)
RCB Stampede updates : ಈ ಸಲ ಕಪ್ ನಮ್ದೆ ಈ ಸಲ ಕಪ್ ನಮ್ದೆ ಅಂತ 18 ವರ್ಷ ಐ ಪಿ ಎಲ್ ಕಪ್ ಗಾಗಿ ಆರ್ ಸಿಬಿ ಅಭಿಮಾನಿಗಳು ತಪಸ್ಸು ಮಾಡಿದ್ರು. ಕಪ್ ಬಂದ ಬಳಿಕ ಈ ಸಲ ತಪ್ ನಮ್ಮದೆ ಎನ್ನುವಂತಾಗಿದೆ. ಆರ್ ಸಿಬಿ ಅಭಿಮಾನಿಗಳ ಸಾವು ಸದ್ಯ ಎಲ್ಲರಿಗೂ ನೋವು ತಂದಿದೆ.
ಸರ್ಕಾರ ಮಾಡಿದ ಯಡವಟ್ಟಿನಿಂದ ಇಷ್ಟೆಲ್ಲಾ ಆಯ್ತು ಅಂತಾ ಜನ ಹಿಡಿಶಾಪ ಹಾಕುತ್ತಿದ್ದಾರೆ. ಅಷ್ಟಕ್ಕೂ ಸರ್ಕಾರ ಯಾಕೆ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸನ್ಮಾನ ಇಡಬೇಕಿತ್ತು ಎಂಬ ಪ್ರಶ್ನೆ ಎದ್ದು ಕಾಣುತ್ತಿದೆ. ಇದು ಪ್ರಾಂಚೈಸಿ ಟೂರ್ನಿ. ಹೀಗಾಗಿ ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮ ಮಾಡುವ ಅವಶ್ಯಕತೆ ಇರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಪೊಲೀಸ್ ಇಲಾಖೆಯ ಅನೇಕ ಅಧಿಕಾರಿಗಳು ಹೇಳಿದ ಮೇಲೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡೋದನ್ನ ಕ್ಯಾನ್ಸಲ್ ಮಾಡಲಾಗಿದೆ. ಆದರೆ ಚಿನ್ನಸ್ವಾಮಿಯಲ್ಲಿ ಈ ರೀತಿ ಕಾರ್ಯಕ್ರಮಕ್ಕೆ ಅವಕಾಶ ಹಾಗೂ ಸರಿಯಾದ ಕ್ರಮದಲ್ಲಿ ಸೂಕ್ತ ನಿರ್ದೇಶನ ನೀಡದೇ ಸರ್ಕಾರ ಯಡವಟ್ಟು ಮಾಡಿಕೊಂಡಿದೆ ಎಂದರೆ ತಪ್ಪಗಾಲ್ಲ. ಮತ್ತೊಂದು ಕಡೇ ಆರ್ ಸಿಬಿ ಗೆಲುವನ್ನ ಸರ್ಕಾರ ಬಳಸಿಕೊಳ್ಳಲು ಮುಂದಾಗಿದ್ದೆ ಅಭಿಮಾನಿಗಳ ಸಾವಿಗೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.
ಆರ್ ಸಿಬಿ ವಿಜಯೋತ್ಸವದಲ್ಲಿ ಅಧಿಕೃತ ಮಾಹಿತಿ ಪ್ರಕಾರ 11 ಅಭಿಮಾನಿಗಳು ಸಾವಿಗೀಡಾಗಿದ್ದಾರೆ. ಇದಕ್ಕೆ ಕಾರಣ ಏನೂ ಅಂತ ಅವಲೋಕಿಸಬೇಕಾಗುತ್ತೆ. ಮೊದಲನೆಯಾದಾಗಿ ಕೆಎಸ್ಸಿಎ ಮಹಾ ಎಡವಟ್ಟು ಎದ್ದು ಕಾಣ್ತಿದೆ. ರಾತ್ರಿಯಷ್ಟೆ ಕಪ್ ಗೆದ್ದ ಹ್ಯಾಂಗ್ ಓವರ್ ನಲ್ಲಿದ್ದ ಅಭಿಮಾನಿಗಳಿಗೆ ಇಂದು ಸಂಜೆ ವಿಯೋತ್ಸವ ಅಂತ ಅನೌನ್ಸ್ ಮಾಡಿದ್ದು ಕಿಕ್ ನಲ್ಲಿದ್ದ ಅಭಿಮಾನಿಗಳಿಗೆ ಮತ್ತಷ್ಟು ನಶೆ ಏರಿಸಿದೆ. ಇದಕ್ಕೆ ತುಪ್ಪ ಸುರಿದಂತೆ ಕೆ ಎಸ್ ಸಿಎ ಪೊಲೀಸ್ರ ವಿರೋಧದ ನಡುವೆಯೂ ವಿಧಾನಸೌಧದಿಂದ ಸ್ಟೇಡಿಯಂಗೆ ಮೆರವಣಿಗೆ ಹೋಗಲಿದೆ ಅಂತ ಹೇಳಿಕೆ ನೀಡಿದ್ದು.
ಎರಡನೇಯದಾಗಿ ಚಿನ್ನಸ್ವಾಮಿ ಸ್ಟೇಡಿಯಂಗೆ ಫ್ರೀ ಎಂಟ್ರಿ ಮೊದಲು ಬಂದವರಿಗೆ ಆದ್ಯತೆ ಅಂತ ಹೇಳಿದ್ದು. ಸ್ವಾಭಾವಿಕವಾಗಿ ತನ್ನ ನೆಚ್ಚಿನ ಆಟಗಾರರನ್ನ ನೊಡಲು ಮೊದಲೆ ಕಾದಿದ್ದ ಅಭಿಮಾನಿಗಳಿಗೆ ಕೆ ಎಸ್ ಸಿಎ ಸಿಬ್ಬಂದಿ ಈ ಮೂರ್ಖ ನಡಿಗೆ ಬೆಂಕಿಗೆ ಪೆಟ್ರೋಲ್ ಸುರಿದಂತಾಗಿದೆ. ಮೊದಲು ಹೋದ್ರೆ ಸ್ಟೇಡಿಯಂ ಗೆ ಎಂಟ್ರಿ ಸಿಗುತ್ತೆ ಅಂತ ನಾಮುಂದು ತಾಮುಂದು ಅಂತ ಮಕ್ಕಳು ಮಹಿಳೆಯರ ಆದಿಯಾಗಿ ಲಕ್ಷಾಂತರ ಜನ ಜಮಾಯಿಸಿದ್ರು.
ಇದನ್ನೂ ಓದಿ: ಆರ್ಸಿಬಿ ತಂಡದ ಈ ಗೆಲುವು ನನಗೆ ಅತೀವ ಸಂತಸ ತಂದಿದೆ
ಇನ್ನೂ 30 ಸಾವಿರ ಸೀಟ್ ಕೆಪಾಸಿಟಿ ಇರೋ ಸ್ಟೇಡಿಯಂ ಮುಂದೆ ಮೂರು ಲಕ್ಷಕ್ಕೂ ಅಧಿಕ ಅಭಿಮಾನಿಗಳು ಜಮಾಯಿಸಿದ್ರು. ಇಷ್ಟು ಜನ ಅಭಿಮಾನಿಗಳು ಬರ್ತಾರೆ ಅನ್ನೋ ನಿರೀಕ್ಷೆಯಿಲ್ಲದ ಪೊಲೀಸ್ರು ಪರಿಸ್ಥಿತಿ ಕಂಡು ಕೈ ಚೆಲ್ಲಿದ್ದಾರೆ. ಮೈದಾನದ ಸುತ್ತಾ ಮಾಮೂಲಿ ಮ್ಯಾಚ್ ದಿನ ಇರೋ ಹಾಗೇ ಬಂದೋ ಬಸ್ತ್ ಮಾಡಿಕೊಂಡಿದ್ರು. ಮ್ಯಾಚ್ ದಿನ ಟಿಕೆಟ್ ಇರೋ ಅಭಿಮಾನಿಗಳು ಮಾತ್ರ ಬರ್ತಾರೆ. ಹೀಗಾಗಿ ಅಲ್ಲಿಗೆ ಈ ವ್ಯವಸ್ಥೆ ಸರಿ ಹೋಗ್ತಿತ್ತು. ಆದ್ರೆ ಫ್ರೀ ಟಿಕೆಟ್ ಅಂತ ಹೇಳಿದ್ರಿಂದ ಹರಿದು ಬಂದ ಜನಸಾಗರವನ್ನ ನಿಭಾಯಿಸುವಲ್ಲಿ ಪೊಲೀಸ್ರು ಎಡವಿದ್ದಾರೆ.
ಮೈದಾನದಕ್ಕೆ ಪಾಸ್ ಇದ್ದವರಿಗೆ ಗೇಟ್ ನಂಬರ್ ಮೂಲಕ ಎಂಟ್ರಿ ಇರ್ಲಿಲ್ಲ. ಬದಲಿಗೆ ಯಾರು ಯಾವ ಗೇಟ್ ನಲ್ಲಿ ಬೇಕಾದ್ರೂ ಹೋಗಬಹುದಿತ್ತು. ಹೀಗಾಗಿ ಅಭಿಮಾನಿಗಳ ಬಹುತೇಕ ಮೇನ್ ಗೇಟ್ ಎಂಟ್ರಿ ಮತ್ತು ಅಕ್ಕ ಪಕ್ಕದಲ್ಲೆ ಜಮಾಯಿಸಿದ್ರು. ಸ್ಟೇಡಿಯಂ ಭರ್ತಿಯಾಗ್ತಿದ್ದಂತೆ. ಒಮ್ಮೆಲೆ ಗೇಟ್ ಲಾಕ್ ಮಾಡಿದ್ರಿಂದ ನೂಕು ನುಗ್ಗಲು ಹೆಚ್ಚಾಗಿದೆ.
ಇನ್ನೂ ಅಭಿಮಾನಗಳು ಕೂಡ ಅಭಿಮಾನದ ಹೆಸ್ರಲ್ಲಿ ಅತಿರೇಕದ ವರ್ತನೆ ತೋರಿದ್ದಾರೆ. ಮೈದಾನಕ್ಕೆ ಎಂಟ್ರಿ ಪಡೆಯಲು ಕೆಳಗೆ ಬಿದ್ದವರ ಮೇಲೆ ಹತ್ತಿ ಹೋಗಿದ್ದಾರೆ. ಮುಂಜಾನೆ ಕಾರ್ಯಕ್ರಮ ಆಯೋಜನೆ ಗೊಂಡಿದ್ರಿಂದ ಪೊಲೀಸ್ರು ಬಂದೋಬಸ್ತ್ ಮಾಡಿಕೊಳ್ಳುವಲ್ಲಿ ಎಡವಿದ್ದಾರೆ. ಬ್ಯಾರಿಕೇಡ್ ಅಳವಡಿಸಿ ಸರತಿ ಸಾಲಿನಲ್ಲಿ ಅಭಿಮಾನಿಗಳನ್ನ ಮೈದಾನಕ್ಕೆ ಬಿಟ್ಟಿದ್ರೆ ಅನಾಹುತಕ್ಕೆ ಬ್ರೇಕ್ ಹಾಕಬಹುದಿತ್ತು.
ಇನ್ನೂ ಸೋಶಿಯಲ್ ಮೀಡಿಯಾ ಮೀಡಿಯಾದಲ್ಲಿ ಆರ್ ಸಿಬಿ ಅ ಕಪ್ ಗೆದ್ದ ಸುದ್ದಿಗಳು ಸಾಕಷ್ಟು ಭಿತ್ತರವಾಗಿತ್ತು. ಇದ್ರಿಂದ ಪ್ರಚೋದನೆಗೊಳಗಾದ ಅಭಿಮಾನಿಗಳು ಆಕರ್ಷಿತರಾಗಿ ಸ್ಟೇಡಿಯಂ ಕಡೆ ನುಗ್ಗಿ ತಮ್ಮ ಸಾವನ್ನು ತಾವೇ ಬರಮಾಡಿಕೊಂಡಿದ್ದಾರೆ. ಒಟ್ಟಾರೆ ಮೃತಪಟ್ಟವರ ಸಾವಿಗೆ ನ್ಯಾಯ ಸಿಗಬೇಕಾದ್ರೆ ತಪ್ಪಿತಸ್ಥತರಿಗೆ ಶಿಕ್ಷೆಯಾಗಬೇಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ