Daily horoscope (ದಿನಭವಿಷ್ಯ 24-02-2021) : ಶ್ರೀ ಕ್ಷೇತ್ರ ಇಡಗುಂಜಿ ಮಹಾಗಣಪತಿ ಕೃಪೆಯಿಂದ ಈ ರಾಶಿಗಳಿಗೆ ಇಂದು ಶುಭ ಮತ್ತು ಲಾಭ, ಇಂದಿನ ನಿಮ್ಮ ರಾಶಿ ಭವಿಷ್ಯ ನೋಡಿ
ಮೇಷ ರಾಶಿ : ನೀವು ಬಹಳ ದಿನಗಳಿಂದ ಒಂದು ಕಾರ್ಯವನ್ನು ನೆರವೇರಿಸಬೇಕು ಎಂದುಕೊಳ್ಳುತ್ತಿದ್ದರೆ ಈ ದಿನವು ಸಕಾಲವಾಗಿದೆ ಹಾಗೂ ನೀವು ಉತ್ತಮವಾದ ಆಹಾರವನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ ಕೂಡ ಉತ್ತಮವಾಗಿರುತ್ತದೆ. ಸ್ನೇಹಿತರು ಮತ್ತು ಸಹೋದರರಿಂದ ಉಂಟಾಗುವ ಒತ್ತಡದಿಂದ ಮನೆಯಲ್ಲಿ ಒಂದಷ್ಟು ದುಃಖ ಉಂಟಾಗಬಹುದು. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವ ಸಾಧ್ಯತೆ ಇದೆ. ಪ್ರೀತಿಯ ವಿಷಯದಲ್ಲಿ ಒಂದಷ್ಟು ಜಾಗರೂಕತೆಯನ್ನು ವಹಿಸಿ.
ವೃಷಭ ರಾಶಿ : ವ್ಯಾಪಾರಿಗಳು ತಮ್ಮ ವಿರೋಧಿಗಳ ಬಗ್ಗೆ ಜಾಗರೂಕತೆ ವಹಿಸಬೇಕು. ಯಾಕೆಂದರೆ ನಿಮ್ಮ ಪ್ರಮುಖ ಕೆಲಸಗಳ ಮೇಲೆ ಅಡ್ಡಿಪಡಿಸಲು ಪ್ರಯತ್ನಿಸುತ್ತಾರೆ. ಹಣದ ದೃಷ್ಟಿಯಿಂದ ಈ ದಿನವೂ ತುಂಬಾ ದುಬಾರಿಯಾಗಲಿದೆ. ನಿಮಗೆ ಕಚೇರಿಯಲ್ಲಿ ಕಷ್ಟದ ಕೆಲಸವನ್ನು ನಿಯೋಜಿಸಬಹುದು ಆದರೆ ನಿಮ್ಮ ಬುದ್ಧಿವಂತಿಕೆಯಿಂದ ಎಂತಹ ಕಷ್ಟ ಕೆಲಸವಾದರೂ ಸುಲಭವಾಗಿ ನಿರ್ವಹಿಸುವಿರು. ವಿದ್ಯಾರ್ಥಿಗಳು ಶಿಕ್ಷಣಕಾಗಿ ಹೆಚ್ಚು ಹಣವನ್ನು ಖರ್ಚು ಮಾಡುವ ಸಾಧ್ಯತೆ ಇದೆ ಮತ್ತು ಹಣದ ಕೊರತೆಯಿಂದಾಗಿ ನೀವು ನಿರಾಶೆ ಗೊಳ್ಳಬಹುದು.
ಮಿಥುನ ರಾಶಿ : ಈ ದಿನವು ನಿಮಗೆ ತುಂಬಾ ಉತ್ತಮವಾಗಿರುತ್ತದೆ. ಮತ್ತೆ ಹಣದ ಪರಿಸ್ಥಿತಿಯೂ ಕೂಡ ಉತ್ತಮವಾಗಿರುತ್ತದೆ. ನೀವು ಯಾವುದೇ ರೀತಿ ಹಣದ ವಹಿವಾಟನ್ನು ಕೂಡ ಮಾಡಬಹುದು. ಇಂದು ನೀವು ಕೆಲಸದ ಆರಂಭದಲ್ಲಿ ಉತ್ತಮ ಫಲಿತಾಂಶವನ್ನು ಹೊಂದುತ್ತೀರಿ. ನೀವು ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದರೆ ನಿಮ್ಮ ಕಾರ್ಯ ಕ್ಷಮತೆ ಕೂಡ ಅಭಿವೃದ್ಧಿಯಾಗಿದೆ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ.
ಕಟಕ ರಾಶಿ: ಕಚೇರಿಯಲ್ಲಿ ನಿಮ್ಮ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿರುವುದಿಲ್ಲ. ಕೆಲಸದ ಬಗ್ಗೆ ನಿರ್ಲಕ್ಷ್ಯ ತೋರಿದರೆ ಹೆಚ್ಚಿನ ತೊಂದರೆಗಳು ಉಂಟಾಗುತ್ತದೆ. ನಿಮಗೆ ವಹಿಸಲಾದ ಪ್ರಮುಖ ಜವಾಬ್ದಾರಿಯನ್ನು ಹಿಂಪಡೆಯಲಾಗುತ್ತದೆ. ದಿನನಿತ್ಯದ ವ್ಯಾಪಾರಿಗಳಿಗೆ ಈ ದಿನವು ಅನುಕೂಲಕರವಾಗಿ ಇರುತ್ತದೆ ಹಾಗೂ ಮದುವೆಯಾಗದೆ ಇರುವವರಿಗೆ ಮದುವೆಯ ಬಗ್ಗೆ ಸಿಹಿ ಸುದ್ದಿಗಳು ಕೇಳಿಬರಲಿದೆ.
ಇದನ್ನೂ ಓದಿ - ಇಲ್ಲಿನ ಶಿವಲಿಂಗದ ಬಣ್ಣ ದಿನಕ್ಕೆ ಮೂರು ಬಾರಿ ಬದಲಾಗುತ್ತದೆ..!
ಸಿಂಹ ರಾಶಿ : ಕೆಲಸದ ಬಗ್ಗೆ ತಿಳಿಯುವುದಾದರೆ ನೀವು ಒಂದು ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿರುವುದರಿಂದ ಇಂದು ಅದು ಉತ್ತಮ ಫಲಿತಾಂಶವನ್ನು ನೀಡುತ್ತದೆ ಹಾಗೂ ಉದ್ಯೋಗಸ್ಥರಿಗೆ ಉತ್ತಮ ಸ್ಥಾನವನ್ನು ಪಡೆಯಬಹುದು. ವ್ಯಾಪಾರಿಗಳು ಉತ್ತಮ ಲಾಭವನ್ನು ಪಡೆಯುವ ನಿರೀಕ್ಷೆಯಿದೆ. ಆದರೂ ನೀವು ನಿಮ್ಮ ಅಹಂಭಾವದಿಂದ ದೂರ ಇರಬೇಕು. ಹಣದ ದೃಷ್ಟಿಯಿಂದ ಈ ದಿನವು ಸ್ವಲ್ಪ ದುಬಾರಿಯಾಗಲಿದೆ. ಮಕ್ಕಳ ಪ್ರಗತಿಯಿಂದಾಗಿ ಮನಸ್ಸು ಸಂತೋಷವಾಗಿರುತ್ತದೆ.
ಕನ್ಯಾ ರಾಶಿ : ದೇವರ ಅನುಗ್ರಹ ನಿಮ್ಮ ಮೇಲೆ ಇದೆ ಮತ್ತು ತಂದೆ ಆಶೀರ್ವಾದ ಬಲದಿಂದ ನೀವು ಅಮೂಲ್ಯವಾದ ವಸ್ತು ಹಾಗೂ ಆಸ್ತಿಯನ್ನು ಖರೀದಿ ಮಾಡುವ ಹಂಬಲ ಇಂದು ನೆರವೇರುವ ಸಾಧ್ಯತೆ ಇದೆ. ನೀವು ಹೆಚ್ಚಿನ ಕೆಲಸಗಳಿಂದಾಗಿ ಹೆಚ್ಚು ಕಾರ್ಯನಿರತವಾಗಿರುತ್ತೀರಿ ಮತ್ತು ವಿನಾಕಾರಣ ಕೆಲಸ ಮಾಡುವುದನ್ನು ಆದಷ್ಟು ತಪ್ಪಿಸಿ. ಸಂಜೆಯಿಂದ ರಾತ್ರಿ ತನಕ ವಾಹನವನ್ನು ವೇಗವಾಗಿ ಚಲಿಸುವುದನ್ನು ತಪ್ಪಿಸಿ. ನಿಮ್ಮ ವೈಯಕ್ತಿಕ ಜೀವನದಲ್ಲಿ ಹೆಚ್ಚಿನ ಜವಾಬ್ದಾರಿ ಬರಬಹುದು.
ತುಲಾ ರಾಶಿ: ನಿಮ್ಮ ಉದ್ಯೋಗದ ಬಗ್ಗೆ ತಿಳಿಯುವುದಾದರೆ ನಿಮಗೆ ಹೆಚ್ಚಿನ ಜವಾಬ್ದಾರಿಗಳು ಬೀಳಲಿದೆ. ಹಾಗಾಗಿ ನಿಮಗೆ ದುಃಖ ಒತ್ತಡ ಕೂಡ ಕಾಡಲಿದೆ ವ್ಯಾಪಾರಿಗಳಿಗೆ ಹೆಚ್ಚಿನ ಲಾಭದ ನಿರೀಕ್ಷೆ ಇದೆ. ಕುಟುಂಬ ಜೀವನ ಇಂದು ಸಾಮಾನ್ಯವಾಗಿರುತ್ತದೆ ನೀವು ನಿಮ್ಮ ಮಕ್ಕಳೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವ ಅವಕಾಶವನ್ನು ಪಡೆಯುತ್ತೀರಿ.
ವೃಶ್ಚಿಕ ರಾಶಿ : ಕಠಿಣ ಪರಿಶ್ರಮದ ನಂತರ ನಿಮ್ಮ ಕೆಲಸದಲ್ಲಿ ಹೆಚ್ಚಿನ ಫಲಿತಾಂಶ ದೊರೆಯದೇ ಇರಬಹುದು. ನಿಮ್ಮ ಕೆಲಸದ ಬಗ್ಗೆ ಹಿರಿಯರು ಅತೃಪ್ತರಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ಇಂದು ಬಹಳ ಮುಖ್ಯವಾದ ದಿನವಾಗಿರುತ್ತದೆ. ನೀವು ಹೊಸ ಕೋರ್ಸ್ ಅನ್ನು ತೆಗೆದುಕೊಳ್ಳುವ ಬಗ್ಗೆ ಚಿಂತಿಸುತ್ತಿದ್ದರೆ ಅದನ್ನು ತೆಗೆದುಕೊಳ್ಳುವುದು ಒಳ್ಳೆಯದು. ಇದರಿಂದ ನಿಮಗೆ ಒಳ್ಳೆಯದು ಆಗುತ್ತದೆ ಮತ್ತು ನಿಮ್ಮ ಮನೆ ಸದಸ್ಯರಲ್ಲಿ ನೀವು ಮನಸ್ತಾಪವನ್ನು ಹೊಂದಬಹುದು. ಅಂತಹ ಸಂದರ್ಭದಲ್ಲಿ ನೀವು ಪದಗಳನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು.
ಇದನ್ನೂ ಓದಿ - Mercury Planet And Skin Problems: ಬುಧ ಅಶುಭನಾದರೆ ತ್ವಚೆಗೆ ಸಂಬಂಧಿಸಿದ ವ್ಯಾಧಿಗಳು ಬರುತ್ತವೆ
ಧನಸ್ಸು ರಾಶಿ : ನೀವು ನಿಮ್ಮ ಕಚೇರಿಯಲ್ಲಿ ಕೆಲಸಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದೇ ಹೋದರೆ ನಿಮ್ಮ ಪೂರ್ಣ ಪರಿಶ್ರಮದಿಂದ ಕೆಲಸ ನಿರ್ವಹಿಸಲು ಪ್ರಯತ್ನಿಸಿ. ಇದು ನಿಮಗೆ ಖಂಡಿತವಾಗಿಯೂ ನಿಮಗೆ ಯಶಸ್ಸನ್ನು ನೀಡುತ್ತದೆ. ವ್ಯಾಪಾರಿಗಳಿಗೆ ಉತ್ತಮ ಲಾಭ ಪಡೆಯುವ ಎಲ್ಲಾ ಸಾಧ್ಯತೆಗಳು ಇದೆ. ಕುಟುಂಬ ಜೀವನದ ಪರಿಸ್ಥಿತಿ ಕೂಡ ಉತ್ತಮವಾಗಿರುತ್ತದೆ. ಸ್ನೇಹಿತರನ್ನು ಭೇಟಿ ಮಾಡುವುದರಿಂದ ಮತ್ತು ಅವರು ನಿಮ್ಮ ಮನೆಗೆ ಆಗಮಿಸುವುದರಿಂದ ನಿಮಗೆ ಸಂತೋಷ ತರುತ್ತದೆ ಮತ್ತು ವ್ಯಾಪಾರ-ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಹೊಂದುತ್ತೀರಿ.
ಮಕರ ರಾಶಿ : ನೀವು ವ್ಯಾಪಾರ ಮಾಡುತ್ತಿದ್ದರೆ ಅಥವಾ ದೊಡ್ಡ ವ್ಯವಹಾರವನ್ನು ನಡೆಸಬೇಕು ಎಂದು ಉದ್ದೇಶ ಹೊಂದಿದ್ದರೆ ಹೆಚ್ಚಿನ ಜಾಗೃಕತೆ ವಹಿಸುವುದು ಒಳ್ಳೆಯದು. ಚಿಲ್ಲರೆ ವ್ಯಾಪಾರಿಗಳಿಗೆ ಇಂದು ಉತ್ತಮ ಲಾಭ ಗಳಿಸುವ ಅವಕಾಶ ಸಿಗುತ್ತದೆ. ನೌಕರರಿಗೆ ಇಂದು ಅದೃಷ್ಟದ ದಿನ ಎಂದು ಹೇಳಬಹುದು. ನಿಮಗೆ ಬೇಕಾದ ವರ್ಗಾವಣೆಯನ್ನು ಪಡೆಯುವ ಎಲ್ಲಾ ಸಾಧ್ಯತೆಗಳು ಇದೆ. ದೊಡ್ಡಮಟ್ಟದ ಖರ್ಚು ಎದುರಾಗಬಹುದು ಮತ್ತು ನೀವು ಸಣ್ಣಮಟ್ಟದ ಸಾಲ ಮರುಪಾವತಿಸುವ ಸಾಧ್ಯತೆ ಇದೆ. ಕುಟುಂಬ ಜೀವನ ಸಂತೋಷವಾಗಿರುತ್ತದೆ ಮತ್ತು ದೂರದಿಂದ ಅತಿಥಿಗಳು ಮನೆಗೆ ಆಗಮಿಸಬಹುದು.
ಕುಂಭ ರಾಶಿ : ನೀವು ಆರ್ಥಿಕವಾಗಿ ಹೆಚ್ಚು ಅಭಿವೃದ್ಧಿಯನ್ನು ಸಾಧಿಸುತ್ತೀರಿ. ಆದರೆ ಖರ್ಚುವೆಚ್ಚಗಳು ಕೂಡ ಅಷ್ಟೇ ವೇಗವಾಗಿ ಬರುತ್ತವೆ. ಮನೆಗೆ ಬಂಧುಗಳು ಮತ್ತು ಸ್ನೇಹಿತರ ಆಗಮನದಿಂದ ಸಂತೋಷ ವಾಗಲಿದೆ ಹಾಗೂ ಸಾಕಷ್ಟು ಪರಿಶ್ರಮದಿಂದ ನಿಮ್ಮ ಸಮಸ್ಯೆಗಳು ಸ್ವಲ್ಪ ದೂರವಾಗಲಿದೆ. ಕ್ರಮೇಣವಾಗಿ ನಿಮ್ಮ ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ. ಉದ್ಯೋಗದ ದಿಕ್ಕಿನಲ್ಲಿ ನೀವು ಅಭಿವೃದ್ಧಿ ಹೊಂದುತ್ತಿರಿ.
ಮೀನ ರಾಶಿ : ಇಂದು ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ. ಸಂಗಾತಿಯೊಂದಿಗಿನ ಪ್ರೀತಿ ಕೂಡ ಅಧಿಕವಾಗಿರುತ್ತದೆ. ನಿಮ್ಮ ಕೆಲಸದಲ್ಲಿ ಬರುವ ಅವಕಾಶಗಳನ್ನು ಉಪಯೋಗಿಸಿಕೊಂಡು ಸಂಪೂರ್ಣವಾದ ಲಾಭವನ್ನು ಪಡೆಯುವ ಎಲ್ಲಾ ಪ್ರಯತ್ನವನ್ನು ಮಾಡಿ. ಆದಾಯ ಹೆಚ್ಚಾಗುವ ಸಾಧ್ಯತೆ ಮತ್ತು ದೊಡ್ಡಮಟ್ಟದ ಖರ್ಚುಗಳು ಸಹ ಬರಬಹುದು. ನೀವು ಕೆಲಸದಲ್ಲಿ ಉತ್ಸಾಹ ಮತ್ತು ಸಮರ್ಪಣೆಯನ್ನು ತೋರಬೇಕು. ಅದು ನಿಮಗೆ ಉತ್ತಮ ಫಲಿತಾಂಶವನ್ನು ತೋರುತ್ತದೆ.
ಇದನ್ನೂ ಓದಿ - Vastu Tips - ಸುಖ ದಾಂಪತ್ಯ ಜೀವನಕ್ಕೆ ಮನೆಯ ಈ ದಿಕ್ಕಿನಲ್ಲಿರಲಿ ರಾಧಾ-ಕೃಷ್ಣರ ಭಾವಚಿತ್ರ
ಪಂಡಿತ್ ದಾಮೋದರ್ ಭಟ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.