. ಹೀಗಾಗಿ ಹೊರಗಿನಿಂದ ಬಂದೋಬಸ್ತ್ ಗೆ ಸಿಬ್ಬಂದಿ ತೆಗೆದುಕೊಳ್ಳಬೇಕು ಇದಕ್ಕೆ ಸಮಯ ಅವಕಾಶ ಬೇಕು ಅಂತ ಮನವರಿಕೆ ಮಾಡಿದ್ದಾರೆ. ಜೊತೆಗೆ ಈ ರೀತಿ ಬೃಹತ್ ಕಾರ್ಯಕ್ರಮಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಅಧಿಕಾರಿಗಳು ಹಾಗೂ ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಜೊತೆ ಕೊರ್ಡಿನೇಟ್ ಮಾಡಿಕೊಳ್ಳಲು ಸಮಯ ಅವಕಾಶ ಬೇಕಾಗಿದೆ ಅಂತ ವಾಸ್ತಂವಶ ತಿಳಿಸಿಕೊಟ್ಟಿದ್ದರು
ಎಚ್ಚರಿಸಿದ್ರೂ DPAR ಕಾರ್ಯದರ್ಶಿ ಸತ್ಯವತಿ ನಿರ್ಲಕ್ಷ್ಯ : DCP ಕರಿಬಸನಗೌಡ ಎಚ್ಚರಿಸಿದ್ರೂ ಕೂಡ DPAR ಕಾರ್ಯದರ್ಶಿ ಸತ್ಯವತಿ ನಿರ್ಲಕ್ಷ್ಯ ಬಯಲಾಗಿದೆ. ಸ್ಪಷ್ಟವಾಗಿ ಸಮಾಯವಕಾಶ ಬೇಕು ಅಂತ ತಿಳಿಸಿದ್ರೂ ಕಾರ್ಯಕ್ರಮಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಮಾಡಿದ್ದಲ್ಲದೆ. ಜೂನ್ 4.ರಂದು ಸತ್ಯವತಿ ನೀಡಿದ ಮಾಧ್ಯಮ ಹೇಳಿಕೆಯಲ್ಲಿ ಅಭಿಮಾನಿಗಳು ಸ್ಟೇಡಿಯಂಗೆ ಹೋಗಿ ಅನ್ನೋ ಮೂಲಕ ಮಹಾಯಡವಟ್ಟು ಮಾಡಿಕೊಂಡಿದ್ದಾರೆ.
ಡಿಸಿಪಿ ಪತ್ರದ ಮೂಲಕ ಹೇಳಿದ್ರು ಮತ್ತ್ಯಾಕೆ ಕಾರ್ಯಕ್ರಮ ಮಾಡಿದ್ರಿ ಇದು ಸಿಎಂ ಹಾಗೂ ಡಿಸಿಎಂ ಗಮನಕ್ಕೆ ಇರಲಿಲ್ವಾ ಎಂಬುವುದು ವಿಪಕ್ಷಗಳ ಪ್ರಶ್ನೆ. ಇಲ್ಲಿ 11 ಅಮಾಯಕರ ಸಾವಿನ ಹೊಣೆ ಹೊರಲು ಮಾತ್ರ ಯಾರು ಸಿದ್ದರಿಲ್ಲದಿರುವುದು ನಿಜಕ್ಕೂ ದುರಂತ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ