Chanakya Niti: ನೀತಿ ಶಾಸ್ತ್ರದಲ್ಲಿ ಆಚಾರ್ಯ ಚಾಣಕ್ಯರಯ ಜೀವನದ ಪ್ರತಿಯೊಂದು ವಿಷಯಗಳ ಬಗ್ಗೆಯೂ ತಿಳಿಸಿದ್ದಾರೆ. ನೀತಿ ಶಾಸ್ತ್ರದಲ್ಲಿ ಚಾಣಕ್ಯರು ರಾಜಕೀಯ ಮತ್ತು ಆರ್ಥಿಕ ಅಂಶಗಳ ಬಗ್ಗೆ ಮಾತ್ರವಲ್ಲದೆ ಮಾನವೀಯ ಮೌಲ್ಯಗಳ ಬಗ್ಗೆಯೂ ಬೋಧನೆಗಳನ್ನು ನೀಡಿದ್ದಾರೆ. ಅವರ ಬೋಧನೆಗಳು ಇಂದಿಗೂ ಪ್ರಸ್ತುತವಾಗಿವೆ. ಆಚಾರ್ಯ ಚಾಣಕ್ಯರು ಮಾನವನಲ್ಲಿರುವ ಕೆಲವು ಗುಣಗಳು ಅದೃಷ್ಟದ ಸಂಕೇತವೆಂದು ಪರಿಗಣಿಸಿದ್ದಾರೆ. ಇಂದು ನಾವು ಈ ಲೇಖನದಲ್ಲಿ ಈ ವಿಷಯಗಳ ಬಗ್ಗೆ ನಿಮಗೆ ಮಾಹಿತಿ ನೀಡುತ್ತಿದ್ದೇವೆ.
ಅದೃಷ್ಟವಂತರು ಈ ಗುಣಗಳನ್ನು ಹೊಂದಿರುತ್ತಾರೆ
ಚಾಣಕ್ಯ ನೀತಿಯ ಎರಡನೇ ಅಧ್ಯಾಯದಲ್ಲಿ, ಆಚಾರ್ಯ ಚಾಣಕ್ಯರು ಅದೃಷ್ಟವಂತರು ಹೊಂದಿರುವ ಮೂರು ಗುಣಗಳ ಬಗ್ಗೆ ಹೇಳಿದ್ದಾರೆ. ಈ ಗುಣಗಳನ್ನು ಹೊಂದಿರುವವರ ಜೀವನದಲ್ಲಿ ಸಂತೋಷಕ್ಕೆ ಕೊರತೆ ಇರಲ್ಲ. ಆ ವ್ಯಕ್ತಿಗಳು ಅಪಾರ ಸುಖ-ಸಂಪತ್ತಿನ ಒಡೆಯರಾಗುತ್ತಾರೆ.
ಇದನ್ನೂ ಓದಿ: ಚಾಣಕ್ಯ ನೀತಿಯ ಪ್ರಕಾರ ಹೆಂಡತಿಯ ಸೌಂದರ್ಯವೇ ಗಂಡನಿಗೆ ಆಪತ್ತು! ಹೇಗೆ ಗೊತ್ತೇ?
ಭೋಜ್ಯಂ ಭೋಜನಶಕ್ತಿಶ್ಚ ರಾತಿಶಕ್ತಿರ್ ವರಂಗನಾ ।
ವಿಭಾವೋ ದಾನಶಕ್ತಿಶ್ಚ ನಾಲ್ಪಸ್ಯ ತಪಸಃ ಫಲಮ್ ।
* ಆಚಾರ್ಯ ಚಾಣಕ್ಯರು ಹೇಳುವಂತೆ, ಯಾವಾಗಲೂ ಸಾಕಷ್ಟು ಆಹಾರವಿರುವ ಮತ್ತು ಆ ಆಹಾರವನ್ನು ಜೀರ್ಣಿಸಿಕೊಳ್ಳುವ ಶಕ್ತಿಯನ್ನು ಹೊಂದಿರುವ ವ್ಯಕ್ತಿಯನ್ನು ಅದೃಷ್ಟಶಾಲಿ ಎಂದು ಪರಿಗಣಿಸಲಾಗುತ್ತದೆ. ಅಂದರೆ ಆಚಾರ್ಯ ಚಾಣಕ್ಯರ ಪ್ರಕಾರ, ಆಹಾರದ ಜೊತೆಗೆ ಉತ್ತಮ ಜೀರ್ಣಶಕ್ತಿಯನ್ನು ಹೊಂದಿರುವುದು ಸಹ ಅದೃಷ್ಟದ ಸಂಕೇತವಾಗಿದೆ.
* ಅದೇ ರೀತಿ ಉತ್ತಮ ಜೀವನ ಸಂಗಾತಿಯ ಬೆಂಬಲವನ್ನು ಪಡೆಯುವುದು ಅದೃಷ್ಟಕ್ಕಿಂತ ಕಡಿಮೆಯಲ್ಲ. ಚಾಣಕ್ಯನ ಪ್ರಕಾರ, ನಿಮಗೆ ಒಳ್ಳೆಯ ಜೀವನ ಸಂಗಾತಿ ಸಿಕ್ಕರೆ ನಿಮ್ಮ ಜೀವನವು ಸಂತೋಷದಾಯಕವಾಗಿರುತ್ತದೆ. ನೀತಿ ಶಾಸ್ತ್ರದಲ್ಲಿ ಚಾಣಕ್ಯನು ಹಲವು ಬಾರಿ ಪುರುಷನಿಗೆ ಸದ್ಗುಣಶೀಲ ಪತ್ನಿ ಸಿಕ್ಕಾಗ ಆತನ ಅದೃಷ್ಟ ಜಾಗೃತಗೊಳ್ಳುತ್ತದೆ ಎಂದು ಉಲ್ಲೇಖಿಸಿದ್ದಾರೆ.
* ನಿಮ್ಮಲ್ಲಿ ಸಾಕಷ್ಟು ಸಂಪತ್ತು ಇದ್ದು, ಆ ಹಣವನ್ನು ಅಗತ್ಯವಿರುವವರಿಗೆ ಸಹಾಯ ಮಾಡಲು ಬಳಸಿದರೆ ಅಥವಾ ಅದನ್ನು ದಾನ ಮಾಡುವ ಇಚ್ಛೆಯನ್ನು ಹೊಂದಿದ್ದರೆ, ಚಾಣಕ್ಯರು ಅದನ್ನು ಅದೃಷ್ಟದ ಸಂಕೇತವೆಂದು ಪರಿಗಣಿಸುತ್ತಾರೆ. ಯಾವುದೇ ಒಬ್ಬ ವ್ಯಕ್ತಿಯು ಸಾಕಷ್ಟು ಸಂಪತ್ತನ್ನು ಹೊಂದಿದ ನಂತರ ಅದನ್ನು ದಾನ ಮಾಡುವುದು ಅವಶ್ಯಕ ಎಂದು ಚಾಣಕ್ಯರು ನಂಬುತ್ತಾರೆ. ಹೀಗೆ ಮಾಡುವುದರಿಂದ ಸಮಾಜದಲ್ಲಿ ಆರ್ಥಿಕ ಸಮತೋಲನ ಕಾಯ್ದುಕೊಳ್ಳಲಾಗುತ್ತದೆ.
ಆಚಾರ್ಯ ಚಾಣಕ್ಯರ ಪ್ರಕಾರ, ಈ ಗುಣಗಳನ್ನು ಹೊಂದಿರುವುದು ಕೇವಲ ತಪಸ್ಸು ಮಾತ್ರವಲ್ಲ, ಹಿಂದಿನ ಜನ್ಮಗಳ ಕರ್ಮಗಳ ಫಲಿತಾಂಶವೂ ಆಗಿದೆ. ಈ ಗುಣಗಳನ್ನು ಹೊಂದಿರುವ ಜನರನ್ನು ಅದೃಷ್ಟವಂತರು ಎಂದು ಕರೆಯುವುದು ತಪ್ಪಲ್ಲ. ಇಂದಿನ ಕಾಲದಲ್ಲೂ ಸಹ ಪ್ರತಿಯೊಬ್ಬ ವ್ಯಕ್ತಿಯು ಸಾಕಷ್ಟು ಸಂಪತ್ತು, ಉತ್ತಮ ಜೀವನ ಸಂಗಾತಿ ಮತ್ತು ಉತ್ತಮ ಆರೋಗ್ಯವನ್ನು ಬಯಸುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ಇದನ್ನೆಲ್ಲಾ ಹೊಂದಿದ್ದರೆ ಅವರನ್ನು ಅದೃಷ್ಟಶಾಲಿ ಎಂದು ಕರೆಯುವುದು ತಪ್ಪಲ್ಲ.
(ಗಮನಿಸಿರಿ: ಈ ಮಾಹಿತಿಯನ್ನು ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಅಥವಾ ಧಾರ್ಮಿಕ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









