ಮೈಸೂರಿನಲ್ಲಿ ಜಲಪಾತ ಸೃಷ್ಟಿಸಿದ ವರುಣ

ಮಂಗಳವಾರ ಸುರಿದ ಬಾರಿ ಮಳೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಜಲಪಾತ ಸೃಷ್ಠಿ.

Last Updated : Sep 27, 2017, 11:23 AM IST
ಮೈಸೂರಿನಲ್ಲಿ ಜಲಪಾತ ಸೃಷ್ಟಿಸಿದ ವರುಣ title=

ಮೈಸೂರು: ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಬಾರಿ ಮಳೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಗೌರಿಶಂಕರದ ಬಳಿ ಚಿಕ್ಕ ಜಲಪಾತವೊಂದು ಸೃಷ್ಟಿಯಾಗಿದೆ. ಓಡಾಡಲೂ ಬಲು ಕಷ್ಟ ಆದರೆ ನೋಡಲು ಬಲು ಸುಂದರ...

ಹತ್ತು ವರ್ಷಗಳ ನಂತರ ಸುರಿದ ಬಾರಿ ಮಳೆಗೆ ಸಾಂಸ್ಕೃತಿಕ ನಗರಿ ಮೈಸೂರು ಅಕ್ಷರ ಸಹ ಕೆರೆಗಳಂತಾಗಿದೆ. ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಜನರ ಸ್ಥಿತಿ ಅಸ್ಥವ್ಯಸ್ಥವಾಗಿದೆ. ಈ ಬಗ್ಗೆ ಪಾಲಿಕೆಗೆ ಕರೆ ಮಾಡಿ ದೂರು ನೀಡಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. 

ಮತ್ತೊಂದೆಡೆ ವರುಣನ ಆರ್ಭಟದಿಂದಾಗಿ ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಕಾರ್ಯಕ್ರಮಗಳಿಗೆ ಅಡಚಣೆ ಉಂಟಾಗಿದೆ. 

Trending News