how many days after menstruation can women go to the temple: ಋತುಚಕ್ರದ ಬಗ್ಗೆ ಅನೇಕ ನಂಬಿಕೆಗಳನ್ನು ಕೇಳಿದ್ದೇವೆ. ವಿಶೇಷವಾಗಿ ಈ ಸಮಯದಲ್ಲಿ ಪೂಜೆ ಮತ್ತು ಉಪವಾಸ ಮಾಡುವುದು ಅಥವಾ ದೇವಾಸ್ಥಾನಕ್ಕೆ ಹೋಗುವುದು... ಈ ಬಗ್ಗೆ ಕಠಿಣ ನಿಯಮಗಳನ್ನು ಮಾಡಲಾಗಿದೆ. ಉಪವಾಸದ ಮೊದಲು ಮುಟ್ಟು ಬಂದರೆ ಏನು ಮಾಡುವುದು ಎಂಬ ಭಯ ಮಹಿಳೆಯರು ಮತ್ತು ಹುಡುಗಿಯರ ಮನಸ್ಸಿನಲ್ಲಿ ಇರುತ್ತದೆ. ಈ ಸಮಯದಲ್ಲಿ ಪ್ರಸಾದವನ್ನು ಸಿದ್ಧಪಡಿಸಬಹುದೇ ಅಥವಾ ಇಲ್ಲವೇ? ಈ ಎಲ್ಲದರ ಬಗ್ಗೆ ಪ್ರೇಮಚಂದ್ ಮಹಾರಾಜ್ ಹೇಳಿದ್ದೇನು? ಎಂಬುದನ್ನು ತಿಳಿಯೋಣ.
ಇದನ್ನೂ ಓದಿ: ಇದೆಂಥಾ ವಿಧಿಯಾಟ... ಮದುವೆಯಾದ 11 ದಿನಕ್ಕೆ ಪತಿಯನ್ನ ಕಳೆದುಕೊಂಡ ಕನ್ನಡದ ಖ್ಯಾತ ನಟಿ! 25 ವರ್ಷಕ್ಕೆ ವಿಧವೆ
ವೃಂದಾವನದಲ್ಲಿ ಪ್ರವಚನ ನೀಡುವಾಗ, ಪ್ರೇಮಚಂದ್ ಮಹಾರಾಜ್ ಮುಟ್ಟಿನ ಸಮಯದಲ್ಲಿ ಪ್ರಸಾದವನ್ನು ಮಾಡಬೇಕೇ ಅಥವಾ ಬೇಡವೇ ಎಂಬುದರ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಮುಟ್ಟಿನ ಸಮಯದಲ್ಲಿ ಮೂರು ದಿನಗಳವರೆಗೆ ಪ್ರಸಾದ ಮಾಡುವುದನ್ನು ತಡೆಯಬೇಕೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಪ್ರೇಮಚಂದ್ ಮಹಾರಾಜ್ ಹೇಳಿದರು. ಈ ಸಮಯದಲ್ಲಿ ಮಹಿಳೆಯರು ಮತ್ತು ಹುಡುಗಿಯರು ದೇವರ ಹೆಸರನ್ನು ಜಪಿಸಬೇಕು. ಇಲ್ಲವೇ ಭಜನೆಗಳನ್ನು ಮೂರು ದಿನಗಳವರೆಗೆ ಹಾಡಬೇಕು ಎಂದು ಉಪದೇಶ ನೀಡಿದ್ದಾರೆ.
ಕಥೆಗಾರ್ತಿ ಜಯ ಕಿಶೋರಿ ಕೂಡ ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಿದರು. ಮುಟ್ಟಿನ ಸಮಯದಲ್ಲಿ ಮಹಿಳೆಯರು ಆಂತರಿಕವಾಗಿ ತುಂಬಾ ದುರ್ಬಲರಾಗುತ್ತಾರೆ, ಆದ್ದರಿಂದ ಅವರು ವಿಶ್ರಾಂತಿ ಪಡೆಯಲು ಸಲಹೆ ನೀಡಲಾಗುತ್ತದೆ. ಹಳೆಯ ಕಾಲದಲ್ಲಿ, ಜನರಿಗೆ ಮುಟ್ಟಿನ ಬಗ್ಗೆ ಹೆಚ್ಚು ಅರಿವಿರಲಿಲ್ಲ, ನೈರ್ಮಲ್ಯದ ವಿಧಾನಗಳಿರಲಿಲ್ಲ. ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದರೆ, ಅದಕ್ಕಾಗಿಯೇ ಮಹಿಳೆಯರು ಮತ್ತು ಹುಡುಗಿಯರಿಗೆ ವಿಶ್ರಾಂತಿ ಪಡೆಯಲು ಹೇಳಲಾಗುತ್ತಿತ್ತು ಎಂದು ಹೇಳಿದ್ದಾರೆ.
ಇನ್ನು ಮುಟ್ಟಾದ ಎಷ್ಟು ದಿನಗಳ ಬಳಿಕ ದೇವಸ್ಥಾನಕ್ಕೆ ಹೋಗಬಹುದು ಎಂಬ ವಿಚಾರದಲ್ಲಿ ಅನೇಕರಿಗೆ ಅನೇಕ ಗೊಂದಲಗಳಿದೆ. ಹೀಗಿರುವಾಗ ಜ್ಯೋತಿಷ್ಯದ ಪ್ರಕಾರ ದೇವಸ್ಥಾನಕ್ಕೆ ಯಾವ ದಿನ ಹೋಗಬಹುದು ಎಂಬುದನ್ನು ತಿಳಿಯೋಣ.
ನಿಮ್ಮ ಮುಟ್ಟು 3ನೇ ದಿನಕ್ಕೆ ನಿಂತರೆ ನಾಲ್ಕನೇ ದಿನ ತಲೆಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗಬಹುದು. ಆದರೆ 5 ಅಥವಾ 6ನೇ ದಿನದ ಬಳಿಕ ತಲೆಸ್ನಾನ ಮಾಡಿ 7ನೇ ದಿನ ಹೋಗುವುದು ಹೆಚ್ಚು ಸೂಕ್ತ. ಇನ್ನೂ ಕೆಲವರಿಗೆ 7ನೇ ದಿನದ ತನಕ ಮುಟ್ಟಿರುತ್ತದೆ. ಹೀಗಿರುವಾಗ 8ನೇ ದಿನ ತಲೆಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗಬಹುದು. ಮುಖ್ಯವಾಗಿ ಇವೆಲ್ಲವೂ ನಂಬಿಕೆಗಳ ಮೇಲೆ ನಿಂತಿವೆ. ನಿಮ್ಮ ಮನಸ್ಸು ಹಾಗೂ ಸಂಪ್ರದಾಯದ ಅನುಸಾರ ನಿಯಮಗಳನ್ನ ಫಾಲೋ ಮಾಡಬಹುದು.
ಇದನ್ನೂ ಓದಿ: ಬ್ಯಾಕ್ ಟು ಬ್ಯಾಕ್ ಸೆಂಚುರಿ... ಸಚಿನ್ ಹೆಸರಲ್ಲಿದ್ದ ಈ ದಾಖಲೆ ಸರಿಗಟ್ಟಿದ ರಿಷಬ್ ಪಂತ್!
ಮುಟ್ಟಿನ ಸಮಯದಲ್ಲಿ ಮಹಿಳೆಯರು ಮತ್ತು ಹುಡುಗಿಯರು ದೇವಸ್ಥಾನಕ್ಕೆ ಹೋಗುವುದನ್ನು ನಿಷೇಧಿಸಲಾಗಿದೆ. ಹಳೆಯ ಕಾಲದಲ್ಲಿ, ಜನರು ದೇವಸ್ಥಾನಕ್ಕೆ ಹೋಗಿ ಅಲ್ಲಿನ ನದಿಯಲ್ಲಿ ಸ್ನಾನ ಮಾಡುತ್ತಿದ್ದರು. ಆದ್ದರಿಂದ ಮುಟ್ಟಿನ ಸಮಯದಲ್ಲಿ ಮಹಿಳೆಯರು ದೇವಸ್ಥಾನಕ್ಕೆ ಹೋಗುವುದನ್ನು ನಿಷೇಧಿಸಲಾಗಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ