ಗುಲಾಬಿ ಗಿಡದ ಬುಡಕ್ಕೆ ಈ ಒಂದು ವಸ್ತು ಹಾಕಿದರೆ ಗಿಡ ತುಂಬಾ ಅರಳಿ ನಿಲ್ಲುವುದು ಹೂವು
ಕಲ್ಲು ಉಪ್ಪಿನಲ್ಲಿ ಗಂಧಕ ಮತ್ತು ಮೆಗ್ನೆಶಿಯಂ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ಗುಲಾಬಿ ಗಿಡಕ್ಕೆ ಹೆಚ್ಚು ಪ್ರಯೋಜನಕಾರಿ.
ಕಲ್ಲು ಉಪ್ಪು ಗಿಡಗಳಿಗೆ ಗೊಬ್ಬರದಂತೆ ಕೆಲಸ ಮಾಡುತ್ತದೆ. ಅದರಲ್ಲಿಯೂ ಗುಲಾಬಿ ಗಿಡಕ್ಕೆ ಇದನ್ನು ಹಾಕಿದರೆ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.
ಸ್ವಲ್ಪ ಕಲ್ಲುಪ್ಪನ್ನು ತೆಗೆದುಕೊಂಡು ನೀರಿನಲ್ಲಿ ಹಾಕಬೇಕು. ಅದೇ ನೀರಿಗೆ ಬಾಳೆಹಣ್ಣಿನ ಸಿಪ್ಪೆ ಹಾಕಿ ರಾತ್ರಿಯಿಡಿ ಬಿಡಬೇಕು. ಬೆಳಗ್ಗೆ ಈ ನೀರನ್ನು ಗುಲಾಬಿ ಗಿಡಕ್ಕೆ ಹಾಕಬೇಕು.
ವಾರಕ್ಕೆ ಒಂದು ಬಾರಿ ಈ ಮಿಶ್ರಣವನ್ನು ಗುಲಾಬಿ ಗಿಡಕ್ಕೆ ಹಾಕುತ್ತಾ ಬರಬೇಕು. ಹೀಗೆ ಮಾಡಿದರೆ ಗುಲಾಬಿ ಗಿಡದ ತುಂಬಾ ಹೂವು ಅರಳಿ ನಿಲ್ಲುವುದು.
ಕಲ್ಲು ಉಪ್ಪು ಮತ್ತು ಸ್ಪಟಿಕದ ಮಿಶ್ರಣವನ್ನು ಗುಲಾಬಿ ಗಿಡಕ್ಕೆ ಹಾಕಿದರೂ ಪ್ರಯೋಜನಕಾರಿಯಾಗಿರಲಿದೆ.
ಈ ಮಿಶ್ರಣವನ್ನು ಹಾಕುವುದರಿಂದ ಕೀಟಗಳು ಕೂಡಾ ಬರುವುದಿಲ್ಲ.
ಕಲ್ಲು ಉಪ್ಪು ಮತ್ತು ಸ್ಪಟಿಕದ ಮಿಶ್ರಣವನ್ನು ವಾರಕ್ಕೆ ಎರಡು ಬಾರಿ ಗುಲಾಬಿ ಗಿಡಕ್ಕೆ ಹಾಕಬೇಕಾಗುತ್ತದೆ.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿಯನ್ನು ಆಧರಿಸಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ .