ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಮೂಡಿದೆಯೇ? ಕೆಲವೇ ನಿಮಿಷಗಳಲ್ಲಿ ಈ ರೀತಿ ಪರಿಹಾರ ಕಂಡುಕೊಳ್ಳಿ

Home remedy to remove dark circles: ಇಂದು ಅನೇಕರು ಕಣ್ಣಿನ ಸುತ್ತಮುತ್ತಲೂ ಬರುವ ಕಪ್ಪು ಕಲೆ ಅಥವಾ ಡಾರ್ಕ್‌ ಸಮಸ್ಯೆಯಿಂದ ಚಿಂತೆಗೀಡಾಗಿರುತ್ತಾರೆ. ಈ ಕಪ್ಪು ಕಲೆಗಳಿಗೆ ಕೆಲವು ಮನೆಮದ್ದುಗಳನ್ನು ಟ್ರೈ ಮಾಡಿದರೆ ಕೂಡಲೇ ಪರಿಹಾರ ನೀಡುತ್ತವೆ.

Written by - Puttaraj K Alur | Last Updated : Apr 6, 2025, 04:44 PM IST
  • ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸುತ್ತಲೂ ಕಪ್ಪು ಕಲೆ ಅಥವಾ ಡಾರ್ಕ್ ಸರ್ಕಲ್ ಸಾಮಾನ್ಯವಾಗಿದೆ
  • ರಾತ್ರಿ ಕಣ್ಣುಗಳ ಮೇಲೆ ತಣ್ಣನೆಯ ಟೀ ಬ್ಯಾಗ್‌ಗಳನ್ನ ಇಟ್ಟರೆ ಡಾರ್ಕ್ ಸರ್ಕಲ್‌ನಿಂದ ಮುಕ್ತಿ ಸಿಗುತ್ತೆ
  • ಚರ್ಮದ ಸಮಸ್ಯೆಗಳಿಗೆ ಕೇಸರಿಯನ್ನ ಆಯುರ್ವೇದ ಔಷಧಿಯಾಗಿ ಹಿಂದಿನಿಂದಲೂ ಬಳಸಲಾಗುತ್ತದೆ
ಕಣ್ಣಿನ ಸುತ್ತ ಡಾರ್ಕ್ ಸರ್ಕಲ್ ಮೂಡಿದೆಯೇ? ಕೆಲವೇ ನಿಮಿಷಗಳಲ್ಲಿ ಈ ರೀತಿ ಪರಿಹಾರ ಕಂಡುಕೊಳ್ಳಿ

Skin care tips: ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸುತ್ತಲೂ ಕಪ್ಪು ಕಲೆ ಅಥವಾ ಡಾರ್ಕ್ ಸರ್ಕಲ್ ತುಂಬಾ ಸಾಮಾನ್ಯವಾಗಿದೆ. ಸಾಮಾನ್ಯವಾಗಿ ಇವು ಯಾವುದೇ ಗಂಭೀರ ಆರೋಗ್ಯ ಸಮಸ್ಯೆಯನ್ನು ಸೂಚಿಸುವುದಿಲ್ಲ. ಆದರೆ ಕಣ್ಣುಗಳ ಕೆಳಗೆ ದೊಡ್ಡ ಕಪ್ಪು ಕಲೆಗಳು ಮುಖದ ಸೌಂದರ್ಯವನ್ನು ಖಂಡಿತ ಹಾಳುಮಾಡುತ್ತವೆ. ನೀವು ನಿಮ್ಮ ಚರ್ಮವನ್ನು ಚೆನ್ನಾಗಿ ನೋಡಿಕೊಂಡರೂ ಸಹ, ಕಣ್ಣುಗಳ ಕೆಳಗೆ ಕಪ್ಪು ವರ್ತುಲಗಳು ನಿಮ್ಮನ್ನು ವಯಸ್ಸಾದ, ದಣಿದ ಮತ್ತು ಮಂದವಾಗಿ ಕಾಣುವಂತೆ ಮಾಡುತ್ತದೆ. ನೀವು ಕೂಡ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಕೆಲವು ಅತ್ಯುತ್ತಮ ಮನೆಮದ್ದುಗಳನ್ನು ಟ್ರೈ ಮಾಡಬೇಕು. ಹಾಗಾದರೆ ಕಪ್ಪು ವೃತ್ತಗಳಿಂದ ಹೇಗೆ ಮುಕ್ತಿ ಪಡೆಯಬೇಕೆಂದು ತಿಳಿಯಿರಿ..

Add Zee News as a Preferred Source

ರಾತ್ರಿಯಲ್ಲಿ ಕಣ್ಣುಗಳ ಮೇಲೆ ತಣ್ಣನೆಯ ಟೀ ಬ್ಯಾಗ್‌ಗಳನ್ನು ಇಡುವುದರಿಂದ ಡಾರ್ಕ್ ಸರ್ಕಲ್ ತೊಡೆದುಹಾಕಲು ಸಹಾಯ ಮಾಡುತ್ತದೆ. ಚಹಾದಲ್ಲಿ ಕಂಡುಬರುವ ಪಾಲಿಫಿನಾಲ್‌ಗಳು ಮತ್ತು ಕ್ಯಾಟೆಚಿನ್‌ಗಳು ಕಪ್ಪು ವೃತ್ತಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎರಡು ಟೀ ಬ್ಯಾಗ್‌ಗಳನ್ನು ತೆಗೆದುಕೊಂಡು ರೆಫ್ರಿಜರೇಟರ್‌ನಲ್ಲಿ ಇರಿಸಿ. ಅದು ಸಂಪೂರ್ಣವಾಗಿ ತಣ್ಣಗಾದ ನಂತರ ಅದನ್ನು ಕಣ್ಣುಗಳ ಮೇಲೆ 10-15 ನಿಮಿಷಗಳ ಕಾಲ ಇಡಿ. ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಗಳಿಗಾಗಿ ದಿನಕ್ಕೆ ಎರಡು ಬಾರಿ ಇದನ್ನು ಪ್ರಯತ್ನಿಸಿ.

ಇದನ್ನೂ ಓದಿ: ಈ ಮಾತ್ರೆ ತಿಂದು ಹೂಸು ಬಿಟ್ಟರೆ, ಘಮಘಮ ಸುಗಂಧ ಪರಿಮಳ ಬರುತ್ತೆ..! ಪಕ್ಕದಲ್ಲಿರುವವರಿಗೂ ಇಷ್ಟವಾಗುತ್ತೆ..

ಚರ್ಮದ ಸಮಸ್ಯೆಗಳಿಗೆ ಕೇಸರಿಯನ್ನು ಆಯುರ್ವೇದ ಔಷಧಿಯಾಗಿ ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಇದು ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಚರ್ಮದ ವರ್ಣದ್ರವ್ಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ವಯಸ್ಸಾದ ಕಾರಣ ಉಂಟಾಗುವ ಸೂಕ್ಷ್ಮ ರೇಖೆಗಳು ಮತ್ತು ಡಾರ್ಕ್ ಸರ್ಕಲ್‌ಗಳನ್ನು ಸಹ ಸರಿಪಡಿಸುತ್ತದೆ. ಒಂದು ಚಮಚ ಹಸಿ ಹಾಲು ತೆಗೆದುಕೊಂಡು, ಅದಕ್ಕೆ ಕೆಲವು ಎಳೆ ಕೇಸರಿ ಸೇರಿಸಿ, ಸ್ವಲ್ಪ ಸಮಯ ನೆನೆಯಲು ಬಿಡಿ. ಈ ಮಿಶ್ರಣವನ್ನು ಬೆರಳುಗಳ ಸಹಾಯದಿಂದ ಕಪ್ಪು ವೃತ್ತಗಳಿರುವ ಜಾಗಕ್ಕೆ ಹಚ್ಚಿ. ರಾತ್ರಿಯಿಡೀ ಹಾಗೆಯೇ ಬಿಟ್ಟು ಮರುದಿನ ತೊಳೆಯಿರಿ. ಕೊಳಗಾಗಿ ಕಂಡರೆ 15 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆಯಬಹುದು. ಉತ್ತಮ ಫಲಿತಾಂಶಕ್ಕೆ ಇದನ್ನು ಕೆಲವು ವಾರಗಳವರೆಗೆ ಮುಂದುವರಿಸಿ.

ನಿಂಬೆಹಣ್ಣು ಬ್ಲೀಚಿಂಗ್ ಗುಣಗಳನ್ನು ಹೊಂದಿದೆ ಮತ್ತು ವಿಟಮಿನ್ ʼಸಿʼ ಯಲ್ಲಿ ಸಮೃದ್ಧವಾಗಿದೆ. ಇದು ಕಪ್ಪು ವೃತ್ತಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಂಬೆ ರಸವನ್ನು ನಿಯಮಿತವಾಗಿ ಬಳಸುವುದರಿಂದ ಕಣ್ಣುಗಳ ಕೆಳಗಿರುವ ತೆಳುವಾದ ಚರ್ಮವನ್ನು ಬಲಪಡಿಸುತ್ತದೆ, ಇದರಿಂದ ವರ್ಣದ್ರವ್ಯ ಮತ್ತು ಕಪ್ಪು ವೃತ್ತಗಳು ಕಡಿಮೆಯಾಗುತ್ತವೆ. ಸ್ವಲ್ಪ ಪ್ರಮಾಣದ ನಿಂಬೆ ರಸ ಮತ್ತು ಟೊಮೆಟೊ ರಸವನ್ನು ತೆಗೆದುಕೊಳ್ಳಿ. ಚೆನ್ನಾಗಿ ಮಿಶ್ರಣ ಮಾಡಿ. ಎರಡೂ ರಸಗಳ ಮಿಶ್ರಣವನ್ನು ಹತ್ತಿಯ ಪ್ಯಾಡ್ ಸಹಾಯದಿಂದ ನಿಮ್ಮ ಕಣ್ಣುಗಳ ಕೆಳಗೆ ಹಚ್ಚಿ. ಅದು ಒಣಗಿದ ನಂತರ ಅದನ್ನು ಮತ್ತೆ ಹಚ್ಚಿ, 10-15 ನಿಮಿಷಗಳ ಕಾಲ ಒಣಗಲು ಬಿಡಿ ಮತ್ತು ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ನೀವು ಇದನ್ನು ಪ್ರತಿದಿನವೂ ಅನ್ವಯಿಸಬಹುದು.

ಇದನ್ನೂ ಓದಿಈ ಎಣ್ಣೆಯನ್ನು ಬಟ್ಟೆಗೆ ಹಚ್ಚಿ ಮನೆಯ ಮೂಲೆಯಲ್ಲಿಟ್ಟರೆ... ಒಂದೇ ಒಂದು ಹಾವು ಕೂಡ ಅತ್ತಕಡೆ ಸುಳಿಯಲ್ಲ!

(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಮನೆಮದ್ದುಗಳನ್ನು ಆಧರಿಸಿರುತ್ತದೆ. ಇಲ್ಲಿನ ಸಲಹೆ ಸೂಚನೆಗಳನ್ನು ಅಳವಡಿಸಿಕೊಳ್ಳವು ಮೊದಲು ನೀವು ಕಡ್ಡಾಯವಾಗಿ ತಜ್ಞರ ಸಲಹೆ ಪಡೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News