)
Vishnu Rekha: ವ್ಯಕ್ತಿಯ ಭವಿಷ್ಯವನ್ನು ಕೈಯಲ್ಲಿರುವ ರೇಖೆಗಳಿಂದ ನಿರ್ಧರಿಸಬಹುದು ಎಂದು ಹೇಳಲಾಗುತ್ತದೆ. ಈ ರೇಖೆಗಳು ಅವರ ವೃತ್ತಿ, ಆರ್ಥಿಕ ಸ್ಥಿತಿ, ಮದುವೆ ಅಥವಾ ಆರೋಗ್ಯ ಇತ್ಯಾದಿಗಳ ಬಗ್ಗೆ ತಿಳಿಸಿಕೊಡುತ್ತದೆ. ಕೈಯ ರೇಖೆಗಳು, ಆಕಾರಗಳು, ಚಿಹ್ನೆಗಳು, ಮಚ್ಚೆಗಳು, ಗುರುತುಗಳು ಇತ್ಯಾದಿಗಳ ಸಹಾಯದಿಂದ ಒಬ್ಬರ ಭವಿಷ್ಯದ ಕುರಿತು ನಾವು ತಿಳಿದುಕೊಳ್ಳಬಹುದು. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ, ಕೆಲವು ರೇಖೆಗಳು ಮತ್ತು ಚಿಹ್ನೆಗಳು ಕೈಯಲ್ಲಿದ್ದರೆ, ಆ ವ್ಯಕ್ತಿಯನ್ನು ಅದೃಷ್ಟಶಾಲಿ ಎಂದು ಹೇಳಲಾಗುತ್ತದೆ. ಅಂತಹ ವ್ಯಕ್ತಿಯು ತನ್ನ ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಾನೆ, ಅಪಾರ ಸಂಪತ್ತನ್ನು ಗಳಿಸುತ್ತಾನೆ ಮತ್ತು ಗೌರವವನ್ನು ಪಡೆಯುತ್ತಾನೆ ಎಂಬ ನಂಬಿಕೆ ಇದೆ. ಅಂತಹ ರೇಖೆಗಳಲ್ಲಿ ಒಂದು ವಿಷ್ಣು ರೇಖೆ.
ಅಂಗೈಯಲ್ಲಿರುವ ಹೃದಯ ರೇಖೆಯಿಂದ ಒಂದು ರೇಖೆಯು ಹೊರಹೊಮ್ಮಿ ಗುರು ಪರ್ವತಕ್ಕೆ ಹೋಗುವ ರೀತಿಯಲ್ಲಿ ಹೃದಯ ರೇಖೆಯು ಎರಡು ಭಾಗಗಳಾಗಿ ವಿಂಗಡಿಸಲ್ಪಟ್ಟಂತೆ ಕಾಣುತ್ತದೆ ಅದನ್ನು ವಿಷ್ಣು ರೇಖೆ ಎಂಧೂ ಕರೆಯಲಾಗುತ್ತದೆ. ಈ ರೇಖೆ ನಿಮ್ಮ ಕೈಯಲ್ಲಿದ್ದರೆ, ಅಪಾರ ಸಂಪತ್ತು ಮತ್ತು ಖ್ಯಾತಿಯನ್ನು ನೀಡಿ ಮಹಾನ್ ವಿಷ್ಣು ಆಶಿರ್ವದಿಸುತ್ತಾನೆ ಎಂಬ ನಂಬಿಕೆ ಇದೆ. ಇದಷ್ಟೇ ಅಲ್ಲದೆ ವಿಷ್ಣುವಿನ ವಿಶೇಷ ಆಶಿರ್ವಾದ ಈ ಜನರ ಮೇಲೆ ಇರುತ್ತದೆ ಎಂದು ಹೇಳಲಾಗುತ್ತದೆ. ಈ ರೀತಿ ಕೈಯಲ್ಲಿ ರೇಖೆ ಇರುವ ವ್ಯಕ್ತಿಯೂ ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಪಡೆಯುತ್ತಾನೆ. ಅವನು ಸುಲಭವಾಗಿ ಖ್ಯಾತಿ ಮತ್ತು ಸಂಪತ್ತನ್ನು ಗಳಿಸುತ್ತಾನೆ ಎಂಬ ನಂಬಿಕೆ ಇದೆ.
ವಿಷ್ಣು ರೇಖೆ ಕಡಿಮೆ ಉದ್ದ ಇದ್ದರೆ, ಆ ವ್ಯಕ್ತಿಗೆ ಅದರಿಂದ ಕಡಿಮೆ ಪ್ರಯೋಜನಗಳು ಸಿಗುತ್ತವೆ. ಅವನಿಗೆ ಯಶಸ್ಸು ಮತ್ತು ಸಂಪತ್ತು ಸಿಗುತ್ತದೆ ಆದರೆ ಪೂರ್ಣ ಪ್ರಯೋಜನಗಳು ಸಿಗುವುದಿಲ್ಲ. ಅಲ್ಲದೆ ಅವನು ಯಶಸ್ಸಿಗೆ ಸ್ವಲ್ಪ ಕಾಯಬೇಕಾಗುತ್ತದೆ. ಅಷ್ಟೆ ಅಲ್ಲದೆ ಈ ರೀತಿ ರೇಖೆ ಇದ್ದರೆ, ಅವರ ವೈವಾಹಿಕ ಜೀವನವು ಸಂತೋಷದಾಯಕವಾಗಿರುತ್ತಾರೆ ಎಂದು ನಂಬಲಾಗಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಮೂಲಗಳ ಮಾಹಿತಿ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ, ಇದನ್ನು ZEE KANNADA NEWS ಖಚಿತ ಪಡಿಸುವುದಿಲ್ಲ.