ವಿಶ್ವಾಸ ಮತದ ಬಗ್ಗೆ ಸಿಎಂ ತಿಳಿಸಿದ ತಕ್ಷಣವೇ ಕಾರ್ಯಗತಗೊಳಿಸುವುದು ನನ್ನ ಕೆಲಸ- ಸ್ಪೀಕರ್

ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸಾರ್ಹ ಮತ ಚಲಾಯಿಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ, ಅದನ್ನು ತಕ್ಷಣವೇ ಕಾರ್ಯಗತಗೊಳಿಸುವುದು ನನ್ನ ಕೆಲಸವೆಂದು ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹೇಳಿದ್ದಾರೆ.

Last Updated : Jul 12, 2019, 04:32 PM IST
ವಿಶ್ವಾಸ ಮತದ ಬಗ್ಗೆ ಸಿಎಂ ತಿಳಿಸಿದ ತಕ್ಷಣವೇ ಕಾರ್ಯಗತಗೊಳಿಸುವುದು ನನ್ನ ಕೆಲಸ- ಸ್ಪೀಕರ್  title=
file photo

ಬೆಂಗಳೂರು: ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸಾರ್ಹ ಮತ ಚಲಾಯಿಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ, ಅದನ್ನು ತಕ್ಷಣವೇ ಕಾರ್ಯಗತಗೊಳಿಸುವುದು ನನ್ನ ಕೆಲಸವೆಂದು ವಿಧಾನಸಭಾ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಹೇಳಿದ್ದಾರೆ.

ಮುಖ್ಯಮಂತ್ರಿ ನಿರ್ಧಾರದ ಬಗ್ಗೆ ಮಾತನಾಡಿದ ಸ್ಪೀಕರ್ "ಸಿಎಂ ಈಗ ತಮ್ಮ ಮನಸ್ಸಿನ ವಿಚಾರವನ್ನು ತಿಳಿಸಿ, ತಾವು ಅಧಿಕಾರಕ್ಕೆ ಅಂಟಿಕೊಳ್ಳುವುದಿಲ್ಲವೆಂದು ಹೇಳಿದ್ದಾರೆ. ಅಲ್ಲದೆ ಅವರು ಸದನದ ವಿಶ್ವಾಸವನ್ನು ಪಡೆಯುವುದಾಗಿ ಹೇಳಿದ್ದಾರೆ "ಎಂದು ಸ್ಪೀಕರ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. "ಅವರು ವಿಶ್ವಾಸ ಮತಕ್ಕೆ ಬಯಸಿದ ಮರುದಿನವೇ ನಾನು ಅದನ್ನು ಸದನದ ಸಮಯದಲ್ಲಿ ಇಡುತ್ತೇನೆ" ಎಂದು ಅವರು ಹೇಳಿದರು.

16 ಶಾಸಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸಾರ್ಹ ಮತ ಚಲಾಯಿಸಲು ಸ್ಪೀಕರ್ ಅವರಿಂದ ಸಮಯ ಕೋರಿದ್ದಾರೆ. ಅಲ್ಲದೆ ಇಬ್ಬರು ಸ್ವತಂತ್ರ ಶಾಸಕರು ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡರು. ಸಂತಾಪ ಸೂಚಿಸುವಾಗ ವಿಶ್ವಾಸಮತದ ವಿಚಾರವನ್ನು ಪ್ರಸ್ತಾಪಿಸಿದ ಬಗ್ಗೆ ಕೇಳಿದಾಗ ಈ ಪ್ರಶ್ನೆಯನ್ನು ಕುಮಾರಸ್ವಾಮಿಗೆ ಇಡಬೇಕು ಎಂದು ಸ್ಪೀಕರ್ ಹೇಳಿದರು.

"ಪ್ರಸ್ತುತ ಪರಿಸ್ಥಿತಿಯಲ್ಲಿ ಅವರು ಅಧಿಕಾರಕ್ಕೆ ಅಂಟಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದರಿಂದ ಅದನ್ನು ಕೇಳಬಹುದು ಎಂದು ನಾನು ಭಾವಿಸುತ್ತೇನೆ. ನಾನು ಅದನ್ನು ಇಂದೇ ಕಾರ್ಯಗತಗೊಳಿಸುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ. ಒಂದು ನಿರ್ದಿಷ್ಟ ದಿನದಂದು ಅವರು ವಿಶ್ವಾಸಮತಕ್ಕೆ ದಿನವನ್ನು ನಿಗದಿ ಮಾಡುವುದಾಗಿ ಅವರು ನನಗೆ ಮಾಹಿತಿ ನೀಡಿದ್ದಾರೆ. ಅದನ್ನು ಅಂದಿನ ವ್ಯವಹಾರಗಳ ಪಟ್ಟಿಯಲ್ಲಿ ಸೇರಿಸುವುದು ನನ್ನ ಕೆಲಸ "ಎಂದು ರಮೇಶ್ ಕುಮಾರ್ ಹೇಳಿದರು.  

Trending News