ಹಾವು ಒಬ್ಬ ವ್ಯಕ್ತಿಯನ್ನು ಎಷ್ಟು ವೇಗವಾಗಿ ಬೆನ್ನಟ್ಟಬಹುದು ಗೊತ್ತೆ..? ಬೆನ್ನಟ್ಟಿದಾಗ ಈ ತಪ್ಪನ್ನು ಎಂದಿಗೂ ಮಾಡಬೇಡಿ.

Snake facts : ಭಾರತದಲ್ಲಿ ಕಂಡುಬರುವ ಎಲ್ಲಾ ಹಾವುಗಳಲ್ಲಿ ನಾಗರಹಾವು ಅತ್ಯಂತ ಚುರುಕು. ಈ ಹಾವಿನ ವೇಗ ಸೆಕೆಂಡಿಗೆ 3.3 ಮೀಟರ್‌ಗಳಷ್ಟಿದೆ. ಕಣ್ಣು ಮಿಟುಕಿಸುವಷ್ಟರಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಚಲಿಸಲು ಸಾಮರ್ಥ್ಯ ಇದಕ್ಕಿದೆ.. ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ ನೋಡಿ..

Written by - Krishna N K | Last Updated : Apr 17, 2025, 09:47 PM IST
    • ಭಾರತದಲ್ಲಿ ಕಂಡುಬರುವ ಎಲ್ಲಾ ಹಾವುಗಳಲ್ಲಿ ನಾಗರಹಾವು ಅತ್ಯಂತ ಚುರುಕು.
    • ಇದರಲ್ಲಿಯೇ ಕಾಳಿಂಗ ಸರ್ಪ ಸೇರಿದಂತೆ ಇತರ ವಿಷಕಾರಿ ಹಾವುಗಳಿವೆ.
    • ಇಂದು ನಾವು ಈ ಹಾವುಗಳಲ್ಲಿ ಒಂದಾದ ನಾಗರಹಾವಿನ ಬಗ್ಗೆ ತಿಳಿಯೋಣ ಬನ್ನಿ..
ಹಾವು ಒಬ್ಬ ವ್ಯಕ್ತಿಯನ್ನು ಎಷ್ಟು ವೇಗವಾಗಿ ಬೆನ್ನಟ್ಟಬಹುದು ಗೊತ್ತೆ..? ಬೆನ್ನಟ್ಟಿದಾಗ ಈ ತಪ್ಪನ್ನು ಎಂದಿಗೂ ಮಾಡಬೇಡಿ.

Intresting Facts : ಭಾರತದಲ್ಲಿ ಸಾವಿರಾರು ಜಾತಿಯ ಹಾವುಗಳು ಕಂಡುಬರುತ್ತವೆ, ಆದರೆ ಅವುಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ವಿಷಕಾರಿ. ಇವುಗಳಲ್ಲಿ ನಾಗರರಾವು ಒಂದು, ಇದರಲ್ಲಿಯೇ ಕಾಳಿಂಗ ಸರ್ಪ ಸೇರಿದಂತೆ ಇತರ ವಿಷಕಾರಿ ಹಾವುಗಳಿವೆ. ಇಂದು ನಾವು ಈ ಹಾವುಗಳಲ್ಲಿ ಒಂದಾದ ನಾಗರಹಾವಿನ ಬಗ್ಗೆ ತಿಳಿಯೋಣ ಬನ್ನಿ..

ನಾಗನ ಬಗ್ಗೆ ಇರುವ ದೊಡ್ಡ ತಪ್ಪು ಕಲ್ಪನೆಯೆಂದರೆ ಸೇಡು ಇಟ್ಟುಕೊಂಡು ಜನರನ್ನು ಬೆನ್ನಟ್ಟುತ್ತದೆ ಎಂಬುದು. ಆದರೆ ಅಸಲಿಗೆ ಸತ್ಯವೆಂದರೆ ಹಾವುಗಳು ಎಂದಿಗೂ ಜನರನ್ನು ಬೆನ್ನಟ್ಟುವುದಿಲ್ಲ. ಅವುಗಳು ಯಾವಾಗಲೂ ಮನುಷ್ಯರಿಂದ ದೂರವಿರಲು ಬಯಸುತ್ತವೆ.. ಆದರೆ, ಜೀವ ಭಯ ಬಂದಾಗ ಮಾತ್ರ ಆಕ್ರಮಣಕಾರಿಯಾಗುತ್ತವೆ. ಆದರೆ ಆ ಸಮಯದಲ್ಲಿ ನಿಮ್ಮನ್ನು ಬೆನ್ನಟ್ಟುತ್ತವೆ ಎಂದು ನಿಮಗೆ ಅನಿಸುತ್ತದೆ.

ಇದನ್ನೂ ಓದಿ:ಸಿಂಹದ ಜೊತೆ ರಣ ಹದ್ದುಗಳ ಕಾದಾಟ, "ಕಾಡಿನ ರಾಜ" ಅಂತ ಕರೆಯೋದು ಇದಕ್ಕೆ ಅನಿಸುತ್ತೆ...!

ಹಾವು ಎಂದಿಗೂ ನಿಮ್ಮ ಮೇಲೆ ತಾನಾಗಿಯೇ ದಾಳಿ ಮಾಡುವುದಿಲ್ಲ, ಅದು ಎರಡು ಸಂದರ್ಭಗಳಲ್ಲಿ ಮಾತ್ರ ನಿಮ್ಮ ಮೇಲೆ ದಾಳಿ ಮಾಡಲು ಪ್ರಯತ್ನಿಸಬಹುದು. ಒಂದೆಡೆ, ಅದು ನಿಮ್ಮಿಂದ ಅಪಾಯವನ್ನು ಗ್ರಹಿಸಿದರೆ ಕಚ್ಚುತ್ತದೆ, ಮತ್ತೊಂದೆಡೆ, ಅದು ತನ್ನ ಬೇಟೆಯೆಂದು ಭಾವಿಸಿದರೆ ಮಾತ್ರ ಕಚ್ಚುತ್ತದೆ. ರಸ್ತೆ ಎಷ್ಟೇ ಒರಟಾಗಿದ್ದರೂ, ಕಲ್ಲುಗಳಿದ್ದರೂ, ವೇಗದಲ್ಲಿ ಕಡಿಮೆಯಾಗುವುದಿಲ್ಲ. ನೆನಪಿಡಿ ಇತರ ಜಾತಿಯ ಹಾವುಗಳಿಗಿಂತ ನಾಗರಹಾವಿನ ವೇಗ ಹೆಚ್ಚು.

ನಾಗರಹಾವು ತುಂಬಾ ವಿಷಪೂರಿತ ಹಾವು, ಜೊತೆಗೆ ಚುರುಕಾಗಿರುತ್ತದೆ. ಆದ್ದರಿಂದ ಸರಿಯಾದ ತರಬೇತಿ ಇಲ್ಲದೆ ಅಪ್ಪಿ ತಪ್ಪಿಯೂ ಹಿಡಿಯಲು ಪ್ರಯತ್ನಿಸಬೇಡಿ. ಉರಗ ತಜ್ಞರಿಗೆ ಮಾಹಿತಿ ನೀಡುವುದು ತುಂಬಾ ಒಳ್ಳೆಯದು.. ಅಲ್ಲದೆ ಸಾಯಿಸಲೂ ಸಹ ಹೋಗಬೇಡಿ.. ಹಾವುಗಳು ನೀರಿನಲ್ಲಿಯೂ ಸಹ ಚೆನ್ನಾಗಿ ಈಜುತ್ತವೆ ಇದೂ ನಿಮ್ಮ ತಲೆಯಲ್ಲಿ ಇರಲಿ..

ಇದನ್ನೂ ಓದಿ:ವಿಶ್ವದಲ್ಲೇ ಮೊದಲ ಬಾರಿಗೆ, ಕ್ರಿಕೆಟ್‌ನಂತೆ ಮೈದಾನದಲ್ಲಿಯೇ "ವೀರ್ಯ ಓಟದ ಸ್ಪರ್ಧೆ" ಆಯೋಜನೆ..!

ಹೌದು.. ನಾಗರಹಾವು ಭೂಮಿಯ ಮೇಲೆ ಎಷ್ಟು ಚುರುಕಾಗಿರುತ್ತೋ, ನೀರಿನಲ್ಲಿಯೂ ಅಷ್ಟೇ ಚುರುಕಾಗಿರುತ್ತದೆ.. ಆದ್ದರಿಂದ, ನೀರಿನಲ್ಲಿ ಈ ಹಾವು ಏನೂ ಮಾಡಲ್ಲ ಅಂತ ಭಾವಿಸಿ ಸಾಹಸ ಮಾಡಲು ಹೋದರೆ ಸಾವು ಗ್ಯಾರಂಟಿ ಅದಕ್ಕಾಗಿ ಉರಗ ತಜ್ಞರನ್ನು ಸಂಪರ್ಕಿಸಿ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

Trending News