ದುಬಾರಿ ಹೇರ್‌ ಡೈ ಬೇಕಿಲ್ಲ... ಈ ಹೂವನ್ನು ಅರೆದು ತಲೆಗೆ ಹಚ್ಚಿ, ಬಿಳಿ ಕೂದಲು 10 ನಿಮಿಷದಲ್ಲೇ ಶಾಶ್ವತವಾಗಿ ಕಡು ಕಪ್ಪಾಗುವುದು!

white hair remedies: ಎಲ್ಲರ ಮನೆಯಂಗಳದಲ್ಲಿ ಸಿಗುವ ಈ ಸಾಮಾನ್ಯ ಹೂವನ್ನು ಸರಿಯಾಗಿ ಬಳಸಿದರೆ ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸಬಹುದು.

Written by - Chetana Devarmani | Last Updated : Oct 6, 2025, 06:16 PM IST
  • ಬಿಳಿ ಕೂದಲಿಗೆ ಮನೆಮದ್ದು
  • ಬಿಳಿ ಕೂದಲಿಗೆ ನೈಸರ್ಗಿಕ ಪರಿಹಾರ
  • ದಾಸವಾಳ ಹೂವಿನ ಹೇರ್‌ ಮಾಸ್ಕ್‌
ದುಬಾರಿ ಹೇರ್‌ ಡೈ ಬೇಕಿಲ್ಲ... ಈ ಹೂವನ್ನು ಅರೆದು ತಲೆಗೆ ಹಚ್ಚಿ, ಬಿಳಿ ಕೂದಲು 10 ನಿಮಿಷದಲ್ಲೇ ಶಾಶ್ವತವಾಗಿ ಕಡು ಕಪ್ಪಾಗುವುದು!

how to darken white hair: ಬಿಳಿ ಕೂದಲನ್ನು ಕಪ್ಪಾಗಿಸಲು ರಾಸಾಯನಿಕಯುಕ್ತ ಹೇರ್‌ ಡೈಗಳ ಬದಲು ಕೆಲವು ನೈಸರ್ಗಿಕ ಪರಿಹಾರಗಳನ್ನು ಬಳಸಬೇಕು. ದಾಸವಾಳ ಕೂದಲು ಬಿಳಿಯಾಗುವುದನ್ನು ತಡೆಯಲು ಸಹಾಯಕವಾಗಿದೆ. ಮಾಲಿನ್ಯ, ಆಧುನಿಕ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿ ಕೂದಲಿನ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಚಿಕ್ಕವಯಸ್ಸಿನಲ್ಲೇ ಬಿಳಿ ಕೂದಲಿನ ಸಮಸ್ಯೆ ಅನೇಕರನ್ನು ಕಾಡುತ್ತಿದೆ. 

Add Zee News as a Preferred Source

ದಾಸವಾಳ ಹೂವಿನ ಹೇರ್‌ ಮಾಸ್ಕ್‌ ತಯಾರಿಸಿ ಹಚ್ಚಿಕೊಂಡರೆ ಬಿಳಿ ಕೂದಲನ್ನು ಕಪ್ಪಾಗಿಸಬಹುದು. ಯಾವುದೇ ರಾಸಾಯನಿಕ ಆಧಾರಿತ ಹೇರ್ ಕಲರ್ ಇಲ್ಲದೇ ಬಿಳಿ ಕೂದಲು ಕಪ್ಪಾಗುವುದು. ಕೂದಲು ಉದುರುವ ಸಮಸ್ಯೆಗೆ ಕೂಡ ಇದು ಪರಿಣಾಮಕಾರಿಯಾಗಿದೆ. 

ಬಿಳಿ ಕೂದಲು ಇರುವವರು ಗೋರಂಟಿ ಎಲೆ ಮತ್ತು ದಾಸವಾಳ ಹೂವಿನ ಈ ಹೇರ್‌ ಮಾಸ್ಕ್‌ ಹಚ್ಚಿಕೊಳ್ಳಬೇಕು. ಇದು ಕೂದಲಿನ ಹೊಳಪಿಗೆ ಕಾರಣವಾಗುತ್ತದೆ. ಒಣ ನಿರ್ಜೀವ ಕೂದಲು ರೇಷ್ಮೆಯಂತೆ ಮಿಂಚಲು ಆರಂಭಿಸುತ್ತದೆ.

ಗೋರಂಟಿ ಎಲೆಗಳು ಮತ್ತು ದಾಸವಾಳ ಹೂವಿನ ಪೇಸ್ಟ್ ೆರಡನ್ನೂ ಒಟ್ಟಿಗೆ ಬೆರೆಸಿ ಹಚ್ಚುವುದರಿಂದ ಕೂದಲಿನ ಬಣ್ಣ ನೈಸರ್ಗಿಕವಾಗಿ ಕಪ್ಪಾಗುತ್ತದೆ. ಮೊದಲು ಒಂದಷ್ಟು ಗೋರಂಟಿ ಎಲೆಗಳನ್ನು ಸಂಗ್ರಹಿಸಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಿ. 

ದಾಸವಾಳ ಹೂವುಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಮತ್ತು ಅದಕ್ಕೆ 10 ದಾಸವಾಳ ಹೂವು ಹಾಕಿ ಚೆನ್ನಾಗಿ ಕುದಿಸಿ. ಈಗ ಈ ನೀರನ್ನು ತಣ್ಣಗಾಗಲು ಬಿಡಿ. ನಂತರ ನೀರಿನಲ್ಲಿ ಗೋರಂಟಿ ಎಲೆಯ ಪುಡಿಯನ್ನು ಬೆರೆಸಿ ಒಂದು ಗಂಟೆ ನೆನೆಯಲು ಬಿಡಿ. 

ಗೋರಂಟಿ ಪುಡಿ ಮತ್ತು ದಾಸವಾಳದ ಪೇಸ್ಟ್‌ಗೆ ಸ್ವಲ್ಪ ತೆಂಗಿನೆಣ್ಣೆ ಸೇರಿಸಿ ಕೂದಲಿನ ಬೇರುಗಳಿಂದ ತುದಿಯವರೆಗೆ ಹಚ್ಚಿಕೊಳ್ಳಿ. ಸುಮಾರು ಒಂದು ಗಂಟೆ ಬಡಿ. ನಂತರ ತಲೆ ಸ್ನಾನ ಮಾಡಿ. ಇದರಿಂದ ಕೂದಲು ಕಪ್ಪಾಗುವುದರ ಜೊತೆಗೆ ತಲೆಹೊಟ್ಟು ನಿವಾರಣೆ ಆಗುವುದು

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. 

ಇದನ್ನೂ ಓದಿ: ಈ ಪುಟ್ಟ ಕಾಳುಗಳನ್ನು ಬಳಸಿ ಬೆಳ್ಳಗಾಗಿರುವ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಿ

ಇದನ್ನೂ ಓದಿ: ಈ ಹಣ್ಣು ಬೆಣ್ಣೆಯಂತೆ ಕೊಬ್ಬನ್ನು ಕರಗಿಸುವ ಅಮೃತ! ಪ್ರತಿದಿನ ಒಂದೇ ಒಂದು ತಿಂದರೂ ಸಾಕು

About the Author

Chetana Devarmani

" ಚೇತನಾ ದೇವರಮನಿ ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Senior Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 7 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ...Read More

Trending News