1. ಪೊರಕೆಯನ್ನು ಸಾಮಾನ್ಯವಾಗಿ ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿಗೆ ಸಂಬಂಧ ಕಲ್ಪಿಸಲಾಗುತ್ತದೆ. ಪೊರಕೆಯನ್ನು ಒದೆಯುವುದು, ಅದನ್ನು ತಪ್ಪು ದಿಕ್ಕಿನಲ್ಲಿ ಅಥವಾ ತಪ್ಪು ದಾರಿಯಲ್ಲಿ ಇಡುವುದು ಮನೆಯಲ್ಲಿ ಮನೆಯಲ್ಲಿ ಬಡತನಕ್ಕೆ ಕಾರಣವಾಗುತ್ತದೆ. ಪೊರಕೆಯನ್ನು ಈಶಾನ್ಯದಿಕ್ಕಿನಲ್ಲಿ ಎಂದಿಗೂ ಕೂಡ ಇಡಬೇಡಿ.
2. ಮನೆಯಲ್ಲಿ ಹಾಳಾದ ಅಥವಾ ಮುರುಕಲು ಪಾತ್ರೆಗಳನ್ನು ಕೂಡಿ ಹಾಕುವುದು ನಕಾರಾತ್ಮಕ ಶಕ್ತಿಯನ್ನು ಹೆಚ್ಚುತ್ತದೆ. ನಿರುಪಯುಕ್ತ ವಸ್ತುಗಳ ರಾಶಿ ಇರುವ ಮನೆಯಲ್ಲಿ ತಾಯಿ ಲಕ್ಷ್ಮಿ ಎಂದಿಗೂ ನೆಲೆಸುವುದಿಲ್ಲ.
3. ಮನೆಯಲ್ಲಿರುವ ಜೇಡರ ಬಲೆಗಳು ಹೆಚ್ಚಾಗುವುದು ಕ್ರಮೇಣ ವ್ಯಕ್ತಿಯನ್ನು ಬಡತನದತ್ತ ಕೊಂಡೊಯ್ಯುತ್ತವೆ. ಆದ್ದರಿಂದ, ಮನೆಯಲ್ಲಿ ಜೇಡರ ಬಲೆಗಳಿಗೆ ಸ್ಥಾನ ಕೊಡಬೇಡಿ.
4. ಪಕ್ಷಿಗಳು ಮನೆಯಲ್ಲಿ ಗೂಡು ಕಟ್ಟುವುದು ಶುಭ, ಆದರೆ ಮನೆಯಲ್ಲಿ ಪಾರಿವಾಳದ ಗೂಡು ಇರುವುದು ಶುಭವಲ್ಲ ಎನ್ನಲಾಗುತ್ತದೆ. ಏಕೆಂದರೆ ಶಾಸ್ತ್ರಗಳಲ್ಲಿ ಪಾರಿವಾಳದ ಸಂಬಂಧವನ್ನು ರಾಹುವಿನ ಜೊತೆಗೆ ಕಲ್ಪಿಸಲಾಗಿದೆ.
5. ಮನೆಯಲ್ಲಿ ಎಂದಿಗೂ ಮುಳ್ಳು ಗಿಡಗಳನ್ನು ನೆಡಬಾರದು. ಮನೆಯಲ್ಲಿ ಜಗಳ ಮತ್ತು ಅಪಶ್ರುತಿಗೆ ಅದು ಕಾರಣವಾಗುತ್ತದೆ. ಇದರೊಂದಿಗೆ ಜೀವನದಲ್ಲಿ ಅನೇಕ ತೊಂದರೆಗಳು ಮತ್ತು ಅಡೆತಡೆಗಳನ್ನು ಉಂಟುಮಾಡುತ್ತವೆ.