ತಲೆ ಸ್ನಾನ ಮಾಡಿ ತಲೆಗೆ ಟವಲ್ ಸುತ್ತಿಕೊಳ್ಳುತ್ತೀರಾ? ಹಾಗಿದ್ರೆ ನಿಮ್ಗೆ 3 ಸಮಸ್ಯೆಗಳು ಉಂಟಾಗುತ್ತವೆ!

Hair Care tips : ತಲೆ ಸ್ನಾನ ಮಾಡಿದ ನಂತರ ಅನೇಕ ಮಹಿಳೆಯರು ತಮ್ಮ ತಲೆಗೆ ಟವಲ್ ಅನ್ನು ಬಿಗಿಯಾಗಿ ಸುತ್ತಿಕೊಳ್ಳುತ್ತಾರೆ. ಅದರೆ ಅವರಿಗೆ ಇದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗಬಹುದು ಎಂಬುವುದುರ ಅರಿವೇ ಇರಲ್ಲ. ಬನ್ನಿ ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯೋಣ..

Written by - Krishna N K | Last Updated : Dec 11, 2025, 06:43 PM IST
    • ತಲೆ ಸ್ನಾನ ಮಾಡಿದ ನಂತರ ಅನೇಕ ಮಹಿಳೆಯರು ತಮ್ಮ ತಲೆಗೆ ಟವಲ್ ಅನ್ನು ಬಿಗಿಯಾಗಿ ಸುತ್ತಿಕೊಳ್ಳುತ್ತಾರೆ.
    • ಇದರಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗಬಹುದು ಎಂಬುವುದುರ ಅರಿವೇ ಇರಲ್ಲ.
    • ಮಹಿಳೆಯರು ಸ್ನಾನ ಮಾಡಿದ ನಂತರ ಮಾಡುವ ಮೊದಲ ಕೆಲಸವೆಂದರೆ ಕೂದಲನ್ನು ಟವೆಲ್‌ನಲ್ಲಿ ಸುತ್ತಿಕೊಳ್ಳುವುದು.
ತಲೆ ಸ್ನಾನ ಮಾಡಿ ತಲೆಗೆ ಟವಲ್ ಸುತ್ತಿಕೊಳ್ಳುತ್ತೀರಾ? ಹಾಗಿದ್ರೆ ನಿಮ್ಗೆ 3 ಸಮಸ್ಯೆಗಳು ಉಂಟಾಗುತ್ತವೆ!

Daily Hair care : ಸಾಮಾನ್ಯವಾಗಿ, ಮಹಿಳೆಯರು ಸ್ನಾನ ಮಾಡಿದ ನಂತರ ಮಾಡುವ ಮೊದಲ ಕೆಲಸವೆಂದರೆ ಕೂದಲನ್ನು ಟವೆಲ್‌ನಲ್ಲಿ ಸುತ್ತಿಕೊಳ್ಳುವುದು. ಕೆಲವರು ಗಂಟೆಗಟ್ಟಲೆ ತಲೆಗೆ ಟವೆಲ್‌ ಸುತ್ತಿಕೊಂಡಿರುತ್ತಾರೆ. ನೀವು ಕೂಡ ಹೀಗೆ ಮಾಡುತ್ತಿದ್ದರೆ, ಮತ್ತೆ ಆ ತಪ್ಪನ್ನು ಮಾಡಬೇಡಿ. ಅದರಿಂದ ಈ ಕೆಳಗೆ ನೀಡಿರುವ ಸಮಸ್ಯೆಗಳು ಉಂಟಾಗುತ್ತವೆ.. 

Add Zee News as a Preferred Source

ಕೂದಲು ಉದುರುವಿಕೆ: ಸ್ನಾನ ಮಾಡಿದ ತಕ್ಷಣ ಕೂದಲು ಬಾಚಿಕೊಳ್ಳಬಾರದು ಎಂದು ಜನರು ಹೇಳುತ್ತಾರೆ. ಹಾಗೆ ಬಾಚಿಕೊಂಡರೆ ಕೂದಲು ಉದುರುತ್ತದೆ. ಅದೇ ರೀತಿ, ನೀವು ಸ್ನಾನ ಮಾಡುವಾಗ ಕೂದಲು ಸಾಮಾನ್ಯಕ್ಕಿಂತ ಹೆಚ್ಚು ಉದುರುತ್ತದೆ.

ಇದನ್ನೂ ಓದಿ:ಕೋಳಿ ಮೊಟ್ಟೆ ಏನೂ ಅಲ್ಲ, ಈ ಹಕ್ಕಿಯ ಮೊಟ್ಟೆಯಲ್ಲಿಯೇ ಅತಿ ಹೆಚ್ಚು ಪ್ರೋಟೀನ್ ಇರೋದು!

ಕೂದಲಿನ ಬೆಳವಣಿಗೆ: ನಿಮ್ಮ ಕೂದಲಿಗೆ ಟವಲ್ ಕಟ್ಟಿದಾಗ, ಅದು ನಿಮ್ಮ ತಲೆಯಿಂದ ಎಲ್ಲಾ ನೀರನ್ನು ಹೀರಿಕೊಳ್ಳುತ್ತದೆ ಎಂಬುದು ನಿಜ, ಆದರೆ ಅದೇ ಸಮಯದಲ್ಲಿ, ನಿಮ್ಮ ಕೂದಲು ಇನ್ನಷ್ಟು ಒಣಗಿಸುತ್ತದೆ ಎಂಬುವುದನ್ನು ನೀವು ಮರೆಯಬಾರದು.

ಕೂದಲಿನ ಆಕಾರ ಬದಲಾಗುತ್ತದೆ: ಸ್ನಾನದ ನಂತರ ನಿಮ್ಮ ಕೂದಲನ್ನು ಟವಲ್‌ನಲ್ಲಿ ಸುತ್ತಿಕೊಂಡರೆ, ನಿಮ್ಮ ಕೂದಲಿನ ಆಕಾರ ಸಂಪೂರ್ಣವಾಗಿ ಬದಲಾಗುತ್ತದೆ. ಇದರರ್ಥ ನಿಮ್ಮ ನೇರ ಕೂದಲು ಶಾಶ್ವತವಾಗಿ ಅಲೆಅಲೆಯಾಗುತ್ತದೆ. ನಿಮ್ಮ ಕೂದಲನ್ನು ಮೊದಲಿನ ರೀತಿಯಲ್ಲಿ ಮರಳಿ ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ:ಮಾಡೆಲ್‌ ದೇಹವನ್ನ ಪೀಸ್‌ ಪೀಸ್‌ ಮಾಡಿ ಗರ್ಭಕೋಶವನ್ನೆ ಹೊರತೆಗೆದ ಕ್ರೂರಿ ಪತಿ..!

ಹೀಗೆ ಮಾಡಿ : ಸ್ನಾನದ ನಂತರ, ನಿಮ್ಮ ಕೂದಲನ್ನು ಟವೆಲ್‌ನಲ್ಲಿ ಸುತ್ತಿಕೊಳ್ಳದೆ ಬಿಸಿಲಿನಲ್ಲಿ ಅಥವಾ ತಂಗಾಳಿಯಲ್ಲಿ ಒಣಗಿಸಿ. ನಿಮಗೆ ಸಮಯವಿಲ್ಲದಿದ್ದರೆ, ನೀವು ಹೇರ್ ಡ್ರೈಯರ್ ಬಳಸಬಹುದು. ಆದರೆ ಹೆಚ್ಚಿನ ಶಾಖವನ್ನು ಬಳಸಬೇಡಿ. ಆದರೆ ಟವಲ್‌ನಲ್ಲಿ ಕೂದಲನ್ನು ಕಟ್ಟಬೇಡಿ..

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News