Dharmasthala Case : ಧರ್ಮಸ್ಥಳ ಕೇಸ್ ನಲ್ಲಿ ಟ್ವಿಸ್ಟ್ ಸಿಕ್ಕಿದೆ. ಅತ್ತ ಈ ಪ್ರಕರಣದಲ್ಲಿ ಇಡಿ ಎಂಟ್ರಿಯಾದ್ರೆ ಇತ್ತ ಸೌಜನ್ಯ ಕೇಸನ್ನು ರೀ ಓಪನ್ ಮಾಡ್ತಾ ಎಸ್ ಐಟಿ ಎಂಬ ಪ್ರಶ್ನೆ ಉದ್ಬವವಾಗಿದೆ. ಅದ್ರ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ..

ದಕ್ಷಿಣ ಕನ್ನಡ : ಧರ್ಮಸ್ಥಳ ಕೇಸ್ ದಿನಕ್ಕೊಂದು ತಿರುವು ಪಡಿತಿದೆ. ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಪಿತೂರಿಗಳನ್ನು ನಡೆಸಲು ಸಂಶಯಾಸ್ಪದ ವಿದೇಶಿ ದೇಣಿಗೆಯನ್ನು ಬಳಸಲಾಗಿದೆ ಎಂಬ ಆರೋಪಗಳ ಕುರಿತು ಜಾರಿ ನಿರ್ದೇಶನಾಲಯ ಪ್ರಾಥಮಿಕ ತನಿಖೆಗೆ ಚಾಲನೆ ನೀಡಿದೆ.
ಹೌದು.. ಧರ್ಮಸ್ಥಳದ ಸುತ್ತ ವಿವಾದ ಹಬ್ಬಿಸಲು ಸಂಶಯಾಸ್ಪದ ದೇಣಿಗೆಯನ್ನು ಬಳಸಿವೆ ಎಂಬ ಆರೋಪಕ್ಕೆ ಗುರಿಯಾಗಿರುವ ಕೆಲವು ಸರಕಾರೇತರ ಸಂಸ್ಥೆಗಳು, ವ್ಯಕ್ತಿಗಳಿಗೆ ಸಂಬಂಧಿಸಿದ ವಾಸ್ತವಾಂಶಗಳು ಹಾಗೂ ದಾಖಲೆಗಳನ್ನು ಜಾರಿ ನಿರ್ದೇಶನಾಲಯ ಸಂಗ್ರಹಿಸುತ್ತಿದೆ ಎಂದು ಈ ಮೂಲಗಳು ತಿಳಿಸಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ ಹಾಗೂ ಇನ್ನೂ ಕೆಲವು ಸೆಕ್ಷನ್ ಗಳಡಿ ಜಾರಿ ನಿರ್ದೇಶನಾಲಯ ಪ್ರಾಥಮಿಕ ತನಿಖೆಗೆ ಚಾಲನೆ ನೀಡಿದ್ದು, ಒಂದು ವೇಳೆ ವಿದೇಶಿ ದೇಣಿಗೆ ನಿಯಮಗಳ ಉಲ್ಲಂಘನೆ ಹಾಗೂ ದೇಣಿಗೆಗಳ ಅಕ್ರಮ ಬಳಕೆಯ ಬಗ್ಗೆ ಪುರಾವೆ ದೊರೆತರೆ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಈ ಮೂಲಗಳು ತಿಳಿಸಿವೆ.
ಅತ್ತ SIT ಸೌಜನ್ಯ ಅತ್ಯಾಚಾರ ಕೊಲೆ ಕೇಸನ್ನು ರೀ ಓಪನ್ ಮಾಡ್ತಾ ಎಂಬ ಪ್ರಶ್ನೆ ಉದ್ಬವವಾಗಿದೆ. ಯಾಕೆಂದರೆ ಸೌಜನ್ಯ ಕೊಲೆ ಪ್ರಕರಣದಲ್ಲಿ ಆಕೆಯ ಕುಟುಂಬಸ್ಥರಿಂದ ಆರೋಪ ಎದುರಿಸುತ್ತಿರುವ ಉದಯ ಜೈನ್ ಅವರು ಎಸ್.ಐ.ಟಿ ಅಧಿಕಾರಿಗಳು ನೀಡಿರುವ ಸೂಚನೆಯಂತೆ ವಿಚಾರಣೆಗಾಗಿ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಿಸಿದರು.
ಎಸ್.ಐ.ಟಿ ಅಧಿಕಾರಿಗಳು ವಿಚಾರಣೆಗಾಗಿ ಎಸ್.ಐ.ಟಿ ಕಚೇರಿಗೆ ಬರುವಂತೆ ನನಗೆ ಕರೆ ಮಾಡಿದ್ದರು. ಅದರಂತೆ ಕಚೇರಿಗೆ ಆಗಮಿಸಿದ್ದೇನೆ. ನನ್ನೊಂದಿಗೆ ಧೀರಜ್ ಕೆಲ್ಲ ಹಾಗೂ ಮಲ್ಲಿಕ್ ಜೈನ್ ಅವರಿಗೂ ಹಾಜರಾಗಲು ಸೂಚಿಸಿರುವುದಾಗಿ ಉದಯ್ ಜೈನ್ ತಿಳಿಸಿದ್ರು.
ಇನ್ನು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ದೂರುದಾರ ಚಿನ್ನಯ್ಯ ಪರ ವಕಾಲತ್ತು ವಹಿಸಲು ಮಂಗಳೂರಿನಿಂದ ವಕೀಲರು ಬೆಳ್ತಂಗಡಿ ಕೋರ್ಟ್ ಗೆ ಆಗಮಿಸಿದ್ರು. ಚಿನ್ನಯ್ಯ ನ್ಯಾಯಾಧೀಶರಲ್ಲಿ ನನಗೆ ಉಚಿತ ವಕೀಲರು ಬೇಕೆಂದು ಮನವಿ ಮಾಡಿದ್ದ. ಸೆ.3 ರಂದು ಕಸ್ಟಡಿ ಅಂತ್ಯವಾಗುವ ಹಿನ್ನಲೆಯಲ್ಲಿ ಮಂಗಳೂರು ಉಚಿತ ಕಾನೂನು ಸೇವೆಗಳ ಪ್ರಾಧಿಕಾರದಿಂದ ಕಿಶೋರ್ ನೇತೃತ್ವದಲ್ಲಿ ವಕೀಲ ತಂಡ ಚಿನ್ನಯ್ಯ ಪರ ವಕಾಲತ್ತು ನಡೆಸಲು ಬೆಳ್ತಂಗಡಿ ಕೋರ್ಟ್ ಗೆ ಆಗಮಿಸಿತು.
ಚಿನ್ನಯ್ಯರ 12 ದಿನದ ಕಸ್ಟಡಿ ಅಂತ್ಯಗೊಂಡ ಹಿನ್ನಲೆಯಲ್ಲಿ ಇಂದು ಬೆಳ್ತಂಗಡಿ ಹೆಚ್ಚುವರಿ ವ್ಯವಹಾರಿಕ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ವಿಜಯೇಂದ್ರ. ಎಚ್.ಟಿ ನ್ಯಾಯಾಧೀಶರ ಮುಂದೆ ಜರುಪಡಿಸಲಾಗಿತ್ತು. ನ್ಯಾಯಾಲಯವು ಸೆ.6 ವರೆಗೆ ಮತ್ತೆ ಎಸ್.ಐ.ಟಿ ಕಸ್ಟಡಿಗೆ ನೀಡಿ ಆದೇಶ ಮಾಡಿದೆ.
ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರ ಚಿನ್ನಯ್ಯನನ್ನು ಆ.23 ರಂದು ಬಂಧಿಸಿ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಕಸ್ಟಡಿಗೆ ಪಡೆದಿದ್ದರು. ಒಟ್ನಲ್ಲಿ ಧರ್ಮಸ್ಥಳ ಕೇಸ್ ಟ್ವಿಸ್ಟ್ ಪಡಿತಿದ್ದು ಮುಂದೆ ಏನಾಗುತ್ತೋ ಕುತೂಹಲ ಮೂಡಿದೆ. ಅದ್ರ ಮಧ್ಯೆ ಸೌಜನ್ಯ ಕೇಸ್ ನ ತನಿಖೆ ನಡೆದ್ರೆ ನೈಜ ಆರೋಪಿಗಳ ಬಂಧನ ಗ್ಯಾರಂಟಿ.