)
Vastu Tips: ದೀಪವಿಲ್ಲದೆ, ಪೂಜೆಯು ಅಪೂರ್ಣವೆಂದು ಪರಿಗಣಿಸಲಾಗಿದೆ ಮತ್ತು ಭಗವಂತನ ಮುಂದೆ ತುಪ್ಪ ಅಥವಾ ಎಣ್ಣೆಯಿಂದ ದೀಪವನ್ನು ಬೆಳಗಿಸಿ ಪೂಜೆಯನ್ನು ಪೂರ್ಣಗೊಳಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ವಿವಿಧ ಎಣ್ಣೆ ದೀಪಗಳನ್ನು ಬೆಳಗಿಸುವುದು ತನ್ನದೇ ಆದ ಮಹತ್ವವನ್ನು ಹೊಂದಿದೆ. ಎಳ್ಳಿನ ಎಣ್ಣೆಯಿಂದ ದೀಪವನ್ನು ಹಚ್ಚುವುದು ಸಾಸಿವೆ ಎಣ್ಣೆಗಿಂತ ಹೆಚ್ಚು ಮಂಗಳಕರವೆಂದು ಪರಿಗಣಿಸಲಾಗಿದೆ.
ಹಿಂದೂ ಧರ್ಮದಲ್ಲಿ ಪೂಜೆ ಮತ್ತು ದೀಪಕ್ಕೆ ವಿಶೇಷ ಸ್ಥಾನವಿದೆ. ಹಸುವಿನ ತುಪ್ಪ, ಎಳ್ಳೆಣ್ಣೆ, ಮಲ್ಲಿಗೆ ಎಣ್ಣೆ ಮತ್ತು ಸಾಸಿವೆ ಎಣ್ಣೆಯಂತಹ ವಿವಿಧ ರೀತಿಯ ಎಣ್ಣೆಯಿಂದ ಈ ದೀಪವನ್ನು ಬೆಳಗಿಸಲಾಗುತ್ತದೆ. ಆದರೆ ಎಳ್ಳಿನ ಎಣ್ಣೆಯಿಂದ ದೀಪವನ್ನು ಬೆಳಗಿಸುವುದು ಹಿಂದೂ ಧರ್ಮದಲ್ಲಿ ಪುರಾತನ ಮತ್ತು ಪವಿತ್ರ ಸಂಪ್ರದಾಯವಾಗಿದೆ. ಎಳ್ಳು ಎಣ್ಣೆಯ ದೀಪವನ್ನು ಬೆಳಗಿಸುವುದರಿಂದ ಪರಿಸರವನ್ನು ಶುದ್ಧೀಕರಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ನಂಬಲಾಗಿದೆ. ಈ ಎಣ್ಣೆಯ ದೀಪವನ್ನು ಹಚ್ಚುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಲಾಗುತ್ತದೆ..
ಎಳ್ಳಿನ ಎಣ್ಣೆಯಿಂದ ದೀಪವನ್ನು ಬೆಳಗಿಸುವುದರಿಂದ ವಾತಾವರಣದಲ್ಲಿನ ನಕಾರಾತ್ಮಕತೆ ದೂರವಾಗುತ್ತದೆ. ಈ ಮೂಲಕ ಮನೆಮಂದಿಗೆ ಮಾನಸಿಕ ನೆಮ್ಮದಿಯೂ ಸಿಗುತ್ತದೆ. ಇದಲ್ಲದೆ, ಮುಖ್ಯ ದ್ವಾರದಲ್ಲಿ ಎಳ್ಳೆಣ್ಣೆಯ ದೀಪವನ್ನು ಬೆಳಗಿಸಿದರೇ ಆ ಭಕ್ತನ ಮನೆಯನ್ನು ಲಕ್ಷ್ಮಿ ದೇವಿಯು ಸುಖವಾಗಿಡುತ್ತಾಳೆ.. ಇದಲ್ಲದೆ, ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುವುದಿಲ್ಲ.
ಪುರಾಣ ಗ್ರಂಥಗಳ ಪ್ರಕಾರ ಎಳ್ಳಿನ ಎಣ್ಣೆಯನ್ನು ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ. ಪೂಜೆಯ ಸಮಯದಲ್ಲಿ ಎಳ್ಳಿನ ಎಣ್ಣೆಯಿಂದ ದೀಪವನ್ನು ಬೆಳಗಿಸುವುದರಿಂದ ಸಂತೋಷವಾಗುತ್ತದೆ. ಇದಲ್ಲದೆ ಈ ಎಳ್ಳಿನ ಎಣ್ಣೆಯು ಶನೀಶ್ವರನಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಿದೆ. ಶನೀಶ್ವರನ ಕೋಪವನ್ನು ಶಮನಗೊಳಿಸಲು ಇದು ತುಂಬಾ ಪರಿಣಾಮಕಾರಿ ಎಂದು ನಂಬಲಾಗಿದೆ.
ಜಾತಕದಲ್ಲಿರುವ ಗ್ರಹದೋಷ ನಿವಾರಣೆಯಾಗುತ್ತದೆ:
ಎಳ್ಳೆಣ್ಣೆ ದೀಪವನ್ನು ಬೆಳಗಿಸುವುದರಿಂದ ಜಾತಕದಲ್ಲಿ ಸೂರ್ಯನ ಸ್ಥಾನವು ಬಲಗೊಳ್ಳುತ್ತದೆ. ಇದಲ್ಲದೆ, ಇದು ವೃತ್ತಿ, ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಪ್ರಗತಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ. ಜಾತಕದಲ್ಲಿ ಚಂದ್ರನ ಸ್ಥಾನವನ್ನು ಬಲಪಡಿಸುತ್ತದೆ. ಗ್ರಹದೋಷಗಳನ್ನು ಹೋಗಲಾಡಿಸಲು ಸಹ ಸಹಾಯ ಮಾಡುತ್ತದೆ.
ಈ ವಿಷಯಗಳಿಗೆ ವಿಶೇಷ ಗಮನ ಕೊಡಿ:
ಎಳ್ಳೆಣ್ಣೆ ದೀಪವನ್ನು ಹಚ್ಚುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಡಬೇಕು. ದೇವರ ಎಡಭಾಗದಲ್ಲಿ ಎಳ್ಳು ಎಣ್ಣೆಯ ದೀಪವನ್ನು ಬೆಳಗಿಸಬೇಕು. ಹಾಗೆಯೇ ಪೂಜೆಯ ಮಧ್ಯದಲ್ಲಿ ದೀಪವನ್ನು ನಂದಿಸಬಾರದು. ಪೂಜೆಯ ಮಧ್ಯದಲ್ಲಿ ದೀಪವನ್ನು ನಂದಿಸಿದರೇ, ಪೂಜೆಯು ಸಂಪೂರ್ಣವಾಗಿ ಫಲಪ್ರದವಾಗುವುದಿಲ್ಲ.
ಎಳ್ಳಿನ ಎಣ್ಣೆಯ ಪ್ರಾಮುಖ್ಯತೆ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎಳ್ಳೆಣ್ಣೆ ಇರುವ ದೀಪವು ವಾತಾವರಣದಲ್ಲಿ ಸುಗಂಧವನ್ನು ಹರಡುತ್ತದೆ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ. ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ. ಎಳ್ಳೆಣ್ಣೆ ದೀಪವನ್ನು ಹಚ್ಚುವುದರಿಂದ ಶನಿ ದೋಷ, ರಾಹು-ಕೇತು ದೋಷ ಇತ್ಯಾದಿ ಗ್ರಹದೋಷಗಳು ನಿವಾರಣೆಯಾಗುತ್ತವೆ. ದೇವತೆಗಳಿಗೆ ಎಳ್ಳೆಣ್ಣೆ ಅರ್ಪಿಸಿದಾಗ ಅವರು ಸಂತಸಗೊಂಡು ಭಕ್ತರ ಮೇಲೆ ತಮ್ಮ ಆಶೀರ್ವಾದವನ್ನು ಧಾರೆ ಎರೆಯುತ್ತಾರೆ.