Daily Horoscope: ದಿನಭವಿಷ್ಯ 21-04-2021 Today astrology

ಶ್ರೀ ಕ್ಷೇತ್ರ ಪಳನಿ ಸುಬ್ರಹ್ಮಣ್ಯ ಸ್ವಾಮಿ   ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ...

Written by - Zee Kannada News Desk | Last Updated : Apr 21, 2021, 06:40 AM IST
  • ​ಮಿಥುನ ರಾಶಿಯವರಿಗೆ ಕುಟುಂಬದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದ್ದ ಅನೇಕ ಸಮಸ್ಯೆಗಳಿಗೆ ಒಂದು ರೀತಿಯ ಅಂತ್ಯ ಕಂಡು ಬರಲಿದೆ
  • ಧನುಸ್ಸು ರಾಶಿಯವರಿಗೆ ಬಂಧು ಮಿತ್ರರ ಸಹಕಾರದಿಂದ ವ್ಯಾಪಾರ ವ್ಯವಹಾರಗಳು ಕುದುರಲಿವೆ
  • ಕುಂಭ ರಾಶಿಯ ಚಿನ್ನ, ಬೆಳ್ಳಿ ವರ್ತಕರು ತಮ್ಮ ವ್ಯವಹಾರದಲ್ಲಿ ಜಾಗ್ರತೆ ವಹಿಸಬೇಕು
Daily Horoscope: ದಿನಭವಿಷ್ಯ 21-04-2021 Today astrology  title=
Daily horoscope (ದಿನಭವಿಷ್ಯ 21-04-2021)

Daily horoscope (ದಿನಭವಿಷ್ಯ 21-04-2021) : ಶ್ರೀ ಕ್ಷೇತ್ರ ಪಳನಿ ಸುಬ್ರಹ್ಮಣ್ಯ ಸ್ವಾಮಿ   ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ...

ಮೇಷ ರಾಶಿ: ಸತತ ಸೋಲಿನಿಂದ ಗೆಲುವು ಕಂಡ ನಿಮಗೆ ಒಂದು ಕಡೆ ಸಂತೋಷವಾದರೂ ಮತ್ತೊಂದು ಕಡೆ ಸಂಕಷ್ಟ ಎದುರಾಗಲಿದೆ. ಗಟ್ಟಿ ಮನಸ್ಸಿನಿಂದ ಎಲ್ಲವನ್ನು ಎದುರಿಸುವಿರಿ. ಇದರಿಂದ ಸೂಕ್ತ ರೀತಿಯಲ್ಲಿ ಹೊರಬರುವಿರಿ. ಆರ್ಥಿಕ ಉದ್ದೇಶಕ್ಕಾಗಿ ಹಣದ ಹೂಡಿಕೆ ಮಾಡಲು ಇಂದು ಶುಭ ದಿನ. ಪ್ರೀತಿಪಾತ್ರರ ಸಹಾಯದಿಂದ ಅಂದುಕೊಂಡ ಕೆಲಸ ಪೂರ್ಣಗೊಳ್ಳುವುದು. 

​ವೃಷಭ ರಾಶಿ: ಮನೆ ಕಟ್ಟಲು ಅಗತ್ಯವಿರುವ ಪೂರಕ ವಾತಾವರಣ ಇಲ್ಲದೆ ಇರುವುದರಿಂದ ನಿಮ್ಮ ಉತ್ಸಾಹಕ್ಕೆ ಭಂಗ ಬರುವುದು. ಚಿಕ್ಕ ಮಕ್ಕಳಿಗೆ ಆಹಾರಕ್ಕೆ ಸಂಬಂಧಿಸಿದ ವ್ಯತ್ಯಾಸದಿಂದ ವೈದ್ಯರನ್ನು ಕಾಣಬೇಕಾದ ಪ್ರಸಂಗ ಬರುವುದು. ಮಾಡಿರುವ ಹೂಡಿಕೆಯಿಂದ ಹಣದ ಲಾಭವನ್ನು ಪಡೆಯುವಿರಿ. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಕುಟುಂಬದ ವಾತಾವರಣ ಇಂದು ಸುಧಾರಿಸುತ್ತದೆ.  

​ಮಿಥುನ ರಾಶಿ: ಕುಟುಂಬದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದ್ದ ಅನೇಕ ಸಮಸ್ಯೆಗಳಿಗೆ ಒಂದು ರೀತಿಯ ಅಂತ್ಯ ಕಂಡು ಬರಲಿದೆ. ಖಾಸಗಿ ಕಂಪನಿ ನೌಕರರು ತಮ್ಮ ಮೇಲಧಿಕಾರಿಗಳ ಮರ್ಜಿ ಕಾಯದೆ ವಿಧಿ ಇಲ್ಲದೆ ಕೆಲಸ ಮಾಡಬೇಕಾಗುತ್ತದೆ. ಈ ದಿನ ಹಣವನ್ನು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ.ಅತಿಯಾದ ಖರ್ಚುಗಳನ್ನು ತಪ್ಪಿಸಿ. 

​ಕಟಕ ರಾಶಿ: ನಿಮ್ಮ ನೇರ ನುಡಿಯನ್ನು ಎಲ್ಲರೂ ಮೆಚ್ಚುವರು. ಕೆಲವು ಜನ ಹಲವು ವಿಷಯಗಳ ಬಗ್ಗೆ ನಿಮ್ಮಿಂದ ಸಲಹೆ, ಸಹಕಾರ ಕೇಳುವರು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ. ಉನ್ನತ ಅಧಿಕಾರಿಗಳಿಗೂ ಮಾರ್ಗದರ್ಶನ ನೀಡುವಿರಿ. ಇದು ನಿಮ್ಮ ಪ್ರಗತಿಗೆ ಸಹಾಯಕ. ಈ ದಿನ ವ್ಯಾಪರಸ್ಥರಿಗೆ ಲಾಭವಾಗುವುದು. 

ಇದನ್ನೂ ಓದಿ - Ram Navami 2021: ಈ ಮಂತ್ರಗಳನ್ನು ಜಪಿಸಿ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಿ

​ಸಿಂಹ ರಾಶಿ: ಪ್ರತಿ ಕೆಲಸಗಳನ್ನು ನೀವೇ ಮಾಡಬೇಕೆಂಬ ಅಥವಾ ಎಲ್ಲದ್ದಕ್ಕೂ ನೀವೇ ಜವಾಬ್ದಾರರಾಗಬೇಕೆಂಬ ಧಾವಂತ ಬೇಡ. ಮಾಡುವ ಕೆಲಸಗಳಲ್ಲಿ ತಾಳ್ಮೆ, ಶಿಸ್ತು ಕಾಪಾಡಿಕೊಂಡರೆ ಉತ್ತಮ. ಕುಟುಂಬದಲ್ಲಿ ಅನಗತ್ಯ ಕಲಹಗಳಾಗಬಹುದು. ಪ್ರೀತಿಯ ಜೀವನದಲ್ಲಿ ಒತ್ತಡವು ಹಾಗೇಯೇ ಉಳಿಯುವುದು, ಇದು ನಿಮ್ಮ ಕೆಲಸದ ಮೇಲೂ ಪರಿಣಾಮ ಬೀರಬಹುದು. ದಿನವಿಡೀ ಕಾರ್ಯನಿರತರಾಗುವಿರಿ. 

​ಕನ್ಯಾ ರಾಶಿ: ದೈವಾನುಗ್ರಹ ನಿಮಗೆ ಮುನ್ನಡೆಯನ್ನು ತರಲಿದೆ. ವೈಯಕ್ತಿಕವಾಗಿ ಸಂಸಾರದಲ್ಲಿ ಸಾಮರಸ್ಯದ ಕೊರತೆ ಕಾಣಿಸಬಹುದು. ವಿಶೇಷವಾಗಿ ಮಕ್ಕಳ ಬಗ್ಗೆ ಹೆಚ್ಚಿನ ಗಮನವಿರಲಿ. ಇಂದು ನೀವು ಎಲ್ಲಾ ಕಾರ್ಯಗಳಲ್ಲಿ ನಿಮ್ಮ ಹಣೆಬರಹದ ಬೆಂಬಲವನ್ನು ಪಡೆಯುವಿರಿ. ಧರ್ಮದ ಬಗ್ಗೆ ಆಸಕ್ತಿ ಹೆಚ್ಚಾಗುವುದು. ಆಧ್ಯಾತ್ಮಿಕ ಪ್ರವೃತ್ತಿಗಳಲ್ಲಿ ಸಕ್ರಿಯರಾಗುವುದರಿಂದ ನೆಮ್ಮದಿ ಸಿಗುವುದು. 

​ತುಲಾ ರಾಶಿ: ಆಗಾಗ ಮಾನಸಿಕ ಒತ್ತಡ ಉದಾಸೀನತೆ ಅನುಭವಕ್ಕೆ ಬರಲಿದೆ. ಮನಸ್ಸನ್ನು ಆದಷ್ಟು ಶಾಂತವಾಗಿಟ್ಟುಕೊಳ್ಳಿ. ಧ್ಯಾನ ಮಾಡುವುದು ಉತ್ತಮ. ಆರ್ಥಿಕವಾಗಿ ಅಭಿವೃದ್ಧಿ ಆಗುತ್ತದೆ. ಕಾರ್ಯಕ್ಷೇತ್ರದಲ್ಲಿ ಹೊಂದಾಣಿಕೆ ಅಗತ್ಯವಿದೆ. ಪತಿ- ಪತ್ನಿಯರ ಮಧ್ಯೆ ಸಾಮರಸ್ಯ ಹೆಚ್ಚಾಗುವುದು. 

​ವೃಶ್ಚಿಕ ರಾಶಿ: ಹಿರಿಯರ ಆರೋಗ್ಯ ಭಾಗ್ಯವು ಸುಧಾರಿಸಲಿದೆ. ಸಾಂಸಾರಿಕವಾಗಿ ದೂರವಿರುವ ಸಂದರ್ಭ ಬರುವುದು. ದೂರ ಸಂಚಾರದಲ್ಲಿ ಅಪಘಾತ ಭೀತಿ ತಂದೀತು. ಗುರುಬಲದ ವಕ್ರದೃಷ್ಟಿ ಕಾರಣ ಗ್ರಹಿಸಿದ್ದ ಕೆಲಸಕಾರ್ಯಗಳು ನಡೆಯಲಾರವು. ಸಂಗಾತಿಯೊಂದಿಗೆ ಸಮಯ ಕಳೆಯುವುದರಿಂದ ಹೆಚ್ಚು ಆಹ್ಲಾದಕರವಾಗಿರುತ್ತದೆ. ಇದಲ್ಲದೇ ಸಾಮಾಜಿಕ ಗೌರವವನ್ನೂ ಪಡೆಯುವಿರಿ. ಸಹೋದರರು ಮತ್ತು ಪ್ರೀತಿ ಪಾತ್ರರೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. 

ಇದನ್ನೂ ಓದಿ - ಅಕ್ಷಯ ತೃತೀಯ ದಿನದಂದು ಚಿನ್ನ ಯಾಕೆ ಖರೀದಿಸಬೇಕು..?

​ಧನುಸ್ಸು ರಾಶಿ: ಬಂಧು ಮಿತ್ರರ ಸಹಕಾರದಿಂದ ವ್ಯಾಪಾರ ವ್ಯವಹಾರಗಳು ಕುದುರಲಿವೆ. ನೌಕರ ವರ್ಗಕ್ಕೆ ಬದಲಾವಣೆ, ಮುಂಬಡ್ತಿ ಪ್ರಾಪ್ತಿಯಿಂದ ಸಂತಸವಾಗಲಿದೆ. ನಿಮ್ಮ ಸ್ಪರ್ಧಿಗಳನ್ನು ಗೆಲ್ಲಲು ಅವಕಾಶ ಸಿಗುವುದು. ಮಹಿಳೆಯರಿಗೆ ಪಿತ್ತಕೋಶದಿಂದ ಆಗಾಗ ಅನಾರೋಗ್ಯ ಕಾಡಲಿದೆ. 

ಮಕರ ರಾಶಿ: ನಿರುದ್ಯೋಗಿಗಳಿಗೆ ನಿರೀಕ್ಷಿತ ಉದ್ಯೋಗ ಭಾಗ್ಯ ದೊರೆಯಲಿದೆ. ಹಿತಶತ್ರುಗಳಿಂದ ಆಗಾಗ ನಿಮಗೆ ಸಮಸ್ಯೆಗಳು ಬರಬಹುದು. ಸಾಂಸಾರಿಕವಾಗಿ ಧರ್ಮಪತ್ನಿಯ ಪ್ರೀತಿ ವಿಶ್ವಾಸ ಮುನ್ನೆಡಿಸಿತು. ಇಂದು ಮನಸ್ಸು ಸೃಜನಶೀಲ ಪ್ರವೃತ್ತಿಗಳತ್ತ ವಾಲುವುದು. ನೀವು ಉದ್ಯಮಿಯಾಗಿದ್ದರೆ ಅನಗತ್ಯವಾಗಿ ಕೆಲಸ ಮಾಡಬೇಕಾಗುವುದು. ಇದಲ್ಲದೇ ನೀವು ಯಾವುದಾದರೂ ಹೊಸ ಯೋಜನೆಯತ್ತ ಆಕರ್ಷಿತರಾಗಬಹುದು. 

​ಕುಂಭ ರಾಶಿ: ಶನಿಯ ಲಾಭ ಸ್ಥಾನದಿಂದ ತಾಂತ್ರಿಕ ಶಿಕ್ಷಣ, ವೈದ್ಯಕೀಯ ವಿಭಾಗಕ್ಕೆ ಉನ್ನತ ಅಭಿವೃದ್ಧಿ ಕಂಡು ಬರುವುದು. ಚಿನ್ನ, ಬೆಳ್ಳಿ ವರ್ತಕರು ತಮ್ಮ ವ್ಯವಹಾರದಲ್ಲಿ ಜಾಗ್ರತೆ ವಹಿಸಬೇಕು. ಇಂದು, ಸ್ಥಗಿತಗೊಂಡ ಕೆಲವು ಕೆಲಸಗಳು ಸಹ ಪೂರ್ಣಗೊಳ್ಳುವವು. ಯಾರೊಂದಿಗೂ ಚರ್ಚೆಗಿಳಿಯಬೇಡಿ. ಇಂದು ಮನೆಯಲ್ಲಿ ತಾಯಿ ಅಥವಾ ವಯಸ್ಸಾದ ಮಹಿಳೆ ಇದ್ದರೆ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. 

​ಮೀನ ರಾಶಿ: ಚಿಂತಿತ ಕೆಲಸ ಕಾರ್ಯಗಳು ವಿಳಂಬಗತಿಯಲ್ಲಿ ಸಾಗಲಿವೆ. ಧನಾದಯವಿದ್ದರೂ ಖರ್ಚನ್ನು ಹಿಡಿತದಲ್ಲಿಟ್ಟುಕೊಳ್ಳಿ. ಸಾಂಸಾರಿಕವಾಗಿ ಬಂಧು ಬಳಗದವರ ಸಹಕಾರವು ಮನಸ್ಸಿಗೆ ಶಾಂತಿ ನೆಮ್ಮದಿ ಕೊಡಲಿದೆ. ಮನಸ್ಸು ಚಿಂತೆ ಮುಕ್ತವಾಗುವುದು. ಕುಟುಂಬದಲ್ಲಿ ಶುಭ ಕಾರ್ಯಗಳ ಚರ್ಚೆ ನಡೆಯಬಹುದು. ಮಗನ ಕಡೆಯಿಂದಲೂ ಒಳ್ಳೆಯ ಸುದ್ದಿಯನ್ನು  ಪಡೆಯಬಹುದು. 

ಇದನ್ನೂ ಓದಿ - ಇಲ್ಲಿ ರುಂಡವಿಲ್ಲದ ದೇವಿಯನ್ನು ಪೂಜಿಸಲಾಗುತ್ತದೆ..! ಇಷ್ಟಾರ್ಥ ಈಡೇರಿಸುತ್ತಾಳಂತೆ ಚಿನ್ನಮ್ಮಾಸ್ತಿಕ ದೇವಿ

ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News