Daily Horoscope: ದಿನಭವಿಷ್ಯ 03-06-2021 Today astrology

ಶ್ರೀ ಸದ್ಗುರು ಸಾಯಿಬಾಬಾ ಕೃಪೆಯಿಂದ ನಿಮ್ಮ ಇಂದಿನ ರಾಶಿ ಭವಿಷ್ಯ ತಿಳಿಯಿರಿ...

Written by - Zee Kannada News Desk | Last Updated : Jun 3, 2021, 06:30 AM IST
  • ಕನ್ಯಾ ರಾಶಿಯವರಿಗೆ ಸ್ವಂತ ಉದ್ಯಮದ ಹಾದಿಯಲ್ಲಿ ಮುನ್ನಡೆಯಿದೆ
  • ಧನಸ್ಸು ರಾಶಿಯ ಕಲಾವಿದರಿಗೆ ಸಾಮಾಜಿಕ ಮನ್ನಣೆ ದೊರೆಯಲಿದೆ
  • ಕುಂಭ ರಾಶಿಯವರೇ ಹಿರಿಯರೊಂದಿಗೆ ಅನ್ಯಥಾ ವಾದ-ವಿವಾದಗಳು ಬೇಡ
Daily Horoscope: ದಿನಭವಿಷ್ಯ 03-06-2021 Today astrology  title=
Daily Horoscope (ದಿನಭವಿಷ್ಯ 03-06-2021)

Daily Horoscope (ದಿನಭವಿಷ್ಯ 03-06-2021) :  ಶ್ರೀ ಸದ್ಗುರು ಸಾಯಿಬಾಬಾ ಕೃಪೆಯಿಂದ ನಿಮ್ಮ ಇಂದಿನ ರಾಶಿ ಭವಿಷ್ಯ ತಿಳಿಯಿರಿ...

ಮೇಷ:- ಅನಾವಶ್ಯಕ ಪ್ರಯಾಣಗಳು ದೇಹಾಲಸ್ಯಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಮನೆಯಲ್ಲಿ ಚಿಕ್ಕ ಮಕ್ಕಳಿಗೆ ಜ್ವರ ಬಾಧೆ. ಅದರಿಂದಾಗಿ ಆಸ್ಪತ್ರೆ ಖರ್ಚು ಎದುರಾಗುವುದು. ಅನಾವಶ್ಯಕ ಮಾತಿನಿಂದ ಬಂಧುಗಳೊಡನೆ ವೈರತ್ವ ಬೇಡ. ಸನ್ನಿವೇಶಗಳನ್ನು ಜಾಣತನದಿಂದ ನಿಭಾಯಿಸಿರಿ. ವ್ಯವಹಾರದಲ್ಲಿ ಲೆಕ್ಕ ಪತ್ರಗಳು ಶುದ್ಧವಾಗಿರಲಿ. ಇಲ್ಲವಾದಲ್ಲಿ ಅನಿರೀಕ್ಷಿತವಾಗಿ ಕಷ್ಟ ಎದುರಿಸಬೇಕಾಗುವುದು. ಪ್ರಯಾಣದಲ್ಲಿ ಎಚ್ಚರ. ಪ್ರಯಾಣ ಕಾಲದಲ್ಲಿ ಲಕ್ಷ್ಮಿ ನರಸಿಂಹ ದೇವರನ್ನು ನೆನೆಯಿರಿ. ಆರ್ಥಿಕ ಸ್ಥಿತಿ ಸಾಧಾರಣವಾಗಿರುತ್ತದೆ.

ವೃಷಭ:- ಮನೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಮತ್ತು ಸಂಪತ್ತು ಇದ್ದರೂ ನಿಮಗೆ ಮಾನಸಿಕ ನೆಮ್ಮದಿ ಇಲ್ಲದಿರುವುದು ಆಶ್ಚರ್ಯ. ಇದರಿಂದ ನಿಮಗಷ್ಟೇ ಅಲ್ಲ ಕುಟುಂಬದ ಸದಸ್ಯರು ಕೂಡಾ ಅಸಮಾಧಾನ ವ್ಯಕ್ತಪಡಿಸುವರು. ಮಕ್ಕಳು ಆಡುವ ಮಾತಿಗೆ ಹಿರಿಯರು ಮಧ್ಯ ಪ್ರವೇಶಿಸಬೇಕಾಗುವುದು. ಕಷ್ಟಪಟ್ಟು ಆರಂಭಿಸಿದ ಉದ್ಯಮದಲ್ಲಿ ಉದಾಸೀನ ತೋರಬೇಡಿ. ಉಳಿತಾಯದ ಹಣ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಿರಿ. ಗುರುವಿನ ಶ್ರೀರಕ್ಷೆ ಇರುವುದು.

ಮಿಥುನ:- ಮತ್ತೊಬ್ಬರಿಗೆ ತಿಳಿಯದಂತೆ ಗುಟ್ಟಾಗಿ ಮಾಡಿದ ವ್ಯವಹಾರದಲ್ಲಿ ಮೋಸ ಹೋಗುವ ಸಂಭವವಿದೆ. ಆದ್ದರಿಂದ ಅದನ್ನು ಬೇಗನೇ ಬಗೆಹರಿಸಿಕೊಳ್ಳಿರಿ. ಇಲ್ಲವಾದಲ್ಲಿ ಸರ್ಕಾರದಿಂದ ಭಾರಿ ದಂಡನೆಗೆ ಒಳಗಾಗುವಿರಿ. ಮನೆಯಲ್ಲಿ ಹಿರಿಯರೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇರುತ್ತದೆ. ಅಮೂಲ್ಯವಾದ ವಸ್ತುಗಳು ಕಣ್ಮರೆಯಾಗುವುದು. ಮಡದಿ ಕೊಡುವ ಸಲಹೆ ಗ್ರಾಹ್ಯವಾಗಿದ್ದಲ್ಲಿ ಮಾತ್ರ ಸ್ವೀಕರಿಸಿರಿ. ಸ್ನೇಹಿತರ ನಡುವೆ ಸಾಮರಸ್ಯ ಕಾಪಾಡಿಕೊಳ್ಳಿರಿ.

ಕಟಕ:- ಮನಸ್ಸಿನ ಚಂಚಲತೆಯು ಈ ವಾರ ನಿಮ್ಮ ಯೋಜನೆಗಳನ್ನು ತಲೆಕೆಳಗು ಮಾಡುವ ಸಾಧ್ಯತೆ ಇರುತ್ತದೆ. ಹಣಕಾಸಿನ ಹರಿವಿಗೆ ಕೊಂಚ ಬ್ರೇಕ್‌ ಬೀಳುವುದು. ಮನೆ ಕಟ್ಟುವ ಅಥವಾ ಆಸ್ತಿ ಕೊಳ್ಳುವ ವಿಚಾರದಲ್ಲಿ ಸಹೋದರನ ಸಲಹೆ ಪಡೆಯಿರಿ. ವ್ಯವಹಾರದಲ್ಲಿ ಮುಗ್ಗರಿಸಿದ ಮಿತ್ರನಿಗೆ ಕೈಹಿಡಿದು ಕಾಪಾಡುವಿರಿ. ಚಿಕ್ಕ ಮಕ್ಕಳಿಗೆ ಶೀತ ಸಂಬಂಧಿ ಜ್ವರಾದಿಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಿರಿ. ವ್ಯಾಪಾರಿಗಳು ತಾತ್ಕಾಲಿಕವಾಗಿ ಸಮತೋಲನೆ ಕಾಯ್ದುಕೊಳ್ಳಬೇಕು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

ಇದನ್ನೂ ಓದಿ- Budh Vakri 2021: ಈ ದಿನದ ಮಧ್ಯರಾತ್ರಿಯಿಂದ ಈ ರಾಶಿಯ ಜನರು ಎಚ್ಚರದಿಂದಿರಬೇಕಾಗಲಿದೆ

ಸಿಂಹ:- ಸದಾ ಚಂಚಲತೆ ಹಾಗೂ ಅನುಮಾನದ ಸುತ್ತ ಸುತ್ತುತ್ತಿರುವ ನಿಮ್ಮ ಮನಸ್ಥಿತಿ ಡೋಲಾಯಮಾನವಾಗಿದೆ. ಎಲ್ಲವನ್ನು ಜವಾಬ್ದಾರಿಯಿಂದ ನಿರ್ವಹಿಸಿದರೂ ಅಪವಾದ ತಪ್ಪುವುದಿಲ್ಲ. ಆದರೆ ಆ ಟೀಕೆ ಅಪವಾದಗಳನ್ನು ಜಾಣ್ಮೆಯಿಂದ ಬಗೆಹರಿಸಿಕೊಳ್ಳುವಿರಿ. ಭಾವೋದ್ವೇಗಕ್ಕೆ ಒಳಗಾಗುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುವುದು. ಆರೋಗ್ಯದ ಬಗ್ಗೆ ಅಲಕ್ಷ್ಯ ತೋರದೆ ಸೂಕ್ತ ವೈದ್ಯಕೀಯ ಸಲಹೆ ಪಡೆಯಿರಿ. ಹಿರಿಯರ ಸಮಸ್ಯೆಗಳನ್ನು ಗಮನವಿಟ್ಟು ಆಲಿಸಿ ಅವರಿಗೆ ಧೈರ್ಯ ತುಂಬುವಿರಿ.

ಕನ್ಯಾ:- ಸ್ವಂತ ಉದ್ಯಮದ ಹಾದಿಯಲ್ಲಿ ಮುನ್ನಡೆಯಿದೆ. ಇದಕ್ಕೆಲ್ಲಾ ನಿಮ್ಮ ಪರಿಶ್ರಮ ಹಾಗೂ ಶ್ರದ್ಧೆಯೆ ಕಾರಣ. ಹೆಚ್ಚುತ್ತಿರುವ ಆದಾಯದ ಮೂಲ ಆರ್ಥಿಕ ಭದ್ರತೆ ಒದಗಿಸುತ್ತದೆ. ಯಾರಾದರೂ ಸಲಹೆ ಕೇಳಿದರೆ ಶಾಂತಚಿತ್ತತೆಯಿಂದ ಆಲೋಚಿಸಿ ಉತ್ತರಿಸಿರಿ. ಮಕ್ಕಳ ಭವಿಷ್ಯದ ಬಗ್ಗೆ ನೀವು ತೆಗೆದುಕೊಂಡಿರುವ ತೀರ್ಮಾನ ಸೂಕ್ತವಾದುದು. ಆದರೆ ಮಕ್ಕಳು ನಿಮ್ಮ ತೀರ್ಮಾನದಿಂದ ಅಸಮಾಧಾನಗೊಳ್ಳುವರು. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷೆಗೆ ತಕ್ಕಂತೆ ಆದಾಯ ಒದಗಿ ಬರಲಿದೆ. ಗುರುಸ್ತೋತ್ರ ಪಠಿಸಿರಿ.

ತುಲಾ:- ಅವಸರದಲ್ಲಿ ಆರಂಭಿಸಿದ ಯೋಜನೆಗಳಿಗೆ ಹಣಕಾಸಿನ ಕೊರತೆ ಕಂಡು ಬರುವುದು. ಲಾಭದಾಯಕವಾಗಬೇಕಿದ್ದ ಯೋಜನೆಗೆ ಅಲ್ಪ ಹಿನ್ನಡೆಯುಂಟಾಗುವುದು. ನಿಮ್ಮ ಕಡೆಯಿಂದ ಉಪಕಾರ ಪಡೆದು ಉದ್ಧಾರ ಆದವರು ಈ ವಾರ ನಿಮ್ಮ ನೆರವಿಗೆ ಬಾರದೆ ಹೋಗುವ ಸಂದರ್ಭ ಬರುವುದು. ಸೋದರನ ಕಡೆಯಿಂದ ಬರಲಿರುವ ಸಲಹೆ ಸೂಚನೆ ಅತ್ಯುಪಯುಕ್ತ. ತಾಯಿಯ ತವರು ಮನೆಯಿಂದ ಸಿಗಲಿರುವ ನೆರವನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿರಿ. ಮಡದಿ ಮಕ್ಕಳ ಕೋರಿಕೆ ತೀರಿಸಲು ಹೆಚ್ಚಿನ ಖರ್ಚು ಭರಿಸಬೇಕಾಗುವುದು.

ವೃಶ್ಚಿಕ:- ಖಾಸಗಿ ಕಂಪನಿ ನೌಕರರು ಸ್ಥಳ ಬದಲಾವಣೆ ಮಾಡಬೇಕಾಗುವುದು. ಇದು ಅನಿರೀಕ್ಷಿತವಾಗಿದ್ದು ಈ ಬಗ್ಗೆ ಮಾನಸಿಕವಾಗಿ ಸಿದ್ಧರಾಗುವುದು ಉತ್ತಮ. ಮಗನ ಉದ್ಯೋಗದಲ್ಲಿ ಸ್ವಲ್ಪ ಅಡಚಣೆ ಕಂಡು ಬರಲಿದೆ. ಸಾಧು-ಸಂತರ ದರ್ಶನದಿಂದ ಮಾನಸಿಕ ನೆಮ್ಮದಿಯನ್ನು ಪಡೆಯುವಿರಿ. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯ ಕಂಡುಬರುವುದರಿಂದ ಆಹಾರ-ವಿಹಾರದಲ್ಲಿ ನಿಯಮತೆಯನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಪ್ರಯಾಣದಲ್ಲಿ ಎಷ್ಟೇ ಎಚ್ಚರಿಕೆ ಇದ್ದರೂ ಸಣ್ಣಪುಟ್ಟ ಪೆಟ್ಟುಗಳು ಆಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ- ಮಂಗಳನ ರಾಶಿ ಪರಿವರ್ತನೆಯಿಂದ ಈ ನಾಲ್ಕು ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

ಧನಸ್ಸು:- ವಿದ್ವಾಂಸರ ಪಾಂಡಿತ್ಯಕ್ಕೆ ಹಾಗೂ ಲೇಖನಗಳಿಗೆ ಉತ್ತಮ ವಿಮರ್ಶೆ ವ್ಯಕ್ತವಾಗುವುದು. ಕಲಾವಿದರಿಗೆ ಸಾಮಾಜಿಕ ಮನ್ನಣೆ ದೊರೆಯಲಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಒತ್ತಡದ ವಾತಾವರಣ ಇರುವುದು. ನ್ಯಾಯಾಲಯ ವ್ಯಾಜ್ಯಗಳನ್ನು ಕೋರ್ಟಿನಿಂದ ಹೊರಗೆ ರಾಜಿ-ಪಂಚಾಯ್ತಿ ಮೂಲಕ ಬಗೆಹರಿಸಿಕೊಳ್ಳಿರಿ. ಮತ್ತೊಬ್ಬರ ಸಾಲ-ಸೋಲಗಳಿಗೆ ನೀವು ಹೊಣೆ ಹೊರಬೇಡಿ. ಇದರಿಂದಾಗಿ ನೀವು ತೀವ್ರತರ ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಗುವುದು. ಪ್ರಯಾಣ ಮಾಡುವಾಗ ತೊಂದರೆ ಎದುರಾಗುವುದು.

ಮಕರ:- ಆಕಸ್ಮಿಕ ಧನ ಪ್ರಾಪ್ತಿಯು ನಿಮ್ಮ ಹೊಸ ಯೋಜನೆಗಳಿಗೆ ಸಹಾಯವಾಗಲಿದೆ. ಖಾದ್ಯ ತೈಲ ವ್ಯಾಪಾರಿಗಳಿಗೆ ಹೆಚ್ಚಿನ ಲಾಭಾಂಶ ಕಂಡುಬರುವುದು. ಸ್ನೇಹಿತರ ಸಹಾಯದಿಂದ ನಿಂತು ಹೋಗಿದ್ದ ಕಾರ್ಯಗಳಿಗೆ ಪುನಃ ಚಾಲನೆ ದೊರೆಯುವುದು. ಇದರಿಂದ ಮಾನಸಿಕವಾಗಿ ಹೆಚ್ಚು ಸಂತೋಷ ಹೊಂದುವಿರಿ. ಹಿರಿಯರ ಆರೋಗ್ಯದ ವಿಚಾರವಾಗಿ ಮನೆ ವೈದ್ಯರ ಸಲಹೆಯನ್ನು ಅನುಸರಿಸಿರಿ. ಆಸ್ತಿ ಖರೀದಿ ವಿಷಯದಲ್ಲೂ ಅನುಕೂಲ ಕಂಡು ಬರುವುದು.

ಕುಂಭ:- ನಿಮ್ಮ ಇಷ್ಟದಂತೆ ಯಾವುದೂ ನಡೆಯದಿರುವುದು ನಿಮ್ಮನ್ನು ಅಧೀರರನ್ನಾಗಿಸಬಹುದು. ಬಹಳ ದಿನಗಳಿಂದ ನಿಂತು ಹೋಗಿದ್ದ ಆಸ್ತಿ ವಿಚಾರ ಮತ್ತೆ ಬರಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸೋದರರಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇರುತ್ತದೆ. ಅನ್ಯೋನ್ಯವಾಗಿದ್ದ ಸ್ನೇಹದಲ್ಲಿ ಅಪನಂಬಿಕೆ ಕಾಣಿಸಿಕೊಳ್ಳುವುದು. ಹಿರಿಯರೊಂದಿಗೆ ಅನ್ಯಥಾ ವಾದ-ವಿವಾದಗಳು ಬೇಡ. ವ್ಯವಹಾರದ ಲೆಕ್ಕಾಚಾರದಲ್ಲಿ ಅಲ್ಪ ವ್ಯತ್ಯಾಸ ಕಂಡು ಬರುವುದು. ರೈತಾಪಿ ಮಿತ್ರರಿಗೆ ಸರ್ಕಾರದಿಂದ ಧನ ಸಹಾಯ ಸಿಗುವುದರ ಜೊತೆಯಲ್ಲಿ ಉತ್ತಮ ಬೆಂಬಲ ಸಿಗುವುದು.

ಮೀನ:- ಚಾಟಿಯಿಲ್ಲದೆ ಬುಗುರಿಯಾಡಿಸುವ ನಿಮ್ಮ ಪ್ರವೃತ್ತಿಗೆ ತೆರೆ ಬೀಳಲಿದೆ. ಮಿತಿ ಮೀರಿದ ಖರ್ಚಿನ ಬಾಬ್ತಿನಿಂದ ಕೂಡಿಟ್ಟ ಹಣ ಕರಗಲಿದೆ. ಚಾಡಿ ಮಾತುಗಳಿಂದ ದೂರವಿರಿ. ಧ್ಯಾನ ಯೋಗಾಭ್ಯಾಸ ನಿಮಗೆ ಸಹಾಯ ಮಾಡುವುದು. ಮತ್ತೊಬ್ಬರ ಸಹಾಯವನ್ನು ನೆಚ್ಚಿಕೊಂಡು ಕೆಲಸ ಮಾಡುವುದು ಸೂಕ್ತವಲ್ಲ. ಸ್ವಯಂ ವೈದ್ಯಕೀಯದಿಂದ ಅನರ್ಥವಿದೆ. ಉಳಿತಾಯದ ಹಣ ದುರುಪಯೋಗವಾಗದಂತೆ ಭದ್ರಪಡಿಸಿ. ನೀವು ರಚಿಸಿದ ಕೃತಿಗಳನ್ನು ಆದಷ್ಟು ಬೇಗನೆ ಪ್ರಕಾಶನಗೊಳಿಸುವುದು ಸೂಕ್ತ.

ಇದನ್ನೂ ಓದಿ- ಹೊರಗಿನಿಂದ ಮನೆಗೆ ಬರುವಾಗ ಈ ವಿಚಾರಗಳ ಬಗ್ಗೆ ಇರಲಿ ಎಚ್ಚರ..!

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News