)
snake bite: ಸಾಮಾನ್ಯವಾಗಿ ಮಳೆಗಾಲದ ಸಮಯದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುತ್ತದೆ. ಇದರಿಂದ ಹಾವುಗಳು ಹುತ್ತದಿಂದ ಹೊರಬರುತ್ತೇವೆ. ಈ ಪರಿಣಾಮವಾಗಿ ಕೆಲವೊಮ್ಮೆ ಅವು ಮನುಷ್ಯರ ಮೇಲೆ ದಾಳಿಯನ್ನೂ ಸಹ ಮಾಡಬಹುದು. ಆದರೆ ಈ ರೀತಿಯ ಹಾವಿನದಾಳಿಗಳು ನಾವು ನೀವು ಅಂದುಕೊಂಡಷ್ಟು ಅಪಾಯಕಾರಿಯಲ್ಲ. ಈ ತಂಪಿನ ವಾತಾವರಣದಲ್ಲಿ ಹಾವು ಕಡಿತಗಳು ಹೆಚ್ಚು. ಆದರೆ ಜನರು ಈ ವಿಷಯದ ಕುರಿತು ಸಮಯಪ್ರಜ್ಞೆ ಮತ್ತು ಜಾಗರೂಕತೆಯಿಂದ ಇರಬೇಕು. ಹಾವು ಕಚ್ಚಿದ ನಂತರ ಅನೇಕ ಜನರು ಭಯಭೀತರಾಗುತ್ತಾರೆ ಇದರಿಂದ ಏಕಾಏಕಿ ಅವರ ಹೃದಯ ಬಡಿತ ಹೆಚ್ಚಾಗುತ್ತದೆ.ಇದರ ಪರಿಣಾಮ ಹಾವಿನ ವಿಷವು ದೇಹದಲ್ಲಿ ವೇಗವಾಗಿ ಹರಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹಾವು ಕಚ್ಚಿದ ವ್ಯಕ್ತಿ ಸಾಯಬಹುದು. ಹಾಗಿದ್ರೆ ಹಾವು ಕಚ್ಚಿದ್ರೆ ಏನು ಮಾಡ್ಬೇಕು. ಇದರ ಕುರಿತು ಒಂದು ವಿಷೇಶ ಮಾಹಿತಿ ಇಲ್ಲಿದೆ. ಸಾಮಾನ್ಯವಾಗಿ ಹಾವು ಕಚ್ಚಿದಾಗ ಅದರ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳುವುದು ಮತ್ತು ತ್ವರಿತ ಚಿಕಿತ್ಸೆಯು ಜೀವಗಳನ್ನು ಉಳಿಸುವ ಏಕೈಕ ಪರಿಹಾರವಾಗಿದೆ.
ಹಾವು ಕಚ್ಚಿದ ನಂತರ ಮಾಡಬೇಕಾದ ಪ್ರಮುಖ ಕೆಲಸವೆಂದರೆ ಗಾಯಗೊಂಡ ವ್ಯಕ್ತಿಯನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುವುದು. ಇನ್ನು'ಗೋಲ್ಡನ್ ಅವಧಿ' ಎಂದರೆ ಹಾವು ಕಚ್ಚಿದ ಮೊದಲ ಕೆಲವು ಗಂಟೆಗಳಲ್ಲಿ ರೋಗಿಗೆ ವಿಷ ನಿರೋಧಕ ಔಷಧದ ಡೋಸ್ ನೀಡಿದರೆ, ಗಾಯಗೊಂಡ ವ್ಯಕ್ತಿಯ ಜೀವವನ್ನು ಉಳಿಸಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪುವುದು ಮೊದಲ ಆದ್ಯತೆಯಾಗಿರಬೇಕು. ಹಾವು ಕಚ್ಚಿದ ನಂತರ, ಹಾವನ್ನು ಹಿಡಿಯಲು ಅಥವಾ ಕೊಲ್ಲಲು ಎಂದಿಗೂ ಪ್ರಯತ್ನಿಸಬಾರದು. ಆ ಸಮಯದಲ್ಲಿ, ಹಾವು ತುಂಬಾ ಆಕ್ರಮಣಕಾರಿ ಮತ್ತು ಕೋಪಗೊಂಡಿರಬಹುದು, ಅದು ಬೇರೆಯವರನ್ನು ಕಚ್ಚಲು ಮತ್ತು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು ಕಾರಣವಾಗಬಹುದು.
ಸಾಧ್ಯವಾದರೆ ಹಾವಿನ ಸ್ಪಷ್ಟ ಫೋಟೋ ತೆಗೆದುಕೊಳ್ಳಿ. ಈ ಫೋಟೋದ ಸಹಾಯದಿಂದ ವೈದ್ಯರು ಹಾವು ಹೆಮೋಟಾಕ್ಸಿನ್ (ರಕ್ತದ ಮೇಲೆ ಪರಿಣಾಮ ಬೀರುತ್ತದೆ) ಅಥವಾ ನ್ಯೂರೋಟಾಕ್ಸಿನ್ (ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ) ಎಂಬುದನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಇದು ಸರಿಯಾದ ಔಷಧವನ್ನು ಆಯ್ಕೆ ಮಾಡಲು ಮತ್ತು ಪರಿಣಾಮಕಾರಿ ಚಿಕಿತ್ಸೆಯನ್ನು ನೀಡಲು ಸುಲಭಗೊಳಿಸುತ್ತದೆ. ಇನ್ನು ಸಿನಿಮಾಗಳಲ್ಲಿ ತೋರಿಸಿರುವಂತೆ ಹಾವಿನ ವಿಷವನ್ನು ಹೀರುವುದು ಅಥವಾ ಗಾಯಕ್ಕೆ ಬಿಗಿಯಾಗಿ ಬ್ಯಾಂಡೇಜ್ ಹಾಕುವುದು ಮುಂತಾದ ವಿಧಾನಗಳನ್ನು ಎಂದಿಗೂ ಮಾಡಬೇಡಿ. ವಿಷವನ್ನು ಹೀರುವುದು ಅದನ್ನು ಹೀರುವ ವ್ಯಕ್ತಿಯ ಜೀವಕ್ಕೆ ಅಪಾಯಕಾರಿ ಮತ್ತು ಗಾಯಕ್ಕೆ ಬಿಗಿಯಾಗಿ ಬ್ಯಾಂಡೇಜ್ ಹಾಕುವುದರಿಂದ ರಕ್ತ ಪರಿಚಲನೆ ಕಡಿತಗೊಂಡು ಕಚ್ಚಿದ ಭಾಗಕ್ಕೆ ದೊಡ್ಡ ಮತ್ತಷ್ಟು ಹಾನಿಯಾಗುತ್ತದೆ. ಇದರೊಂದಿಗೆ ಯಾವುದೇ ಸ್ವಯಂ ತಾಂತ್ರಿಕ ವಿಧಾನಗಳು ಅಥವಾ ಔಷಧೀಯ ಸಸ್ಯಗಳ ಬಳಕೆಯನ್ನು ಸಂಪೂರ್ಣವಾಗಿ ಕೈಬಿಡಬೇಕು. ಇಂತಹ ಅವೈಜ್ಞಾನಿಕ ವಿಧಾನಗಳು ಸಮಯವನ್ನು ವ್ಯರ್ಥ ಮಾಡುತ್ತವೆ ಮತ್ತು ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ತಲುಪಿಸುವಲ್ಲಿ ಅನಗತ್ಯ ವಿಳಂಬವನ್ನು ಉಂಟುಮಾಡುತ್ತವೆ. ಹಾವು ಕಡಿತದಿಂದ ನಿವಾರಣೆ ಪಡೆಯಲು ಇರುವ ಏಕೈಕ ಚಿಕಿತ್ಸೆಯೆಂದರೆ ಅದು ವಿಷ ನಿರೋಧಕ. ಇದು ಸರ್ಕಾರಿ ಮತ್ತು ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದೆ. ಆದ್ದರಿಂದ ಹಾವು ಕಚ್ಚಿದ ಸಂದರ್ಭದಲ್ಲಿ ಯಾವುದೇ ಮೂಢನಂಬಿಕೆಗೆ ಬಲಿಯಾಗದೆ ತಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯಬೇಕು.