ಕೇಂದ್ರದ ಅನಿಯಂತ್ರಿತ ತೆರಿಗೆ ಸಾಮಾಜಿಕ ನ್ಯಾಯಕ್ಕೆ ಮಾಡುವ ಅನ್ಯಾಯ- ಸಿಜೆಐ ಎಸ್‌.ಎ.ಬೊಬ್ಡೆ

ಕೇಂದ್ರದ ಬಜೆಟ್‌ಗೆ ಕೆಲವೇ ದಿನಗಳು ಬಾಕಿ ಇರುವಾಗ, ಭಾರತದ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ ಬೊಬ್ಡೆ ನಾಗರಿಕರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡಲು ಮತ್ತು ದೇಶದ ಸರ್ವಾಂಗೀಣ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

Last Updated : Jan 24, 2020, 06:44 PM IST
ಕೇಂದ್ರದ ಅನಿಯಂತ್ರಿತ ತೆರಿಗೆ ಸಾಮಾಜಿಕ ನ್ಯಾಯಕ್ಕೆ ಮಾಡುವ ಅನ್ಯಾಯ- ಸಿಜೆಐ ಎಸ್‌.ಎ.ಬೊಬ್ಡೆ  title=

ನವದೆಹಲಿ: ಕೇಂದ್ರದ ಬಜೆಟ್‌ಗೆ ಕೆಲವೇ ದಿನಗಳು ಬಾಕಿ ಇರುವಾಗ, ಭಾರತದ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ ಬೊಬ್ಡೆ ನಾಗರಿಕರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡಲು ಮತ್ತು ದೇಶದ ಸರ್ವಾಂಗೀಣ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ದೆಹಲಿಯಲ್ಲಿ  ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ 79 ನೇ ಪ್ರತಿಷ್ಠಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಬೊಬ್ಡೆ, "ಅತಿಯಾದ ತೆರಿಗೆಯನ್ನು" ಜನರ ಮೇಲೆ ಹೇರಿದ ಸಾಮಾಜಿಕ ಅನ್ಯಾಯದ ಒಂದು ರೂಪವಾಗಿ ಕಾಣಬಹುದು ಎಂದು ಹೇಳಿದರು. "ತೆರಿಗೆ ವಂಚನೆಯು ಸಹ ನಾಗರಿಕರಿಗೆ ಸಾಮಾಜಿಕ ಅನ್ಯಾಯವಾಗಿದ್ದರೆ, ಅನಿಯಂತ್ರಿತ ಅಥವಾ ಅತಿಯಾದ ತೆರಿಗೆಯಿಂದಾಗಿ ಸರ್ಕಾರವು ಸಾಮಾಜಿಕ ಅನ್ಯಾಯಕ್ಕೆ ಕಾರಣವಾಗುತ್ತದೆ" ಎಂದು ಅವರು ಹೇಳಿದರು.

ಉನ್ನತ ಹಣದುಬ್ಬರ ಮತ್ತು ರೂಪಾಯಿ ದುರ್ಬಲಗೊಳ್ಳುತ್ತಿರುವ ಮಧ್ಯೆ ದೇಶದ ಆರ್ಥಿಕತೆಯು ಆತಂಕಕಾರಿ ಬೆಳವಣಿಗೆಯ ಕುಸಿತವನ್ನು ಎದುರಿಸುತ್ತಿರುವ ಸಮಯದಲ್ಲಿ ಮುಖ್ಯ ನ್ಯಾಯಾಧೀಶರ ಸಲಹೆಯು ಬರುತ್ತದೆ. ಚಿಲ್ಲರೆ ಹಣದುಬ್ಬರವು 2019 ರ ಡಿಸೆಂಬರ್‌ನಲ್ಲಿ ಸುಮಾರು ಐದಾರು ವರ್ಷದ ಗರಿಷ್ಠ 7.35 ಕ್ಕೆ ಏರಿತು, ಮುಖ್ಯವಾಗಿ ಈರುಳ್ಳಿಯಂತಹ ತರಕಾರಿಗಳ ಬೆಲೆಗಳು ಹೆಚ್ಚಾಗುತ್ತಿರುವುದರಿಂದ ಇದು ಸಾಮಾನ್ಯ ಜನರ ಮೇಲೆ ಹೊರೆ ಮತ್ತಷ್ಟು ಹೆಚ್ಚಿಸಿತು.

.

Trending News