Kodagu News: ಸೊಂಟ ನೋವು ಅಂತ ಖಾಸಗಿ ಆಸ್ಪತ್ರೆಗೆ ಹೋದ ಯವಕನೊಬ್ಬ ವೈದ್ಯರ ಎಡವಟ್ಟಿನಿಂದ ಮಸಣ ಸೇರಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪದಲ್ಲಿ ಬೆಳಕಿಗೆ ಬಂದಿದೆ.
ಚಿಕಿತ್ಸೆಗೆಂದು ಹೋಗಿ ಹೆಣವಾದ ವ್ಯಕ್ತಿ ಮೂಲತಃ ಸುಂಟಿಕೊಪ್ಪದ ನಿವಾಸಿ ಜೀಪ್ ಚಾಲಕ 34 ವರ್ಷದ ವಿನೋದ್. ವಿನೋದ್ ಸುಂಟಿಕೊಪ್ಪದಲ್ಲಿ ಜೀಪ್ ಚಾಲಕನಾಗಿದ್ದ ಇಂದು(ನ.06) ಸಂಜೆ ಸೊಂಟ ಹಾಗೂ ಭುಜ ನೋವೆಂದು ಸುಂಟಿಕೊಪ್ಪದ ಡಾ.ಯಶೋದರ ಪೂಜಾರಿಗೆ ಸೇರಿದ ಖಾಸಗಿ ಕ್ಲೀನ್ ಗೆ ಚಿಕಿತ್ಸೆಗೆ ತೆರೆಳಿದ್ದಾರೆ. ಚಿಕಿತ್ಸೆಗೆಂದು ತೆರಳಿದ ಯುವಕನಿಗೆ ಅಲ್ಲಿನ ವೈದ್ಯರು ಇಂಜೆಕ್ಷನ್ ನೀಡಿದ್ದಾರೆ. ಒಂದು ಇಂಜೆಕ್ಷನ್ ನೀಡಿದ 5 ನಿಮಿಷದ ಬಳಿಕ ಮತ್ತೊಂದು ಇಂಜೆಕ್ಷನ್ ನೀಡಿ ಮನೆಗೆ ಕಳುಹಿಸಿದ್ದಾರಂತೆ. ಮನೆಗೆ ಹೋಗುತ್ತಿದ್ದಂತೆ ವಿನೋದ್ ತೀವ್ರವಾಗಿ ಅಸ್ವಸ್ಥಗೊಂಡಿದ್ದಾನೆ ತಕ್ಷಣವೇ ಕುಟುಂಬಸ್ಥರು ಯುವಕನನ್ನ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಅಸ್ಪತ್ರೆಗೆ ಬರುವಷ್ಟರಲ್ಲಿ ಯುವಕನ ಪ್ರಾಣ ಪಕ್ಷಿ ಹಾರಿ ಹೋಗಿರೋದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಸದ್ಯ ಯುವಕ ಮೃತದೇಹ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದ್ದು ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವಕನ ಸಾವಿಗೆ ವೈದ್ಯರ ಮಾಡಿದ ಎಡವಟ್ಟೆ ನೇರ ಕಾರಣ ವೈದ್ಯರ ಎಡವಟ್ಟಿನಿಂದಲೆ ಯುವಕನ ಸಾವಾಗಿರೋದಾಗಿ ಕುಟುಂಬಸ್ಥರು ಆರೋಪಿಸಿದ್ದು ವೈದ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇನ್ನು ಇದೆ ವೈದ್ಯರು ಹಲವು ಸಮಯದಿಂದಲೂ ಸುಂಟಿಕೊಪ್ಪದಲ್ಲೆ ವೈದ್ಯರಾಗಿದ್ದು ಇವರ ಬಳಿ ಚಿಕಿತ್ಸೆಗೆ ತೆರಳಿವರು ಕೂಡ ಒಂದಷ್ಟು ಸಮಸ್ಯೆಗೆ ಒಳಗಾಗಿದ್ದಾರೆಂದು ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ ನೋವಿನ ಸಮಸ್ಯೆಗೆ ಚಿಕಿತ್ಸೆಗೆಂದು ತೆರಳಿ ಗುಣಮುಖರಾಗಿ ಬರಬೇಕಿದ್ದ ಯುವಕ ಸಾವಿನ ಕದ ತಟ್ಟಿದ್ದು ಮಾತ್ರ ವಿಪರ್ಯಾಸ.
ಇದನ್ನೂ ಓದಿ- ಕೇರಳದ 4 ಪ್ರವಾಸಿ ಬಸ್ಗಳಿಗೆ ಕೊಡಗು ಜಿಲ್ಲೆಯಲ್ಲಿ ದಂಡ ವಿಧಿಸಿ ಕ್ರಮ
ಇದನ್ನೂ ಓದಿ- ಶಾಕಿಂಗ್ ಘಟನೆ...ರಾತ್ರಿ ವೇಳೆ ಹುಲಿ ಮರಿಗಳ ಜೊತೆ ವೀಡಿಯೋ!









