ಗ್ರಾಪಂ ಆವರಣದಲ್ಲಿ ವಾಟರ್ ಮನ್ ಆ*ತ್ಮಹ*ತ್ಯೆ- 27 ತಿಂಗಳು ವೇತನ ನೀಡಿಲ್ಲವೆಂದು ಡೆತ್ ನೋಟ್

ಆತ 60 ವರ್ಷದ ವೃದ್ಧ. ಗ್ರಾಮ ಪಂಚಾಯ್ತಿಯಲ್ಲಿ ಅರೆಕಾಲಿಕ ವಾಟರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಈತನಿಗೆ ಒಂದೆಡೆ ರಜೆ ನೀಡದೆ ಮಾನಸಿಕ ಹಿಂಸೆ ನೀಡುತ್ತಿದ್ದ ಅಧಿಕಾರಿಗಳು, ಮತ್ತೊಂದೆ ಕಳೆದ ಎರಡು ವರ್ಷಕ್ಕೂ ಹೆಚ್ಚು ಸಮಯದಿಂದ ವೇತನವನ್ನೂ ನೀಡಿರಲಿಲ್ಲ.

Written by - Yashaswini V | Last Updated : Oct 17, 2025, 01:42 PM IST
  • ಗ್ರಾಮ ಪಂಚಾಯಿತಿ ಕಚೇರಿ ಪ್ರಾಂಗಣದಲ್ಲೇ ನೇ*ಣಿಗೆ ಕೊರಳೊಡ್ಡಿದ ವಾಟರ್ ಮ್ಯಾನ್
  • ಕಳೆದ 27 ತಿಂಗಳಿನಿಂದ ಸಂಬಳವಿಲ್ಲದೆ ಪರಿ ಪಾಟಲು ಪಟ್ಟಿದ್ದ ವಾಟರ್ ಮ್ಯಾನ್
  • ಸಂಬಳ ನೀಡುವಂತೆ ಪರಿ ಪರಿಯಾಗಿ ಬೇಡಿಕೊಂಡಿದ್ದ ವೃದ್ಧ
ಗ್ರಾಪಂ ಆವರಣದಲ್ಲಿ ವಾಟರ್ ಮನ್ ಆ*ತ್ಮಹ*ತ್ಯೆ- 27 ತಿಂಗಳು ವೇತನ ನೀಡಿಲ್ಲವೆಂದು ಡೆತ್ ನೋಟ್

ಚಾಮರಾಜನಗರ: ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ವಾಟರ್ ಮನ್ ನೇ*ಣಿಗೆ ಕೊರಳೊಡ್ಡಿದ ಘಟನೆ ಚಾಮರಾಜನಗರ ತಾಲೂಕಿನ ಹೊಂಗನೂರಿನಲ್ಲಿ ಶುಕ್ರವಾರ(ಅಕ್ಟೋಬರ್ 17) ನಡೆದಿದೆ. ಹೊಂಗನೂರು ಗ್ರಾಮದ ಚಿಕ್ಕೂಸನಾಯಕ( 60 )ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

Add Zee News as a Preferred Source

ಹೊಂಗನೂರು ಗ್ರಾಮ ಪಂಚಾಯ್ತಿಯಲ್ಲಿ ಅರೆಕಾಲಿಕ ವಾಟರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಚಿಕ್ಕೂಸನಾಯಕನಿಗೆ ಕಳೆದ 27 ತಿಂಗಳಿನಿಂದ ವೇತನ ಆಗಿರಲಿಲ್ಲ. ವೇತನ ಕೊಡಿ ಎಂದು ಗ್ರಾಪಂ‌ ಪಿಡಿಒ  ರಾಮೇಗೌಡ ಹಾಗೂ ಗ್ರಾಪಂ ಅಧ್ಯಕ್ಷಗೆ ಸಾಕಷ್ಟು ಬಾರಿ ಮನವಿ ಮಾಡಿದ ನಂತರವೂ, ಜಿಪಂ ಸಿಇಒ ಗಮನಕ್ಕೆ ತಂದರೂ ವೇತನ ಸಿಗದ ಹಿನ್ನೆಲೆ ಜಿಗುಪ್ಸೆಗೊಂಡು ಗ್ರಾಪಂ ಕಟ್ಟಡದ ಕಿಟಕಿಗೇ ನೇಣು ಬಿಗಿದುಕೊಂಡು  ಚಿಕ್ಕೂಸನಾಯಕ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆ.

ಸಾಯುವ ಮುನ್ನ ಡೆತ್ ನೋಟ್: 
ಆ*ತ್ಮಹ*ತ್ಯೆ ಮಾಡಿಕೊಳ್ಳುವ ಮುನ್ನ ಚಿಕ್ಕೂಸನಾಯಕ ಡೆತ್ ನೋಟ್ ಬರೆದು ಗೋಡೆಗೆ ಅಂಟಿಸಿದ್ದಾರೆ‌. ತನಗೇ ರಜೆ ಕೊಡದೇ ಮಾನಸಿಕ ಹಿಂಸೆ ಕೊಡುತ್ತಿದ್ದರು. ಸಾಕಷ್ಟು ಬಾರಿ ಮನವಿ ಮಾಡಿದರೂ ವೇತನ ನೀಡದೇ ಸತಾಯಿಸಿ ನರಕ ತೋರಿಸಿದ್ದಾರೆ‌. ವೇತನಕ್ಕೆ ಪಿಡಿಒ ರಾಮೇಗೌಡ ಸಹಿ ಹಾಕಿದರೇ ಗ್ರಾಪಂ ಅಧ್ಯಕ್ಷರು ಸಹಿ ಮಾಡುತ್ತಿರಲಿಲ್ಲ,  ತನ್ನ ಸಾವಿಗೆ ಪಿಡಿಒ ರಾಮೇಗೌಡ ಮತ್ತು ಗ್ರಾಪಂ ಅಧ್ಯಕ್ಷೆ ಪತಿ ಮೋಹನ್ ಕಾರಣವೆಂದು ಡೆತ್ ನೋಟ್ ಬರೆದಿದ್ದಾರೆ.

ಸದ್ಯ, ಚಾಮರಾಜನಗರ ಪೂರ್ವ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ- ಮಾದಪ್ಪನ ಬೆಟ್ಟದಲ್ಲಿ ಶೌಚಾಲಯ ಅವ್ಯವಸ್ಥೆ ಆರೋಪ: ಮಹಿಳಾ ಭಕ್ತರ ಆಕ್ರೋಶ

ಇದನ್ನೂ ಓದಿ- ಬಿಳಿಗಿರಿರಂಗನ ಹುಂಡಿ ದುಡ್ಡಿಗೆ ಕಣ್ಣು- ಮೂವರು ಜೈಲುಪಾಲು

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News